ಭಾರತದಲ್ಲಿ ಕೃಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨೬ ನೇ ಸಾಲು:
*ನಾವು ಆಹಾರ ಭದ್ರತೆ ಜೊತೆ ಪೌಷ್ಟಿಕ ಸುರಕ್ಷೆ ಸಾಧಿಸಬೇಕಾಗಿದೆ. ಕೃಷಿ ಕ್ರಾಂತಿ ನಡೆದಾಗ ಕಾರ್ಬೊಹೈಡ್ರೇಟ್‌ಗೆ ಆದ್ಯತೆ ನೀಡಿದ್ದೆವು. ಈಗ ಪ್ರೊಟೀನ್‌ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಮಕ್ಕಳಿಗೆ ಕಬ್ಬಿಣಾಂಶ, ವಿಟಮಿನ್‌ ಎ ಅನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಹೆಚ್ಚು ಪ್ರೊಟೀನ್‌ ಒದಗಿಸಲು ದ್ವಿದಳ ಧಾನ್ಯ, ಮಾಂಸ, ಹಾಲು, ಮೊಟ್ಟೆ ಉತ್ಪಾದನೆ ಹೆಚ್ಚಬೇಕು. ಪೌಷ್ಟಿಕಾಂಶ ಕೊರತೆ ನೀಗಿಸುವಲ್ಲಿ ತೃಣಧಾನ್ಯಗಳೂ (ಮಿಲೆಟ್ಸ್‌ ) ಸಹಕಾರಿ. ಇವು ಕಡಿಮೆ ನೀರಿದ್ದರೂ ಚೆನ್ನಾಗಿ ಬೆಳೆಯುತ್ತವೆ. ಹವಾಮಾನ ವೈಪರೀತ್ಯಕ್ಕೆ ಒಗ್ಗಿಕೊಳ್ಳುವ ಸಾಮರ್ಥ್ಯ ಇವುಗಳಿಗಿದೆ. ನನ್ನ ಪ್ರಕಾರ ತೃಣಧಾನ್ಯಗಳೇ ಭವಿಷ್ಯದ ಆಹಾರ.<ref>[http://www.prajavani.net/news/article/2017/02/26/474303.html ಚತುರ ಕೃಷಿಯಿಂದ ರೈತರ ಬವಣೆಗೆ ಪರಿಹಾರ: ಕೃಷಿ ವಿಜ್ಞಾನಿ ಡಾ. ಎಸ್‌.ಅಯ್ಯಪ್ಪನ್‌;ಪ್ರವೀಣ್‌ ಕುಮಾರ್‌ ಪಿ.ವಿ.;26 Feb, 2017]</ref>
==ಕೊರೊನಾ ಸೋಂಕು ಮತ್ತು ಕೃಷಿ ಸಮಸ್ಯೆ==
*ಭಾರತದಲ್ಲಿ ಡಿಸೆಂಬರ್ ೨೦೧೯ ರಿಂದ ಹರಡಿದ[[ಕೊರೊನಾ ವೈರಸ್‌ಕೊರೋನಾವೈರಸ್]]ಸೋಂಕು ಕೃಷಿಯಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಸೋಖು ಹರಡದಂತೆ ತಡೆಯಲು ಲಾಕ್‌ಡೌನ್‌ ಎಂಬ ಸಂಚಅರ ನಿಯಮತ್ರನ ಹೇರಲಾಯಿತು. ಇದರಿಂದ ಭಾರತದ ಆತ್ಮವೆನಿಸಿದ ಗ್ರಾಮೀಣ ಪ್ರದೇಶಗಳು ಅಕ್ಷರಶಃ ನಲುಗಿವೆ. *ಬಾರತದ ಗ್ರಾಮೀಣ ಪ್ರದೇಶಗಳಲ್ಲಿ ೨೦೧೯ -೨೦೨೦ ರಲ್ಲಿ [[ಕೊರೊನಾ ವೈರಸ್ಕೊರೋನಾವೈರಸ್]] ಸೋಂಕು ಹೆಚ್ಆಗಿಗಿ ಹರಡಿಲ್ಲ. ಆದರೆ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕೂಲಿಗಳಿಗೆ ಇದ್ದಕ್ಕಿದ್ದಂತೆ ಸಂಪಾದನೆ ನಿಂತು ಹೋಯಿತು. ಅವರ ಬದುಕು ದುಸ್ತರವಾಯಿತು.
*ಹಳ್ಳಿಗಳಲ್ಲೇ ಉಳಿದು ಬೇಸಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು ೨೦೨೦ ರ [[ಕೊರೊನಾ ವೈರಸ್‌ಕೊರೋನಾವೈರಸ್]]ಸೋಂಕು ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಬೆಳೆದ ಹಣ್ಣು, ತರಕಾರಿಗಳನ್ನು ಸಕಾಲಕ್ಕೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಿಲ್ಲ. ತಮ್ಮ ಕೃಷಿ ಉತ್ಪನ್ನಗಳನ್ನು ಅನಿವಾರ್ಯವಾಗಿ ಹಸುಗಳಿಗೆ ತಿನ್ನಿಸುತ್ತಿದ್ದಾರೆಅದಕ್ಕೂ ಹೆಚ್ಚಾದುದನ್ನು ಚೆಲ್ಲುತ್ತಿದ್ದಾರೆ.
*ಉದಾಹರಣೆಗೆ [[ಕರ್ನಾಟಕದ]]ಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಟನ್‌ಗಟ್ಟಲೆ ದ್ರಾಕ್ಷಿಯನ್ನು ಗೊಬ್ಬರದ ಗುಂಡಿಗೆ ಸುರಿಯಲಾಯಿತು. ಆದರೆ ಮನೆಯಲ್ಲೇ ಉಳಿಯಿರಿ ಎಂಬ ಲಾಕ್‌ಡೌನ್ ಮಾದರಿಯ ಆದೇಶ ಮುಂದುವರಿದರೆ, ಲಾಕ್‌ಡೌನ್‌ ಆದೇಶ ಬೇಗ ತೆರವಾಗದಿದ್ದರೆ ಹಳ್ಳಿಗಳಲ್ಲಿರುವ ರೈತರು ದೊಡ್ಡಮಟ್ಟದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಈವರೆಗೆ ಸರ್ಕಾರಗಳ ಪಾಲಿಗೆ ಕೃಷಿ ಕ್ಷೇತ್ರದ ಸಂಕಷ್ಟ ಎಂದರೆ ಅದು ಕೇವಲ ಮಾರುಕಟ್ಟೆಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಸಮಸ್ಯೆಯಾಗಿತ್ತು. ಆದರೆ ಈಗ ಅದರ ಸ್ವರೂಪ ಬದಲಾಗಿದೆ. ಸರ್ಕಾರಗಳ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಉತ್ಪಾದನೆಯ ದೊಡ್ಡಕುಸಿತ ಇಡೀ ದೇಶದಲ್ಲಿ ದೊಡ್ಡಸಮಕಟವನ್ನೇ ತರಬಹುದು ಎಂಬುದು ತಜ್ಞರ ಅಭಿಪ್ರಾಯ.<ref>[https://www.prajavani.net/op-ed/market-analysis/rural-india-stares-at-a-larger-crisis-717911.html
ಲಾಕ್‌ಡೌನ್‌ಗೆ ನಲುಗಿದ ಗ್ರಾಮೀಣ ಭಾರತ: ದುರಿತ ಕಾಲದ ದುಸ್ತರ ಬದುಕು;ಅನ್ನಪೂರ್ಣ ಸಿಂಗ್‌ Updated: 06 ಏಪ್ರಿಲ್ 2020,]</ref>
"https://kn.wikipedia.org/wiki/ಭಾರತದಲ್ಲಿ_ಕೃಷಿ" ಇಂದ ಪಡೆಯಲ್ಪಟ್ಟಿದೆ