ಕರ್ನಾಟಕ ರಕ್ಷಣಾ ವೇದಿಕೆ
ಕ್ರಾಂತಿಕಾರಿ ಸಂಘಟನೆ
ಕರ್ನಾಟಕ ರಕ್ಷಣಾ ವೇದಿಕೆ ಅಥವಾ ಕ.ರ.ವೇ ಕರ್ನಾಟಕದ ಅತಿ ದೊಡ್ಡ ಕನ್ನಡಪರ ಸಂಘಟನೆಯಾಗಿದ್ದು, ವಿಶ್ವದಾದ್ಯಂತ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇದನ್ನು ಶ್ರೀ ನಾರಾಯಣ ಗೌಡ ಮತ್ತು ಜಾಣಗೆರೆ ವೆಂಕಟರಾಮಯ್ಯ ಸ್ಥಾಪಿಸಿದ್ದು, ಗೌಡರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಎಲ್ಲಾ ೩೧ ಜಿಲ್ಲೆಗಳಿಗೂ ಹಬ್ಬಿದೆ.[೧] ಈ ಸಂಘಟನೆಯು "ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು"ಯೆಂಬ ಘೋಷಣೆಯಡಿ ಕಾರ್ಯ ನಿರ್ವಹಿಸುತ್ತಿದೆ ಹಾಗೂ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ.
ಪ್ರಕಾರ: | ಸಾರ್ವಜನಿಕ ಸಂಸ್ಥೆ |
---|---|
ಸ್ಥಾಪನೆ: | {{{ ಸ್ಥಾಪನೆ }}} |
ಕೇಂದ್ರ ಸ್ಥಳ: | ಬೆಂಗಳೂರು, ಕರ್ನಾಟಕ, ಭಾರತ |
ಮುಖ್ಯವಾದ ಸಿಬ್ಬಂದಿ: | ಶ್ರೀ ನಾರಾಯಣ ಗೌಡ (ಅಧ್ಯಕ್ಷರು) |
ಅಂತರ್ಜಾಲ: | www |
ಇತಿಹಾಸ ಬದಲಾಯಿಸಿ
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷಣ ವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿ ದೊಡ್ಡ ಬಲಿಷ್ಟ ಕನ್ನಡ ಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ.