ಹೆಬ್ಬಾಳ ಕಿತ್ತಯ್ಯ ಶಿಲಾಬರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top
೩ ನೇ ಸಾಲು:
ಕ್ರಿ.ಶ. ೭೫೦ ರ ಕಾಲದ ಹೆಬ್ಬಾಳ ಕಿತ್ತಯ್ಯ ಶಿಲಾಬರಹವು [[ಕನ್ನಡ ಭಾಷೆ]] ಮತ್ತು ಲಿಪಿಯಲ್ಲಿರುವ ಶಿಲಾಬರಹವಾಗಿದೆ. ಇದು ಈವರೆಗೂ ದೊರೆತಿರುವ ಕನ್ನಡ ಭಾಷೆಯ ಹಳೆಯ ಶಿಲಾಬರಹಗಳಲ್ಲಿ ಒಂದಾಗಿದೆ ಮತ್ತು [[ಬೆಂಗಳೂರು|ಬೆಂಗಳೂರು ಪ್ರದೇಶದಲ್ಲಿ]] ದೊರೆತಿರುವ ಅತ್ಯಂತ ಹಳೆಯ ಶಿಲಾಬರಹವಾಗಿದೆ. ಇದು ೦೧ಮೇ೨೦೧೮ರಂದು ಪತ್ತೆಯಾಯಿತು. ಈ ಶಿಲಾಬರಹವು ಹೆಬ್ಬಾಳ ಪ್ರದೇಶದ ‘ಕಿತ್ತಯ್ಯ’ ಎಂಬ ವ್ಯಕ್ತಿಯ ಬಗ್ಗೆ ಇರುವ ಒಂದು ‘ಊರಳಿವು [[ವೀರಗಲ್ಲುಗಳು|ವೀರಗಲ್ಲು]]’. ಅಂದರೆ ತಮ್ಮ ಊರಿನ ಮೇಲೆ ಆದ ಆಕ್ರಮಣದ ವಿರುದ್ಧ ಹೋರಾಡಿ ಮರಣಹೊಂದಿದ ವೀರರ ನೆನಪಿನಲ್ಲಿ ಗೌರವಪೂರ್ವಕವಾಗಿ ಹಾಕಲಾಗುವ ನೆನಪಿನ ಶಿಲೆ ಮತ್ತು ಬರಹ.
 
ಈ ಶಿಲಾಬರಹವು ಎಂಟನೇ ಶತಮಾನದ [[ಗಂಗ (ರಾಜಮನೆತನ)|ಗಂಗ ಸಾಮ್ರಾಜ್ಯದ]] ಶ್ರೀಪುರುಷ ರಾಜನ ಕಾಲದ್ದೆಂದು [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಲಿಪಿಶಾಸ್ತ್ರಶಾಸನಶಾಸ್ತ್ರ ಪ್ರೊಫೆಸರ್ ಆದ ಪಿ.ವಿ. ಕೃಷ್ಣಮೂರ್ತಿಯವರು ಗ್ರಹಿಸಿದ್ದಾರೆ. ಈಗ ಇದು [[ಹೆಬ್ಬಾಳ|ಹೆಬ್ಬಾಳದ]] ನಗರ ಗ್ರಂಥಾಲಯದ ಪಕ್ಕದಲ್ಲಿ ಸಮುದಾಯಧನಸಂಗ್ರಹದ ಮೂಲಕ ಕಟ್ಟಲಾದ ಗಂಗಶೈಲಿಯ ಮಂಟಪದಲ್ಲಿ ಸ್ಥಾಪಿಸಲಾಗಿದೆ..
 
==ಇದರ ಪತ್ತೆ ಮತ್ತು ಕಾಲದ ಅಂದಾಜು==