ಅರ್ಜುನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೩ ನೇ ಸಾಲು:
== ಅರ್ಜುನನ ಸಂಪೂರ್ಣ ಕಥೆ ==
 
* ಪಂಚಪಾಂಡವರಲ್ಲಿ ಮಧ್ಯದವ. ಪಾಂಡುರಾಜನ ಮೊದಲ ಹೆಂಡತಿಯಾದ ಕುಂತಿಯಲ್ಲಿ ಇಂದ್ರನ ವರಪ್ರಸಾದದಿಂದ ಹುಟ್ಟಿದ. ಗಂಗಾ ನದಿಯಲ್ಲಿ ಸ್ನಾನಕ್ಕಿಳಿದ ದ್ರೋಣಾಚಾರ್ಯರ ಕಾಲನ್ನು ಹಿಡಿದುಕೊಂಡುಹಿಡಿದುಕೊಂಡ ಮೊಸಳೆಯನ್ನು ಕೊಂದ. ದ್ರೋಣಾಚಾರ್ಯರ ಇಷ್ಟದಂತೆ ದ್ರುಪದನನ್ನು ಹಿಂಗ್ಗಟ್ಟುಹಿಂಗಟ್ಟು ಬಿಗಿದು ತಂದು ಗುರುದಕ್ಷಿಣೆಯಾಗಿ ಅರ್ಪಿಸಿದ. ಅರ್ಜುನ, ನರ, ಫಲ್ಗುಣ, ಪಾರ್ಥ, ಕಿರೀಟಿ, ಶ್ವೇತವಾಹನ, ಭೀಭತ್ಸು, ವಿಜಯ, ಕೃಷ್ಣ, ಸವ್ಯಸಾಚಿ, ಧನಂಜಯ-ಎಂಬ ಹನ್ನೊಂದು ಹೆಸರುಗಳು ಅರ್ಜುನನಿಗಿದೆಅರ್ಜುನನಿಗಿವೆ. ದ್ರೌಪದಿ ಸ್ವಯಂವರಕ್ಕಾಗಿ ಹೋಗುತ್ತಿದ್ದಾಗ ಗಂಗಾ ತೀರದಲ್ಲಿ ರಾತ್ರಿಯ ವೇಳೆ ಅಡ್ಡಗಟ್ಟಿದ ಗಂಧರ್ವ ಅಂಗಾರಪರ್ಣನನ್ನು ಸೋಲಿಸಿ ಅವನಿಂದ ಚಾಕ್ಷುಷೀ ವಿದ್ಯೆಯನ್ನು ಗಳಿಸಿ ಅವನ ಸೂಚನೆಯಂತೆ ತಮ್ಮ ಪುರೋಹಿತನನ್ನಾಗಿ ಧೌಮ್ಯಾಚಾರ್ಯರನ್ನು ಒಪ್ಪಿಕೊಂಡ. ಬ್ರಾಹ್ಮಣವೇಷದಲ್ಲಿದ್ದು ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ವರಿಸಿದ.
* ಇದೇ ಸಂಧರ್ಭದಲ್ಲಿ ಯುದ್ಧಕ್ಕೆ ಬಂದ ಕರ್ಣನನ್ನು ಸೋಲಿಸಿದ. ಹಸ್ತಿನಾವತಿಯಲ್ಲಿದ್ದಾಗ ಅನಿವಾರ್ಯವಾಗಿ ಆಯುಧಶಾಲೆಗೆ ಹೋಗಬೇಕಾಗಿ ಬಂದು ಅಲ್ಲಿಗೆ ಹೋಗಿ ಧರ್ಮರಾಯ ದ್ರೌಪದಿಯರು ಏಕಾಂತದಲ್ಲಿದ್ದುದನ್ನು ಕಂಡು ಪಾಪಪರಿಹಾರಕ್ಕಾಗಿ ತೀರ್ಥಯಾತ್ರೆ ಕೈಗೊಂಡ. ನಾರದರಿಂದ ತೀರ್ಥ ಮಾಹಾತ್ಮ್ಯಗಳನ್ನುಮಾಹಾತ್ಮೆಗಳನ್ನು ತಿಳಿದುಕೊಂಡ. ನಾರೀ ತೀರ್ಥದಲ್ಲಿ ಮೀಯುತ್ತಿದ್ದಾಗ ಹಿಡಿದುಕೊಂಡ ಒಂದು ಮೊಸಳೆಯನ್ನು ಹೊರೆಗೆಳೆಯಲಾಗಿ ಶಾಪವಿಮೋಚನೆ ಹೊಂದಿದ ಅಪ್ಸರೆ ನಿಜರೂಪ ತಳೆದಳು. ಹಾಗೆಯೇ ನೆರೆಹೊರೆಯ ತೀರ್ಥಗಳಲ್ಲಿ ಶಾಪಗ್ರಸ್ತರಾಗಿದ್ದಶಾಪಗ್ರಸ್ಥರಾಗಿದ್ದ ಇತರ ಅಪ್ಸರೆಯರನ್ನು ವಿಮೋಚನೆ ಗೊಳಿಸಿದವಿಮೋಚನೆಗೊಳಿಸಿದ. ಕೃಷ್ಣನ ಸೂಚನೆಯಂತೆ ಯತಿವೇಷವನ್ನು ಧರಿಸಿ ಸುಭದ್ರೆಯನ್ನು ವರಿಸಿದ.
* ಕೃಷ್ಣಾರ್ಜುನರು ಯಮುನಾ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದಾಗ ಬ್ರಾಹ್ಮಣ ರೂಪದಲ್ಲಿ ಬಂದ ಅಗ್ನಿ, ಶ್ವೇತಕಿ ರಾಜನ ಯಜ್ಞದಲ್ಲಿ ಅಜೀರ್ಣವುಂಟಾಗಿದೆಯೆಂದೂ ತಡೆಯಲು ಬರುವ ಇಂದ್ರನ ಸೇವಕರನ್ನು ಅಡ್ಡಗಟ್ಟಿ ಖಾಂಡವ ವನವನ್ನು ಭಕ್ಷಿಸಲು ಸಹಾಯ ಮಾಡಬೇಕೆಂದೂ ಕೇಳಿಕೊಂಡಾಗ ಅರ್ಜುನನು ಒಪ್ಪಿಕೊಂಡ. ಅರ್ಜುನಇದರಿಂದ ಸಂತುಷ್ಟನಾದ ಅಗ್ನಿಯಿಂದ ದಿವ್ಯಧನುಸ್ಸಾದ ಗಾಂಡೀವ, ಅಕ್ಷಯ ತೂಣೀರಗಳು, ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥ-ಇವುಗಳನ್ನು ಪಡೆದ. ಯುದ್ಧಕ್ಕೆ ಬಂದ ಇಂದ್ರನನ್ನು ಸೋಲಿಸಿ ಮಾಯಾಸುರನಿಗೆ ಅಭಯ ಪ್ರಧಾನ ಮಾಡಿದ. ಮಾಯಾಸುರನಿಂದ ದೇವದತ್ತ ಎಂಬ ಶಂಖವನ್ನು ಗಳಿಸಿದ.
* ರಾಜಸೂಯಯಾಗಕ್ಕೆ ಮುಂಚೆ ಜೈತ್ರಯಾತ್ರೆಗೆಂದು ಹೊರಟು ಅಂತಗಿರಿ, ಉಲೂಕಪುರ, ಮೋದಾಪುರ,ಉರಗಾಪುರ, ಕಾಂಭೋಚ,ಋಷಿಕ್ ಮುಂತಾದ ದೇಶಗಳನ್ನು ಕಿಂಪುರುಷ, ಇಲಾವೃತ, ಕೇತುಮಾಲ ಮುಂತಾದ ಖಂಡಗಳನ್ನು ಗೆದ್ದ. ಪೂರು ಎಂಬುವನು ಸಾರಥಿ. ಇಂದ್ರಕೀಲ ಪವ೯ತದಲ್ಲಿ ತಪಸ್ಸು ಮಾಡಿ ಕಿರಾತವೇಷಿಯಾಗಿ ಬಂದ ಶಿವನೊಂದಿಗೆ ಹೋರಾಡಿ ಪಾಶುಪತಾಸ್ತ್ರವನ್ನು ಗಳಿಸಿದ. ಚಿತ್ರಸೇನೆ ಎಂಬ ಗಂಧರ್ವನಿಂದ ಗಂಧರ್ವವೇದವನ್ನು ಅಭ್ಯಾಸ ಮಾಡಿದ. ನಿವಾತಕವಚರನ್ನೂ ಪೌಲೋನ ಕಾಲಕೇಯರೆಂಬ ದೈತ್ಯರನ್ನೂ ಸಂಹರಿಸಿದ. ಸಂತುಷ್ಟನಾದ ಇಂದ್ರ ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡು ಕವಚ ಕಿರೀಟ ಇತ್ಯಾದಿಗಳನ್ನು ಕೊಟ್ಟು ಗೌರವಿಸಿದ. ನಪುಂಸಕನಾಗುವಂತೆ ಊರ್ವಶಿ ಶಾಪ ಕೊಟ್ಟಿದ್ದರಿಂದ ಅಜ್ಞಾತವಾಸದ ಕಾಲದಲ್ಲಿ ಅನುಕೂಲವೇ ಆಯಿತು. ಆಗ ಇವನ ಹೆಸರು ಬೃಹನ್ನಳೆ.
* ಅಜ್ಞಾತವಾಸಕ್ಕಾಗಿ ವಿರಾಟ ನಗರಕ್ಕೆ ನಡೆದು ಬರುವಾಗ ಆಯಾಸಗೊಂಡ ದ್ರೌಪದಿಯನ್ನು ಹೆಗಲಮೇಲೆ ಹೊತ್ತುತಂದ. ಗೋಹರಣ ಕಾಲದಲ್ಲಿ ಕರ್ಣ, ದ್ರೋಣ, ಅಶ್ವತ್ತಾಮ, ದುಶ್ಯಾಸನ, ದುರ್ಯೋಧನ ಮುಂತಾದವರು ಇವನ ಸಮ್ಮೋಹನಾಸ್ತ್ರದಿಂದ ಪರಾಜಯ ಹೊಂದಿದರು. ಮಹಾಭಾರತದ ಯುದ್ಧದ ಕಾಲದಲ್ಲಿ ಕೃಷ್ಣ ಇವನ ಸಾರಥಿ. ಕೃಷ್ಣನಿಂದ ಸಂಧಿ, ವಿಗ್ರಹಗಳ ಉಪದೇಶ ಪಡೆದ. ದ್ರೌಪದಿ, ಸುಭದ್ರ , ಉಲೂಪಿ, ಚಿತ್ರಾಂಗದೆಯರಲ್ಲಿ ಕ್ರಮವಾಗಿ ಶ್ರುತಕೀರ್ತಿ, ಅಭಿಮನ್ಯು, ಇರಾವಂತ, ಬಭ್ರುವಾಹನರೆಂಬ ಮಕ್ಕಳನ್ನು ಪಡೆದ. ಭೀಷ್ಮನ ಶರಮಂಚಕ್ಕೊಂದು ಬಾಣದ ತಲೆದಿಂಬನ್ನೊದಗಿಸಿದ. ವರುಣಾಸ್ತ್ರವನ್ನು ಪ್ರಯೋಗಿಸಿ ಭೀಷ್ಮನ ದಾಹವನ್ನು ಹೋಗಲಾಡಿಸಿದ. ಜಯಗಳಿಕೆಗಾಗಿ ಕೃಷ್ಣನ ಸೂಚನೆಯಂತೆ ರಾತ್ರಿಯಲ್ಲಿ ಪರಮೇಶ್ವರರನ್ನು ಪೂಜಿಸಿದ.
"https://kn.wikipedia.org/wiki/ಅರ್ಜುನ" ಇಂದ ಪಡೆಯಲ್ಪಟ್ಟಿದೆ