ಡಾ. ಅಶೋಕ್ ಚಕ್ರಧರ್ ರವರು ೮ ಫೆಬ್ರವರಿ ೧೯೫೧ ರಲ್ಲಿ ಜನಿಸಿದರು. ಇವರು ಹಿಂದಿ ಸಾಹಿತ್ಯದ ಲೇಖಕ ಮತ್ತು ಕವಿ. ಇವರ ಕವಿತೆಗಳು ಹಾಸ್ಯ ಹಾಗು ವ್ಯಂಗ್ಯದಿಂದ ಕೂಡಿರುತ್ತದೆ. ಇವರು ಕವನ ಅಭಿವೃದ್ಧಿಯ ಹಾಡುಗಾರಿಕೆ ಮತ್ತು ಸಂಪ್ರದಾಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಮುಖ ವಿದ್ವಾಂಸರು ಸಹ ಹೌದು. ಇವರು ಲೇಖಕ-ನಿರ್ದೇಶಕ, ಸಾಕ್ಷ್ಯಾಚಿತ್ರ ಲೇಖಕ-ನಿರ್ದೇಶಕ, ಸರಣಿ ಬರಹಗಾರ ನಿರ್ದೇಶಕ, ನಟ, ಕಲಾವಿದರು ಮತ್ತು ಮಧ್ಯಮ ಕಾರ್ಮಿಕರು. ಇವರು ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದಿಯಲ್ಲಿ ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕರು. ಇವರಿಗೆ ೨೦೧೪ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಭಾರತ ಸರ್ಕಾರ ಸನ್ಮಾನಿಸಿದೆ.[೧] ಇವರು ದೆಹಲಿಯಲ್ಲಿ ಕೇಂದ್ರ ಹಿಂದಿ ಇನ್ಸ್‌ಟಿಟ್ಯೂಟ್ ಮತ್ತು ಹಿಂದಿ ಅಕಾಡೆಮಿಯ ಉಪಾಧ್ಯಕ್ಷ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಡಾ. ಅಶೋಕ್ ಚಕ್ರಧರ್
2018
ಜನನ೮ ಫೆಬ್ರವರಿ ೧೯೫೧, ಉತ್ತರಪ್ರದೇಶದ ಅಹೀರ್ಪದ ಖುರ್ಜದಲ್ಲಿ
ಮರಣ
೨೦೦೫,ದೆಹಲಿಯಲ್ಲಿ
ರಾಷ್ಟ್ರೀಯತೆಭಾರತೀಯ
ಉದ್ಯೋಗಹಿಂದಿ ಸಾಹಿತ್ಯದ ಲೇಖಕ ಮತ್ತು ಕವಿ

ಬಯೋಗ್ರಫಿ ಬದಲಾಯಿಸಿ

ಅಶೋಕ್ ಚಕ್ರಧರ್ ೮ ಫೆಬ್ರವರಿ 1951 ರಂದು ಉತ್ತರಪ್ರದೇಶದ ಅಹೀರ್ಪದ ಖುರ್ಜ, ಬುಲನ್ದ್ ಶಕರ್‌ರಲ್ಲಿ ಜನಿಸಿದರು. ತಂದೆ ಡಾ.ರಾಧೇಶ್ಯಾಮ್ ಇವರು ಚುರುಕಿನ ಶಿಕ್ಷಕ, ಕವಿ, ಲೇಖಕ ಮತ್ತು ಸಂಪಾದಕರು. ಇವರು ಬಾಲಮೇಳ ಪತ್ರಿಕೆಯ ಸಂಪಾದಕರು. ತಾಯಿ ಗೃಹಿಣಿ. ಬಾಲ್ಯದಿಂದಲೂ ಅವರು ತಂದೆಯ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ಹೊಂದಿದ್ದರು. ತನ್ನ ತಂದೆಯವರು ಇವರ ಸಾಹಿತ್ಯದ ಮಾರ್ಗದರ್ಶನ. ೧೯೬೦ರಲ್ಲಿ ಅವರು ತಮ್ಮ ಮೊದಲ ಕವಿತೆಯನ್ನು ರಕ್ಷಣಾ ಸಚಿವ ಕೃಷ್ಣ ಮೆನನ್ ರವರಿಗೆ ಹೇಳಿದರು. ೧೯೬೨ ರಲ್ಲಿ ಸೋಹನ್ ಲಾಲ್ ದ್ವಿವೇದಿ ಅವರ ಅಧ್ಯಕ್ಷತೆಯಲ್ಲಿ ಅವರ ತಂದೆಯವರು ಆಯೋಜಿಸಿದ ಸಮ್ಮೇಳನದಲ್ಲಿ ಅಶೋಕ್ ಚಕ್ರಧರ್ ರವರು ತಮ್ಮ ಜೀವನದ ಹಂತದ ಬಗ್ಗೆ ಮೊದಲ ಕವಿತೆಯನ್ನು ಬರೆದು, ಓದಿ ಪಂಡಿತ್ ಸೋಹನ್ ಲಾಲ್ ದ್ವಿವೇದಿಯವರಿಂದ ಆಶೀರ್ವಾದ ಗಳಿಸಿದರು. ಸಾಹಿತ್ಯದ ಅಭಿರುಚಿಯ ಜೊತೆಗೆ ಓದಿನಲ್ಲೂ ಆಸಕ್ತಿ ಹೊಂದಿದ್ದರು. ೧೯೭೦ ರಲ್ಲಿ ಬಿ.ಎ. ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ೧೯೬೮ ರಲ್ಲಿ ಮಥುರಾ ಏರ್ ಸೆಂಟರ್ ನಲ್ಲಿ ಕಲಾವಿದರಾಗಿ ಆಯ್ಕೆಯಾದರು. ೧೯೭೨ ರಲ್ಲಿ ಅವರು ಆಗ್ರಾ ವಿಶ್ವವಿದ್ಯಾಲಯದಲ್ಲಿ ಹಿಂದಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಇದರ ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂ.ಲಿಟ್ ಪ್ರವೇಶಿಸಿದರು. ೧೯೭೨ ರಲ್ಲಿ ದೆಹಲಿಯ ಸತ್ಯವತಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ದೆಹಲಿ ವಿಶ್ವವಿದ್ಯಾಲಯದಲ್ಲಿ, ಹಿಂದಿ ವಿಭಾಗದಲ್ಲಿ ಅನೇಕ ಗುಣಾತ್ಮಕ ಬದಲಾವಣೆಗಳನ್ನು ತಂದರು. 'ಮ್ಯಾಕ್ಮಿಲನ್ ಮುಕ್ತಿಬೋಧ್ ಪ್ರಕ್ರಿಯೆಯ ಕವನ 'ಅವರ ಮೊದಲ ಪುಸ್ತಕ, ೧೯೭೫ ರಲ್ಲಿ ಪ್ರಕಟವಾಯಿತು. ಈ ಪುಸ್ತಕಕ್ಕೆ ಜೋಧ್ ಪುರ್ ವಿಶ್ವವಿದ್ಯಾಲಯವು ಅತ್ಯುತ್ತಮ ಯಂಗ್ ಪುಸ್ತಕ ಪುರಸ್ಕಾರ ನೀಡಿ ಗೌರವಿಸಿದೆ. ೧೯೭೫ ರಲ್ಲಿ ಇವರು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ೨೦೦೫ ರಲ್ಲಿ ನಿವೃತ್ತರಾದರು. ವಯಸ್ಕರ ಮತ್ತು ಕಂಪ್ಯೂಟರ್ ಜೊತೆಗೆ ಹಿಂದಿ ಬಳಕೆಯ ಬಗ್ಗೆ ಬರೆಯಲು ಸಮೃದ್ಧ ಬರವಣಿಗೆ, ನಾಟಕ, ಅನುವಾದ, ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ, ಸಾಕ್ಷ್ಯಚಿತ್ರ ನಿರ್ದೇಶನದಲ್ಲಿ ಅವರು ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಜನ್ ನಾಟ್ಯ ಮಂಚ್ ವೇದಿಕೆಯ ಸಂಸ್ಥಾಪಕ ಸದಸ್ಯರು. ಇವರ ಸಸುರಾಲ್ ನಾಟಕವು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಮೂಲಕ ನೇಮಕವಾಗಿತ್ತು. ಇದರ ನಿರ್ದೇಶಕ ಶ್ರೀ ರಾಕೇಶ್ ಶರ್ಮರವರು, ಅವರ ರಂಗಮಂಡಲ ಮತ್ತು ವಿದ್ಯಾಲಯವು ಹೀಗಲೂ ಸಹ ಇದೆ. ಶ್ರೀ ರಂಜಿತ್ ಕಪೂರ್ ರವರ 'ಆದರ್ಶ ಹಿಂದೂ ಹೋಟೆಲ್' ನಾಟಕ ಮತ್ತು 'ಷಾರ್ಟ್ ಕಟ್' ಗಳಿಗೆ ಹಾಡುಗಳನ್ನು ಇವರೇ ಬರೆದರು. ಅವರು ಕಂಪ್ಯೂಟರ್ ವಿಭಾಗದಲ್ಲಿ ಮತ್ತು ಪವರ್ ಪಾಯಿಂಟ್ ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಶಿಮ್ಲಾದಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಪ್ರಕಟಿಸಿದ ಕೆಲಸ ಬದಲಾಯಿಸಿ

ಕವನ ಸಂಗ್ರಹ: ಬದಲಾಯಿಸಿ

ಬೂಢೆ ಬಚ್ಚೆ, ಸೊ ತೊ ಹೇ, ಭೋಲೆ ಭೋಲೆ, ತಮಾಶಾ, ಚುಟ್ ಪುಟ್ ಕುಲೆ, ಹಸೊ ಔರ್ ಮರ್ ಜಾಒ, ದೇಶ್ ಧನ್ಯಾ ಪಂಚ್ ಕನ್ಯಾ, ಏ ಜೀ ಸುನಿಯೆ, ಇಸ್ಲಿಯೆ ಬೌಡಮ್ ಜೀ ಇಸ್ಲಿಯೆ, ಖಿಡಕಿಯಾ, ಬೋಲ್ ಗಪ್ಪೆ, ಜಾನೆ ಕ್ಯಾ ಟಪ್ಕೇ, ಚುನೀ ಚುನಾಈ, ಸೋಚೀ ಸಂಝೀ, ಜೊ ಕರೆ ಸೊ ಜೋಕರ್, ಮಸಲಾರಾಮ್.

ಚಲನಚಿತ್ರ ಮತ್ತು ಕಿರುತೆರೆ ಬದಲಾಯಿಸಿ

ಗಮನಾರ್ಹ ದೂರದರ್ಶನ ಕಾರ್ಯಕ್ರಮ: ನಯೀ ಸುಬಹ್ ಕೀ ಓರ್, ರೇನ್ಬೊ ಫೈಂಟಸಿ, ಕೃತಿ ಮೆ ಚಮತ್ಕುಲ್, ಹಿಂದಿ ಧಾಗಾ ಪ್ರೇಮ್ ಕಾ, ಅಪ್ನಾ ಉತ್ಸವ್, ಭಾರತ್ ಮಹೋತ್ಸವ್.

ನಟನೆ: ಬದಲಾಯಿಸಿ

ಅಶೋಕ್ ಚಕ್ರಧರ್ ರವರು ಡಿಡಿ-1 ಸರಣಿ ಮಾತನಾಡುವ ಮತ್ತು ಸೋನಿ ಎಂಟರ್ಟೈನ್ಮೆಂಟ್ ಚಾನೆಲ್ ಸರಣಿಯಲ್ಲಿ ನಟನೆಯನ್ನು ಮಾಡಲಾಗಿದೆ.

ಚಿತ್ರ ನಿರ್ಮಾಣ: ಬದಲಾಯಿಸಿ

ಮಾಸ್ಟರ್ ದೀಪ್ ಚಂದ್, ಬಾಲ ಬಾಲಿ, ಗುಲಾಬ್, ಈ ಮೂರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ "ಜಮುನಾ ಕಿನಾರೆ" (೧೯೮೩)ಎಂಬ ಕಥೆಯೂ 'ಬ್ರಜ್‌ ಭಾಷಾ' ಭಾಷೆಯ ಚಲನವಚಿತ್ರವಾಗಿದೆ.[೨] ಈ ಚಲನಚಿತ್ರವನ್ನು ಅವರ ಮಾವ 'ಕಾಕಾ ಹಥ್ರಸ್'[೩] ರವರು ಬರೆದಿದ್ದರು. ಈ ಚಲನಚಿತ್ರದ ನಿರ್ಮಾನ ಮತ್ತು ಸಂಗೀತ ನಂಯೋಜನೆಯನ್ನು ಅವರ ಭಾವ ಲಕ್ಷ್ಮಿನಾರಯಣ್‌ ಗರ್ಗ್‌ ರವರು ನಿರ್ವಯಿಸಿದ್ದಾರೆ.

ನಾಟಕ ಬದಲಾಯಿಸಿ

ರಂಗ್ ಜಮಿಯಾ ಲೊ, ಬಿಟಿಯಾ ಕೀ ಸಿಸಾಕಿ, ಭಂಡಾರಿಯ ಚಲಿ ಸಸುರ, ಜಬ್ ರಹ ನ ಕೊಯಿ ಚಾರ, ಜನ್ನೆ ಕ್ಯ ತಪಕೆ,

ಮಕ್ಕಳ ಸಾಹಿತ್ಯ ಬದಲಾಯಿಸಿ

ಕೋಯರ್ ಕಾ ಸಿತಾರ್, ಸ್ನೇಹ ಕಾ ಸಪ್ನ, ಹೀರಾಂನ್ ಕೀ ಛೊರ್ಸಿ, ಇಕೆ ಬಾಗಿಯಾ ಮೈನ್

ಡಾಕ್ಯುಮೆಂಟರಿ ಬರವಣಿಗೆ ಬದಲಾಯಿಸಿ

ಮಗಳು ಮಗಳು , ಸೀರೆ ಶತಮಾನ ವಸ್ತ್ರದಾರಿ ಕಾಡಿನ ಮಧುರ, ಈ ಬೈಟ್, ಗ್ರಾಮೋದಯ್, ಜ್ಞಾನ, ದೋಣಿ ಬೆಳಕಿನಲ್ಲಿ, ವಿದ್ಯಮಾನ, ನಗರಾಭಿವೃದ್ದಿ(ದೆಹಲಿ).

ವಯಸ್ಕರ ಶೈಕ್ಷಣಿಕ ಸಾಹಿತ್ಯ ಬದಲಾಯಿಸಿ

ನಹೀ ದಾಗರ್, ಅಪಾಹಜಿ ಕೌನ್, ಅಪ್ನ ಹಕ್‌ ಅಪ್ನಿ ಜಮೀನ್‌, ಕಹನಿ ಜೋ ಅನ್‌ಖಾನ್ ಸಿ ಬಾಹೀ, ಅರ್ ಪೋಲಿಸ್ ಪರ್ ಭೀ, ಜುಗತ್ ಕರೂ ಜೀನೆ ಕಿ, ತೊ ಕ್ಯಾ ಹೋತ ಜೀ, ರೋಟಿ ಯೆ ದಾರ್ತಿ ದೀಕೊ.

ಪ್ರಶಸ್ತಿಗಳು ಮತ್ತು ಗೌರವಗಳು ಬದಲಾಯಿಸಿ

  • ವರ್ಷದ ಅತ್ಯುತ್ತಮ ಪುಸ್ತಕಕ್ಕೆ (ಯುವ ಬರಹಗಾರ ಸಂಯೋಜಿಸಿದ) ವಿಕ್ ವಿಕ್ ಜೋದ್ ಪುರ್ ಪ್ರಶಸ್ತಿ,
  • ಕಾವ್ಯಪ್ರಿಯ ಮುಕ್ತಿಬೋಧ್ ರಾಜಸ್ಥಾನ್,ಎಂಬುದಕ್ಕೆ 'ಜೋಕ್ ಪ್ರಶಸ್ತಿ,'
  • 'ಒಂದು ಹಾಸ್ಯ ರತ್ನ 'ವಿಶೇಷಣ'ಎಂಬುದಕ್ಕೆ ಕಾಕಾ ಹತ್ರಾಸಿ ಕಾಮೆಡಿ ಪ್ರಶಸ್ತಿ,
  • 'ವಯಸ್ಕ ಮಗುವಿನ' ಅತ್ಯುತ್ತಮ ಬರಹ ನಿರ್ದೇಶನಕ್ಕೆ ಏರ್‌ ಪ್ರಶಸ್ತಿ
  • ನೆಹರೂ ರಾಷ್ಟ್ರೀಯ ಯೂನಿಟ್ ಪ್ರಶಸ್ತಿ,
  • ಗೀತಾಂಜಲಿ, ಲಕ್ನೋ, ಎಂಬುದಕ್ಕೆ 'ಮನ್ಹಾರ್ ಪ್ರಶಸ್ತಿ',
  • ಮಕ್ಕಳ ಸಾಹಿತ್ಯ ಹಿಂದಿ ಅಕಾಡೆಮಿ ಪಶಸ್ತಿ',
  • ರಾಷ್ಟ್ರೀಯ ಚಲನಚಿತ್ರ ಬರವಣಿಗೆಯ ನಿರ್ದೇಶನಕ್ಕೆ ಉತ್ಪಾದಿಸುವ ಫೆಸ್ಟಿವಲ್‌ಗೆ ಭಾರತ ಸರ್ಕಾರವು, "ವೃತ್ತಿಜೀವನ ಪ್ರಶಸ್ತಿ ನೀಡಿತು,
  • 'ಆಲ್ ರೌಂಡ್ ವ್ಯಕ್ತಿತ್ವಕ್ಕೆ 'ಅತ್ಯುತ್ತಮ ಪರ್ಸನ್ ಪ್ರಶಸ್ತಿ,
  • 'ರಾಷ್ಟ್ರೀಯ ಸೌಹಾರ್ದತೆಗೆ "ರಾಷ್ಟ್ರೀಯ ಸಮೃದ್ಧಿಯ ಗೌರವ
  • ಮೈಹಾರ್ ಗೌರವ"' "ಕಾಕಾ ಹತ್ರಾಸಿ ಗೌರವ, ಮತ್ತು ಹಿಂದಿ ಅಕಾಡೆಮಿ ಇವರಿಗೆ ಹಿಂದಿ ಉರ್ದು ಸಾಹಿತ್ಯ ಪ್ರಶಸ್ತಿ ನೀಡಿತು. ಲಕ್ನೋ, ಉತ್ತರಪ್ರದೇಶದಲ್ಲಿ ಗವರ್ನರ್‌ರಾಗಿ ಗೌರವಿಸಿತು.
  • ಸುಮನ್ ಗೌರವ ಭಾರ್ತಿ ಕೌನ್ಸಿಲ್ ಮತ್ತು ಐಲುಪೈಲಾದ ನಿಧಿ ಉನ್ನಾವೋ, ಎಂಬುದಕ್ಕೆ ಉತ್ತರ ಪ್ರದೇಶ ಗುಡ್ವಿಲ್ ಪ್ರಶಸ್ತಿ ನೀಡಿದೆ, ಅಖಿಲ ಭಾರತ ಗೌರವ ಚೌಪಾಲ್ ಪ್ರಧಾನ ಗಿಯಾನಿ ಜಾಲ್ ಸಿಂಗ್ ಸ್ಮಾರಕ ಸೊಸೈಟಿಗೆ, ಮಾಜಿ ಅಧ್ಯಕ್ಷ ಡಾ. ಶಂಕರ್ ದಯಾಲ್ ಶರ್ಮಾರವರಿಂದ 'ಕಾವ್ಯಾತ್ಮಕ' ಸಾಧನೆ ಪ್ರಶಸ್ತಿ'
  • ಸಾಗರ, ಮಧ್ಯಪ್ರದೇಶ, ನಾಗ್ಪುರ, ಓಲ್ ಗೌರವ' ಭಾರತ, ಹೆಡ್ ಆಫೀಸ್, ಸ್ಟೇಟ್ ಬ್ಯಾಂಕ್ ಬೋಪಾಲ್,(ಸಂಸದ) ಇತ್ಯಾದಿ ಅಸಂಖ್ಯಾತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಹೊರಗಿನ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ಪದ್ಮಶ್ರೀ ಪ್ರಶಸ್ತಿ".
  2. ""ಜಮುನಾ ಕಿನಾರೆ" ಚಲನಚಿತ್ರ". Archived from the original on 2017-06-13. Retrieved 2015-10-23.
  3. "'ಕಾಕಾ ಹಥ್ರಸ್".