ಕೊಂಡಾಪುರ ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕಿನ ಒಂದು ಗ್ರಾಮ.ಹುಣಸನಹಳ್ಳಿಯ ಶ್ರೀ ಬಿಸಲೇಶ್ವರಿ (ಬಿಸಿಲಮ್ಮ) ದೇವಿಗೆ ಮೊದಲು ಕೊಂಡಕ್ಕೆ ಕೊಂಡದ ಸೌದೆ ತರುವ ಮೊದಲ ಗ್ರಾಮವಾದ್ದರಿಂದ ಗ್ರಾಮ ಕೊಂಡಾಪುರ ಎಂದು ಕರೆಸಿಕೊಳ್ಳುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಎಸ್. ಮಂಚಯ್ಯ , leryಪತ್ರಕರ್ತ ರಾಜೇಶ್ ಕೊಂಡಾಪುರ, ವಕೀಲ ಕೆ.ಟಿ. ತಿಮ್ಮೇಗೌಡ, ಕವಿ ಸಿಪಿಲೆ ಸತೀಶ್ (ಸಾಗುವಾನಿ ಸತೀಶ್) ಕೊಂಡಾಪುರ ಗ್ರಾಮದವರು. ಈ ಗ್ರಾಮದಲ್ಲಿ ಒಕ್ಕಲಿಗರು ಮತ್ತು ತಿಗಳ ಸಮೂದಾಯ ಬಹುಸಂಖ್ಯಾತರು. ಉಳಿದಂತೆ ದಲಿತರು, ಅರಾಧ್ಯರು (ಲಿಂಗಾಯತರು) ಗ್ರಾಮದಲ್ಲಿದ್ದಾರೆ. ಗ್ರಾಮದಲ್ಲಿ ಶ್ರೀ ಚೌಡೇಶ್ವರಿ, ಶ್ರೀರಾಮ ಮಂದಿರ, ಶ್ರೀ ಎಲ್ಲಮ್ಮತಾಯಿ, ಶ್ರೀ ಶನಿಮಹತ್ಮನ ದೇವಸ್ಥಾನಗಳಿವೆ. ಒಂದನೆ ತರಗತಿಯಿಂದ ಏಳನೇ ತರಗತಿವರೆಗೆ ಶಾಲೆ ಇದೆ. ಉತ್ತಮವಾದ ವಾತವಾರಣದಿಂದ ಕೂಡಿದ ಗ್ರಾಮ ಇದಾಗಿದ್ದು,. ಇಲ್ಲಿನ ಜನರ ಪ್ರಮುಖ ಕಸುಬು ವ್ಯವಸಾಯ. ಪ್ರಮುಖವಾದ ಬೆಳೆಗಳೆಂದರೆ ರಾಗಿ, ತೆಂಗು, ಬಾಳೆಮ ತರಕಾರಿ ಬೆಳೆಗಳು ಇತ್ಯಾದಿ. ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕುರಿ ಸಾಕಣೆ, ರೇಷ್ಮೆ ಸಾಕಣೆ ಜನರ ಮುಖ್ಯ ಆಧಾಯದ ಮೂಲಗಳಾಗಿವೆ.