ಭಾರತೀಯ ಸಿಮೆಂಟ್ ನಿಗಮ ಮಂಡಳಿ

ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ( ಸಿಸಿಐ ) ಭಾರತ ಸರ್ಕಾರದ ಸಾರ್ವಜನಿಕ ಕ್ಷೇತ್ರ ಸಂಸ್ಥೆಯಾಗಿದೆ. ದೇಶದಲ್ಲಿ ಸಿಮೆಂಟ್ ಉತ್ಪಾದನಾ ಸ್ವಾವಲಂಬನೆ ಸಾಧಿಸಲು ಸಾರ್ವಜನಿಕ ವಲಯದಲ್ಲಿ ಸಿಮೆಂಟ್ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಕಂಪನಿಯು ೧೮ ಜನವರಿ ೧೯೬೫ ರಂದು ಸಂಪೂರ್ಣ ಸರ್ಕಾರಿ ಸ್ವಾಮ್ಯದ ನಿಗಮವಾಗಿ ಸ್ಥಾಪಿಸಲ್ಪಟ್ಟಿತು.

ಸಿಸಿಐ ನವದೆಹಲಿಯಲ್ಲಿ ನೆಲೆಗೊಂಡಿದೆ. ನಿಗಮವು ಪೋರ್ಟ್ಲ್ಯಾಂಡ್ ಪೊಜ್ಜೊಲಾನಾ (PPC) , ಪೋರ್ಟ್ಲ್ಯಾಂಡ್ ಸ್ಲಾಗ್ ಸಿಮೆಂಟ್ (PSC) ಮತ್ತು ಸಾಮಾನ್ಯ ಪೋರ್ಟ್ ಲ್ಯಾಂಡ್ ಸಿಮೆಂಟ್ (OPC) ನಂತಹ ವಿವಿಧ ಮಾದರಿಯ, ೩೩, ೪೩, ೫೩ ಮತ್ತು ೫೩S - ವಿವಿಧ ದರ್ಜೆಯ ಸಿಮೆಂಟ್ ತಯಾರಿಸುತ್ತದೆ (ಸ್ಲೀಪರ್ಸ್ ತಯಾರಿಕೆಯಲ್ಲಿ ವಿಶೇಷ ದರ್ಜೆಯ ಸಿಮೆಂಟ್ ಗಳಲ್ಲಿ ಭಾರತೀಯ ರೈಲುಗಳ ಸ್ಲೀಪರ್ಸ್ ಉತ್ಪಾದಕರಿಗಾಗಿ ವಿಶೇಷ ದರ್ಜೆಯ ಸಿಮೆಂಟ್ ಕೂಡ ಉಪ್ಪಾದಿಸಲಾಗುತ್ತದೆ)

ಸಿಸಿಐ ಪ್ರಸ್ತುತ ಮೂರು ಲಾಭದಾಯಕ ಕಾರ್ಯಾಚರಣಾ ಘಟಕಗಳನ್ನು ಹೊಂದಿದೆ ಮತ್ತು ವಿವಿಧ ಭಾರತೀಯ ರಾಜ್ಯಗಳಾದ್ಯಂತ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ವಿಭಿನ್ನ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಿದ್ದು, ಒಟ್ಟು ೩೮.೪೮ ಲಕ್ಷ ಟನ್ ವಾರ್ಷಿಕ ಸ್ಥಾಪಿತ ಸಾಮರ್ಥ್ಯ ಹೊಂದಿದೆ.

ಘಟಕಗಳು ಬದಲಾಯಿಸಿ

ಈ ಘಟಕಗಳು ದೇಶದಾದ್ಯಂತ ಪೂರ್ವದಿಂದ ( ಅಸ್ಸಾಂನಲ್ಲಿ ಬೊಕಜನ್) ಪಶ್ಚಿಮಕ್ಕೆ (ಅಕಾಲ್ತಾರಾ, ಛತ್ತೀಸ್‌ಗಢ್ನ ಮಾಂಧರ್ ಮತ್ತು ಮಧ್ಯಪ್ರದೇಶದ ನಯಾಗಾಂವ್) ಹಾಗೂ ಉತ್ತರದಿಂದ ( ಹಿಮಾಚಲ ಪ್ರದೇಶದ ರಾಜ್‌ಬಾನ್ ಮತ್ತು ಹರಿಯಾಣದ ಚಾರ್ಖಿ ದಾದ್ರಿ) ದಕ್ಷಿಣಕ್ಕೆ ( ಕರ್ನಾಟಕದ ಕುರ್ಕುಂಟಾ ಮತ್ತು ಅದಿಲಾಬಾದ್), ತೆಲಂಗಾಣದ ತಾಂಡೂರ್ ), ಜೊತೆಗೆ ದೆಹಲಿಯಲ್ಲಿ ಒಂದು ಸಿಮೆಂಟ್ ಗ್ರೈಂಡಿಂಗ್ ಘಟಕವಿದೆ.

ತೀವ್ರ ದ್ರವ್ಯತೆ ಕೊರತೆಯಿಂದಾಗಿ ಮತ್ತು ಮುಖ್ಯವಾಗಿ ವಿದ್ಯುತ್ ಕೊರತೆಗೆ ಸಂಬಂಧಿತ ಮೂಲಸೌಕರ್ಯದ ನಿರ್ಬಂಧಗಳಿಂದಾಗಿ, ಸಿಸಿಐ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಯಿತು. [೧] ವಿಶೇಷವಾಗಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕಾಲಾನಂತರದಲ್ಲಿ, ವಿವಿಧ ಕಾರಣಗಳಿಂದಾಗಿ ೧೦ ಘಟಕಗಳಾದ್ಯಂತ ೭ ಘಟಕಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿತು. ಕಂಪನಿಯು ರೋಗಗ್ರಸ್ಥವಾಯಿತು ಮತ್ತು ಅದನ್ನು BIFR ಗೆ ವಹಿಸಲಾಯಿತು. ಒಟ್ಟಾರೆಯಾಗಿ ಸಿಸಿಐ ಮಾರಾಟದ ಕಾಳಜಿಯ ಆಧಾರವಾಗಿ ಅಥವಾ ಅದರ ಘಟಕಗಳನ್ನು ಪ್ರತ್ಯೇಕವಾಗಿ ಅಥವಾ ಸಾಮೂಹಿಕವಾಗಿ ಅನ್ವೇಷಿಸಲು ವ್ಯಾಪಾರಿ ಬ್ಯಾಂಕರ್ ಅನ್ನು ನೇಮಿಸುವಂತೆ ಬಿಐಎಫ್‌ಆರ್ ಒಎಗೆ ನಿರ್ದೇಶಿಸಿತ್ತು. (ಮೇಲಿನ ಪ್ಯಾರಾವನ್ನು ೨೦೧೫ ನೇ ಸಾಲಿನ ಸ್ಥಿತಿಗತಿಯ ಪ್ರಕಾರ ಅಪ್‌ಡೇಟ್ ಮಾಡಬೇಕು, ಏಕೆಂದರೆ ೨೦೦೭ ರ ನಂತರದಲ್ಲಿ ಸಿಸಿಐ, ಕಾರ್ಯಾಚರಣೆಯಲ್ಲಿರುವ ತನ್ನ ೩ ಘಟಕಗಳಿಂದ ವರ್ಷದಿಂದ ವರ್ಷಕ್ಕೆ ಲಾಭ ಗಳಿಸುತ್ತಿದೆ: ರಾಜ್‌ಬಾನ್, ಬೊಕಜನ್ ಮತ್ತು ತಾಂಡೂರ್)

ಸಿಸಿಐ ಸಿಮೆಂಟ್ ಘಟಕಗಳಿರುವ ಸ್ಥಳಗಳು ಬದಲಾಯಿಸಿ

  • ಛತ್ತೀಸ್‌ಗಢ ದಲ್ಲಿನ ಅಕಾಲ್ತಾರಾ (ಶುಷ್ಕ ಪ್ರಕ್ರಿಯೆ)
  • ಛತ್ತೀಸ್‌ಗಢದಲ್ಲಿನ ಮಂದಾರ್ (ಆರ್ದ್ರ ಪ್ರಕ್ರಿಯೆ)
  • ಕರ್ನಾಟಕದಲ್ಲಿ ಕುರ್ಕುಂಟಾ (ಶುಷ್ಕ ಪ್ರಕ್ರಿಯೆ) (ಸ್ಥಾವರ ಸ್ಥಗಿತಗೊಂಡಿದೆ)
  • ತೆಲಂಗಾಣದಲ್ಲಿನ ಅದಿಲಾಬಾದ್ (ಶುಷ್ಕ ಪ್ರಕ್ರಿಯೆ)

ಕ್ರಿಯಾತ್ಮಕ ಘಟಕಗಳು ಬದಲಾಯಿಸಿ

ಹಿಮಾಚಲ ಪ್ರದೇಶದ ರಾಜಬನ್ ಘಟಕವು  ಸಿರ್ಮೌರ್ ಜಿಲ್ಲೆಯ ಡೆಹ್ರಾಡೂನ್ ನಗರದಿಂದ ಸುಮಾರು ೬೦ ಕಿಮೀ ದೂರದಲ್ಲಿದೆ; ಇಲ್ಲಿ ಪ್ರತಿ ವರ್ಷ ೯೮ ದಶಲಕ್ಷ ಮೆಟ್ರಿಕ್ ಟನ್ ಪೊಜೊಲೋನಾ ಪೋರ್ಟ್ಲ್ಯಾಂಡ್ ಸಿಮೆಂಟ್ ಮತ್ತು ಸಾಮಾನ್ಯ ಪೋರ್ಟ್ಲ್ಯಾಂಡ್ ಸಿಮೆಂಟ್ ಉತ್ಪಾದಿಸಲಾಗುತ್ತದೆ. ಈ ಘಟಕವು ಸುಮಾರು ೪೪೯ ವಸತಿ ಸೌಕರ್ಯಗಳು, ಬ್ಯಾಂಕ್, ಅಂಚೆ ಕಚೇರಿಗಳು, ದೂರವಾಣಿ ವಿನಿಮಯ ಮತ್ತು ಇತರ ನಾಗರಿಕ ಸೌಲಭ್ಯಗಳನ್ನು ಹೊಂದಿರುವ ಪಟ್ಟಣವನ್ನು ಒಳಗೊಂಡಿದೆ.

೧ ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ತಾಂಡೂರು ಘಟಕವು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಇದೆ, ಇದರ ವ್ಯಾಪಾರ ವಲಯ ಕಚೇರಿಯು ಹೈದರಾಬಾದ್ ನಗರದಲ್ಲಿದೆ ಮತ್ತು ಶ್ರೀ. ವೈ ಕೆ ಸಿಂಗ್ ವಲಯ ಪ್ರಬಂಧಕರಾಗಿ ಹಾಗೂ ಶ್ರೀ. ರಿಷಿಕೇಶ್ ದುಬೆ [೨] ಹೈದರಾಬಾದ್ ನೋಡಲ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬೊಕಜನ್ ಸಿಮೆಂಟ್ ಘಟಕವು ಗುವಾಹಟಿಯಿಂದ 350 ಕಿಲೋಮೀಟರ್ ಮತ್ತು ದಿಮಾಪುರ ವಿಮಾನ ನಿಲ್ದಾಣದಿಂದ ೨೧ ಕಿಲೋಮೀಟರ್ ದೂರದಲ್ಲಿದೆ. ಒಣ ಪ್ರಕ್ರಿಯೆ ಉತ್ಪಾದನೆಯನ್ನು ಬಳಸಿಕೊಳ್ಳುವ ಈ ಘಟಕವು, ವಾರ್ಷಿಕ ೧,೯೮,೦೦೦ ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದಿಸುತ್ತದೆ. ಈ ಘಟಕದ ಸಂಪೂರ್ಣ ಪ್ರದೇಶದಲ್ಲಿ ಕಾರ್ಖಾನೆ, ಗಣಿಗಾರಿಕೆ ಪ್ರದೇಶ ಮತ್ತು ಬಡಾವಣೆ ಇದೆ. ಈ ಬಡಾವಣೆಯಲ್ಲಿ ಆರೋಗ್ಯ ಕೇಂದ್ರಗಳು, ಅತಿಥಿ ಗೃಹಗಳು, ಬ್ಯಾಂಕ್, ಅಂಚೆ ಕಚೇರಿ, ದೂರವಾಣಿ ವಿನಿಮಯ ಮುಂತಾದ ನಾಗರಿಕ ಸೌಲಭ್ಯಗಳು ಲಭ್ಯವಿವೆ.

ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Cement Corp Staff Get No Salaries For 6 Mths". Business Standard. 28 January 2013. Retrieved 8 July 2018.
  2. http://linkedin.com/in/rishikesh-dubey-81a8196b