ನಗುವ ಹೂವು (ಚಲನಚಿತ್ರ)

ಕನ್ನಡ ಚಲನಚಿತ್ರ

ನಗುವ ಹೂವು - 1971 ರಲ್ಲಿ ತಯಾರಾದ ಕನ್ನಡ ಚಲನಚಿತ್ರವಾಗಿದ್ದು ಛಾಯಾಚಿತ್ರಗ್ರಾಹಕರಾದ ಆರ್. ಎನ್. ಕೆ. ಪ್ರಸಾದ್ ಇದನ್ನು ನಿರ್ದೇಶಿಸಿದ್ದಾರೆ. ಇದರ ನಿರ್ಮಾಪಕರು ಆರ್. ಎನ್. ಸುದರ್ಶನ್. ಇದರ ಸಾಹಿತ್ಯವು ನಟಿ ಶೈಲಶ್ರೀ ಅವರದು. ಸುದರ್ಶನ್ ಮತ್ತು ಶೈಲಶ್ರೀ ಅವರುಗಳಲ್ಲದೆ ಚಿತ್ರನಟರಾದ ಕೆ.ಎಸ್. ಅಶ್ವಥ್ , ರಂಗಾ, ಆರ್ ನಾಗೇಂದ್ರರಾಯರು ಮತ್ತು ಬಿ.ವಿ. ರಾಧಾ ಅವರುಗಳು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 18ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದಲ್ಲಿನ ಉತ್ತಮ ಕಥಾಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಚಲನಚಿತ್ರದ ಹಿನ್ನೆಲೆ ಸಂಗೀತವನ್ನು ಜಿ. ಕೆ. ವೆಂಕಟೇಶ್ ಅವರು ಸಂಯೋಜಿಸಿದರು. ಆರ್. ಎನ್. ಜಯಗೋಪಾಲ್ ಅವರು ಈ ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ.

ನಗುವ ಹೂವು (ಚಲನಚಿತ್ರ)
ನಗುವ ಹೂವು
ನಿರ್ದೇಶನಆರ್.ಎನ್.ಕೆ.ಪ್ರಸಾದ್
ನಿರ್ಮಾಪಕಆರ್.ಎನ್. ಸುದರ್ಶನ್
ಪಾತ್ರವರ್ಗಸುದರ್ಶನ್ ಶೈಲಶ್ರೀ ರಂಗ, ಆರ್.ನಾಗೇಂದ್ರರಾವ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೭೧
ಚಿತ್ರ ನಿರ್ಮಾಣ ಸಂಸ್ಥೆಸುದರ್ಶನ್ ಫಿಲಂಸ್

ಪಾತ್ರವರ್ಗ ಬದಲಾಯಿಸಿ

ಚಿತ್ರಗೀತೆಗಳು ಬದಲಾಯಿಸಿ

ಹಾಡು ಗಾಯಕರು ರಚನಕಾರರು
"ಗುಲಾಬಿ ಓ ಗುಲಾಬಿ" ಪಿ. ಸುಶೀಲ ಆರ್.ಎನ್.ಜಯಗೋಪಾಲ್
"ಒಂದೇ ಒಂದು ಹೂವು" ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ
"ಈ ಶುಭದಿನದೆ" ಪಿ. ಸುಶೀಲ ಆರ್.ಎನ್.ಜಯಗೋಪಾಲ್
"ಇರಬೇಕು ಇರಬೇಕು" ಸುದರ್ಶನ್ ಆರ್.ಎನ್.ಜಯಗೋಪಾಲ್