ಭಾರತಾಂಬೆಯ ಮಡಿಲ ತುಂಬಿ ಇಡೀ ದೇಶದ ಜನತೆಗೆ ಹೆಮ್ಮೆತಂದ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಎತ್ತಿ ಹಿಡಿದ ಪ್ರತಿಭಾವಂತ ವ್ಯಕ್ತಿಗಳಿಗೆ "ಭಾರತ ರತ್ನ್ನ" ಪ್ರಶಸ್ತಿ ನೀಡಿ ಗೌರವಿಸುವುದು ಕೇಂದ್ರ ಸರ್ಕರ \ ನಡೆಸಿಕೊಂಡು ಬಂದಿರುವ ವಾಡಿಕೆ. ಈ ಗೌರವವೆಂದು ಭಾವಿಸಲಾಗಿದೆ. ಇದೆ ರೀತಿ ಭಾರತಾಂಬೆಯ ಪುತ್ರಿ ಕನ್ನಡಾಂಬೆಯ ಮಡಿಲಲ್ಲಿ ನಾಡಿನ ಜನತೆಗೆ ಹೆಮ್ಮೆತಂದ, ಕನ್ನಡ ನಾಡು, ನುಡಿಗಳಿಗೆ ಪ್ರತಿಷ್ಟೆತಂದುಕೊಟ ಪ್ರತಿಭಾವಂತ ವ್ಯಾತ್ತಿಗಳಿಗೆ ಕರ್ನಾಟಕ ರಾಜ್ಯ ಸರ್ಕರವು "ಕರ್ನಾಟಕ ರತ್ನ್ನ" ಪ್ರಶಸ್ತಿಯನ್ನು ನೀಡಿ ಗೌರವಿಸುವುದನ್ನು ೧೯೯೨ ರಿಂದ ಜೌರಿಗೊಳಿಸಿದೆ. ಅಲ್ಲಿಂದ ಇಲ್ಲಿಯವರೆಗೆ ನಾಡಿನ ಆರು ಹಿರಿಯ ಜೀವಗಳಿಗೆ ಕರ್ನಾಟಕ ರತ್ನ್ನ ಪುರಸ್ಕಾರವನ್ನು ನೀಡಿ ಗೌರವಿಸಿದೆ.ಈ ಹಿರಿಯ ಚೆತನಗಳ ಬದುಕು-ಬರಹ, ಸಾಧನೆಗಳು ನಮ್ಮ ವಿದ್ಯಾಥಿಗಳಿಗೆ ದಾರಿದೀಪವಾಗಿದೆ. ಬದುಕಿನ ಬಗೆಗೆ ಸೂತಿಋಯ ಸೆಲೆ ಊಕ್ಕಿಸಲಿದೆ. ಇದಕ್ಕಾಗಿಅಯೆ ಸಿರಿಗನ್ನಡ ಬಳಗವು ಕರ್ನಾಟಕ ರತ್ನ್ನಗಳು ಪರಿಚಯವನ್ನು ಈ ಕಿರು ಪುಸ್ತಕದಲ್ಲಿ ವಿದ್ಯಾಥಿಗಳಿಗಾಗಿ ಸಂಕಿಷ್ಪತ್ತ ವಿವರಣೆಯೊಂದಿಗೆ ನೀಡಿದೆ.

ರಾಷ್ತ್ತ್ರಕವಿ ಕುವೆಂಪು ಬದಲಾಯಿಸಿ

" ಕನ್ನಡ ಎನೆ ಕುಣೆದಾಡುವುದೆನ್ನೆದೆ, ಕನ್ನಡ ಎನೆ ಕಿವಿನಿಮಿರುವುದು !" ಎಂಬ ಕನ್ನಡಾಭಿಮಾನವನ್ನು ಮೈ ತುಂಬಿಕೊಂಡಿದ್ದ;" ಬಾರಿಸು ಕನ್ನಡ ಡಿಂಡಿಮವನ್ನು ಬಾರಿಸಿದ, ವಿಶ್ವಮಾನವ ಸಂದೆಶ ಸಾರಿದ, ಕನ್ನಡದ ಚೆತನ, ಕನ್ನಡದ ಕಂಪು, ಕವಿಪುಂಗವ, ರಾಷ್ತ್ತ್ರಕವಿ ಅವರೆ ನಮ್ಮೆಲ್ಲರ ಹೆಮ್ಮೆಯ ಕುವೆಂಪುರವರು.

ಕುವೆಂಪುರವರ ಪೊಣ್ ಹೆಸರು ಕುಪ್ಪಳಿ ವೆಂಕಟ್ಟಪ್ಪ . ತಂದೆ ವೆಂಕಟಯ್ಯಗೌಡ ತಾಯಿ ಸೀತಮ್ಮ. ಶಿವಮ್ಮೊಗ್ಗ ಜೆಲ್ಲೆಯ ತೀರ್ಥಹಳ್ಲಿ ತಾಲೂಕಿನ ಕುಪ್ಪಳಿಯಲ್ಲಿ ೨೯-೧೨-೧೯೦೪ ರಲ್ಲಿ ಜನಿಸಿದ ಕುವೆಂಪುರವರು, ಮೈಸೊರಿನ ವೆಸ್ಲಿಯನ್ ಹೆಸ್ಕೂಲ್, ಮಹಾರಾಜ ಕಾಲೆಜಿನಲ್ಲಿ ಬಿ.ಎ. ಪದವಿ ಮತ್ತು ಎಂ.ಎ ಪದವಿ ಪಡೆದು ಅಲ್ಲಿಯೆ ಅದ್ಯಾಪಕರಾಗಿ ಸೆವೆ ಆರಂಭಿಸಿ ಪ್ರಾಚಾರ್ಯರಾಗಿ ತಾವು ಒದಿದ ಕಾಲೆಜಿನಲ್ಲಿಯೆ ವ್ರತ್ತಿ ಕೈಗೊಂಡು ನಂತರ ಮೈಸೊರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೆವೆ ಸಲ್ಲಿಸಿದರು. ಬಿಗಿನರ್ ಮ್ಯೂಸ್ ಎಂಬ ಇಂಗ್ಲಿಷ್ ಕವನ ಸಂಕಲನದಿಂದ ಆರಂಭವಾದ ಕುವೆಂಪುರವರ ಸಾಹಿತ್ಯ ಸೆವೆ,ಕೊಳಲು, ಪಾಂಚಜನ್ಯ ಹೀಗೆ ಕನ್ನಡದ್ ಸಾಹಿತ್ಯ ಸೆವೆ 'ಶ್ರೀ ರಾಮಾಯಣದರ್ಶನಂ' ನಂತಹ ಮೆರು ಕ್ರುತಿ ಸೆರಿ ೨೫ ಕವನ ಸಂಕಲನಗಳು, ೦೧ ಪ್ರಬಂಧ, ೬ ವಿಮರ್ಶಾ ಕ್ರ್ತಿಗಳು,೫ ಭಾಷಣಹ ಲೆಖನ ಕ್ರ್ತಿಗಳು,೯ ಜೀವನ ಚರಿರ್ತ್ರೆಗಳು, ೨ ಅನುವಾದ ಕ್ರುತಿಗಳು, ೩ ಆಯ್ದ ಸಂಕಲನಗಳು, ೨ ಇತರೆ ಕ್ರುತಿಗಳು ಸೆರಿ ಒಟ್ತ್ಟು ೬೯ ಕ್ರುತಿಗಳನ್ನು ಕನ್ನಡ ಸಾರಸ್ವತ ಲೊಕಕ್ಕೆ ಅರ್ಪಿಸಿದ 'ಅನರ್ಷ್ಯ ರತ್ನ ಶ್ರೀ ಕುವೆಂಪುರವರು ಕನ್ನಡಮ್ಮನ ಈ ಹೆಮ್ಮೆಯ ಪುತ್ರರತ್ನನಿಗೆ ಪ್ರಶತ್ತಿ ಪುರಸ್ಕಾರಗಳ ಮಾಲೆಯೆ ಅರ್ಪಿತವಾಗಿದೆ. ೧೯೫೮ ರಲ್ಲಿ ಭಾರತ ಸರ್ಕಾರದ 'ಪದ್ಮ್ಮಭೂಷಣ ಪ್ರಶಸ್ತಿ,,೧೯೯೮೮ ರಲ್ಲಿ ಪದ್ಮ್ಮಭೂಶಣ ಪ್ರಶಸ್ತ್ತಿ ಪದ್ಮಶ್ರೀ ಪ್ರಶಸ್ತಿ ! ನಾಡಿನ ಹಲವು ವಿಶ್ವವಿದ್ಯಾನಿಲಯಗಳು ಗೌರದ ಡಾಕ್ಟ್ತರೆಟ್ ಪದವಿ ನೀಡಿ ಗೌರವಿಸಿದೆ. ೧೯೬೪ ರಲ್ಲಿ 'ರಾಷ್ತ್ತ್ರಕವಿ' ಪ್ರಶಸ್ತ್ತಿ ಕೇಂದ್ರ ಸಹಿತ್ಯ ಅಕಾಡಮಿ ಪ್ರಷಸ್ತ್ತಿ, ರಾಜ್ಯೂತ್ಸವ ಪ್ರಷಸ್ತ್ತಿಗಳು, 'ಶ್ರೀ ರಾಮಾಯಣ ದರ್ಶನಂ' ಕ್ರುತಿಗೆ ಜ್ಯಾನಪಿಟ ಪ್ರಶಸ್ತ್ತಿ' ಹೀಗೆ ಪ್ರಶಸ್ತ್ತಿಗಳು ಆಭರಣಗಳನ್ನು ಜೊಡಿಸಿ ಕನ್ನಡದ ದಿಗ್ಗಜನಿಗೆ ಗೌರವಿಸಲಾಗಿದೆ. ಮನುಜಮತ- ವಿಶ್ವಪಥ ಸಾರಿದ ಮಹಾಕವಿ, ಮಹಾ ಮಾನವತಾವಾದಿ ಕುವೆಂಪುರವರಿಂದ ಕನ್ನಡ ಭಾಷೆ, ಕನ್ನಡತನ, ಕನ್ನಡ ನಾಡಿಗೆ ಹಿರಿಮೆ ಸಂದಿದೆ.ಶ್ರೀಯುತರಿಗೆ ೧೯೯೨ರಲ್ಲಿ 'ಕರ್ನಾಟಕ ರತ್ನ' ನೀಡಿ ಗೌರವಿಸಲಾಯಿತು.

ವರನಟ ಡಾ|| ರಾಜಕುಮಾರ್ ಬದಲಾಯಿಸಿ

ಕನ್ನಡಿಗರ ಮನ ಮಂದಿರದ ಆರಾಧ್ಯ ದೈವ, ಚಲನಚಿತ್ರರಂಗದ ಧೃವತಾರೆ, ಕನ್ನಡಕ್ಕೊಬ್ಬನೇ ಅಣ್ಣ ಎಂಬ ಪ್ರೀತಿ ಅಭಿಮಾನವನ್ನು ಪಡೆದವರೇ ವರನಟ, ಕನ್ನಡ ಕಂಠೀರವ, ನಟಸಾರ್ವಭೌಮ ಡಾ|| ರಾಜಕುಮಾರ್. ಡ್|| ರಾಜಕುಮಾರರ ಮೊದಲ ಹೆಸರು 'ಮುತ್ತುರಾಜ್'. ರಂಗಭೊಮಿಯಿಂದ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ಇಟ್ಟ ಹೆಸರೇ ರಾಜಕುಮಾರ್. ತಂದೆ, ಪುಟ್ಟ ಸ್ವಾ ಮಾಯ್ಯ, ತಾಯಿ ಲಕ್ಕ್ಮಮ್ಮ .ಚಮರಾಜನಗರ ಜಿಲ್ಲೆಯ'ಗಾಜನೊರಿನಲ್ಲಿ' ಹುಟ್ಟಿದ ರಾಜಕುಮಾರ್ ಕಲಿತದ್ದು ಕೇವಲ ನಾಲ್ಕನೆ ತರಗತಿ. ತಂದೆ ಪ್ರಸಿದ್ದ ರಂಗನಟರಾದ್ದರಿಂದ ಬಾಲ್ಯದಲ್ಲಿಯೆ ರಂಗಭೊಮಿಯ ಪ್ರವೆಶವಾಗಿ, ಪ್ರಸಿದ್ದನಾಟ್ಟಕ ಕಂಪನಿಗಳಲ್ಲೊಂದಾದ ಗುಬ್ಬಿಮೀರಣ್ಣ ಕಂಪನಿಯಿಂದ ಹೆಸರು ಪಡೆದು ನಂತರ ಚಲನ ಚೆತ್ರರಂಗಕ್ಕೆ ಅಡಿ ಇಟ್ಟ್ಟರು.

ರಾಜಕುಮಾರ್ ರವರ ಮೊದಲ ಚಿತ್ರ "ಶ್ರೀನಿವಾಸ ಕಲ್ಯಾಣ ". ಪ್ರಥಮ ನಾಯಕ ನಟನಾಗಿ 'ಬೇಡರ ಕಣ್ಣಪ್ಪ ' ಚಿತ್ರದೊಂದಿಗೆ ಆರಂಭವಾದ ನಟನೆ 'ಶಬ್ದವೇದಿ' ಎಂಬ ಚಿತ್ರದೊಂದಿಗೆ ಅವರು ನಟನೆಗೆ ವಿದಾಯ ಹೇಳಿದರು. ಭಾಗ್ಯದ ಬಾಗಿಲು ಅವರ ೧೦೦ ನೇ ಚೆತ್ರ 'ಬಂಗಾರದ ಮನುಷ್ಯ' ಅತೀ ಹೆಚ್ಚು ಜನಮೆಚ್ಚುಗೆ ಗಳಿಸಿದ ಚಿತ್ರ. ನೈಜ ನಟನೆ, ಸ್ವ ಷ್ಟ ಕನ್ನಡ ಉಚ್ಚಾರ, ಚಲುವಾದ ಮೈಕಟ್ಟು , ಮುಗ್ದ ಮನಸ್ಸು , ಹಾಡುಗಾರಿಕೆಯಲ್ಲಿ ಗಾನನಂಧರ್ವ ! ಕನ್ನಡವೇ ಉಸಿರೆಂದು ಬಗೆದು ಐತಿಹಾಸಿಕ, ಭಕ್ತಿರಸಪ್ರಧಾನ, ಜನಪದ ಹಾಗೂ ಸಾಮಾಜಿಕ ಹೀಗೆ ೨೦೮ ಚಿತ್ರಗಳಲ್ಲಿ ರಾಜ್ ಕುಮಾರ್ ನಟಿಸಿದರು.

೧೪ ಚಿತ್ರಗಳಿಗೆ ರಾಷ್ಟ್ಶಾಪ್ರಶಸ್ತಿ, ೧೫ ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳಿಲ್ಲಿ ನಟಿಸಿದ ರಾಜಕುಮಾರ್, ಕನ್ನಡದ ಜನತೆಯಿಂದ, ಸರ್ಕಾರದಿಂದ, ಸಂಪಘ ಸಂಸ್ಥೆಗಳಿಂದ, ಪಡೆದ ಪ್ರಶಸ್ತಿಗಳು ಹಲವು. ೯ ಬಾರಿ ಶ್ರೇಷ್ಟ ನಟ ಪ್ರಶಸ್ತಿ, ಕೇಂದ್ರ ಸರ್ಕಾರದಿಮಂದ ಪದ್ಮಭೊಷಣ ಪ್ರಶಸ್ತ್ತಿ, ಕನ್ನಡ ವಿಶ್ವವಿದ್ಯಾನಿಲಯ ನಾಡೊಜ ಪ್ರಶಸ್ತಿ, ಕೇಂದ್ರ ಸರ್ಕಾರದಿಂದ ಪದ್ಮಭೊಷಣ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾನಿಲಯ ನಾಡೂಜ ಪ್ರಶಸ್ತಿ, ಮೈಸೊರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ ಪುರಸ್ಕಾರ, ಚಿತ್ರೊದ್ಯಮದಿಂದ ' ದಾದಾಸಾಹೇಬ್ ಫಾಲ್ಕೆ ' ಪ್ರಶಸ್ತಿ, ಅಮೆರಿಕದ ಕೆಂಟಕಿ ಕರ್ನಲ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದ ಈ ಮೇರುನಟ ಕನ್ನಡ ನಾಡು,ನುಡಿ, ಜಲ ನೆಲದ ಸಮಸ್ಯೆಗಳು ಉದ್ಬವಿಸಿದಾಗ ಜನತೆಯೊಂದಿಗೆ ಚಳುವಳಿಗಳಲ್ಲಿ ಬೀದಿಗಿಳಿಯತ್ತಿದ್ದರು. ಅಭಿಮಾನಿಗಳು ಬಯಸಿದಾಗ ವೇದಿಕೆಯಲ್ಲಿ ಹಾಡಿ ಕುಣಿಯುತ್ತಿದ್ದರು. ' ಕನ್ನಡ ಕಣ್ಮಣೆ ' ಎನಿಸಿಕೊಂಡ ರಾಜ್ ಕನ್ನಡ ನಾಡಿಗೆ, ಕನ್ನಡ ಭಾಷೆಗೆ, ಕನ್ನಡ ಚಿತ್ರರಂಗಕ್ಕೆ ಹಿರಿಮೆಯನ್ನು ತಂದು ಕನ್ನಡ ಚೇತನ ! ೨೦೦೬ ಏಪ್ರಿಲ್ ೧೩ ರಂದು ಕನ್ನಡಮ್ಮನಲ್ಲಿ ಲೀನವಾದರು. ಶ್ರೀಯುತರಿಗೆ ೧೯೯೨ ರಲ್ಲಿ ' ಕರ್ನಾಟಕ ರತ್ನ ' ನೀಡಿ ಗೌರವಿಸಲಾಯಿತು

ಶ್ರೀ ಎಸ್. ನಿಜಲಿಂಗಪ್ಪನವರು ಬದಲಾಯಿಸಿ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮೌಲ್ಯಾಧಾರಿತ ರಾಜಕಾರಣದ ಪ್ರತಿಪಾದಕ, ಗಾಂಧೀತತ್ವಪಾಲಕ, ಕರ್ನಾಟಕ ಅಭಿವ್ರದ್ದಿಯ ಕನಸುಗಾರ, ಪ್ರತಿಭಾನ್ವಿತ ಸಂಸದೀಯಪಟು, ಚಿತ್ರಕಲಾವಿದ,ಬಡವರ ಬಂಧು, ಸ್ವಾತಂತ್ರ್ಯ ಹೊರಾಟಗಾರ, ಕರ್ನಾಟಕ ಏಕೀಕರಣ ಹೊರಾಟಗಾರ, ಕರ್ನಾಟಕ ಶಿಲ್ಲಿ, ರಾಷ್ತ್ರನಾಯಕ ಎಂದೇ ಪ್ರಸಿದ್ದಿ ಪಡೆದವರು ಶ್ರೀ ಎಸ್. ನಿಜಲಿಂಗಪ್ಪನವರು.

ದಾವಣಗೆರೆ ಜಿಲ್ಲೆ ಹರಪನಹಳ್ಲಿ ತಾಲೂಕಿನ 'ಹಾಲುವಾಗಿಲು' ಎಂಬ ಗ್ರಾಮದಲ್ಲಿ ತಂದೆ ಅಡವಿಯಪ್ಪ ತಾಯಿ ನೀಲಮ್ಮ ಎಂಬ ದಂಪತಿಗಳು ಗರ್ಭದಲ್ಲಿ ಜನಿಸಿದ ನಿಜಲಿಂಗಪ್ಪನವರು, ಬಾಲ್ಯದಲ್ಲಿಕಯೇ ತಂದೆಯನ್ನು ಕಳೆದುಕೊಂಡು ಅಜ್ಜಚನ್ನಮಲ್ಲಪ್ಪನವರ ಆಶ್ರಯದಲ್ಲಿ  ನಂತರ ಚಿಕ್ಕಪ್ಪ ಅಂದರೆ ಚಿತ್ರದುರ್ಗ ಜಿಲ್ಲೆ 'ದೊಡ್ದಸಿದ್ದವ್ವನಹಳ್ಲಿ ' ನಿಜಲಿಂಗಪ್ಪ ಎಂದೇ ಪ್ರಸಿದ್ಧರಾಗುತ್ತಾರೆ. ರ್ತ್ಪ್ರಾಥಮಿಕ ಶಿಕ್ಶಣವನ್ನು ದಾವಣಗೆರೆಯಲ್ಲಿಯೊ ಪ್ರೌಢಶಿಕ್ಶಣವನ್ನು ಚಿತ್ರದುರ್ಗದಲ್ಲಿ ಮುಗಿಸಿ, ಬೆಂಗಳೊರಿನಲ್ಲಿ ಪದವಿ ಪಡೆದ ಪುಣೆಯಲ್ಲಿ ಕಾನೊನು ಶಿಕ್ಶಣ ಮುಗಿಸಿ ಚಿತ್ರದುರ್ಗದಲ್ಲಿ ವಕೀಲ ವ್ರುತ್ತಿ ಆರಂಭಿಸಿ, ಬಡವರ ಜನ ಸಾಮಾನ್ಯರ ಸೇವೆ ಮಾಡುತ್ತ ಜನ  ಮೆಚ್ಚುಗೆಗಳಿಸಿದ್ದಾರೆ

ಚೆತ್ರದುರ್ಗ ಜಿಲ್ಲಾಕಾಂಗ್ರ್ರೆಸ್ ಅಧ್ಯಕ್ಷರಾಗಿ, ಪಕ್ಷದ ಸಂಘಟನೆ ಮತ್ತು ಸ್ವಾತಂತ್ರ್ಯ ಹೋರಾಟದ ಮುಖಂಡತ್ವ ವಹಿಸಿದ ನಿಜಲಿಂಗಪ್ಪನವರು, ಮೈಸೊರು ಪ್ರಜಾ ಪ್ರತಿನಿಧಿ ಸರ್ಕಾತರಕ್ಕಾಗಿ ಚಳುವಳಿ, ಕರ್ನಾಟಕ ಎಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ೧೯೫೨ ರಲ್ಲಿ ಚೆತ್ರದುರ್ಗದಿಂದ ಮೊಟ್ಟ ದಲು 'ಲೋಕಸಭಾ ಸದಸ್ಯರಾಗಿ ' ಆಯ್ಕೆಯಾದ ನಿಜ್ಜಲಿಂಗಪ್ಪನವರು ೧೯೫೬ ನವೆಂಬರ್ ೧ ರಂದು ವಿಶಾಲ ಮೈಸೂರು ರಾಜ್ಯದ ಮೂಖ್ಯಮಂತ್ರಿಯಾಗಿ ಅಧಿಕಾರ ಪಡೆಯುತ್ತಾರೆ. ಅನೇಕ ಬಾರಿ ಮುಖ್ಯಮಂತ್ರಿಯಾಗಿ, ಅಖಿಲ ಭಾರತ ಕಾಂಗ್ರೆಸ್ ಅದ್ಯಕ್ಷರಾಗಿ ರಾಷ್ಟ್ರ ನಾಯಕತ್ವವನ್ನು ಪಡೆದ ನಿಜಲಿಂಗಪ್ಪನವರು ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣಕ್ಕಾಗಿ ಹಲವು ಬಾರಿ ಸೆರೆವಾಸ ಅನುಭವಿಸಿ, ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ 'ಸಮಗ್ರ ಕರ್ನಾಟಕ ಅಭಿವ್ರುದ್ದಿಗೆ,' ದೀನದಲಿತರ ಅಭಿವೈದ್ದಿಗೆ, ಕನ್ನಡನಾಡು ಜಲನೆಲ ಭಾಷೆಯ ರಕ್ಷನಣೆಗೆ, ಅಭಿವ್ರುಧಿಗೆ ಭಗೀರಧ ಯತ್ನ ನಡೆಸಿದ್ದಾರೆ. 'ಕರ್ನಾಟ ಶಿಲ್ಪಿ ', 'ಕರ್ನಾಟಕ ರೂವಾರಿ' ಪುರಸ್ಕಾರಗಳಿಗೆ, ನಾಡಿನ ಜನೆತೆಯ ಗೌರವ ಪ್ರೀತಿಗೆ ಪಾತ್ರರಾದ 'ನಿಜಲಿಂಗಪ್ಪ' ನವರ ಕ್ರಿ. ಶ.೨೦೦೦ ದಲ್ಲಿ ನಿಧನರಾದರು.ಶ್ರೀ ಯುತರಿಗೆ ೧೯೯೯ ರಲ್ಲಿ 'ಕರ್ನಾಟಕ ರತ್ನ' ನೀಡಿ ಗೌರವಿಸಲಾಯಿತು.


ಪ್ರೊಫೆಸರ್ ಸಿ.ಎನ್.ಆರ್.ರಾವ್ ಬದಲಾಯಿಸಿ

ಬೆಂಗಳೊರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸತತವಾಗಿ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡ ಕರ್ನಾಟಕದ ಹೆಮ್ಮೆಯ ವಿಜ್ಯಾನಿ ಪ್ರೊ ಸಿ.ಎನ್.ಆರ್.ರಾವ್ ರವರು ಪ್ರೊ ಸಿ.ಎನ್.ಆರ್.ರಾವ್ ರವರ ಪೊರ್ಣ ಹೆಸರು ಚಿಂತಾಮಣೆ ನಾಗೇಶ್ ರಾಮಚಂದ್ರರಾವ್. ೧೯೩೪ ರಲ್ಲಿ ಜನಿಸಿದ ಇವರ ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೊರಿನಲ್ಲಿ ಪಡೆದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಸಿ. ವಿದ್ಯಾಭ್ಯಾಸಗೈದು, ಮುಂದೆ ಪಿಎಚ್. ಡಿ. ಗಾಗಿ ಅಮೇರಿಕಾದ ಪರ್ ಡ್ಯೂ ವಿಶ್ವವಿನಿಲಯದಲ್ಲಿ ನೋಬೆಲ್ ಪಾರಿತೋಷಕ ವಿಜೀತ. ಹೆಚ್. ಸಿ. ಬ್ರೊನ್ ರವರ ಮಾರ್ಗದರ್ಶನದಲ್ಲಿ ಹಲವಾರು ಅಂಶಗಾಳ ಬಗ್ಗೆ ಅಧ್ಯಯನ ನಡೆಸಿದರು. ಅವರ ಸಂಶೋಧನೆ ಬಹುಮಟ್ಟಿಗೆ ಸಾಲಿಡ್ ಸ್ಟೈಟ್ ಕೆವೀಸ್ತ್ರಿಗೆ ಸೀವೀತಗೊಂಡಿತ್ತು. ಸ್ಪೆಕ್ತರ್ಸ್ಕೂಪಿಕೆ ಅನೇಕ ಅತ್ಯಾಧುನಿಕ ಉಪಕರಣಗಾಳನ್ನು ಉಪಯೋಗಿಸಿ, ಘನಪದಾರ್ಥಗಳ ಅಂತರಿಕ ರಚನೆಯನ್ನು ಅರ್ಥಮಾಡಿಕೊಳ್ಲಲು ಪ್ರಯತ್ನೈಸಿ , ಕೈಗಾರಿಕೆಗಳಲ್ಲಿ ಉಪಯೋಗಿಸಿ, ಘನಪದಾರ್ಥಗಳ ಅಂತರಿಕ ರಚನೆಯ್ಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಕೈಗಾರಿಕೆಗಳಲ್ಲಿ ಉಪಯೋಗಿಸಲು, ಸಂಪೊರ್ಣ ಹೊಸ ಗುಣಗಳನ್ನು ಒಳಗೊಂಡಿರುವ ಹೊಸ ಮಾದರಿಯ ಘನ ಪದಾರ್ಥಗಳನ್ನು ಸೈಷ್ಟ್ತಿ ಸಲು ಅವರ ಅಧ್ಯಯನಗಳು ಸಹಾಯ ಮಾಡುತ್ತವೆ. ಘನ ಪದಾರ್ಥಗಳಲ್ಲಿ ಬರಿಗಣ್ನೆಗೆ ಕಾಣೆಸದಂತಹ ಮುಟ್ಟಗಳಲ್ಲಿ ಆಗುವ ನಾನಾ ಪ್ರವೈತಿಗಳ ಅಧ್ಯ ಯನವನ್ನು ಸಹ ಅವರು ನಡೆಸಿದ್ದಾರೆ. ಬಾಲ್ಯದ ಹನ್ನೊಂದು ವರ್ಷ್ ವಯೋಮಾನದಲ್ಲಿ ಪ್ರಸಿದ್ದ ವಿಜ್ಯಾನಿ ಸರ್ ಸಿ.ವಿ.ರಾಮನ್ ರವರ ಭೇಟಿ ಮತ್ತು ಅವರ ಪ್ರ್ರ್ರ್ರೊತ್ಸಾಹದ ನುಡಿಗಳಿಗೆ ಪ್ರೆರೀಪಿತರಾಗಿ ವಿಜ್ಯನ ವಿಷಯವನ್ನು ಅಧ್ಯಯನ ಮಾಡುತ್ತಾ ವಿಜ್ಯಾನ ರಂಗದಲ್ಲಿ ಸತತ ಸಂಶೊಧನೆಯನ್ನು ಮಾಡುತಾ ಅದರಲ್ಲೆ ಆನಂದವಮನ್ನು.ಅವರು ಕೃತಿಚೌರ್ಯದ ಮತ್ತು ಅವಕಾಶ ಆರೋಪಗಳಿವೆ. ಡಿಸೆಂಬರ್ ೨೦೧೧ ರಲ್ಲಿ, ಸಿಎನ್ಆರ್ ರಾವ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಕ್ಷಮೆಯಾಚಿಸಿದರು - ತನ್ನ ಸಂಶೋಧನೆ ಕಾಗದದ ಇತರ ವಿಜ್ಞಾನಿಗಳ ಪಠ್ಯ ಪುನರುತ್ಪಾದಿಸುವ ಸಮಾನಸ್ಕಂದರ ಜರ್ನಲ್,ಅವರ ಸಹಯೋಗಿ ಮತ್ತು ಕಾಗದದ ಎಸ್.ಬಿ. ಇತರ ಹಿರಿಯ ಲೇಖಕ ಆರೋಪ. ತಪ್ಪು ಐಐಎಸ್ಸಿ ನಲ್ಲಿ ಸಹ ಲೇಖಕ ಪಿಎಚ್ಡಿ ವಿದ್ಯಾರ್ಥಿ, "ಈ ವಾಕ್ಯಗಳನ್ನು ನಮಗೆ (ಅಂದರೆ, ಹಿರಿಯ ಲೇಖಕರು, ರಾವ್ ಮತ್ತು ಎರಡೂ ಗಮನ ಪಾವತಿ ಎಂದು ನಮ್ಮ ವಿದ್ಯಾರ್ಥಿ ಬರೆದ ಇದು ಕಾಗದದ, ಪರಿಚಯ ಭಾಗ" . ರಾವ್ ವಿಶ್ವದ ಅಗ್ರಗಣ್ಯ ಘನ ಮತ್ತು ವಸ್ತುಗಳನ್ನು ರಸಾಯನ ಒಂದಾಗಿದೆ. ಅವರು ಐದು ದಶಕಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ. ಪರಿವರ್ತನಾ ಲೋಹದ ಆಕ್ಸೈಡ್ ತನ್ನ ಕೆಲಸವನ್ನು ಮೂಲ ಕಾದಂಬರಿ ವಿದ್ಯಮಾನಗಳ ತಿಳುವಳಿಕೆ ಮತ್ತು ವಸ್ತುಗಳ ಗುಣಲಕ್ಷಣಗಳನ್ನು ಮತ್ತು ಈ ವಸ್ತುಗಳ ರಚನಾತ್ಮಕ ರಸಾಯನಶಾಸ್ತ್ರ ನಡುವಿನ ಸಂಬಂಧವನ್ನು ಕಾರಣವಾಗಿದೆ

ರಾವ್ ಇಂತಹ La2CuO4 ಎರಡು ಆಯಾಮದ ಆಕ್ಸೈಡ್ ವಸ್ತುಗಳನ್ನು ಸಂಶ್ಲೇಷಿಸಲು ಆರಂಭಿಕ ಒಂದು. ಅವರ ಕೆಲಸ ನಿಯಂತ್ರಿತ ಲೋಹದ-ನಿರೋಧಕದ ಪರಿವರ್ತನೆಗಳು ಒಂದು ಕ್ರಮಬದ್ಧ ಅಧ್ಯಯನದ ಕಾರಣವಾಗಿದೆ. ಇಂತಹ ಅಧ್ಯಯನಗಳು ಬೃಹತ್ ಮ್ಯಾಗ್ನೆಟೋ ಪ್ರತಿರೋಧ ಮತ್ತು ಹೆಚ್ಚಿನ ತಾಪಮಾನದ ಅಧಿವಾಹಕತೆಗೆ ಅಪ್ಲಿಕೇಶನ್ ಜಾಗ ಆಳವಾದ ಪ್ರಭಾವವನ್ನು ಹೊಂದಿದ್ದವು. ಆಕ್ಸೈಡ್ ಅಸಾಮಾನ್ಯ ಭರವಸೆಯನ್ನು ಹೊಂದಿವೆ. ಅವರು ಹೈಬ್ರಿಡ್ ವಸ್ತುಗಳನ್ನು ತನ್ನ ಕೆಲಸ ಜೊತೆಗೆ, ಕಳೆದ ಎರಡು ದಶಕಗಳಲ್ಲಿ ನ್ಯಾನೊವಸ್ತುಗಳು ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ೧೯೬೦ ರಲ್ಲಿ ಇಂದುಮತಿಯ ರಾವ್ ಮದುವೆಯಾದರು. ಅವರು ಇಬ್ಬರು ಮಕ್ಕಳನ್ನು, ಸಂಜಯ್ ಮತ್ತು ಸುಚಿತ್ರಾ ಹೊಂದಿವೆ. ಅವರ ಮಗ ಸಂಜಯ್ ರಾವ್ ಬೆಂಗಳೂರು ಶಾಲೆಗಳಲ್ಲಿ ಜನಪ್ರಿಯಗೊಳಿಸಲು ವಿಜ್ಞಾನ ತೊಡಗಿಸಿಕೊಂಡಿದೆ. ಅವರ ಮಗಳು ಸುಚಿತ್ರಾ ಕೆ.ಎಂ. ಮದುವೆಯಾದರು ಗಣೇಶ್, ಪುಣೆ ಇಂಡಿಯನ್ ಸೈನ್ಸ್ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನೆ , ಮಹಾರಾಷ್ಟ್ರ ನಿರ್ದೇಶಕ. ರಾವ್ ಸಾಕಷ್ಟು ಆಗಿದೆ. ತನ್ನ ಕೋಷ್ಟಕಗಳು ಕಂಪ್ಯೂಟರ್ಗಳು ತೆಗೆದು ಸ್ವತಃ ತನ್ನ ಇಮೇಲ್ ಪರಿಶೀಲಿಸಿ ಎಂದಿಗೂ. ಅವನು ಕೇವಲ ತನ್ನ ಪತ್ನಿ ಮಾತನಾಡುವ ಮೊಬೈಲ್ ಫೋನ್ ಬಳಸುವ ಹೇಳಿದರು.

ಪಂಡಿತ್ ಭೀಮಸೇನ ಜೊಷಿ ಬದಲಾಯಿಸಿ

ಪಂಡಿತ್ ಭೀಮಸೇನ ಜೊಷಿ ಸಂಗೀತಕ್ಕಾಗಿಯೀ ಬದುಕಿದವರು. ಹನ್ನೊಂದು ವರ್ಷದ ಹುಡುಗನಾಗಿದ್ದಾಗಲೆ ಸಂಗೀತದ ಗುರುಗಳನ್ನು ಅರಸಿಕೊಂಡು ಮನೆ ಬಿಱ್ೞು ಹೊರಟರು ಭೀಮಸೆನ ಜೊಷೆ. ಆನಂತರದ ವರ್ಷಗಳಲ್ಲಿ ಊಹಾತೀತವಾದ ಕಷ್ಟನಷ್ಟಗಳನ್ನು ಅನುಭವಿಸಿ ಸಂಗೀತದ ಹಾಡುಗಾರಿಕೆಯಲ್ಲಿ ಅತ್ಯುನ್ನತ ಮಟ್ಟಕ್ಕ್ಕೆರಿದವರು ಇವರು. ಇಂದಿಗೂ ಸಂಗೀತದಲ್ಲಿ ಇವರ ಸಂಶೊಧನೆ ನಡೆಯುತ್ತಲೆ ಇದೆ. ಸಂಗೀತದ ಬಗೆಗಿನ ಇವರ ಅಚಲ ಶ್ರದ್ದಾಸ್ಕ್ತಿಯ ಜೊತೆಗೆ ಇವರೊಬ್ಬ ಅತ್ತ್ಯುತ್ತಮ ಕ್ರಿಡಾಸಕ್ತ, ಕ್ರಿಡಾಪಟು, ಕಾರು ಚಾಲಕ ಮತ್ತು ಮೆಕಾನಿಕ್ ಕೂಡ. ಇದೆಲ್ಲವುಗಳ ಜೂತೆಗೆ ಜೌಷೆಯವರ ಬದುಕಿನ ಮುಖ್ಯ ಆಸಕ್ತಿ ಸಂಗೀತ.