ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed construction template
೨೭ ನೇ ಸಾಲು:
{{Quotation|ಶ್ರೀಪುರುಷ ಮಹಾರಾಜನು ಭೂಮಿಯನ್ನು ಆಳುತ್ತಿದ್ದಾಗ ಪೆರ್ಬ್ಬೊಳಲನಾಡು-೩೦ನ್ನು ಪೆಳ್ನಾಗತ್ತರಸನು ಆಳುತ್ತಿರಲು ಆರಕಮ್ಮೊರ ಎಂಬ ವ್ಯಕ್ತಿಯ ಮೈದುನ ಕೊಡನ್ದಲೆ ಕಿತ್ತಯ್ಯನು ರಟ್ಟವಾಡಿಯ ದಂಡು ಬಂದಾಗ ಊರಿನ ನಾಶವನ್ನು ತಡೆಯಲು ಹೋರಾಡಿ ಸತ್ತು ಇಂದ್ರಲೋಕವನ್ನು ಸೇರಿದ. ಪೆರ್ಗುನ್ದಿ ಮತ್ತು ಅವನ ತಮ್ಮ ಕಿರ್ಗುನ್ದಿ ಸ್ಥಾಪಿಸಿದ ಕಲ್ಲು ಇದಾಗಿದೆ}}.
 
ಈ ವೀರಗಲ್ಲು ಕಿಟ್ಟಯ್ಯಕಿತ್ತಯ್ಯ ಎಂಬುವವನ ನೆನಪಿಗಾಗಿ ಗೌರವಾರ್ಥವಾಗಿ ಹಾಕಲಾಗಿದೆ. ಆತ ಪೆರ್ಬೊಳಲನಾಡು-೩೦ ರ ನಿವಾಸಿಯಾಗಿದ್ದು ರಟ್ಟವಾಡಿ (ರಾಷ್ಟ್ರಕೂಟ) ಸೈನ್ಯದ ಧಾಳಿಯ ವಿರುದ್ಧ ಹೋರಾಡಿ ಮರಣಹೊಂದಿದವನು. ಆ ದಾಳಿಯು ಪೆರ್ಬೊಳ ಊರನ್ನು ನಾಶಮಾಡಲು ಮಾಡಿದ ದಾಳಿಯಾಗಿತ್ತು. ಆ ಸಮಯದಲ್ಲಿ ಪೆಳ್ನಾಗತ್ತರನು ಪೆರ್ಬೊಳಲನಾಡಿನ ಮುಖ್ಯಸ್ಥನಾಗಿದ್ದನು ಮತ್ತು ಶ್ರೀಪುರುಷನು ದೊರೆಯಾಗಿದ್ದನು. ಇದರಲ್ಲಿ '೩೦' ಎಂಬ ಸಂಖ್ಯೆಯು ಗಂಗ ಸಾಮ್ರಾಜ್ಯದಲ್ಲಿ ಮೂವತ್ತು ಊರುಗಳ ಅಡಳಿತ ಮುಖ್ಯಕೇಂದ್ರವಾಗಿ ಪೆರ್ಬೊಳನಾಡು ಇರುವುದನ್ನು ಸೂಚಿಸುತ್ತದೆ.
 
ಗಂಗರ ಶ್ರೀಪುರುಷನು ಕ್ರಿ.ಶ ೭೨೬-೭೮೮ರ ನಡುವೆ ರಾಜ್ಯವಾಳಿದ ಗಂಗ ಸಾಮ್ರಾಜ್ಯದ ಶಕ್ತಿಶಾಲಿ ದೊರೆ. ಪಶ್ಚಿಮ ಗಂಗ ಸಾಮ್ರಾಜ್ಯವು ಕ್ರಿಶ ೪೦೦ ರಿಂದ ೧೦೦೦ ನೇ ಇಸವಿಯವರೆಗೆ ದಕ್ಷಿಣ ಭಾರತದಲ್ಲಿ ಒಂದು ಶಕ್ತಿಶಾಲಿ ಸಾಮ್ರಾಜ್ಯವಾಗಿತ್ತು. ಶ್ರೀಪುರುಷನ ರಾಜ್ಯವು ಗಂಗವಾಡಿ<ref>{{Harvnb|The Ganga’s of Talakad by V Krishna Rao|1936|p=139 & 305}}</ref> ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಮತ್ತು ಈಗಿನ ಕೋಲಾರ, ಬೆಂಗಳೂರು, ಕೃಷ್ಣಗಿರಿ, ಸೇಲಂ, ಈರೋಡು, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಪ್ರದೇಶಗಳಲ್ಲಿ ಹರಡಿತ್ತು. ಈ ಪ್ರದೇಶಗಳಲ್ಲಿ ದೊರೆತ ಆ ಕಾಲದ ಅನೇಕ ವೀರಗಲ್ಲುಗಳು ಆ ಕಾಲದಲ್ಲಿ ಗಂಗ ಮತ್ತು [[ರಾಷ್ಟ್ರಕೂಟ|ರಾಷ್ಟ್ರಕೂಟರ]] ನಡುವೆ ನಡೆದ ಹಲವು ಕಾಳಗಗಳ ಬಗ್ಗೆ ಮಾಹಿತಿ ಒದಗಿಸುತ್ತವೆ.<ref>{{cite book |last1=ಕೆ. ಎಸ್ |first1=ಶಿವಣ್ಣ |title=Rashtrakuta Relations with the Gangas of Talakad |date=೧೯೭೭ |publisher=ಮೈಸೂರು ವಿ.ವಿ. ಪ್ರಸಾರಾಂಗ |location=ಮೈಸೂರು}}</ref>