ಸಂಗೊಳ್ಳಿ

ಭಾರತ ದೇಶದ ಗ್ರಾಮಗಳು



ಸಂಗೊಳ್ಳಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಆಗಿನ ಸಂಪಗಾವ) ತಾಲೂಕಿನ ಒಂದು ಊರು ಇದು 12ನೇ ಶತಮಾನದಲ್ಲಿ ಕಲ್ಯಣದಿಂದ ಆಗಮಿಸಿದ ಶಿವಶರಣರ ಹಸ್ತಗಳಿಂದ ಸ್ಥಾಪನೆಯಾದ ಸಂಗಮನಹಳ್ಳಿ ಸಂಗವಳ್ಳ ಈಗ 'ಸಂಗೊಳ್ಳಿ'ಯಾಗಿದೆ ಈ ಗ್ರಾಮದಲ್ಲಿ ಜನಿಸಿದ ಸಂಗೊಳ್ಳಿ ರಾಯಣ್ಣ ಮತ್ತು ಅವನ ತಾಯಿ ವೀರಮಾತೆ ಕೆಂಚಮ್ಮ ತಂದೆ ಭರಮಪ್ಪ ನಾಯಕ ಕ್ರಿ ಶ 1829ರಲ್ಲಿ ಕಂದಾಯ ನಿರಾಕರಿಸುವ ಮೂಲಕ ಆಂಗ್ಲರ 'ಇನಾಂಕಾಯ್ದೆ:ಯನ್ನು ವಿರೋಧಿಸಿ ಬಂಡಾಯ ಪ್ರಾರಂಭಿಸಿದ್ದಾರೆ ಮುಂದೆ ಈ ಭೂಮಿಗಳನ್ನು ಆಂಗ್ಲ ಸರ್ಕಾರ ಮುಟ್ಟುಗೊಲು ಹಾಕಿಕೊಂಡಾಗ ತನ್ನ ರಕ್ತಮಾನ್ಯ ಇನಾಂಭೂಮಿಗಳ ಜೋಳ ರಾಶಿ ಮಾಡುವ ಮೂಲಕ ಆಂಗ್ಲರ ಇನಾಂಕಾಯ್ದೆಯನ್ನು ಭಂಗಳಿಗೊಸುವ ಮೂಲಕ ಸಂಗೊಳ್ಳಿ ಎಂಬ ಪುಟ್ಟಗ್ರಾಮದ ಹೆಸರನ್ನು ಭಾರತ ಸ್ವಾತಂತ್ರ್ಯಹೋರಾಟದ ಇತಿಹಾಸದಲ್ಲಿ ದಾಖಲಾಗುವಂತೆ ಮಾಡಿದ್ದಾನೆ ಕಿತ್ತೂರ ಸಂಸ್ಥಾನ ಪುನ ಸ್ಥಾಪಿಸಲು ನಂದಿ ದ್ವಜ ಮತ್ತೊಮ್ಮೆ ಮುಕ್ತವಾಗಿ ಹಾರಾಡಬೇಕೆಂದು ಸಂಗೊಳ್ಳಿಯಿಂದಲೇ ಹೋರಾಟ ಪ್ರಾರಂಭಿಸಿದ್ದಾನೆ ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ-ಕಾರ್ಯಸ್ಥಳವಾದ ಸಂಗೊಳ್ಳಿಯಲ್ಲಿ ಸರ್ಕಾರ ಪ್ರತಿವರ್ಷ ಜನವರಿ 12 ಮತ್ತು 13 ರಂದು 'ಸಂಗೊಳ್ಳಿ ರಾಯಣ್ಣ ಉತ್ಸವ',ಆಚರಿಸುತ್ತಾ ಬರಲಾಗುತ್ತಿದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಅಡಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮತ್ತು ಶಿಲ್ಫವನ ನಿರ್ಮಾನ ಮಾಡಲು ಕರ್ನಾಟಕ ಸರ್ಕಾರ 100 ಎಕರೆ ಜಮೀನು ವಶಪಡಿಸಿಕೊಂಡಿದೆ[೧]

  1. "Sangolli Population - Belgaum, Karnataka". www.census2011.co.in. Retrieved 3 December 2017.