ಗಂಗಾಧರಂ ಶಾಸನ ಶಾಸನವು ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯ, ಗಂಗಾಧರಂ ಮಂಡಲಕ್ಕೆ ಸೇರಿದ ಕುರ್ಕ್ಯಾಲ ಎಂಬ ಹಳ್ಳಿಯಲ್ಲಿ ಒಂದು ಬೆಟ್ಟದ ಮೇಲೆ ಸಿಕ್ಕಿತು.ಕನ್ನಡದ ಮೊಟ್ಟಮೊದಲ ಹಿರಿಯ ಕವಿಯಾದ ಪಂಪನ ಜೀವನಚರಿತ್ರೆಯನ್ನು ಮರುರೂಪಿಸುವುದರಲ್ಲಿ, ಗಂಗಾಧರಂ ಶಾಸನ ಅಥವಾ ಜಿನವಲ್ಲಭನ ಶಾಸನವು ಮಹತ್ವದ ಪಾತ್ರವನ್ನು ವಹಿಸಿದೆ. [೧]

ಇತಿಹಾಸ ಬದಲಾಯಿಸಿ

ಪಿ. ವಿ. ಪರಬ್ರಹ್ಮ ಶಾಸ್ತ್ರಿ ೧೯೭೬ ರಲ್ಲಿ ಸಂಪಾದಿಸಿ, ಪ್ರಕಟಿಸಿದ "ಇನ್ಸ್ಕ್ರಿಪ್ಟಿವ್ನ್ಸ್ ಆಫ಼್ ಆಂಧ್ರಪ್ರದೇಶ, ಕರೀಂ ನಗರ ಡಿಸ್ಟ್ರಿಕ್ಟ್" ಎಂಬ ಕೃತಿಯಲ್ಲಿ ಈ ಶಾಸನದ ಬಗ್ಗೆ ಮಾಹಿತಿ ಇದೆ. ಇದನ್ನು ಸ್ಥಾಪಿಸಿದವನು ಪಂಪನ ತಮ್ಮನಾದ ಜಿನವಲ್ಲಭ. ಇದರಲ್ಲಿ ಜಿನವಲ್ಲಭನನ್ನು ಕುರಿತು ಹೇರಳವಾದ ಮಾಹಿತಿ ಸಿಗುವುದಲ್ಲದೆ, ಪಂಪನನ್ನು ಕುರಿತಂತೆಯೂ ಮುಖ್ಯವಾದ ಸಂಗತಿಗಳು ಗೊತ್ತಾಗುತ್ತವೆ. ಜಿನವಲ್ಲಭನು ಪಾಂಡಿತ್ಯ ಮತ್ತು ಸಾಂಪತ್ತಿಕ ಸ್ಥಿತಿಗತಿಗಳೆಂಬ ಎರಡು ನೆಲೆಗಳಲ್ಲಿಯೂ ಶ್ರೀಮಂತನಾಗಿದ್ದನು. ಅವನಿಗೆ ಸಂಗೀತ ಮತ್ತು ಗಮಕಗಳಲ್ಲಿ ಪರಿಣತಿಯಿತ್ತು. ಅವನು ಅನೇಕ ಜೈನ ಬಸದಿಗಳು, ಕೊಳಗಳು ಮತ್ತು ಉದ್ಯಾನಗಳನ್ನು ನಿರ್ಮಿಸಿದ್ದನು. ಎಲ್ಲಕ್ಕಿಂತ ಮುಖ್ಯವಾಗಿ ಪಂಪ ಮತ್ತು ಜಿನವಲ್ಲಭರಿಬ್ಬರೂ ಭೀಮಪ್ಪಯ್ಯ ಮತ್ತು ಅಬ್ಬಣಬ್ಬೆಯರ ಮಕ್ಕಳೆಂದು ಈ ಶಾಸನವು ಸ್ಪಷ್ಟಪಡಿಸುತ್ತದೆ. ಅಬ್ಬಣಬ್ಬೆಯು ಉತ್ತರ ಕರ್ನಾಟಕದ ಅಣ್ಣಿಗೇರಿಯಿಂದ ಬಂದವಳೆಂಬ ಸಂಗತಿಯೂ ಇಲ್ಲಿಯೇ ತಿಳಿಯುತ್ತದೆ. ಪಂಪನ ಆಶ್ರಯದಾತನಾದ ಅರಿಕೇಸರಿಯು, ಧರ್ಮಪುರಿ ಅಗ್ರಹಾರವನ್ನು ಪಂಪನಿಗೆ ದತ್ತಿಯಾಗಿ ನೀಡಿದನೆಂಬ ವಿಷಯವನ್ನೂ ಈ ಶಾಸನದಲ್ಲಿ ಹೇಳಲಾಗಿದೆ. ಗಂಗಾಧರಂ ಶಾಸನವು ಕನ್ನಡ, ಸಂಸ್ಕೃತ ಮತ್ತು ತೆಲುಗುಗಳಲ್ಲಿ ರಚಿತವಾಗಿದೆ. ಇಲ್ಲಿರುವ ತೆಲುಗು ಕಂದಪದ್ಯಗಳು ಆ ಭಾಷೆಯಲ್ಲಿ ದೊರಕಿರುವ ಅತ್ಯಂತ ಹಳೆಯ ಕಂದಪದ್ಯಗಳೆಂದು ಹೇಳಲಾಗಿದೆ. ಹೀಗೆ, ಈ ಶಾಸನವು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮುಖ್ಯವಾಗಿದೆ.[೨][೩]

ಶಾಸನದ ಪಠ್ಯ ಬದಲಾಯಿಸಿ

ಓಂ ನಮಃ ಸಿದ್ಧೇಭ್ಯಃ ಸ್ವಸ್ತಿ ಸಮಸ್ತ ಸಕಳ ಕಳಾಳಾಪ ಪ್ರವೀಣಂ ಭವ್ಯರತ್ನಾಕರ[ಂ] ಗುಣಪಕ್ಷಪಾತಿ ಬೆಂಗಿನಾಡ ಸಪ್ತಗಮ್ರಗಳೊಳಗಣ ವಂಗಿಪರ್ರ ಕಮ್ಮೆ ಬ್ರಾಹ್ಮಣಂ ಜಮದಗ್ನಿ ಪಂಚಾರ್ಷೇಯಂ ಶ್ರೀವತ್ಸಗೋತ್ರಂ ಗುಂಡಿಕಱ್ರ ನಿಡುಂಗೊಣ್ಡೆಯ್ ಅಭಿಮಾನಚನ್ದ್ರನ ಮರ್ಮ್ಮಂ ಭೀಮಪಯ್ಯನ ಬೆಳ್ವೊಲದ ಅಣ್ನಿಗೆರೆಯ ಜೋಯಿಸಸಿಂಘನ ಮರ್ಮ್ಮಳ್ ಅಬ್ಬಣಬ್ಬೆಯ ಮಗಂ ಕೊಣ್ಡಕುನ್ದೆಯ ದೇಸಿಗಗಣದ ಪೊತ್ಥಗೆಯ ಬೞಯ ಪಣ್ಡರಂಗವಲ್ಲಿಯ ಜಯಣನ್ದಿಸಿದ್ಧಾನ್ತಭಟಾರರ ಗುಡ್ಡಂ ಜಿನವಲ್ಲಭಂ ಸಬ್ಬಿನಾಡ ನಟ್ಟನಡುವಣ ಧರ್ಮ್ಮವುರದ್ ಉತ್ತರ ದಿಗ್ಭಾಗದ ವೃಷಭಗಿರಿಯೆಂಬ ಅನಾದಿ ಸಂಸಿದ್ಧ ತೀರ್ತ್ಥದ ದಕ್ಷಿಣದಿಶಾಭಾಗದಿ ಈ ಸಿದ್ಧಶಿಲೆಯೊಳ್ ತಮ್ಮ ಕುಲದೈವಮ್ ಆದ್ಯನ್ತ ಜಿನಬಿಂಬಂಗಳುಮಂ ಚಕ್ರೇಶ್ವರಿಯುಮಂ ಪೆಱವು ಜಿನಪ್ರತಿಮೆಗಳುಮಂ ತ್ರಿಭುವನತಿಲಕಮ್ ಎಂಬ ಬಸದಿಯುಮಂ ಕವಿತಾಗುಣಾರ್ಣ್ನವಮ್ gಎಂಬ ಕೆಱಯುಮಂ ಮದನವಿಳಾಸಮ್ ಎಂಬ ಬನಮುಮಂ ಮಾಡಿಸಿದಂ ಭ್ರಾತದ್ಧರ್ಮ್ಮಪುರಂ ಪ್ರಯಾಮಕಿಮತೋ ಜೈನಾಭಿಷೇಕೋತ್ಸವ ಕ್ಷೀರಪ್ಲಾವಿತ ತುಂಗ ಶೃಂಗ ವೃಷಭಕ್ಷೆಣಿದ್ಧ್ರಮೀಕ್ಷಾಮಹೇ ಯಾತ್ರಾಯಾತ ಸಮಸ್ತ ಭವ್ಯಜನತಾ ಸನ್ಮಾನ ದಾನೋದ್ಯತಂ ಪಂಪಾರ್ಯ್ಯಾನುಜಮತ್ರ ಭೀಮತನುಜಂ ಸಮಕ್ತ್ವರತ್ನಾಕರಂ ಗೀತಂ ಗಾತುಮ್ ಅನೇಕ ಭೇದ ಸುಭಗಂ ಕಾವ್ಯಾನಿಸೋಚ್ಚಾವಚಂ ವಾಚಾವಾಚಯಿತುಂ ಪ್ರಿಯಾಣಿವದಿತುಂ ಸಾಧೂಪಕರ್ತ್ತುಂ ಸತಂ ಬೋಗಾನ್ ಸೇವಿತುಮಂಗನಾರಮಯಿತುಂ ಪೂಜಾಂ ವಿಧಾತುಂ ಜಿನೇ ಜಾನೀತೇ ಜಿನವಲ್ಲಭಳ್ ಪರರ್ಮ ಇದಂ ಪಂಪಾಭಿದಾನಾನುಜಃ ಅಜಸ್ರ ಜಿನವನ್ದನಾಗತ ಮುಈಶ್ವರ ಶ್ರಾವಕ ಪ್ರಜಾಸ್ತವರವ ಪ್ರತಿಧ್ವನಿತ ಶಬ್ದಕೋಳಾಹಳೈ[ಃ] ಅಧಿಷ್ಠಿತ ದಿಗಂಬರೋ ವೃಷಭಶೈಲ ಏಷಸ್ವಯಂ ಪರಾಂ ವದತಿ ವಾಚಕಾಭರಣ ಕೀರ್ತ್ತಿಮಾಕಳ್ಪತಃ ಬಗೆಯಲಳುಂಬಮ್ ಈ ಬಗೆಯನ್ ಆರ್ಬ್ಬಗೆವೊರ್ಬ್ಬಗೆ ಗಾಸೆಯಲ್ತು ದಿಟ್ಟಿಗೆ ಪೊಲನಲ್ತು ನೀಳ್ದ ಸಱಯೊಳ ಜಿನಬಿಂಬಮನ್ ಈತನ್ ಈಗಳ್ ಎಂತು ಆಗಱಸಿದಪ್ಪೊನ್ ಎನ್ದು ಬಗೆವನ್ನೆವರಂ ಜಿನಬಿಂಬಮ್ ಅಲ್ಲಿ ತೊಟ್ಟಗೆ ನೆಗಳ್ದಿೞ್ದುವೇಂ ಚರಿತಂ ಅಚ್ಚರಿಯೋ ಜಿನವಲ್ಲಭೇನ್ದ್ರನಾ ಇದು ಕವಿತಾಗುಣಾರ್ಣ್ನವನ ಕೀರ್ತ್ತಿಯ ಮೂರ್ತ್ತಿವೊಲಾಗಿ ದಕ್ಷಿಣಾರ್ದ್ಧದ ವೃಷಭಾದ್ರಿಯಕ್ಕೆ ವೃಷಭೇಶ್ವರಬಿಂಬ ಸನಾಥಮೆಂಬ್ ಅಲಂಪೊದವೆ ನಿಜದ್ವಿಜಾವಸಥ ಪರ್ವ್ವತಮಂ ಜಿನಚೈತ್ಯಮ್ ಆಗೆ ಮಾಡಿದ ಜಿನವಲ್ಲಭಂಗೆ ಜಿನವಲ್ಲಭ್ನ್ ಅಪ್ಪುದುಮ್ ಒಂದು ಛೋದ್ಯಮೋ ಚದುರ ಮೈಮೆಯ ಸತ್ಕವಿತ್ವದ ಸನ್ದ ಪಂಪನ ತಮ್ಮನ್ ಓವ್ವದೆ ಪೊಗೞ್ತೆಯೇ ಬಾಜಿಸಲ್ ಬರೆಯಲ್ ಕವಿತ್ವದ ತತ್ವದೊಳ್ ಪುದಿದು ನೇರ್ಪ್ಪಡೆ ಪೇೞಲ್ ಉರ್ವ್ವಿಗಪೂರ್ವ್ವಮ್ ಆ ಆಗಿರೆ ಬಲ್ಲೊನ್ ಅಪ್ಪುದರಿನ್ ಒರ್ವ್ವನೆ ವಾಗ್ವಧೂವರವಲ್ಲಭಂ ಜಿನವಲ್ಲಭಂ ವಿನುತ ಚಳುಕ್ಯವಂಶಪತಿ ಮಿಕ್ಕರಿಕೇಸರಿ ಸನ್ದ ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮ್ ಎನ್ದು ಮದೀಯಮ್ ಇದೆನ್ದು ಕೀರ್ತ್ತಿಶಾಸನಮೆನೆ ಕೊಟ್ಟ ಶಾಸನದ ಪಂಪನ ನಂಬಿದುದೊಂದು ಜೈನಶಾಸನದ ನೆಗೞ್ತೆಯಂ ವೃಷಭಪರ್ವ್ವತಮನ್ತದು ತಾನೆ ಪೇೞದೇ ಎಸಗಲ್ಗಾಳಿ ಪುಗಲ್ ಪತಂಗಕಿರಣಂ ಸಾರಲ್ಮಿಗಂ ಪಾಱಲ್ ಆಗಸದೊಳ್ ಪಕ್ಕಿಗಳಲ್ಲಿ ಸಲ್ಲವೆನಿಸಿರ್ೞ್ದನ್ಯೋದಯಂ ಧರ್ಮ್ಮದೊಳ್ ಜಸಮಂ ಪೊಂಪುೞಮಾಡೆ ಮೆಚ್ಚಿ ಹರಿಗಂ ಪಂಪಂಗೆ ಗೊಟ್ಟಾ ದ್ವಿಜಾವಸಥ ಗ್ರಾಮಮದೇನ್ ನೆಗೞ್ತೆಯ ಕಳಾಪ ಗ್ರಾಮಮಂ ಪೋಲ್ತುದೋ ಬರೆದುದೇ ತಾಂಬ್ರಶಾಸನಮಂ ಆದೇಯಮೇ ಧರ್ಮ್ಮವುರಂ ನೆಗೞ್ತೆವೆತ್ತರಿಗನ ಕೊಟ್ಟುದೇ ನೆಗೞ್ದ ಪಂಪನ ಪೆತ್ತುದೇ ಪೇೞಮ್ ಎನ್ದು ನೀಮ್ಮರುಳೆ ಪಲರ್ಮ್ಮೆಯುಂ ಪಲಬರಂ ಬೆಸಗೊಳ್ಳದೆ ಪೋಗಿ ನೋಡ ಸುನ್ದರ ವೃಷಭಾಚಲೋನ್ನತ ಶಿಳಾತಳದೊಳ್ ಬರೆದಕ್ಕರಂಗಳಂ ಜಿನಭವನಂಬುಲೆತ್ತಿಂಚುಟ ಜಿನಪೂಜಲ್ ಸೇಯುಚುನ್ನಿ ಜಿನಮುನುಲಕು ನತ್ತಿನಯನ್ನದಾನಂ ಬೀವುಟಂ ಜಿನವಲ್ಲಭಂ ಬೋಲಂಗಲರೆ ಜಿನಧರ್ಮ್ಮಪರುಲ್ ದಿನಕರು ಸರಿವೆಲ್ಗುದುಮನಿ ಜಿನವಲ್ಲಭುನೊಟ್ಟನೆತ್ತು ಜಿತಕವಿನನುಂ ಮನುಜುಲ್ಗಲರೇ ಧಾತ್ರಿಂ ವಿನಿತಿಚ್ಚುದುನನಿಯ ವೃತ್ತವಿಬುಧಕವೀನ್ದ್ರುಲ್ ಒಕ್ಕೊಕ್ಕಗುಣಂ ಕಲ್ಗುದುರೊಕ್ಕೊಣ್ಡಿಗಾಕ್ ಒಕ್ಕಲಕ್ಕಲೇವೆವ್ವರಿಕಿಂ ಲೆಕ್ಕಿಂಪನ್ ಒಕ್ಕಿಲಕ್ಕಕು ಮಿಕ್ಕಿಲಿ ಗುಣಪಕ್ಷಪಾತಿ ಗುಣಮಣಿಗಣಂಬುಲ್ ಎನ್ದು ಲೋಕಮೆಲ್ಲಂ ಪೊಗೞೆ ನೆಗೞ್ದ ಜಿನವಲ್ಲಭ ಸುಧರ್ಮ್ಮ ಸನ್ತತಿಯೊಳ್ ತೊಟ್ಟ ಗುಣಾವಳಿಯನ್ ಈ ವೃಷಭಗಿರಿಯ ಸಿದ್ಧಶಿಲೆಯೊಳ್ ಎಱೆಯಮ್ಮಂ ಟಂಕೋತ್ಕೀರ್ಣ್ನಮ್ ಮಾಡಿದಂ .

ಉಲ್ಲೇಖಗಳು ಬದಲಾಯಿಸಿ

  1. Inscriptions of Andhrapradesh, Kareem Nagar DIstrict’. ಪಿ.ವಿ. ಪರಬ್ರಹ್ಮ ಶಾಸ್ತ್ರಿ.
  2. "GANGADHARAM INSCRIPTION". Archived from the original on 2017-09-09. Retrieved 2017-11-14.
  3. "ಆರ್ಕೈವ್ ನಕಲು". Archived from the original on 2016-08-04. Retrieved 2017-11-14.