ಎ.ಪಂಕಜಾ
ಎ.ಪಂಕಜಾ ಇವರು ೧೯೩೨ ಎಪ್ರಿಲ್ ೨೦ರಂದು ಕೋಲಾರ ಜಿಲ್ಲೆಯ ಪಾವಗಡದಲ್ಲಿ ಜನಿಸಿದರು. ಇವರ ತಾಯಿ ವಕುಳಮ್ಮ ; ತಂದೆ ಶ್ರೀನಿವಾಸಾಚಾರ್ ; ಪತಿ ಅನಂತಸ್ವಾಮಿ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಓದಿದ್ದು ಇಂಟರ್ ಮೀಡಿಯಟ್ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್ ಪದವಿ. ಇವರು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ “ಚಂದನಾ” ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು ಬದಲಾಯಿಸಿ
ಕಾದಂಬರಿ ಬದಲಾಯಿಸಿ
- ಅನುರಾಗ ಬಂಧನ
- ಅವನೇ ಕಾರಣ
- ಕಾಗದದ ದೋಣಿ
- ನಾದಭಂಗ
- ನೀನಾ (ಪತ್ತೇದಾರಿ)
- ನೋವು ನಲಿವು
- ಪ್ರೇಮಸಂಗಮ
- ಬಂಗಾರದ ಬಲೆ
- ಬಯಕೆಯ ಬೆಂಕಿ
- ಬಲಿಪಶು
- ಮಮತೆಯ ಮಡಿಲಲ್ಲಿ
- ರಾಗಸುಧಾ
- ವಿಜಯಗೀತ
- ಸುಖಸ್ವಪ್ನ
- ಸೊಗಸುಗಾತಿ
- ಸ್ನೇಹಸಂಬಂಧ
- ಹೊಸ ಹಾದಿಯಲ್ಲಿ
ನಾಟಕ ಬದಲಾಯಿಸಿ
- ಊರ್ಮಿಳಾ
ವಿಚಾರ ಸಾಹಿತ್ಯ ಬದಲಾಯಿಸಿ
- ಮದುವೆ ಮತ್ತು ಸ್ತ್ರೀ
ಪುರಸ್ಕಾರ ಬದಲಾಯಿಸಿ
ಬೇರೆ ಮಾತೃಭಾಷೆಯವರು ಕನ್ನಡ ಕೃತಿ ರಚಿಸಿದುದಕ್ಕಾಗಿ ಇಟ್ಟಿರುವ ಕೇಂದ್ರ ಸರಕಾರದ ಬಹುಮಾನ ಇವರ ಎರಡು ಕೃತಿಗಳಿಗೆ ಲಭ್ಯವಾಗಿದೆ: ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’