ಗುಲಾಬೊ ಸಿತಾಬೊ (ಚಲನಚಿತ್ರ)

 

ಗುಲಾಬೊ ಸಿತಾಬೊ
ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಶೂಜಿತ್ ಸರ್ಕಾ
ನಿರ್ಮಾಪಕರೊನಿ ಲಹರಿ
ಶೀಲ್ ಕುಮಾರ್
ಲೇಖಕಜೂಹಿ ಚತುರ್ವೇದಿ
ಕಥೆಜೂಹಿ ಚತುರ್ವೇದಿ
ಪಾತ್ರವರ್ಗಅಮಿತಾಭ್ ಬಚ್ಚನ್
ಆಯುಷ್ಮಾನ್ ಖುರಾನಾ
ಫ಼ಾರೂಖ್ ಜಫರ್
ಸಂಗೀತಹಿನ್ನೆಲೆ ಸಂಗೀತ:
ಶಾಂತನು ಮೊಯಿತ್ರಾ
ಹಾಡುಗಳು:
ಶಾಂತನು ಮೊಯಿತ್ರಾ
ಅಭಿಷೇಕ್ ಅರೋರಾ
ಅನುಜ್ ಗರ್ಗ್
ಛಾಯಾಗ್ರಹಣಅವೀಕ್ ಮುಖೋಪಾಧ್ಯಾಯ್
ಸಂಕಲನಚಂದ್ರಶೇಖರ್ ಪ್ರಜಾಪತಿ
ಸ್ಟುಡಿಯೋರೈಸಿಂಗ್ ಸನ್ ಫ಼ಿಲ್ಮ್ಸ್
ಕೀನೊ ವರ್ಕ್ಸ್
ವಿತರಕರುಆಮಜ಼ಾನ್ ಪ್ರೈಮ್ ವೀಡಿಯೊ
ಬಿಡುಗಡೆಯಾಗಿದ್ದು
  • 12 ಜೂನ್ 2020 (2020-06-12)
ಅವಧಿ125 ನಿಮಿಷಗಳು[೧]
ದೇಶಭಾರತ
ಭಾಷೆಹಿಂದಿ

ಗುಲಾಬೊ ಸಿತಾಬೊ 2020 ರ ಒಂದು ಹಿಂದಿ ಹಾಸ್ಯಮಯ ನಾಟಕೀಯ ಚಲನಚಿತ್ರವಾಗಿದೆ.[೨] ಇದನ್ನು ಶೂಜಿತ್ ಸರ್ಕಾರ್ ನಿರ್ದೇಶಿಸಿದ್ದಾರೆ. ರೋನಿ ಲಹಿರಿ ಮತ್ತು ಶೀಲ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ ಮತ್ತು ಜೂಹಿ ಚತುರ್ವೇದಿ ಬರೆದಿದ್ದಾರೆ.[೩] ಲಕ್ನೋದಲ್ಲಿ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ , ಆಯುಷ್ಮಾನ್ ಖುರಾನಾ ಮತ್ತು ಫ಼ಾರೂಖ್ ಜಾಫ಼ರ್ ನಟಿಸಿದ್ದಾರೆ.[೪][೫] ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ, ಚಲನಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ. ಆದರೆ 12 ಜೂನ್ 2020 ರಂದು ವಿಶ್ವಾದ್ಯಂತ ಆ್ಯಮಜ಼ಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಯಿತು.[೬]

ಕಥಾವಸ್ತು ಬದಲಾಯಿಸಿ

ಚುನ್ನನ್ 'ಮಿರ್ಜ಼ಾ' ನವಾಬ್ (ಅಮಿತಾಭ್ ಬಚ್ಚನ್) ಒಬ್ಬ ಜಿಪುಣನಾದ ವೃದ್ಧ ಮನೆ ಅಳಿಯನಾಗಿದ್ದು, ಅವನಿಗೆ ಗೊತ್ತಿರುವ ಬಹುತೇಕ ಜನ ಅವನು ದುರಾಸೆಯ ಜಿಪುಣನೆಂದು ಪರಿಗಣಿಸಿರುತ್ತಾರೆ. ಅವನ ಪತ್ನಿ ಫ಼ಾತಿಮಾ ಬೇಗಂ (ಫ಼ಾರೂಖ್ ಜಫ಼ರ್) ಅವನಿಗಿಂತ 17 ವರ್ಷಗಳಷ್ಟು ದೊಡ್ಡವಳಾಗಿದ್ದು ಲಕ್ನೋದಲ್ಲಿನ ಒಂದು ಶಿಥಿಲವಾದ ಬಂಗಲೆಯಾದ ಫ಼ಾತಿಮಾ ಮಹಲ್‍ನ ಯಜಮಾನಿಯಾಗಿರುತ್ತಾಳೆ. ಇದರ ಕೊಠಡಿಗಳನ್ನು ವಿವಿಧ ಬಾಡಿಗೆದಾರರಿಗೆ ಭೋಗ್ಯಕ್ಕೆ ನೀಡಲಾಗುತ್ತಿರುತ್ತದೆ. ಇವರಲ್ಲಿ ಹಲವರು ಸೂಕ್ತ ಬಾಡಿಗೆಯನ್ನು ಕೊಡುತ್ತಿರುವುದಿಲ್ಲ. ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿಯೊಂದಿಗೆ ಬೇಗಂ ಮಿರ್ಜಾನನ್ನು ಬಿಡುತ್ತಾಳೆ, ಆದರೆ ಮಿರ್ಜಾ ಬೇಗಂನ ಸಾವಿಗೆ ಕಾಯಲು ಸಾಧ್ಯವಿರುವುದಿಲ್ಲ ಏಕೆಂದರೆ ಅವಳು ಸತ್ತರೆ ಮಹಲು ಅವನಿಗೆ ಹಸ್ತಾಂತರವಾಗುವುದು. ಬ್ಞಾಕೆ ರಸ್ತೋಗಿ (ಆಯುಷ್ಮಾನ್ ಖುರಾನಾ) ತನ್ನ ತಾಯಿ ಮತ್ತು ಮೂವರು ಸಹೋದರಿಯರೊಂದಿಗೆ ಮಹಲಿನಲ್ಲಿ ವಾಸಿಸುವ ಒಬ್ಬ ಬಡ ಬಾಡಿಗೆದಾರ. ಅವನು ಒಂದು ಗೋಧಿ ಗಿರಣಿ ಅಂಗಡಿಯನ್ನು ಹೊಂದಿರುತ್ತಾನೆ ಮತ್ತು ಮಿರ್ಜಾನ ಅಸಮಾಧಾನಕ್ಕೆ ಕಾರಣವಾಗುವಂತೆ, ಇತರ ಎಲ್ಲಾ ಬಾಡಿಗೆದಾರರಿಗಿಂತ ಕಡಿಮೆ ಶುಲ್ಕವನ್ನು ಕೊಡುತ್ತಿದ್ದರೂ ಸಹ, ಅವನು ತಾನು ಬಹು ಕಾಲದಿಂದ ಪಾವತಿಸದ ಬಾಡಿಗೆಯನ್ನು ಏಕೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ನಿರಂತರವಾಗಿ ಹೇಳುತ್ತಾನೆ ಮತ್ತು ಸಾಧಿಸುತ್ತಾನೆ.

ಪರಿಣಾಮವಾಗಿ, ಅವನು ಅಡ್ಡದಾರಿಯಲ್ಲಿ ಬಂದಾಗಲೆಲ್ಲಾ ಮಿರ್ಜಾ ಅವನ ಬಾಕಿಯನ್ನು ಪಾವತಿಸುವಂತೆ ಒತ್ತಾಯಿಸುತ್ತಾನೆ. ಇದು ಬ್ಞಾಕೆಗೆ ಆಗಾಗ್ಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ ಮತ್ತು ಕೋಪದ ಪ್ರಕೋಪದಲ್ಲಿ, ಶೌಚಾಲಯ ಸಮುಚ್ಚಯದ ಗೋಡೆಗೆ ಒದೆಯುವ ಮೂಲಕ ಅವನು ಗೊಂದಲವನ್ನು ಪ್ರಾರಂಭಿಸುತ್ತಾನೆ. ಅದು ಕುಸಿದುಬೀಳುತ್ತದೆ. ಇದರಿಂದ ಕೋಪಗೊಂಡ ಮಿರ್ಜಾ, ರಿಪೇರಿಯ ಸಂಪೂರ್ಣ ವೆಚ್ಚವನ್ನು ನೀಡುವಂತೆ ಬ್ಞಾಕೆಗೆ ಒತ್ತಾಯಿಸುತ್ತಾನೆ. ಆದಾಗ್ಯೂ, ಬ್ಞಾಕೆ ಹಣವನ್ನು ಪಾವತಿಸುವುದಿಲ್ಲ. ಆದ್ದರಿಂದ ಮಿರ್ಜಾ ಅವನ ಮತ್ತು ಅವನ ಕುಟುಂಬದ ಜೀವನವನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಶೋಚನೀಯವಾಗಿಸಲು ಪ್ರಯತ್ನಿಸುತ್ತಾನೆ. ಮಿರ್ಜಾ ಮೇಲೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡುವ ಬ್ಞಾಕೆಗೆ ಇದು ತಡೆಯಲಾರದಷ್ಟು ಕೋಪ ತರಿಸುತ್ತದೆ.

ಸರ್ಕಾರಕ್ಕಾಗಿ ಕೆಲಸ ಮಾಡುವ ಪುರಾತತ್ವಶಾಸ್ತ್ರಜ್ಞನಾದ ಜ್ಞಾನೇಶ್ ಶುಕ್ಲಾ (ವಿಜಯ್ ರಾಜ್) ಆಸ್ತಿಯ ಐತಿಹಾಸಿಕ ಮೌಲ್ಯವನ್ನು ಅರಿತುಕೊಂಡಾಗ ಬ್ಞಾಕೆಗೆ ಅವಕಾಶ ಸಿಗುತ್ತದೆ. ಅದನ್ನು ವಶಪಡಿಸಿಕೊಳ್ಳಲು, ಅದರಲ್ಲಿ ವಾಸಿಸುವ ಪ್ರತಿಯೊಬ್ಬರನ್ನು ಹೊರಹಾಕಲು ಮತ್ತು ಅದನ್ನು ಸರ್ಕಾರಿ ಸ್ವಾಮ್ಯದ ಪಾರಂಪರಿಕ ತಾಣವೆಂದು ಘೋಷಿಸಲು ಅವನು ತ್ವರಿತವಾಗಿ ಯೋಜನೆಗಳನ್ನು ರೂಪಿಸುತ್ತಾನೆ. ಹೊರಹಾಕಲ್ಪಟ್ಟವರಿಗೆ ಪರ್ಯಾಯ ವಸತಿ ಒದಗಿಸಲಾಗುವುದು ಎಂದು ಹೇಳುವ ಮೂಲಕ ಜ್ಞಾನೇಶ್ ಬ್ಞಾಕೆಗೆ ತನ್ನ ಯೋಜನೆಗಳನ್ನು ವಿವರಿಸುತ್ತಾನೆ. ಮಿರ್ಜಾ ಮಹಲಿನ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುವನು ಎಂದು ಬ್ಞಾಕೆ ಅರಿತುಕೊಂಡು ಜ್ಞಾನೇಶ್‍ಗೆ ಅವನ ಉದ್ದೇಶಗಳಲ್ಲಿ ಬೆಂಬಲಿಸುತ್ತಾನೆ.

ಮಿರ್ಜಾ ಶೀಘ್ರದಲ್ಲೇ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುತ್ತಾನೆ ಮತ್ತು ಸ್ಥಳೀಯ ವಕೀಲ ಕ್ರಿಸ್ಟೋಫರ್ ಕ್ಲಾರ್ಕ್ (ಬ್ರಿಜೇಂದ್ರ ಕಾಲಾ) ನನ್ನು ನೇಮಿಸಿಕೊಳ್ಳುತ್ತಾನೆ. ಬೇಗಂ ತೀರಿಕೊಂಡ ನಂತರ ಭವನದ ಮಾಲೀಕತ್ವವನ್ನು ತನಗೆ ವರ್ಗಾಯಿಸಲು ಮಿರ್ಜಾ ಯೋಜಿಸುತ್ತಾನೆ. ಆಗ ಅವನು ತನ್ನ ಬಾಡಿಗೆದಾರರನ್ನು ಹೊರಹಾಕಬಹುದು ಮತ್ತು ಭವನವನ್ನು ತಾನೇ ಇಟ್ಟುಕೊಳ್ಳಬಹುದು ಎಂದಂದುಕೊಳ್ಳುತ್ತಾನೆ. ಬೇಗಂ ನ ಕುಟುಂಬದಲ್ಲಿ ತನ್ನ ಬದಲಿಗೆ ಭವನವನ್ನು ಆನುವಂಶಿಕವಾಗಿ ಪಡೆಯಬಹುದಾದ ಯಾರಾದರೂ ಇದ್ದರೆ ಅವರನ್ನು ಪತ್ತೆಹಚ್ಚುವ ಸುದೀರ್ಘ ಪ್ರಯತ್ನದ ನಂತರ, ಕೊನೆಯ ಹಂತವೆಂದರೆ ಬೇಗಂ ಅವರ ಎಡಗೈ ಬೆರಳಿನ ಗುರುತುಗಳ ಪ್ರತಿಯನ್ನು ಪಡೆಯುವುದು. ಆದಾಗ್ಯೂ, ಮಿರ್ಜಾ ನಿದ್ರಿಸುತ್ತಿರುವ ಬೇಗಮ್‌ನಿಂದ ಬೆರಳಿನ ಗುರುತುಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳುತ್ತಾನೆ. ಆದರೆ ಅವು ತಪ್ಪು ಕೈಯ ಗುರುತುಗಾಳಿಗದ್ದರಿಂದ ಕ್ರಿಸ್ಟೋಫರ್‌ಗೆ ಕೋಪ ಬರುತ್ತದೆ. ಬದಲಿಗೆ ಅವನು ಗುರುತುಗಳನ್ನು ನಕಲು ಮಾಡುವುದನ್ನು ಅವಲಂಬಿಸುತ್ತಾನೆ. ಭವನದ ದುಸ್ಥಿತಿಯನ್ನು ಗಮನಿಸಿದ ಕ್ರಿಸ್ಟೋಫರ್, ಶ್ರೀಮಂತ ನಿರ್ಮಾಣಕಾರ-ಅಭಿವರ್ಧಕ ಮುನ್ಮುನ್ ಸಿಂಗ್‌ಗೆ ಮಿರ್ಜಾನನ್ನು ಪರಿಚಯಿಸುತ್ತಾನೆ. ಅವನು ಮಹಲು ಖರೀದಿಸಲು, ಅದನ್ನು ಕೆಡವಲು ಮತ್ತು ಆ ಜಾಗದಲ್ಲಿ ಆಧುನಿಕ ವಸತಿ ಸಂಕೀರ್ಣವನ್ನು ನಿರ್ಮಿಸಲು ಸಿದ್ಧನಿರುತ್ತಾನೆ. ಇದಕ್ಕಾಗಿ ಮತ್ತು ಬಾಡಿಗೆದಾರರಿಗಾಗಿ ಮಿರ್ಜಾ ಒಂದು ದೊಡ್ಡ ಮೊತ್ತದ ಹಣವನ್ನು ಪಡೆಯುವನು ಎಂದು ಕ್ರಿಸ್ಟೋಫರ್ ಸಾಧಿಸುತ್ತಾನೆ. ಆದ್ದರಿಂದ ಮಿರ್ಜ಼ಾ ಬಹಳ ಆತುರದಿಂದ ಒಪ್ಪುತ್ತಾನೆ.

ದುರದೃಷ್ಟವಶಾತ್, ಬ್ಞಾಕೆ ಮತ್ತು ಇತರ ಬಾಡಿಗೆದಾರರಿಗೆ ಜ್ಞಾನೇಶ್‍ನ ಪರ್ಯಾಯ ವಸತಿಗಳ ಪ್ರಸ್ತಾಪವು ಸುಳ್ಳು ದಾವೆಯಾಗಿರುತ್ತದೆ ಮತ್ತು ಜ್ಞಾನೇಶ್ ಮಹಲನ್ನು ಪಾರಂಪರಿಕ ತಾಣವೆಂದು ಘೋಷಿಸಲು ಕೆಲವು ಜನರನ್ನು ಕರೆತರುತ್ತಾನೆ ಮತ್ತು ಎಲ್ಲಾ ಬಾಡಿಗೆದಾರರು ಮನೆಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಹೇಳುತ್ತಾನೆ. ತಮಗೆ ಭರವಸೆ ನೀಡಿದಂತೆ ಪರ್ಯಾಯ ವಸತಿ ಸಿಗುವುದಿಲ್ಲ ಎಂದು ಕೋಪಗೊಂಡ ಬ್ಞಾಕೆ ಮತ್ತು ಬಾಡಿಗೆದಾರರು ವಾದ ಮತ್ತು ಜಗಳಗಳನ್ನು ಪ್ರಾರಂಭಿಸುತ್ತಾರೆ. ಇದ್ದಕ್ಕಿದ್ದಂತೆ ಕ್ರಿಸ್ಟೋಫರ್ ಮುನ್ಮುನ್ ಮತ್ತು ಅಭಿವರ್ಧಕರೊಂದಿಗೆ ಆಗಮಿಸುತ್ತಾನೆ ಮತ್ತು ಮಿರ್ಜಾ ಮತ್ತು ಬಾಡಿಗೆದಾರರಿಗೆ ಹಣ ತುಂಬಿದ ಸೂಟ್‌ಕೇಸ್ ಕೊಡುತ್ತಾನೆ. ಬಾಡಿಗೆದಾರರು ಸ್ವಲ್ಪ ಹಣವನ್ನು ತೆಗೆದುಕೊಳ್ಳುವುದನ್ನು ಮಿರ್ಜಾ ನೋಡುತ್ತಾನೆ ಮತ್ತು ಎಲ್ಲಾ ಹಣವನ್ನು ತನ್ನದೆಂದು ಘೋಷಿಸುತ್ತಾ ಸೂಟ್‌ಕೇಸ್‌ನ ಮೇಲೆ ಕುಳಿತುಕೊಳ್ಳುತ್ತಾನೆ. ಇದು ಮತ್ತಷ್ಟು ಉಗ್ರವಾದ ವಾದಗಳು ಮತ್ತು ಜಗಳಗಳಿಗೆ ಕಾರಣವಾಗುತ್ತದೆ.

ಆದರೆ, ಬೇಗಂ ಹೋಗಿದ್ದಾಳೆಂದು ಬೇಗಂನ ಸೇವಕಿ ಘೋಷಿಸಿದಾಗ ಅವರಿಗೆ ಇದ್ದಕ್ಕಿದ್ದಂತೆ ಅಡ್ಡಿಪಡಿಸಿದಂತಾಗುತ್ತದೆ. ಬ್ಞಾಕೆ ಸೇರಿದಂತೆ ಎಲ್ಲರೂ ಗೊಂದಲ ಮತ್ತು ಅವ್ಯವಸ್ಥಿತಗೊಳ್ಳುತ್ತಾರೆ. ಅವಳನ್ನು ನೋಡಲು ಅವಳ ಕೋಣೆಗೆ ಅವನು ಹೋಗುತ್ತಾನೆ. ಆದರೆ ಮಿರ್ಜಾ ಮೊದಲಿಗೆ ರಹಸ್ಯವಾಗಿ ಸಂತೋಷವನ್ನು ಅನುಭವಿಸುತ್ತಾನೆ ಏಕೆಂದರೆ ಬೇಗಮ್ ನಿಧನಳಾಗಿದ್ದಾಳೆ ಮತ್ತು ಈ ಮಹಲು ಈಗ ಅವನದಾಗಿದೆ ಎಂದು ಭಾವಿಸುತ್ತಾನೆ. ಆದಾಗ್ಯೂ, ಬೇಗಂ ಮಿರ್ಜಾಗೆ ಬರೆದ ಪತ್ರವನ್ನು ಹೊರತುಪಡಿಸಿ ಬ್ಞಾಕೆಗೆ ಬೇರೇನೂ ಸಿಗುವುದಿಲ್ಲ. ಅದರಲ್ಲಿ ಬೇಗಂ ಇನ್ನೂ ಜೀವಂತವಾಗಿದ್ದಾಳೆ. ತನ್ನ ಹಳೆಯ ಪ್ರೇಮಿ ಅಬ್ದುಲ್ ರೆಹಮಾನ್‌ನೊಂದಿಗೆ ಓಡಿಹೋದಳು ಮತ್ತು ಮಹಲನ್ನು ಸಂರಕ್ಷಿಸಲು ಅವನಿಗೆ ಒಂದು ರೂಪಾಯಿಗೆ ಅದನ್ನು ಮಾರಾಟ ಮಾಡಿದಳು. ಹೀಗೆ ಮಿರ್ಜಾನ ಯೋಜನೆಗಳನ್ನು ವಿಫಲಗೊಳಿಸಿದಳು ಎಂದು ಅದರಲ್ಲಿ ಬರೆದಿರುತ್ತದೆ.

ಈಗ, ಪುರಾತತ್ತ್ವ ಶಾಸ್ತ್ರದ ಪರಂಪರೆಯ ತಾಣವಾಗಿ ಮಾರ್ಪಟ್ಟಿರುವ ಹಳೆಯ ಭವನವನ್ನು ತೊರೆಯಲು ಖಿನ್ನರಾದ ಬ್ಞಾಕೆ ಮತ್ತು ಮಿರ್ಜಾ ಸೇರಿದಂತೆ ಎಲ್ಲರೂ ಹೊರನಡೆಯುತ್ತಾರೆ. ಮಿರ್ಜಾ ಮತ್ತು ಬ್ಞಾಕೆ ರಸ್ತೆಯಲ್ಲಿರುವಾಗ, ಬೇಗಂ ತನ್ನ ಪ್ರೇಮಿಯೊಂದಿಗೆ ತನ್ನ 95 ನೇ ಹುಟ್ಟುಹಬ್ಬವನ್ನು ಆಚರಿಸಲು ಬಂಗಲೆಗೆ ಹಿಂದಿರುಗಿದಾಗ ಅವರ ಸ್ಥಿತಿ ಹದಗೆಡುತ್ತದೆ. ಬೇಗಂ ಮಿರ್ಜಾಗೆ ಪುರಾತನವಾದ ಕುರ್ಚಿಯನ್ನು ಬಿಟ್ಟುಕೊಟ್ಟಿರುತ್ತಾಳೆ ಮತ್ತು ಅವನು ಅದನ್ನು ಸ್ಥಳೀಯವಾಗಿ ₹ 250 ಕ್ಕೆ ಮಾರಿದನು ಎಂದು ಬ್ಞಾಕೆಗೆ ಹೇಳುತ್ತಾನೆ. ಇದು ಬ್ಞಾಕೆಯನ್ನು ಆಶ್ಚರ್ಯಗೊಳಿಸುತ್ತದೆ. ಬೇಗಂ ನ ಪುರಾತನ ಕುರ್ಚಿಗೆ ಮುಂಬೈನ ಪುರಾತನ ವಸ್ತುಗಳ ಅಂಗಡಿಯಲ್ಲಿ ₹ 1,35,000 ಬೆಲೆಯಿರುವುದನ್ನು ತೋರಿಸುವುದರೊಂದಿಗೆ ಚಲನಚಿತ್ರವು ಮುಗಿಯುತ್ತದೆ.

ಪಾತ್ರವರ್ಗ ಬದಲಾಯಿಸಿ

  • ಚುನ್ನನ್ "ಮಿರ್ಜ಼ಾ" ನವಾಬ್ ಪಾತ್ರದಲ್ಲಿ ಅಮಿತಾಭ್ ಬಚ್ಚನ್
  • ಬ್ಞಾಕೆ ರಸ್ತೋಗಿ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ
  • ಫ಼ಾತಿಮಾ ಬೇಗಮ್ ಪಾತ್ರದಲ್ಲಿ ಫ಼ಾರುಖ್ ಜಫ಼ರ್
  • ಗ್ಯಾನೇಶ್ ಶುಕ್ಲಾ ಪಾತ್ರದಲ್ಲಿ ವಿಜಯ್ ರಾಜ಼್
  • ಕ್ರಿಸ್ಟೊಫ಼ರ್ ಕ್ಲಾರ್ಕ್ ಪಾತ್ರದಲ್ಲಿ ಬ್ರಿಜೇಂದ್ರ ಕಾಲಾ
  • ಗುಡ್ಡೊ ಪಾತ್ರದಲ್ಲಿ ಸೃಷ್ಟಿ ಶ್ರೀವಾಸ್ತವ
  • ದುಲಹಿನ್ ಪಾತ್ರದಲ್ಲಿ ಟೀನಾ ಭಾಟಿಯಾ[೭][೮]
  • ಕೀಲುಗೊಂಬೆಯಾಟಗಾರನಾಗಿ ಮೊಹಮ್ಮದ್ ನೌಶಾದ್
  • ಶೇಖು ನವಾಬ್ ಪಾತ್ರದಲ್ಲಿ ನಲ್‍ನೀಶ್ ನೀಲ್
  • ಸುಶೀಲಾ ಪಾತ್ರದಲ್ಲಿ ಅರ್ಚನಾ ಶುಕ್ಲಾ
  • ನೀತು ಪಾತ್ರದಲ್ಲಿ ಅನನ್ಯಾ ದ್ವಿವೇದಿ
  • ಪಾಯಲ್ ಪಾತ್ರದಲ್ಲಿ ಉಜಾಲಿ ರಾಜ್
  • ಮಿಶ್ರಾ ಜಿ ಪಾತ್ರದಲ್ಲಿ ಸುನಿಲ್ ಕುಮಾರ್ ವರ್ಮಾ
  • ಸಯ್ಯದ್ ಪಾತ್ರದಲ್ಲಿ ಆಜ಼ಾದ್ ಮಿಶ್ರಾ
  • ಮುನ್ನಾ ಸಕ್ಸೇನಾ ಪಾತ್ರದಲ್ಲಿ ಉದಯ್ ವೀರ್ ಸಿಂಗ್
  • ಫ಼ೌಜ಼ಿಯಾ ಪಾತ್ರದಲ್ಲಿ ಪೂರ್ಣಿಮಾ ಶರ್ಮಾ
  • ಪಾಂಡೆ ಜಿ ಪಾತ್ರದಲ್ಲಿ ಪ್ರಕಾಶ್ ಬಾಜಪೇಯಿ
  • ಮಿಶ್ರೇಯಿನ್ ಪಾತ್ರದಲ್ಲಿ ಪೂನಂ ಮಿಶ್ರಾ
  • ಮುನ್‍ಮುನ್ ಜಿ ಪಾತ್ರದಲ್ಲಿ ಜೋಗಿ ಮಲಂಗ್
  • ಸಿನ್ಹಾ ಪಾತ್ರದಲ್ಲಿ ತ್ರಿಲೋಚನ್ ಕಾಲ್ರಾ
  • ಅಬ್ದುಲ್ ರೆಹ್ಮಾನ್ ಪಾತ್ರದಲ್ಲಿ ಬೆಹ್ರಾಮ್ ರಾಣಾ
  • ವೈದ್ಯನಾಗಿ ಜ಼ಿಯಾ ಅಹಮದ್ ಖಾನ್
  • ಪೋಲಿಸಿನವನಾಗಿ ಸಂದೀಪ್ ಯಾದವ್

ತಯಾರಿಕೆ ಬದಲಾಯಿಸಿ

ಶೂಜಿತ್ ಸರ್ಕಾರ್ ಮತ್ತು ಜೂಹಿ ಚತುರ್ವೇದಿ ಈ ಚಿತ್ರದ ಕಥೆಯ ಮೇಲೆ ಕೆಲಸಮಾಡಿದರು. ಚಿತ್ರದ ಶೀರ್ಷಿಕೆಯು ಲಕ್ನೋದಲ್ಲಿ ಬಳಸಲಾಗುವ ಆಡುಮಾತಿನ ಪದವಾಗಿದೆ ಎಂದು ಸರ್ಕಾರ್ ತಿಳಿಸಿದರು.[೪]

ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾರನ್ನು ಪ್ರಮುಖ ಪಾತ್ರಗಳಿಗೆ ಆಯ್ಕೆ ಮಾಡಲಾಯಿತು, ಇದು ಒಟ್ಟಾಗಿ ಅವರ ಮೊದಲ ಚಿತ್ರವಾಗಿದೆ. ಜೂನ್ 2019 ರ ಮೂರನೇ ವಾರದಲ್ಲಿ ಲಕ್ನೋದಲ್ಲಿ ಚಿತ್ರೀಕರಣ ಪ್ರಾರಂಭವಾಯಿತು.[೯]

ಬಿಡುಗಡೆ ಬದಲಾಯಿಸಿ

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ, ಆದರೆ ಆ್ಯಮಜ಼ಾನ್ ಪ್ರೈಮ್ ವೀಡಿಯೊದಲ್ಲಿ ಜೂನ್ 12 2020ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು.[೧೦]

ಧ್ವನಿವಾಹಿನಿ ಬದಲಾಯಿಸಿ

ಚಿತ್ರದ ಸಂಗೀತವನ್ನು ಶಾಂತನು ಮೊಯಿತ್ರಾ, ಅಭಿಷೇಕ್ ಅರೋರಾ ಮತ್ತು ಅನುಜ್ ಗರ್ಗ್ ಸಂಯೋಜಿಸಿದ್ದಾರೆ. ಪುನೀತ್ ಶರ್ಮಾ, ದಿನೇಶ್ ಪಂತ್ ಮತ್ತು ವಿನೋದ್ ದುಬೆ ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ.

ಪ್ರಶಸ್ತಿಗಳು ಬದಲಾಯಿಸಿ

ಫ಼ಿಲ್ಮ್‌ಫ಼ೇರ್ ಪ್ರಶಸ್ತಿಗಳು - ೨೭ ಮಾರ್ಚ್ ೨೦೨೧

  • ಅತ್ಯುತ್ತಮ ಪೋಷಕ ನಟಿ - ಫ಼ಾರೂಖ್ ಜಫ಼ರ್ - ಗೆಲುವು
  • ವಿಮರ್ಶಕರ ಅತ್ಯುತ್ತಮ ನಟ - ಅಮಿತಾಭ್ ಬಚ್ಚನ್ - ಗೆಲುವು
  • ಅತ್ಯುತ್ತಮ ಸಂಭಾಷಣೆ - ಜೂಹಿ ಚತುರ್ವೇದಿ - ಗೆಲುವು
  • ಅತ್ಯುತ್ತಮ ಛಾಯಾಗ್ರಹಣ - ಅಭೀಕ್ ಮುಖೋಪಾಧ್ಯಾಯ್ - ಗೆಲುವು
  • ಅತ್ಯುತ್ತಮ ವಸ್ತ್ರ ವಿನ್ಯಾಸ - ವೀರಾ ಕಪೂರ್ - ಗೆಲುವು
  • ಅತ್ಯುತ್ತಮ ತಯಾರಿಕಾ ವಿನ್ಯಾಸ - ಮಾನ್ಸಿ ಮೆಹ್ತಾ - ಗೆಲುವು
  • ಅತ್ಯುತ್ತಮ ಚಲನಚಿತ್ರ - ಗುಲಾಬೊ ಸಿತಾಬೊ - ನಾಮನಿರ್ದೇಶಿತ
  • ವಿಮರ್ಶಕರ ಅತ್ಯುತ್ತಮ ಚಲನಚಿತ್ರ - ಗುಲಾಬೊ ಸಿತಾಬೊ - ನಾಮನಿರ್ದೇಶಿತ
  • ಅತ್ಯುತ್ತಮ ನಿರ್ದೇಶಕ - ಶೂಜಿತ್ ಸರ್ಕಾರ್ - ನಾಮನಿರ್ದೇಶಿತ
  • ಅತ್ಯುತ್ತಮ ನಟ - ಅಮಿತಾಭ್ ಬಚ್ಚನ್ - ನಾಮನಿರ್ದೇಶಿತ
  • ಅತ್ಯುತ್ತಮ ಸಂಕಲನ - ಚಂದ್ರಶೇಖರ್ ಪ್ರಜಾಪತಿ - ನಾಮನಿರ್ದೇಶಿತ
  • ಅತ್ಯುತ್ತಮ ಕಥೆ - ಜೂಹಿ ಚತುರ್ವೇದಿ - ನಾಮನಿರ್ದೇಶಿತ
  • ಅತ್ಯುತ್ತಮ ಧ್ವನಿ ವಿನ್ಯಾಸ - ಸಮಲ್ - ನಾಮನಿರ್ದೇಶಿತ

ಉಲ್ಲೇಖಗಳು ಬದಲಾಯಿಸಿ

  1. "Gulabo Sitabo (2020)". British Board of Film Classification. Retrieved 10 June 2020.
  2. Ramachandran, Naman (14 May 2020). "Amitabh Bachchan's 'Gulabo Sitabo' Bows on Amazon Prime as India Embraces Streaming Era".
  3. "Gulabo Sitabo: Amitabh Bachchan and Ayushmann Khurrana's film's quirky motion logo is sure to grab your attention".
  4. ೪.೦ ೪.೧ "Amitabh Bachchan and Ayushmann Khurrana to come together for Shoojit Sircar's quirky comedy Gulabo Sitabo". India Today. 15 May 2019. Retrieved 20 June 2019. ಉಲ್ಲೇಖ ದೋಷ: Invalid <ref> tag; name ":l1" defined multiple times with different content
  5. "Ayushmann Khurrana is all praise for Amitabh Bachchan; calls him 'century's greatest star'".
  6. "Amazon Prime India Makes Biggest Movie Acquisition To Date With Amitabh Bachchan-Ayushmann Khurrana Comedy 'Gulabo Sitabo'". Deadline Hollywood. 13 May 2020. Retrieved 14 May 2020.
  7. "Tina Bhatia: Shooting with Ayushmann Khurrana for 'Gulabo Sitabo' was great fun".
  8. "Ayushmann Khurrana recognised me as Choti Ammi of 'Gully Boy': Tina Bhatiaa".
  9. "Amitabh Bachchan Starts Shooting for Shoojit Sircar's Gulabo Sitabo in Lucknow". News 18. 19 June 2019. Retrieved 20 June 2019.
  10. "Amitabh Bachchan, Ayushmann Khurrana's Gulabo Sitabo to premiere on Amazon Prime Video". Indian Express (in ಅಮೆರಿಕನ್ ಇಂಗ್ಲಿಷ್). 2020-05-14. Retrieved 2020-05-14.

ಹೊರಗಿನ ಕೊಂಡಿಗಳು ಬದಲಾಯಿಸಿ