ಗುಲ್ಬರ್ಗಾ ಜಿಲ್ಲೆ ನಾಡಿಗೆ ನೀಡಿದ ಪ್ರಾಮಾಣಿಕ, ಧೀಮಂತ ರಾಜಕಾರಣಿ, ಶಿಕ್ಷಣ ತಜ್ಞ, ಅಣ್ಣಾರಾವ್ ಗಣಮುಖಿ. ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ನೇರ ನುಡಿಯ ಅಣ್ಣಾರಾವ್ ಶಾಸಕರಾಗಿ, ಮಂತ್ರಿಯಾಗಿ ಹೈದರಾಬಾದು ಕರ್ನಾಟಕ ಅಭಿವೃದ್ಧಿಗಾಗಿ ಕೆಲಸ ಮಾಡಿದರು. ಮಹಿಳಾ ಸಬಲೀಕರಣ ಹೋರಾಟವನ್ನು ಇವರ ಪತ್ನಿ ಗೋಧುತಾಯಿ ಕೊನೆಯ ದಿನದವರೆಗೂ ಮಾಡಿದರು. ಧೀರ್ಘ ಕಾಲದ ರಾಜಕೀಯ ಜೀವನದ ನಂತರವೂ ಹಣವಿಲ್ಲದೆ, ಸ್ವಂತ ಆಸ್ತಿಯಿಲ್ಲದೆ ಬಾಳಿದ ಸರಳಜೀವಿ ಇವರು.