ಕಳಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Additional information is added
೧ ನೇ ಸಾಲು:
ಕಳಸ [[ಚಿಕ್ಕಮಗಳೂರು]] ಜಿಲ್ಲೆಯ ಒಂದು ತಾಲ್ಲೂಕು. ಭದ್ರಾವತಿಯಭದ್ರಾ ನದಿಯ ಬಲದಂಡೆಯ ಬಳಿ ಉ.ಅ ೧೩ಲಿ ೧೪` ಮತ್ತು ಪೂ.ರೇ. ೭೫ಲಿ ೨೬`ನಲ್ಲಿ ಸಹ್ಯಾದ್ರಿಯ ಉತ್ತುಂಗ ಶ್ರೇಣಿಗಳ ನಡುವಣ ಕಣಿವೆಯಲ್ಲಿದೆ. ಮೂಡಿಗೆರೆಗೂಇದರೊಂದಿಗೆ ಇಲ್ಲಿಗೂದಕ್ಷಿಣದಲ್ಲಿ ೨೪ದುಗ್ಗಪ್ಪನ ಮೈಕಟ್ಟೆ(ಸಣ್ಣ ಗುಡ್ಡ)ಯಿಂದ ಆವೃತವಾಗಿದೆ. ದೂರಸಮುದ್ರ ಮಟ್ಟದಿಂದ ಕಳಸವು ೮೦೭ ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಕಳಸಕ್ಕೆ ೯೨ ಕಿಲೋ ಮೀಟರ್ ಅಂತರವಿದೆ. [http://www.karnatakaholidays.com/karkala.php ಕಾರ್ಕಳದ] ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ ಇದು ಜೈನಮಂದಿರವಾಗಿದ್ದಿರ ಬಹುದೆಂದು ಊಹಿಸಲಾಗಿದೆ. ಮೊದಲಿಗೆ ಹುಂಚದವರ, ಅನಂತರ ಭೈರರಸರ, ಅನಂತರ ಐಗೂರು ನಾಯಕರ ಆಳ್ವಿಕೆಗೆ ಇದು ಒಳಪಟ್ಟಿತು. ನದೀದಂಡೆಯಲ್ಲಿರುವ ದೊಡ್ಡ ಕಲ್ಲುಬಂಡೆಯೊಂದರ ಮೇಲಿರುವ ಸಂಸ್ಕೃತ ಶಾಸನವೊಂದು ಅದನ್ನು ಶ್ರೀಮಧ್ವಾಚಾರ್ಯರು ಒಂದು ಕೈಯಲ್ಲಿ ಎತ್ತಿ ಅಲ್ಲಿ ತಂದಿಟ್ಟುದಾಗಿ ತಿಳಿಸುತ್ತದೆ.
 
=== ವ್ಯುತ್ಪತ್ತಿ: ===
ಕಳಸ ಎಂಬ ಪದವು ಸಂಸ್ಕೃತ ಮೂಲವಾದ ‘ಕಲಶ’ದಿಂದ ಬಂದಿರಬಹುದೆಂದು ಹೇಳಲಾಗಿದೆ. ಕಲಶವೆಂದರೆ ಹಿಂದೂ ಸಂಪ್ರದಾಯದ ಪ್ರಕಾರ ದೇಗುಲಗಳ ವಾಸ್ತುಶಿಲ್ಪದಲ್ಲಿ ಗರ್ಭಗುಡಿಯ ಮೇಲಿರುವುದು. ಸಾಮಾನ್ಯ ಅರ್ಥದಲ್ಲಿ ಕಲಶವೆಂದರೆ ಪವಿತ್ರ ಪಾತ್ರೆ ಎನ್ನಬಹುದು. ಮೂರು ಕಡೆಯಿಂದ ಆವರಿಸಿರುವ ಭದ್ರೆ ಮತ್ತು ದಕ್ಷಿಣದಲ್ಲಿರುವ ದುಗ್ಗಪ್ಪನ ಕಟ್ಟೆಯಿಂದಾಗಿ ಎತ್ತರದಿಂದ ನೋಡಿದಾಗ ಪಟ್ಟಣವು ಮಡಕೆಯನ್ನು ಹೋಲುವಂತಿರುವುದರಿಂದ ಕಳಸವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಬೆಟ್ಟದ ತಳದಲ್ಲಿ ಶ್ರೀ ಕಳಸೇಶ್ವರ ಸ್ವಾಮಿಯ ದೇವಾಲಯವಿದೆ.
 
=== ಕಳಸವು ಪುರಾಣದಲ್ಲಿ : ===
ಸ್ಥಳೀಯ ಪುರಾಣಗಳ ಪ್ರಕಾರ ಸ್ಕಂದ ಪುರಾಣದ ಘಟನೆಯೊಂದನ್ನು ಕಳಸದ ಹುಟ್ಟಿಗೆ ಆಧಾರವಾಗಿ ನೀಡಲಾಗುತ್ತದೆ. ಅದರಂತೆ, ಶಿವ ಮತ್ತು ಪಾರ್ವತಿಯರ ಕಲ್ಯಾಣ ಸಮಯದಲ್ಲಿ ದೇವಾಧಿ ದೇವತೆಗಳು ಅದಕ್ಕೆ ಸಾಕ್ಷಿಯಾಗಲು ಹಿಮಾಲಯದಲ್ಲಿ ಸೇರುತ್ತಾರೆ. ಅದರಿಂದಾಗಿ ಭೂಮಿಯ ಸಮತೋಲನವು ತಪ್ಪಲು, ಆ ಭಾರವನ್ನು ಸರಿದೂಗಿಸಲು ಋಷಿವರೇಣ್ಯರಾದ ಅಗಸ್ತ್ಯಯರನ್ನು ಕೇಳಿಕೊಳ್ಳಲಾಗುತ್ತದೆ. ಆದರೆ ಅವರೂ ಕಲ್ಯಾಣಕ್ಕೆ ಸಾಕ್ಷಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಪರಶಿವನು ಅಗಸ್ತ್ಯರಿಗೆ ದಿವ್ಯದೃಷ್ಟಿ ನೀಡಿ ಅವರನ್ನು ದಕ್ಷಿಣಕ್ಕೆ ಕಳಿಸುತ್ತಾನೆ. ಆಗ ಅಗಸ್ತ್ಯಯರು ಬಂದು ನೆಲೆ ನಿಂತ ಕ್ಷೇತ್ರವು ಕಳಸ ಎಂದು ನಂಬಲಾಗುತ್ತದೆ. ಜೊತೆಗೆ ಕಾಶಿ(ವಾರಣಾಸಿ)ಗಿಂತ ಹೆಚ್ಚಿನ ಪುಣ್ಯವನ್ನು ಕಳಸವನ್ನು ದರ್ಶಿಸಿದಾಗ ಸಿಗುತ್ತದೆ ಎಂಬ ನಂಬಿಕೆಯೂ ಇದೆ.
 
ಶಿವ ಪಾರ್ವತಿಯರ ಕಲ್ಯಾಣವನ್ನು ಪ್ರತೀ ವರ್ಷವೂ ಗಿರಿಜಾ ಕಲ್ಯಾಣವೆಂದು ಕಳಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಶುದ್ಧ ಏಕಾದಶಿಯಂದು ಅಹೋರಾತ್ರಿ ಈ ಮಹೋತ್ಸವವನ್ನು ವೈಭವಯುತವಾಗಿ ಆಚರಿಸಲಾಗುತ್ತದೆ.
 
ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವಸಿಷ್ಠರ ಆಶ್ರಮವು ಕಳಸದ ಸಮೀಪದಲ್ಲಿ ಇದ್ದಿತೆಂದು ಹೇಳಲಾಗುತ್ತದೆ
 
==ಕಳಸೇಶ್ವರ ದೇವಾಲಯ==
Line ೧೫ ⟶ ೨೫:
*ವಸಿಶ್ಠಾಶ್ರಮ
*ಮಹಾಲಕ್ಷ್ಮೀ ದೇವಸ್ಥಾನ
*ಶ್ರೀ ಚಂದ್ರನಾಥ ಸ್ವಾಮಿ ದೇವಾಲಯ
 
==ಪಂಚ ತೀರ್ಥಗಳು==
 
*'''ವಸಿಶ್ಠವಸಿಷ್ಠ ತೀರ್ಥ'''
*'''ನಾಗ ತೀರ್ಥ'''
*'''ಕೋಟಿ ತೀರ್ಥ'''
Line ೨೬ ⟶ ೩೭:
==ಉತ್ಸವಗಳು==
ಪ್ರತಿ ವರ್ಷವು ಕೆಲವು ಉತ್ಸವಗಳನ್ನು ಕಳಸದಲ್ಲಿ ಆಚರಿಸಲಾಗುತ್ತದೆ.
*ಗಿರಿಜಾ ಕಲ್ಯಾಣ - ಇದು ಈಶ್ವರ ಪಾರ್ವತಿಯರ ನಿತ್ಯ ಕಲ್ಯಾಣ. ಅಮಾವಾಸ್ಯೆಯಿಂದ ಹರಿಹರ ಹುಣ್ಣಿಮೆಯವರೆಗೆ ಗಿರಿಜಾ ಕಲ್ಯಾಣವನ್ನು ಕಾಶಿಯಲ್ಲಿನಡೆಸಲಾಗುತ್ತದೆ. ೧೨ವರ್ಷಗಳಿಗೊಮ್ಮೆಇದನ್ನು ಆಚರಿಸಲಾಗುತ್ತದೆಮೂರು ಕುಟುಂಬಗಳು ನಿರ್ವಹಿಸಿಕೊಂಡು ಬರುತ್ತಿವೆ. ಅವುಗಳೆಂದರೆ ಹೊಸಕೆರೆ, ಮಾವಿನಕೆರೆ ಮತ್ತು ಕುಣಿಕೆರೆ. ಈ ಮೂರು ಕುಟುಂಬಗಳು ಅಗಸ್ತ್ಯರೊಂದಿಗೆ ಬಂದು ನೆಲೆಯಾದವುಗಳು
*[https://kalasheshwaraswamytemple.kar.nic.in/jatra.html ಕಲಸೇಶ್ವರ ರಥೋತ್ಸವ]
*ವೆಂಕಟರಮಣ ರಥೋತ್ಸವ
*ಲಕ್ಷ ದೀಪೋತ್ಸವ
 
=== ಕಳಸದ ಭೌಗೌಳಿಕ ಮಾಹಿತಿಗಳು : ===
ಕಳಸವು ಮೂಲಭೂತವಾಗಿ ಹೊಂದಿರುವುದು ಕೃಷಿ ಆರ್ಥಿಕತೆಯನ್ನು. ಭದ್ರಾ ನದಿಯೊಂದಿಗೆ ವಿವಿಧ ನದಿ ಮೂಲಗಳು ನೀರಿನ ಅಗತ್ಯವನ್ನು ಪೂರೈಸುತ್ತವೆ.
 
=== ಕಳಸದ ಕೃಷಿ ಮತ್ತು ಆಹಾರ ಬೆಳೆಗಳು : ===
ಕೃಷಿಯನ್ನು ಕಳಸವು ಮೂಲಭೂತ ಕಾರ್ಯವಾಗಿ ಹೊಂದಿದ್ದರೂ ಆಹಾರ ಬೆಳೆಗಳನ್ನು ಜನರು ಬೆಳೆಯುವುದು ಸಣ್ಣಮಟ್ಟದಲ್ಲಿ. ಭತ್ತವು ಅದರಲ್ಲಿ ಪ್ರಮುಖವಾದುದು. ಉಳಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಅಡಿಕೆ, ಕಾಫಿ, ಕಾಳುಮೆಣಸು ಮತ್ತು ವಿವಿಧ ರೀತಿಯ ಸಾಂಬಾರ ಪದಾರ್ಥಗಳನ್ನು ಬೆಳೆಯಲಾಗುತ್ತದೆ. ಆಯುರ್ವೇದ ಔಷದ ಮೂಲಿಕೆಗಳನ್ನೂ ಬೆಳೆಯಲಾಗುತ್ತದೆ.
 
=== ಪಶ್ಚಿಮ ಘಟ್ಟ ಮತ್ತು ಕಳಸ : ===
ಪಶ್ಚಿಮ ಘಟ್ಟದ ಹೃದಯಭಾಗದಲ್ಲಿ ಕಳಸವಿದೆ. ವರ್ಷ ಪೂರ್ತಿ ಹಿತವಾದ ವಾತಾವರಣವಿದ್ದರೂ ಬೇಸಗೆಯಲ್ಲಿ ತಾಪ ತುಸು ಹೆಚ್ಚಿರುತ್ತದೆ.
 
=== ಇತರ ಜನಪದ ಆಚರಣೆಗಳು : ===
ಕಳಸವು ಕರಾವಳಿ ಜಿಲ್ಲೆಗಳಿಗೆ ಸಮೀಪವಿರುವುದರಿಂದ ಸಂಸ್ಕೃತಿಯ ಕೊಡುಕೊಳ್ಳುವಿಕೆ ನಡೆದಿದೆ. ದೈವಾರಾಧನೆ, ಭೂತಕೋಲ, ಯಕ್ಷಗಾನ ಸೇರಿದಂತೆ ಹಲವಾರು ಸಂಸ್ಕೃತಿಗಳು ಕಲೆಗಳು ಜೀವನದಲ್ಲಿ ಬೆರೆತು ಹೋಗಿದೆ. ಇದರೊಂದಿಗೆ ವ್ಯಾವಹಾರಿಕವಾಗಿ ತುಳು ಭಾಷೆಯ ಬಳಕೆಯೂ ಚಾಲ್ತಿಯಲ್ಲಿದೆ.
 
=== ಕಳಸ ತಾಲ್ಲೂಕು :ಸಂಪಾದಿಸಿ ===
ಮೂಡಿಗೆರೆ ತಾಲ್ಲೂಕಿನ ಹೋಬಳಿಯಾಗಿದ್ದ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸಬೇಕೆಂಬ ಬೇಡಿಕೆ ಕಳೆದ ಕೆಲ ದಶಕಗಳಿಂದ ಚಾಲ್ತಿಯಲ್ಲಿತ್ತು. ಅದರಂತೆ ಹಲವಾರು ಹೋರಾಟದ ಫಲವಾಗಿ ೨೦೧೯-೨೦ರ ವಾರ್ಷಿಕ ಆಯವ್ಯಯ ಮಂಡನೆಯಲ್ಲಿ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸುವ ಘೋಷಣೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಾಡಿದ್ದಾರೆ.
 
==ಇತರ= ಸುತ್ತಮುತ್ತಲಿನ ದೇವಸ್ಥಾನಗಳು ===
 
==ಇತರ ದೇವಸ್ಥಾನಗಳು==
*ಹೊರನಾಡು - ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ - ಈ ದೇವಸ್ಥಾನ ಕಳಸದಿಂದ ೮ ಕಿ.ಮೀ ದೂರದಲ್ಲಿದೆ.<ref>http://srikshetrahoranadu.com/</ref>
*[http://www.onefivenine.com/india/villages/Chikmagalur/Mudigere/Haluvalli ಹಳುವಳ್ಳಿ] - ಶ್ರೀ ಸುಬ್ರಹ್ಮಣ್ಯ ದೇವಸ್ಥಾನ - ಇದು ಕಳಸದಿಂದ ೫ ಕಿ.ಮೀ ದೂರದಲ್ಲಿದೆ.
*ಬಾಳೆಹೊಳೆ - ಶ್ರೀ ಚೆನ್ನಕೇಶವ ದೇವಸ್ಥಾನ - ಇದು ಕಳಸದಿಂದ ೧೨ ಕಿ.ಮೀ ದೂರದಲ್ಲಿದೆ.<ref>https://www.tripoto.com/places-to-visit/in-karnataka/chennakeshwara-temple</ref>
 
===ಪ್ರೇಕ್ಷಣೀಯ ಸ್ಥಳಗಳು===
ಕಳಸದಿಂದ ೨೮ ಕಿ.ಮೀ ದೂರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಿದೆ<ref>http://www.karnatakaholidays.com/kudremukh-national-park.php</ref>. ಶೃಂಗೇರಿಯು ಕಳಸದಿಂದ ೫೧ ಕಿ.ಮೀ ದೂರದಲ್ಲಿದೆ.
 
=== ಇತರ ಊರುಗಳಿಂದ ಅಂತರ : ===
==ಉಲ್ಲೇಖ==
ಕಳಸಕ್ಕೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಸುಮಾರು ೧೧೦ಕಿಲೋಮೀಟರ್ ದೂರದಲ್ಲಿರುವ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ. ಬೆಂಗಳೂರಿನಿಂದ ಕಳಸಕ್ಕೆ ೩೧೦ ಕಿಲೋಮೀಟರ್ ದೂರವಿದೆ.
 
===ಉಲ್ಲೇಖ===
{{reflist}}
 
"https://kn.wikipedia.org/wiki/ಕಳಸ" ಇಂದ ಪಡೆಯಲ್ಪಟ್ಟಿದೆ