ಎಚ್.ಎಸ್ ಶಿವಪ್ರಸಾದ್

ಎಚ್.ಎಸ್ ಶಿವಪ್ರಸಾದ್‍ರವರು ೧೯೫೪ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.ಬೆಂಗಳೂರು ವಿಶ್ವ ವಿದ್ಯಾಲಯದಿಂದ ಇಂಗ್ಲೀಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಜೈನ್ ವಿಶ್ವ ವಿದ್ಯಾಲಯ ಹಾಗೂ ಜವಹಾರ್ ಲಾಲ್ ನೆಹರು ವಿಶ್ವ ವಿದ್ಯಾಲಯದ ಆರ್ಟ್ಸ ಅಂಡ್ ಏಸ್ತೆಟಿಕ್ಸ್ ಸ್ಕೂಲ್‍ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.ಪ್ರಸ್ತುತ ಜರ್ಮನಿಯ ಬರ್ಲಿನ್‍ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿದ್ದಾರೆ. ಕವನ ಸಂಕಲನಗಳು

  • ಮಳೆ ಬಿದ್ದ ನೆಲದಲ್ಲಿ
  • ಅಣುಕ್ಷಣ ಚರಿತೆ
  • ಸೂರ್ಯಜಲ
  • ನವಿಲು ನಾಗರ
  • ಮಳೆಯ ಮಂಟಪ

ನಾಟಕಗಳು

  • ಮಹಾಚೈತ್ರ
  • ಸುಲ್ತಾನ್ ಟಪ್ಪು
  • ಮಾದಾರಿ ಮಾದಯ್ಯ
  • ಸಿಲಪ್ಪದಿಗಾರಂ