''ಆನಂದಮಠ'' ಎಂಬುದು ಒಂದು ರಾಜಕೀಯ ಕಾದಂಬರಿಯಾಗಿದೆ. ೧೭೭೦ರಲ್ಲಿ ಬೆಂಗಾಳಬಂಗಾಳ ರಾಜ್ಯವು ಎದುರಿಸಿದ ಭಿಕರಭೀಕರ ಬರಗಾಲದ ಹಿನ್ನಲೆಯಿಟ್ಟುಕೊಂಡು ಮಹೇಂದ್ರ , ಕಲ್ಯಾಣಿ, ಸತ್ಯಾನಂದ, ಜೀವಾನಂದ, ಭವಾನಂದ ಮತ್ತು ಶಾಂತಿ ಎಂಬ ಮುಖ್ಯ ಪಾತ್ರಗಳ ಸುತ್ತ ನಡೆಯುವ ಕತೆಯಾಗಿದೆ. ಮಹೇಂದ್ರ ಮತ್ತು ಕಲ್ಯಾಣಿ ಜಮೀನ್ದಾರರ ಕುಟುಂಬಕ್ಕ ಸೇರಿದ ಗಂಡ-ಹೆಂಡತಿಯರುದಂಪತಿ, ಬರಗಾಲದ ಪರಿಣಾಮ, ತಮ್ಮ ಊರಾದ ಪದಚಿನ್ಹವನ್ನು ಬಿಡಬೇಕಾದ ಸನ್ನೀವೇಶ ಉಂಟಾಗುತ್ತದೆ. ಹೀಗೆ ಊರು ತೊರೆದವರು ಪುಟ್ಟ ಮಗು ಸುಕಮಾರಿಯಸುಕುಮಾರಿಯ ಜೊತೆ ಕಾಡು ಪಾಲಾಗುತ್ತಾರೆ. ಅಲ್ಲಿ ಬ್ರೀಟೀಶರಆಂಗ್ಲರ [[ಈಸ್ಟ್_ಇಂಡಿಯ_ಕಂಪನಿ|ಈಸ್ಟ್ ಇಂಡಿಯಾ ಕಂಪೆನಿಯಕಂಪೆನಿ]]ಯ ವಿರುದ್ದ ಬಂಡಾಯವೆದ್ದಿರುವ ಕ್ರಾಂತಿಕಾರಿ ಸನ್ಯಾಸಿಗಳ ತಂಡವು ಸಿಗುವುದು. ಮಹೇಂದ್ರನೂ ಕೂಡ ಆ ತಂಡದೊಡನೆ ಸೇರಿಕೊಂಡು, ಆನಂದ ಮಠ ಸಂಸ್ಥೆಯ ಮುಖ್ಯಸ್ಥ ಸತ್ಯಾನಂದರ ಸ್ರೀರಕ್ಷೆಯಲ್ಲಿ, ಸನ್ಯಾಸಿ ಕ್ರಾಂತಿಯಲ್ಲಿ ಪಾಲ್ಗೊಳ್ಳುತ್ತಾನೆ. ಈ ಕಾದಂಬರಿಯಲ್ಲಿ ಭಾರತವನ್ನು ದುರ್ಗೆ,ಕಾಳಿ ಹಾಗೂ ಜಗದ್ದಾತ್ರಿಯ ಎಂಬ ಮೂರು ರೂಪಗಳ ಭಾರತ ಮಾತೆಯಾಗಿ ವಿವರಿಸುವ ಭಾಗವು ವಿಶೇಷವಾಗಿದೆ.
== ಅನುವಾದ ಮತ್ತು ರೂಪಾಂತರ ==
ಈ ಕಾದಂಬರಿಯನ್ನು ಕನ್ನಡಕ್ಕೆ ಮೊದಲ ಬಾರಿ ಅನುವಾದಿಸಿದವರು [[ಬಿ.ವೆಂಕಟಾಚಾರ್ಯ|ವೆಂಕಟಾಚಾರ್ಯ ಬಿ]] ಅವರು<ref>http://kuvempubhashabharathi.org/book_detail.php?bookID=139</ref>. ಇತರ ಲೇಖಕರು ಮಾಡಿದ ಆನುವಾದಿತ ಆವೃತ್ತಿಗಳು ಕೂಡ ಲಭ್ಯವಿರುವವು. ೨೦೦೭ ರಲ್ಲಿ ಎಸ್. ಆರ್. ರಾಮಸ್ವಾಮಿಯವರು ಕನ್ನಡಕ್ಕೆ ಅನುವಾದ ಮಾಡಿದುದನ್ನು ರಾಷ್ಟ್ರೋತ್ಥಾನ ಸಾಹಿತ್ಯದವರು ಪ್ರಕಟಿಸಿದ್ದಾರೆ. ಆನಂದ ಮಠ ಕಾದಂಬರಿ ಆಧಾರಿತ ಚಲನಚಿತ್ರವು ೧೯೫೨ರಲ್ಲಿ ಹಿಂದಿ ಭಾಷೆಯಲ್ಲಿ [[:en:Anand_Math|ಆನಂದ ಮಠ]] ಎಂಬ ಹೆಸರಿನಲ್ಲಿಯೆಹೆಸರಿನಲ್ಲಿ ಬಿಡುಗಡೆಗೊಂಡಿತು. [[ಪೃಥ್ವಿರಾಜ್_ಕಪೂರ್|ಪೃಥ್ವಿರಾಜ್ ಕಪೂರ್]], ಪ್ರದೀಪ್ ಕುಮಾರ್, ಗೀತಾ ಬಾಲಿ ನಟಿಸಿದ ಈ ಚಿತ್ರಕ್ಕ್ಕೆ ಹೇಮಂತ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದರು. [[ಲತಾ_ಮಂಗೇಶ್ಕರ್|ಲತಾ ಮಂಗೇಶ್ಕರ್]] ದನಿಯಲ್ಲಿ ಮೂಡಿದ [[ವಂದೇ_ಮಾತರಮ್|ವಂದೇ ಮಾತರಂ]] ಹಾಡು ಬಲು ಜನಪ್ರಿಯವಾಗಿತ್ತು.