ಚಕ್ಕರೆ ಶಿವಶಂಕರಪ್ಪ

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ಇವರು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದವರು.

ಡಾ,ಚಕ್ಕೆರೆ ಶಿವಶಂಕರ್ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದವರು. ಇವರು ಪ್ರಸ್ತುತ ಜಾನಪದ ಪರಿಷತ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ರಾಜ್ಯದ ಜಾನಪದ ವಿದ್ವಾಂಸರಲ್ಲಿ ಪ್ರಮುಖ ಸಾಲಿನಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿನ ಪ್ರಮುಖ ಜಾನಪದ ವಿದ್ವಾಂಶರಲ್ಲಿ ಎದ್ದು ಕಾಣುವ ಅಪ್ಪಟ ದೇಶಿ ಪ್ರತಿಭೆ. ನಾಡೋಜ ದೇ. ಜವರೇಗೌಡರ ಮಾರ್ಗದರ್ಶನದಲ್ಲಿ `ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ' ಎನ್ನುವ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಜಾನಪದ ತಲೆಮಾರು, ಜಾನಪದ ತಿಳುವಳಿಕೆ, ಜಾನಪದ ನಾಯಕತ್ವ, ಜಾನಪದ ಕಲಾ ಪ್ರವೇಶ ಮುಂತಾದ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ರಾಜ್ಯವಲ್ಲದೇ ಬೇರೆ ರಾಜ್ಯಗಳಲ್ಲೂ ಜನಪದ ಕುರಿತಂತೆ ಉಪನ್ಯಾಸ ನೀಡಿದ್ದಾರೆ.