ಗುಳೇದಗುಡ್ಡ
ಗುಳೇದಗುಡ್ಡ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ತಾಲ್ಲೂಕಿನ ಒಂದು ಪಟ್ಟಣ; ಹೋಬಳಿ ಕೇಂದ್ರ ಉ.ಅ. 160 3' ಮತ್ತು ಪು.ರೇ 750 47' ಮೇಲೆ ಬಾದಾಮಿಯಿಂದ ಈಶ್ಯಾನಕ್ಕೆ 15 ಕಿಮೀ ದೂರದಲ್ಲಿದೆ; ಗುಳೇದಗುಡ್ಡ ರೋಡ್ ರೈಲು ನಿಲ್ದಾಣಕ್ಕೆ ಈ ಸ್ಥಳದಿಂದ 10 ಕಿಮೀ ದೂರ.
Guledgudda ಗುಳೇದಗುಡ್ದ | |
---|---|
town | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಬಾಗಲಕೋಟೆ |
Area | |
• Total | ೪.೮೭ km೨ (೧.೮೮ sq mi) |
Elevation | ೫೧೫ m (೧,೬೯೦ ft) |
Population (2001) | |
• Total | ೩೩,೯೯೧ |
• Density | ೬,೯೭೯.೬೭/km೨ (೧೮,೦೭೭.೩/sq mi) |
ಭಾಷೆ | |
• Official | ಕನ್ನಡ |
ಸಮಯ ವಲಯ | UTC+5:30 (IST) |
PIN | 587 203 |
Telephone code | 08357 |
ವಾಹನ ನೊಂದಣಿ | KA-29 |
ಇತಿಹಾಸಸಂಪಾದಿಸಿ
ಗುಳೇದಗುಡ್ಡ ಪಟ್ಟಣ ಹಿಂದೆ ಇಲ್ಲಿರುವ ಬೆಟ್ಟದ ಮೇಲಿತ್ತು. ಈಗಲೂ ಅಲ್ಲಿ ಪಟ್ಟಣದ ಅವಶೇಷಗಳನ್ನು ಕಾಣಬಹುದು. 1580ರಲ್ಲಿ ಬಿಜಾಪುರದ ಎರಡನೆಯ ಇಬ್ರಾಹಿಂ ಆದಿಲ್ಶಹ ಇಲ್ಲಿ ಒಂದು ಕೋಟೆ ಕಟ್ಟಿಸಿದ. 1706ರಲ್ಲಿ ಒಂದು ಸುಂದರ ಜಲಾಶಯದ ದಂಡೆಯ ಮೇಲೆ ಈ ಪಟ್ಟಣದ ಸ್ಥಾಪನೆಯಾಯಿತು. 1750ರಲ್ಲಿ ಈ ಪಟ್ಟಣ ಲೂಟಿಗೆ ಒಳಗಾಯಿತು. 1787ರಲ್ಲಿ ಇದು ಟಿಪ್ಪುವಿನ ಅಧೀನಕ್ಕೆ ಬಂತು. ಅನಂತರ ಮರಾಠರು ಇದನ್ನು ಲೂಟಿ ಮಾಡಿದಾಗ ಇಲ್ಲಿಯ ನಿವಾಸಿಗಳನೇಕರು ಇಲ್ಲಿಂದ ಓಡಿಹೋದರು. ದೇಸಾಯಿ ಮನೆತನದ ಪ್ರಭಾವದಿಂದಾಗಿ ಅವರು ಮತ್ತೆ ಇಲ್ಲಿಗೆ ಬಂದು ನೆಲೆಸಿದರು. ಮತ್ತೆ ನರಸಿಂಹನೆಂಬವನು ಈ ನಗರವನ್ನು ಲೂಟಿ ಮಾಡಿದ. ಜನ ಪುನಃ ಓಡಿಹೋದರು. 1818ರಲ್ಲಿ ದೇಸಾಯಿ ಪರಿವಾರದವರ ಒತ್ತಾಯ ಮತ್ತು ಸಹಯೋಗದಿಂದಾಗಿ ಜನರಲ್ ಮನ್ರೋ ಈ ಜನ ಪುನಃ ಇಲ್ಲಿಯೇ ವಾಸ ಮಾಡಲು ಅನುಕೂಲ ಮಾಡಿಕೊಟ್ಟ . ಮರಾಠರು ಗಜೇಂದ್ರಗಡ ಯುದ್ಧದಲ್ಲಿ ಮೈಸೂರ್ ಸಾಮ್ರಾಜ್ಯದ ಟಿಪ್ಪುವಿನ ವಿರುದ್ಧ ಸೋತಾಗ ಸೋತ ಸೇಡಿನಿಂದ ಅವರು ಹಿಂತಿರಿಗುವಾಗ ಗುಳೇದ್ಗುಡ್ಡವನ್ನ ಲೂಟಿ ಮಾಡಿ ಹೋದರು ಅದೇರೀತಿ ಮೈಸೂರಿನ ದಕ್ಷಿಣ ಭಾಗವಾದ ಶ್ರೀರಂಗನಾಥ ದೇವಸ್ಥಾನವನ್ನು ಭಗ್ನಗೊಳಿಸಿದರು ಆದರಿಂದ ಗುಳೇದ್ಗುಡ್ಡ ಕೋಟೆ ನಾಶವಾಗಿದೆ
ವೈಶಿಷ್ಠ್ಯಗಳುಸಂಪಾದಿಸಿ
ಗುಳೇದಗುಡ್ಡ ಅಭಿವೃದ್ದಿ ಹೊಂದುತ್ತಿರುವ ಒಂದು ಪಟ್ಟಣ. ಇಲ್ಲಿ ತಯಾರಾಗುವ ಕುಪ್ಪುಸದ ಕಣಗಳು ಭಾರತದಲ್ಲೆಲ್ಲ ಪ್ರಸಿದ್ಧಿ ಪಡೆದಿವೆ. ಇಳಕಲ್ಲ ಸೀರೆ, ಅಮೀನಗಡದ ಕರದಂಟು, ಗುಳೆದಗುಡ್ಡದ ಕಣ-ಇದು ಉತ್ತರ ಕರ್ನಾಟಕದಲ್ಲಿ ಮನೆಮಾತು. ಇಲ್ಲಿ ತಯಾರಾಗುವ ಹತ್ತಿ ಮತ್ತು ರೇಷ್ಮೆ ಬಟ್ಟೆಗಳು ಸೊಲ್ಲಾಪುರ, ಮುಂಬಯಿ, ಪುಣೆ, ಅಹ್ಮದ್ನಗರಗಳಿಗೆ ಸಾಗುತ್ತವೆ.
- 1 ದೇವಾಲಯಗಳು
- A.ಶ್ರೀ ಮುಕೇಶ್ವರಿ ದೇವಾಲಯ
- B. ಬನಶ೦ಕರಿ ದೇವಾಲಯ
ಉಲ್ಲೇಖಸಂಪಾದಿಸಿ
??
- ವರ್ಗ??