ಅಭಿಧಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಬೌದ್ಧ ಧರ್ಮ using HotCat |
No edit summary |
||
೧ ನೇ ಸಾಲು:
ಅಭಿಧಮ್ಮ
==ಧರ್ಮಸ್ಕಂಧ==
ಪಿಟಕಗಳಲ್ಲಿ ಮೊದಲನೆಯದು ಭಿಕ್ಷುಗಳ ನಡೆವಳಿಕೆಗೆ ಸಂಬಂಧಿಸಿದುದೆಂದೂ ಎರಡನೆಯದು ಎಲ್ಲರಿಗೂ ಅಗತ್ಯವಾದ ಸಾಮಾನ್ಯ
==ಬೋಧನೆ==
ಶಾಕ್ಯಮುನಿ ಬುದ್ಧನಾದ ಮೇಲೆ ಸಂಬೋಧಿ ಒದಗಿದ ನಾಲ್ಕನೆಯ ವಾರದಲ್ಲಿ ಅಭಿಧರ್ಮವನ್ನು ಸ್ವೋಪಜ್ಞೆಯಿಂದ ಗ್ರಹಿಸಿದನೆಂದು ಸಂಪ್ರದಾಯ ಹೇಳುತ್ತದೆ. ತಾವತಿಂಸವೆಂಬ ಸ್ವರ್ಗದಲ್ಲಿ ಇದ್ದ ತನ್ನ ತಾಯಿಗೆ ಮೂರು ತಿಂಗಳ ಕಾಲ ಅಭಿಧರ್ಮವನ್ನು ಬೋಧಿಸಿದನೆಂದೂ ಸಂಪ್ರದಾಯದ ನಂಬಿಕೆ. ಆದರೆ ಅಭಿಧರ್ಮ ಬುದ್ಧ ವಚನದಲ್ಲಿಲ್ಲ. ಬುದ್ಧನ ಅನಂತರ ಬಂದ ದಾರ್ಶನಿಕರು ಬುದ್ಧವಚನಗಳಲ್ಲಿ ಅಡಗಿದ್ದ ತತ್ತ್ವಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಿನಯಪಿಟಕ ಸುತ್ತ ಪಿಟಕದಷ್ಟು ಅಭಿಧರ್ಮಪಿಟಕ ಪ್ರಾಚೀನವಲ್ಲವೆಂದು ಶೈಲಿಯಿಂದಲೂ ವಾಙ್ಮಯದಿಂದಲೂ ಸಂದರ್ಭಕಥನದಿಂದಲೂ ಸ್ಪಷ್ಟವಾಗುತ್ತದೆ. ಸಂಪ್ರದಾಯದಲ್ಲೇ ಒಂದು ವಿವರಣೆಯಿದೆ. ಅಭಿಧರ್ಮವನ್ನು ಬುದ್ಧ ತನ್ನ ಪ್ರೌಢಶಿಪ್ಯನಾದ ಶಾರಿಪುತ್ರನಿಗೆ ಮಾತೃಕೆಗಳಲ್ಲಿ ಸೂಕ್ಷ್ಮವಾಗಿ ಬೋಧಿಸಿದನೆಂದೂ ಸಮುದ್ರದ ಅಂಚಿನಲ್ಲಿ ನಿಂತು ಸಮುದ್ರದೆಡೆ ಕೈತೋರಿಸಿದಂತೆ ಶಾರಿಪುತ್ರ ತನ್ನ ಐನೂರು ಶಿಷ್ಯರಿಗೆ ಬೋಧಿಸಿದನೆಂದೂ ಅಟ್ಠಸಾಲಿನಿಯಲ್ಲಿ ಬರುವ ನಿರೂಪಣೆ. ಈ ಕಾರ್ಯದಲ್ಲಿ ಅವನ ಸತೀರ್ಥನಾಗಿದ್ದ ಮಹಾಕೊಟ್ಠಿತ ನೆರವಾದನಂತೆ. ಅಭಿಧಮ್ಮದ ಸಂಗ್ರಹಕಾರ್ಯ ಶಾರಿಪುತ್ರನಿಂದ ಆಯಿತೆಂದು ವ್ಯಾಖ್ಯಾನಕಾರನಾದ ಬುದ್ಧ ಘೋಷಾಚಾರ್ಯ ಒಪ್ಪುತ್ತಾನೆ; ಅಭಿಧರ್ಮಪಿಟಕದ ವಾಙ್ಮಯದಲ್ಲಿ ಏಳು ಪ್ರಕರಣ ಗ್ರಂಥಗಳಿವೆ. ಧರ್ಮಸಂಗಣಿ, ವಿಭಂಗ, ಧಾತುಕಥಾ, ಪುಗ್ಗಲಪಙÐತ್ತಿ, ಕಥಾಮತ್ಥು, ಯಮಕ ಮತ್ತು ಪಟ್ಠಾನ-ಇವೇ ಆ ಏಳು.<ref>https://www.budsas.org/ebud/whatbudbeliev/67.htm</ref>
|