ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗೀಕರಣ
No edit summary
೭ ನೇ ಸಾಲು:
ಬೂದಿಕೋಟೆಯು ೧೭ ನೇ ಶತಮಾನದಲ್ಲಿ ಶಿರಾ ಸುಭೇದಾರನ ಕೆಳೆಗೆ ಪೌಜುದಾರನಾಗಿದ್ದ ಫತೇಮಹಮ್ಮದನ ಜಹಗೀರಿಯಾಗಿತ್ತು. ಫತೇಮಹಮ್ಮದನ ಮಗ ಮೈಸೂರು ಹುಲಿ [[ಟಿಪ್ಪು ಸುಲ್ತಾನ್]] ರ ತಂದೆ ಮೈಸೂರು ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ [[ಹೈದರಾಲಿ]]ಯ ಜನ್ಮಸ್ಠಳ ಇವರು 1970 ರಲ್ಲಿ ಇಲ್ಲಿ ಜನಿಸಿದರು.
 
ಬೂದಿಕೋಟೆಯಲ್ಲಿ ಶಿಥಿಲವಾದ ಕೋಟೆಗಳ ಅವಶೇಷಗಳಿವೆ. ಕೋಟೆಯೊಳಗೆ ಅನೇಕ ದೇವಾಲಯಗಳು ಸಹ ಇವೆ. ಮಳೆಗಾಲದಲ್ಲಿ ಮಾರ್ಕಂಡೇಯ ನದಿಯನೀರು ಕೋಟೆಯನ್ನು ಸುತ್ತುವರೆದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಕೋಟೆ ಓಂದರ್ಥದಲ್ಲಿ ನಿಸರ್ಗ ನಿರ್ಮಿಸಿದ ಕಲಾಶಾಲೆ. ಇಲ್ಲಿ ಕಾಣುವ ಪ್ರತಿಯೊಂದು ಕಲ್ಲಿಗೂ ಸಹ ಒಂದೊಂದು ಆಕಾರವಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಬೂದಿಕೋಟೆಯ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದಂತಹ ಆಂಜನೇಯ ಸ್ವಾಮಿಯ ದೇವಾಲಯ ಮತ್ತು ವೇಣುಗೋಪಾಲಸ್ವಾಮಿಯಕೋಟೆವೇಣುಗೋಪಾಲಸ್ವಾಮಿಯ ಆಲಯವಿದೆ ಇದು ಶಿಥಿಲವಾಗಿದ್ದು ಇತ್ತೀಚೆಗೆ ಊರಿನ ಗ್ರಾಮಸ್ಥರು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ.
 
ಬೂದಿಕೋಟೆಗೆ ಮೊದಲು ವಿಭೂತಿಪುರ ಅಂತ ಕರೀತಾ ಇದ್ದರು ಕಾರಣ ಏನಪ್ಪ ಅಂದ್ರೆ ಇಲ್ಲಿ ಆಗಿನ ಕಾಲದಲ್ಲಿ [[ಋಷಿ]] ಮುನಿಗಳು ಎಲ್ಲಿ ನೋಡಿದರೂ ಯಾಗ ಯಜ್ಝ ಮಾಡ್ತಾ ಇದ್ದರಂತೆ ಈ ರೀತಿ ಮಾಡ್ತಾ ಇದ್ದದ್ದರ ಪರಿಣಾಮವಾಗಿ ಎಲ್ಲಿ ನೋಡಿದರೂ ಬೂದಿ ಇರುತ್ತಿತ್ತು. ಅದಕ್ಕಾಗಿ ಇದನ್ನ ವಿಭೂತಿಪುರ ಅಂತ ಕರೀತಾ ಇದ್ದರು. ನಂತರದ ದಿನಗಳಲ್ಲಿ ವಿಭೂತಿಪುರದಲ್ಲಿ "ಬೂದಿ" ಯನ್ನು ತೆಗೆದುಕೊಂಡು ಹಾಗೂ [[ಹೈದರಾಲಿ]]ಯ ಕೋಟೆ ಇದ್ದದ್ದರಿಂದ ಇಲ್ಲಿ "ಕೋಟೆ" ಯನ್ನು ತೆಗೆದುಕೊಂಡು [[ಬೂದಿಕೋಟೆ]] ಅಂತ ನಾಮಕರಣ ಮಾಡಿದರು. ಅಂದಿನಿಂದ [[ಬೂದಿಕೋಟೆ]]ಯಾಗಿ ಕರೆಯಲ್ಪಡುತ್ತಿದೆ.
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ