ಸದಸ್ಯ:Kumar Sharath/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಶ್ರೀ ವೀರನಾರಯಣ ಕ್ಷೇತ್ರ ಕ್ರತುಪುರ==
ಗದಗ ‘ಕ್ರತುಪುರ’ ಇದು ಗದುಗಿನ ಪುರಾತನ ಹೆಸರು. ಕ್ರತು ಎಂದರೆ ಯಜ್ಞ . ಕ್ರತಕಪುರವೆಂಬ ಯಜ್ಞಪುರ ಜನಮೇಜಯ ರಾಜನು ಇಲ್ಲಿ ಯಜ್ಞ ಮಾಡಿದನೆಂಬ ಪ್ರತೀತಿಯದೆ. ೨೩-೨-೧೨೧೩ರ ಶನಿವಾರದಂದು ಸ್ಥಾಪಿಸಲ್ಪಟ್ಟ ಒಂದು ಶಿಲಾಶಾಸನವು ಇಲ್ಲಿಯ ತ್ರಿಕೂಟೇಶ್ವರ ದೇವಸ್ಥಾನದ ಪ್ರಾಕಾರದ ಗೋಡೆಯಲ್ಲಿದ್ದು ಅದರಲ್ಲಿ ಗದುಗು ಎಂಬ ಶಬ್ಧ ಪ್ರಯೋಗವಿದೆ.
===ಇತಿಹಾಸ===
ಶಾಸನಗಳಲ್ಲಿ ಗದುಗು ಎಂಬ ಹೆಸರು ಪ್ರಪ್ರಥವಾಗಿ ಇಲ್ಲಿ ದೊರಕಿದೆ. ಮುಂದೆ ೧೪-೧೫ನೇ ಶತಮಾನದಲ್ಲಿ ಕುಮಾರವ್ಯಾಸ ಬರೆದ ಭಾರತದಲ್ಲಿ ಗದಗು ಎಂಬ ಹೆಸರು ಜನಪ್ರಿಯವಾಯಿತು. ಶಂಕರ ಕವಿಯ ಚೋರಬಸವ ಚರಿತ್ರೆ (೧೭೬೩)ಯಲ್ಲಿ ಮಹಾಕವಿ ಚಾಮರಸ ಹೂಟ್ಟೂರಿನ ಬಗ್ಗೆ ಹೇಳುವಾಗ ‘ನೀಂ ಪುಟ್ಟಿದೆಡೆ ಗದುಗು’ ಎಂದು ಪ್ರಸ್ತಾಪವಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ರಚಿತವಾದ ಕಿಟೆಲ್ ಕೋಶದಲ್ಲಿ ‘ಗದುಗು’ ಎನ್ನುವುದು ಸ್ಥಳನಾಮವೆಂದಿದೆ. ಶಾಸನ ಹಾಗೂ ಸಾಹಿತ್ಯ ಪ್ರಮಾಣಗಳಿಂದಾಗಿ ಗದುಗಿಗೆ ತನ್ನದೇ ಆದ ಕನ್ನಡದ ರೂಪ ನಿಷ್ಪತ್ತಿ ಇರುವುದು ಸ್ಪಷ್ಟ. ಕ್ರತುಪುರ ಎಂಬ ಹೆಸರು ಗದುಗು ಎಂದು ಬದಲಾವಣೆಗೊಳ್ಳುತ್ತಿದ್ದ ಹೊಸದರಲ್ಲಿ ಅಂದರೆ ೯-೧೦ನೇ ಶತಮಾನಗಳ ಮಧ್ಯಾವಧಿಯಲ್ಲಿಯೇ ಕ್ರತುಪುರ ಮಹಾತ್ಮೆ ಎಂಬ ಸ್ಥಳಪುರಾಣವು ರಚಿಸಲ್ಪಟ್ಟಿತು. ಇದು ಭವಿಷ್ಯೋತ್ತರ ಪುರಾಣದ ಒಂದು ಭಾಗ. ಇದು ಸಂಸ್ಕೃತ ಭಾಷೆಯ ಅನುಷ್ಟುಪ್ ಛಂದದಲ್ಲಿದೆ.ಇದು ಮೂಲತ ಶೈವಪುರಾಣ. ಶೈವರು ಹಾಗು ವೈಷ್ಣವರ ಮದ್ಯೆ ವೈಷಮ್ಯ ಮರೆಯಿಸಿ ಸ್ನೇಹ ಮನೋಭಾವ ಹುಟ್ಟಿಸುವುದೇ ಈ ಪುರಾಣದ ಉದ್ದೇಶವಾಗಿತ್ತು. ಶ್ರೀ ವೀರನಾರಯಣ ದೇವಸ್ಥಾನ ಗದುಗಿನಲ್ಲಿ ಶ್ರೀ ವೀರನಾರಯಣ ದೇವಸ್ಥಾನವನ್ನು ಹೊಯ್ಸಳ ವಿಷ್ಣುವರ್ಧನನು ೧೧೧೭ರಲ್ಲಿ ತಮ್ಮ ಗುರು ಶ್ರೀ ರಾಮಾನುಜಾಚಾರ್ಯರರ ಆಜ್ಞೆಯ ಪ್ರಕಾರ ಕಟ್ಟಿಸಿದನೆಂಬ ಪ್ರತೀತಿಯಿದೆ. ಅವನು ಕಟ್ಟಿಸಿದ ಪಂಚನಾರಯಣ ದೇವಾಲಯಗಳಲ್ಲಿ ಇದೂ ಒಂದು. ೧೦೩೭ರ ಒಂದು ಶಾಸನದ ಪ್ರಕಾರ ದಾಮೋದರ ಶೆಟ್ಟಿ ಎನ್ನುವ ಭಕ್ತರೊಬ್ಬರು ದೇವಾಲಯಕ್ಕೆ ಭೂದಾನ ಮಾಡಿದ ಉಲ್ಲೇಖವಿದೆ. ಈ ದೇವಾಲಯವೆ ಶ್ರೀ ವೀರನಾರಯಣ ದೇವಸ್ಥಾನ. ಇದನ್ನು ನಿರ್ಮಿಸಿದವನು ಮದ್ದಿಮಯ್ಯ ನಾಯಕನೆಂದು, ಅಲ್ಲಿ ದೀಪ ಸ್ತಂಭ ನಿಲ್ಲಿಸಿದವನು ಅವನ ಮಗನೆಂದು ತಿಳಿದುಬರುತ್ತದೆ. ೧೧೧೭ರಲ್ಲಿ ಹೊಯ್ಸಳ ವಿಷ್ಣುವರ್ಧನನು ಕಟ್ಟಿಸಿದ ಈ ದೇವಸ್ಥಾನದಲಿ ವೀರನಾರಯಣ ಮೂರ್ತಿಯು ರಾಜಕೀಯ ದಾಳಿಯಿಂದಾಗಿ ಭಗ್ನವಾದಾಗ ಸ್ಥಾನಿಕ ಆಚಾರ್ಯನಾದ ಕಾಳಾಮುಖ ಶೈವ ಪಂಥದ ಕ್ರಿಯಾಶಕ್ತಿ ಹಾಗೂ ವಿಶ್ವಕರ್ಮ ಸಮಾಜದ ವಾಮದೇವ ಎನ್ನುವವರು ಈ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿರಬಹುದು ಎಂದು ತಿಳಿಯಲಾಗುತ್ತಿದೆ. ಇಮ್ಮಡಿ ಹರಿಹರನ .ಕ್ರಿ,ಶ.೧೩೭೮ರ ದತ್ತಿ ಕೊಡುಗೆಗಳನ್ನು ಹೇಳುವ ತಾಮ್ರ ಶಾಸನವೊಂದು ಕ್ರಿಯಾಶಕ್ತಿ ಆಚಾರ‍್ಯರು ಆ ದೊರೆಗಳ ಗುರುಗಳಾಗಿದ್ದರು ಎಂದು ತಿಳಿಸುತ್ತದೆ. ಆದ್ದರಿಂದ ೧೩೭೯ರ ತಾಮ್ರ ಫಲಕಗಳಲ್ಲಿ ರಾಜಗುರುವಾದ ಶ್ರೀಮದ್ ರಾಜಗುರು ಮಹಾಮಂಡಳಾಚಾರ್ಯ ವಾಣೀವಿಲಾಸ ಕ್ರಿಯಾಶಕ್ತಿಯ ಸೂಚನೆಯ ಮೇರೆಗೆ ಇಮ್ಮಡಿ ಹರಿಹರನು ಕೊಟ್ಟ ದಾನಗಳ ಬಗ್ಗೆ ಉಲ್ಲೇಖ ಸಿಗುತ್ತದೆ.
೭ ನೇ ಸಾಲು:
===ವೃಂದಾವನ===
ಶ್ರೀ ಲಕ್ಷೀ ನರಸಿಂಹ ದೇವಸ್ಥಾನದ ಎದುರು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನವಿದೆ. ಈ ವೃಂದಾವನದ ಮೇಲೊಂದು ಚಿಕ್ಕ ಮಾರುತಿಯ ಅಷ್ಟಭುಜ ಮೂರ್ತಿಯಿದೆ. ಗುಡಿಯ ಪಶ್ಚಿಮ ಭಾಗದಲ್ಲಿ ಕಾನನವಿದ್ದು, ದೇವರಿಗೆ ಬೇಕಾದ ತುಳಸಿ, ಫಲ ಪುಷ್ಪಗಳು ವಿಪುಲವಾಗಿ ಬೆಳೆಯಲಾಗುತ್ತಿತ್ತು ಎಂಬ ಪ್ರತೀತಿಯಿದೆ.
 
==ಉಲ್ಲೇಖಗಳು==