ಅಜಗಣ್ಣ ತಂದೆ ಗದುಗಿನ ಜಿಲ್ಲೆಯ ಲಕ್ಕಂಡಿ ಗ್ರಾಮದವನು. ಮಹಾತತ್ವಜ್ಞಾನಿ, ಕಾಯಕಯೋಗಿ, ಅನನ್ಯ ಶಿವಭಕ್ತ, ಶ್ರೇಷ್ಠ ವಚನಕಾರ. ಮುಕ್ತಾಯಕ್ಕನ ಅಣ್ಣ. ವಿಪರ್ಯಾಸವೆಂದರೆ ಈವರೆವಿಗೂ ಅಜಗಣ್ಣನ ಒಂದೇ ಒಂದು ವಚನವೂ ಸಿಕ್ಕಿಲ್ಲ. ಆದರೆ ಮಹಾಜ್ಞಾನಿಯಾದ ಚೆನ್ನಬಸವಣ್ಣನ ವಚನವೊಂದು ಅಜಗಣ್ಣನ ವ್ಯಕ್ತಿತ್ವದ ಮಹಿಮೆಯನ್ನು ಸಾರುತ್ತದೆ/ಸಾದರ ಪಡಿಸುತ್ತದೆ. ಅಂಕಿತನಾಮ ನಿರ್ವಚನ ಕಾಣಾ ಸಿದ್ದರಾಮಯ್ಯಾ. ಪ್ರಾಚೀನ ಕಾಲದಲ್ಲಿ ಲಿಪಿಕಾರರರ, ಅಭ್ಯಾಸಿಗಳ ದಾಳಿಗೂ ಇವು ಅಷ್ಟಾಗಿ ಗುರಿಯಾಗಿಲ್ಲವಾಗಿ ಇವುಗಳ ಪಾಠ ಕೆಲಮಟ್ಟಿಗೆ ಸುರಕ್ಷಿತವಾಗಿದೆ. ಹೀಗಿದ್ದೂ ಈ ಸಂಪುಟದ ಉರಲಿಂಗಪೆದ್ದಿಯ ವಚನಗಳು ಸಂಸ್ಕೃತ ವಿದ್ವಾಂಸರ ಕೈವಾಡದಿಂದ ವಿರೂಪಗೊಳ್ಳುತ್ತ ಬಂದರೆ, ಅಂಬಿಗರ ಚೌಡಯ್ಯನ ಸಹಜವಾಗಿಯೇ ಪಾಠಾಂತರದ ದಾಳಿಗೆ, ಪ್ರಕ್ಷಿಪ್ತತೆಯ ಅನ್ಯಾಯಕ್ಕೆ ಗುರಿಯಾಗಿವೆ. ಇದಲ್ಲದೆ ಇವನ ವಚನಗಳು ಪುರವಂತರ ಒಡಬುಗಳಾಗಿ ಬಳಕೆಗೊಳ್ಳುತ್ತಿರುವಲ್ಲಿ, ಬೇರೆ ಒಡಬುಗಳೂ ಚೌಡಯ್ಯನ ವಚನಗಳಾಗಿ ನಿಂತುದರಿಂದ, ಇವುಗಳ ಪರಿಷ್ಕರಣ ಜಟಿಲವೆನಿಸಿದೆ. ಈ ಎಲ್ಲ ತಿಳಿವಳಿಕೆಯ ಹಿನ್ನೆಲೆಯಲ್ಲಿ 24 ಜನ ಶರಣರ ವಚನಗಳನ್ನು ಇಲ್ಲಿ ಪರಿಷ್ಕರಿಸಿ ಕೊಡಲಾಗಿದೆ.

ಅಜಗಣ್ಣ ತಂದೆ
ಜನನ೧೧೬೦
ಲಕ್ಕುಂಡಿ
ಅಂಕಿತನಾಮಮಹಾಘನ ಸೌರಾಷ್ಟ್ರ ಸೋಮೇಶ್ವರ
ವೃತ್ತಿವಚನಗಾರ


  • ಆದ್ಯರ ಅರವತ್ತು ವಚನಕ್ಕೆ

ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ
ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕಗಳ ಒಂದು ವಚನ
ನಿರ್ವಚನ ಕಾಣಾ ಸಿದ್ದರಾಮಯ್ಯಾ

  • ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ?

ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು,
ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು,
ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು,
ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು,
ಅನಾದಿ ನಿಜದೊಳಡಗಿತ್ತು.
ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ,
ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ?
ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು.
ಇದು ಕಾರಣ,
ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು,
ಬೇಡಾ ಎಂದಡೆ ಮಾದವು