ಡಾ. ಎಂ.ಎಸ್.ವೇದಾ ಕನ್ನಡ ಸಾಹಿತ್ಯದ ಗಂಭೀರ ವಿಚಾರಧಾರೆಯುಳ್ಳ ಸೃಜನಶೀಲ ಲೇಖಕಿ. ಇವರ ಸಾಹಿತ್ಯದ ಹರುಹು ದೊಡ್ಡದು. ಕವಿತೆ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ.

ಜನನ, ಶಿಕ್ಷಣ ಬದಲಾಯಿಸಿ

ಇವರು ಮೇ ೦೪- ೧೯೬೫ ಮೈಸೂರಿನಲ್ಲಿ ಜನಿಸಿದರು. ಎಂ.ಎ(ಕನ್ನಡ), ಪಿಎಚ್.ಡಿ ಪದವೀಧರೆಯಾಗಿದ್ದಾರೆ. ಕನ್ನಡ ಸಾಹಿತಿ ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳನ್ನು ಕುರಿತು ಸಂಶೋಧನಾ ವ್ಯಾಸಂಗ ಮಾಡಿದ್ದಾರೆ.

ವೃತ್ತಿ ಜೀವನ ಬದಲಾಯಿಸಿ

ಪ್ರಸ್ತುತ ಪಿರಿಯಾಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿದ್ದಾರೆ. ಸೂಕ್ಷ್ಮ ಸಂವೇದನೆಯ ಲೇಖಕಿಯಾದ ವೇದಾ ತಮ್ಮ ರಚನಾ ಕೌಶಲ್ಯ ಮತ್ತು ಪ್ರತಿಭೆಗಳನ್ನು ಸ್ತ್ರೀ ಬದುಕಿನ ಮೀಮಾಂಸೆಗಾಗಿ ದುಡಿಸಿಕೊಳ್ಳುತ್ತಾರೆ.

ಕಥಾ ಸಂಕಲನಗಳು ಬದಲಾಯಿಸಿ

  • ಪ್ರೀತಿ ಮತ್ತು ಸಾವು
  • ಪಾಲು (೧೯೯೭)
  • ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ(೨೦೦೨)
  • ಈ ತನಕ(೨೦೧೦)

ಕಾದಂಬರಿಗಳು ಬದಲಾಯಿಸಿ

  • ಜಮೀನು (೨೦೦೦)
  • ಜಯ (೨೦೦೪)
  • ಕಪ್ಪುಕಿವಿಯ ಬಿಳಿಯ ಕುದುರೆಗಳು (೨೦೦೭)
  • ರಾಜ ಒಡೆಯರು (೨೦೧೪)
  • ದೊಡ್ಡ ತಾಯಿ.

ಕಾವ್ಯ ಸಂಕಲನಗಳು ಬದಲಾಯಿಸಿ

  • ಕಾವ್ಯಕೂಸು (೧೯೮೫)
  • ಗಂಗೋತ್ರಿಯಲ್ಲಿ (೧೯೮೭)
  • ಬಿಳಲುಗಳು (೧೯೮೯)

ನಾಟಕ ಬದಲಾಯಿಸಿ

  • ಉತ್ತರ ಶಾಕುಂತಲಾ

ಪಿ.ಎಚ್ ಡಿ.ಮಹಾಪ್ರಬಂಧ ಬದಲಾಯಿಸಿ

  • ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳ ಸಮಗ್ರ ಅಧ್ಯಯನ (೧೯೯೨)

ಸಾಹಿತ್ಯ ವಿಮರ್ಶೆ ಬದಲಾಯಿಸಿ

  • ಆರ್ದ್ರಗರ್ವದ ಹುಡುಗಿ (೨೦೧೦)
  • ಮಹಿಳಾ ಕಾವ್ಯ ಕಾರಣ (೨೦೧೬)

ವ್ಯಕ್ತಿ ಚಿತ್ರ ಬದಲಾಯಿಸಿ

  • ಚದುರಂಗ (೨೦೦೧)

ಪ್ರಶಸ್ತಿಗಳು ಬದಲಾಯಿಸಿ

  • ರಾಜ ಒಡೆಯರು ಕೃತಿಗೆ - ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ.
  • ಸಾಹಿತ್ಯ ಶ್ರೀ ಪ್ರಶಸ್ತಿ - ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ.

ಉಲ್ಲೇಖಗಳು ಬದಲಾಯಿಸಿ

  • .