'ಕೊರವಂಜಿ'

ಆರ್.ಕೆ.ಲಕ್ಷ್ಮಣ್,'ಕೊರವಂಜಿ'ಗೆ ಇನ್ನೂ ಮುಖಚಿತ್ರ ರೂಪಿಸುವ ಮುನ್ನ ಬದಲಾಯಿಸಿ

'ಕೊರವಂಜಿ ನಗೆ ಪತ್ರಿಕೆ'ಯನ್ನು ಆರಂಭಿಸಿದವರು, ರಾಶಿಯವರು. ಅವರೊಬ್ಬ ವೈದ್ಯರು. ಟಿ.ಪಿ.ಕೈಲಾಸಂರವರ ಆಪ್ತ ಶಿಷ್ಯರು. ಆ ಪತ್ರಿಕೆಗೆ ಮುಖಚಿತ್ರವನ್ನು ರೂಪಿಸಿದವರು. 'ಆರ್.ಕೆ.ಲಕ್ಷ್ಮಣ್' ರವರು. ಆ ಸಮಯದಲ್ಲಿ ಅವರು ಹೆಚ್ಚು ಪ್ರವರ್ಧಮಾನಕ್ಕೆ ಬಂದಿರದೆ ಮದ್ರಾಸ್ ನ 'ಹಿಂದು ಪತ್ರಿಕೆ'ಯಲ್ಲಿ ಬರೆಯುತ್ತಿದ್ದ ಅವರ ಅಣ್ಣ, ಆರ್.ಕೆ.ನಾರಾಯಣ್ ರವರ ಲೇಖನಗಳಿಗೆ, ಚಿತ್ರಗಳನ್ನು ಬರೆದುಕೊಡುತ್ತಿದ್ದರು. ಕೊರವಂಜಿ ಪತ್ರಿಕೆಗೆ ಬರೆಯುತ್ತಿದ್ದವರ ಮಹಿಳೆಯರ ಪೈಕಿ, ಸುನಂದಮ್ಮನವರು ಒಬ್ಬರು. ಕೇಫ, ಅರಾಸೇ, ಮತ್ತಿತರು ಆ ಪತ್ರಿಕೆಯನ್ನು ಚೆನ್ನಾಗಿ ಉಳಿಸಿ ಬೆಳೆಸಲು ಪ್ರಯತ್ನಿಸಿದರು. ಆದರೆ, ಕಾರಣಾಂತರಗಳಿಂದ, ರಾಶಿಯವರ ಜೀವಾವಧಿಯಲ್ಲೇ ಆ ಪತ್ರಿಕೆ ನೆಲಕಚ್ಚಿ ನಿಂತುಹೋಯಿತು.