ಕಮಲ ಸೊಹೋನಿ

ಭಾರತದ ಜೈವಿಕ ತಜ್ಞೆ .ವಿಜ್ಞಾನ ಕ್ಷೇತ್ರದಲ್ಲಿ ಪಿಎಚ್.ಡಿ.ಪಡೆದ ಮೊದಲ ಭಾರತೀಯ ಮಹಿಳೆ.

ಕಮಲ ಸೊಹೋನಿ(೧೪ ಸೆಪ್ಟೆಂಬರ್ ೧೯೧೨) ಭಾರತಿಯ ಜೈವಿಕ ರಸಾಯನಶಾಸ್ತ್ರಜ್ಞೆ. ಇವರು ೧೯೩೯ ರಲ್ಲಿ ವೈಜ್ಞಾನಿಕ ಶಿಸ್ತಿನಲ್ಲಿ ಸ್ನಾಥಕೋತ್ತರ ಪದವಿ ಪಡೆದ ಭಾರತದ ಪ್ರಥಮ ಮಹಿಳೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಅವರ ಸ್ವೀಕಾರಭಾವ ಮತ್ತು ಕೆಲಸವು ಮಹಿಳೆಯರನ್ನು ಸಂಸ್ಥೆಯಲ್ಲಿ ಪ್ರವೇಶಿಸಲು ಅದರ ಇತಿಹಾಸದಲ್ಲಿ ಮೊದಲ ಬಾರಿಗೆ ದಾರಿ ಮಾಡಿಕೊಟ್ಟಿತು. ಅವರ ಸಂಶೋಧನೆಯು ಜೀವಸತ್ವಗಳ ಪರಿಣಾಮಗಳು ಮತ್ತು ದ್ವಿದಳ ಧಾನ್ಯಗಳು, ಭತ್ತಗಳು ಮತ್ತು ಭಾರತೀಯ ಜನಸಂಖ್ಯೆಯ ಕೆಲವು ಬಡ ವರ್ಗಗಳು ಸೇವಿಸುವ ಆಹಾರ ಪದಾರ್ಥಗಳ ಪೌಷ್ಟಿಕಾಂಶದ ಮೌಲ್ಯಗಳನ್ನು ಪರಿಶೀಲಿಸಿತು. 'ನೀರಾ' ಎಂಬ ತಾಳೆ ರಸದ ಪೌಷ್ಠಿಕಾಂಶದ ಪ್ರಯೋಜನಗಳ ಕುರಿತು ಅವರು ಮಾಡಿದ ಕೆಲಸವು ಅಂದಿನ ಭಾರತದ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್ ಅವರ ಸಲಹೆಯಿಂದ ಪ್ರೇರಿತವಾಗಿತ್ತು. ಈ ಕೆಲಸಕ್ಕಾಗಿ ಕಮಲಾ ಸೊಹೋನಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದರು.

ಕಮಲ ಸೊಹೋನಿ
ಜನನ೧೯೧೨
ಮರಣ೧೯೯೮
ರಾಷ್ಟ್ರೀಯತೆಭಾರತ
ಕಾರ್ಯಕ್ಷೇತ್ರಜೈವಿಕ ರಸಾಯನಶಾಸ್ತ್ರ
ಸಂಸ್ಥೆಗಳುಪಿಎಚ್‌ಡಿ ಗಳಿಸಿದ ಮೊದಲ ಭಾರತೀಯ ಮಹಿಳೆ
ಅಭ್ಯಸಿಸಿದ ವಿದ್ಯಾಪೀಠಬಾಂಬೆ ವಿಶ್ವವಿದ್ಯಾಲಯ, ಮುಂಬಯಿ
ಪ್ರಸಿದ್ಧಿಗೆ ಕಾರಣಮಹಿಳಾ ವಿಜ್ಞಾನಿ
ಸಂಗಾತಿಎಂ.ವಿ.ಸೊಹೋನಿ

ಪ್ರಾರಂಭಿಕ ಜೀವನ ಬದಲಾಯಿಸಿ

ಕಮಲ ಸೊಹೋನಿ ೧೯೧೨ರಲ್ಲಿ ಜನಿಸಿದರು. ಅವರ ತಂದೆಯ ಹೆಸರು ನಾರಾಯಣರಾವ್ ಭಾಗವತ್. ಅವರ ತಂದೆ ಒಬ್ಬ ರಾಸಾಯನಶಾಸ್ತ್ರ್ರಜ್ಞ. ಕಮಲ ಸೊಹೋನಿಯವರು ತಮ್ಮ ಬಿ.ಎಸ್.ಸಿ. ಪದವಿಯನ್ನು ಭೌತಶಾಸ್ತ್ರ ಹಾಗು ರಾಸಯನಶಾಸ್ತ್ರರದಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಪಡೆದು ಕೊಂಡರು. ಇವರು "ಭಾರತಿಯ ವಿಜ್ಞಾನ ಸಂಸ್ಥೆ"ನಲ್ಲಿ ಸ್ಂಶೋಧನೆ ನೆಡೆಸಲು ಅರ್ಜಿ ಸಲ್ಲಿಸಿದರು. ಆದರೆ ಮಹಿಳೆಯರು ಸಂಶೋಧನೆ ನಡೆಸಲು ಸುಲಭವಲ ಎಂಬ ಕಾರಣಕ್ಕೆ ಅವರ ಅರ್ಜಿಯನ್ನು ಸಿ.ವಿ.ರಾಮನ್ ಅವರು ತಿರಸ್ಕರಿಸಿದರು. ನಂತರ ಅಲವು ವಾದವಿವಾದಗಳ ನಂತರ ಅವರಿಗೆ ಸಂಶೋಧನೆ ನಡೆಸಲು ಅವಕಾಶ ಮಾಡಿಕೊಡಲಾಯಿತು. ಕಮಲ ಸೊಹೋನಿಯವರಿಗೆ ೧೯೩೦ರಲ್ಲಿ ಸ್ನಾಥಕೋತರ ಪದವಿ ದೊರಕಿತು.

ವೃತ್ತಿ ಮತ್ತು ಸಂಶೋಧನೆ ಬದಲಾಯಿಸಿ

ಕಮಲ ಅವರು ಸಿ.ವಿ.ರಾಮನ್ ಅವರು ಹಾಕಿದ ಶರತ್ತುಗಳನ್ನು ಒಪ್ಪಿಕೊಂಡು ಐ.ಐ.ಎಸ್.ಸಿ.ನಲ್ಲಿ ಸಂಶೋಧನ ಕೆಲಸವನ್ನು ೧೯೩೩ರಲ್ಲಿ ಪ್ರಾರಂಭಿಸಿದರು.ಪ್ರೊ. ಶ್ರಿ.ಶ್ರಿನಿವಾಸಯ್ಯನವರು ಅವರ ಮಾರ್ಗದರ್ಶಕರಾಗಿದ್ದರು. ರಾಮನ್ ಅವರು ಎವರ ಕೆಲಸವನ್ನು ಮೆಚ್ಚಿಕೊಂಡು ಮುಂದಿನ ಸಂಶೋಧನೆಯನ್ನು ನಡೆಸಲು ಅನುಮತಿ ನಿಡಿದರು. ಅವರು ಅಹಾರದಲ್ಲಿ ಇರುವ ಪ್ರೋಟೀನ್ಗಳು ಕುರಿತು ತಮ್ಮ ಸಂಶೋಧನೆಯನ್ನು ನಡೆಸಿ ಎಂ.ಎಸ್.ಸಿ ಪದವಿಯನ್ನು ಪಡೆದುಕೊಂಡರು. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಡಾ.ಡೆರಿಕ್ ರಿಕ್ಟರ್ ಅವರ ಕೆಳಗೆ ಸಂಶೋಧನೆ ನಡೆಸಲು ಆಮಂತ್ರಣ ದೊರೆಯಿತು. ಅವರು ಡಾ. ರಾಬಿನ್ ಹಿಲ್ ಅವರ ಕೆಳಗೆ ಸಂಶೋಧನೆ ನಡೆಸಿ ಸೆಲ್ಯುಲರ್ ಕಿಣ್ವ ಸೈಟೋಕ್ರೋಮ್ ಅನ್ನು ಕಂಡುಹಿಡಿದರು. ಅವರು ಸೈಟೋಕ್ರೋಮ್ ಅನ್ನು ಕುರಿತು ಓದಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಸ್ನಾಥಕೋತರ ಪದವಿಯನ್ನು ಪಡೆದು ಕೊಂಡರು. ಅವರ ಸಂಶೋಧನೆಯ ಫಲಿತಗಳು (research findings) ಬಹಳ ಚಿಕ್ಕದಾಗಿದ್ದು , ಕೇವಲ ೪೦ಪುಟಗಳನ್ನು ಒಳಗೊಂಡಿತು.ಅವರು ೧೯೩೯ರಲ್ಲಿ ಭಾರತಕ್ಕೆ ಮರಳಿದರು. ಇವರನ್ನು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಜೈವಿಕ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನೇಮಕವಾದರು. ಆನಂತರ, ಕೋನೂರಿನ ಪೋಷಣೆ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ನಿರ್ವಹಿಸಿದರು. ಎಂ.ವಿ.ಸಹೋನಿಯವರ ಜೊತೆ ೧೯೪೭ರಲ್ಲಿ ವಿವಾಹವಾದ ನಂತರ ಮುಂಬಯಿಗೆ ವಲಸೆ ಹೋದರು. ಮುಂಬಯಿನ "ವಿಜ್ಞಾನದ ರಾಯಲ್ ಇನ್ಸ್ಟಿಟ್ಯೂಟ್"ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸಕ್ಕೆ ಸೇರಿದರು. ಆ ಸಂಸ್ಥೆಯಲ್ಲಿ ಅವರು ದ್ವಿದಳ ಪೋಷಣೆ ಅಂಶವನ್ನು ಕುರಿತು ಕೆಲಸ ನಿರ್ವಹಿಸಿದರು. ಅವರಿಗೆ ರಾಷ್ಟ್ರಪತಿ ಗೌರವ ಲಭಿಸಿದೆ. ಕಮಲ ಸೊಹೋನಿಯವರು "ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್"ನ ಗೌರವ ಸಮಾರಂಭದಲ್ಲಿ ಮರಣ ಹೊಂದಿದರು.

ಹೊರಗಿನ ಕೊಂಡಿಗಳು ಬದಲಾಯಿಸಿ