"ರಾಯಲಸೀಮೆ"( Telugu:రాయలసీమ ) ಆಂಧ್ರ ಪ್ರದೇಶದ ಭೌಗೋಳಿಕ ವಿಭಾಗಗಳಲ್ಲೊಂದು. ಇದು ಅನಂತಪುರ, ಚಿತ್ತೂರು, ಕಡಪ ಮತ್ತು ಕರ್ನೂಲ್ ಜಿಲ್ಲೆಗಳನ್ನೊಳಗೊಂಡಿದೆ. ಕರ್ನೂಲು ಪಟ್ಟಣವು ಆಂಧ್ರರಾಷ್ಟ್ರದ ಮೊದಲ ರಾಜಧಾನಿಯಾಗಿತ್ತು. ಈ ಪ್ರಾಂತ್ಯವನ್ನಾಳಿದ ಶ್ರೀಕೃಷ್ಣದೇವರಾಯನ ಸ್ಮರಣಾರ್ಥ ’ರಾಯಲಸೀಮ’ ಎಂಬ ಹೆಸರು ಪ್ರದೇಶಕ್ಕೆ ಬಂದಿತು.

ತಿರುಮಲ ಬ್ರಹ್ಮರಥೋತ್ಸವ
ಅಹೋಬಿಲಮ್
ಲೇಪಾಕ್ಷಿ ನಂದಿ
ಚಿತ್ತೂರಿನ ಕಾನಿಪಾಕಂ ದೇವಾಲಯ
ಯಾಗಂಟಿ ಪುಷ್ಕರಣಿ, ನಂದ್ಯಾಲ.
ಮಾಧವರಾಯ ದೇವಾಲಯ, ಗಂಡೀಕೋಟಾ
ತಿರುಪತಿಯ ಕಪಿಲತೀರ್ಥ ಜಲಪಾತ
ಬುರುಗುಲು, ಬಜ್ಜಿ. ರಾಯಲಸೀಮೆಯ ಪ್ರಸಿದ್ಧ ತಿನಿಸು

ಈ ಭಾಗವನ್ನು ಚಾಲುಕ್ಯರು ಆಳುವ ಮೊದಲು(ಸುಮಾರು ಕ್ರಿ.ಶ ೭ನೇ ಶತಮಾನ) ಇದು "ಹಿರಣ್ಯಕ ರಾಷ್ಟ್ರ’ವೆಂದು ಹೆಸರಾಗಿತ್ತು. ಪುರಾಣ ಕಾಲದಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಈ ಭಾಗವನ್ನಾಳಿದ್ದರೆಂಬ ನಂಬಿಕೆಯಿದೆ. ವಿಜಯನಗರ ಕಾಲದ ನಂತರವಷ್ಟೇ ಈ ಭಾಗ ರಾಯಲಸೀಮೆಯೆಂಬ ಹೆಸರು ಪಡೆದುಕೊಂಡಿತು.

ಪ್ರೇಕ್ಷಣೀಯ ಸ್ಥಳಗಳು ಬದಲಾಯಿಸಿ

 
ಗಂಡಿಕೋಟದ ಪೆನ್ನಾ ನದಿಯ ದೃಶ್ಯ
"https://kn.wikipedia.org/w/index.php?title=ರಾಯಲಸೀಮ&oldid=1162782" ಇಂದ ಪಡೆಯಲ್ಪಟ್ಟಿದೆ