ಸದಸ್ಯ:Kumar Sharath/ನನ್01ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ನೆಲ್ಲಿಕಾರು ಕರಾವಳಿ ತೀರದ ಪ್ರಮುಖ ಜಿನ ಕ್ಶೇತ್ರಗಳಲ್ಲಿ ಒಂದು .ದಕ್ಶಿಣಕನ್...
 
( ಯಾವುದೇ ವ್ಯತ್ಯಾಸವಿಲ್ಲ )

೧೫:೩೨, ೨೮ ನವೆಂಬರ್ ೨೦೧೯ ದ ಇತ್ತೀಚಿನ ಆವೃತ್ತಿ

ನೆಲ್ಲಿಕಾರು

ಕರಾವಳಿ ತೀರದ ಪ್ರಮುಖ ಜಿನ ಕ್ಶೇತ್ರಗಳಲ್ಲಿ ಒಂದು .ದಕ್ಶಿಣಕನ್ನಡಜಿಲ್ಲೆಯ ಮೂಡಬಿದಿರೆತಾಲ್ಲೂಕಿನ ಈ ಪುಟ್ಟಗ್ರಾಮ ಕ್ಕೆ ಕಾರ್ಕಳ-ಮೂಡಬಿದ್ರೆತೀರ ಪಟ್ಟಣಗಳು . ಕಾರ್ಕಳ ತಾಲೂಕಿನಗಡಿಭಾಗಕ್ಕೆ ಹೊಂದಿಕೊಡಿರುವ ಈ ಪ್ರದೇಶ ಮೂಡಬಿದಿರೆ - ಮೂಲ್ಕಿ ವಿಧಾನಸಭೆ ಕ್ಶೇತ್ರಕೊಳಪಟ್ಟರೆ , ಲೋಕಸಭಾಚುಣಾವಣೆಗೆ ಮಂಗಳೂರು ಕ್ಶೆತ್ರಕ್ಕೆ ಒಳಪಡುತ್ತದೆ . ಗ್ರಾಮದ ಪಿನ್ಕೊಡ್೫೭೪೧೦೭ . ಮಂಗಳೂರು ತಾಲೂಕಿನ ನೆಲ್ಲಿಕಾರುಒಂದು ಸಾಧಾರಣಹಳ್ಳಿ ಆದರೂಅದರ ಹೆಸರುಜಿಲ್ಲೆಯ ಒಳಗೂ ಹೊರಗೂ ಹರಡಿದೆ.ಇದಕ್ಕೆ ಮುಖ್ಯಕಾರಣ ಸಮೀಪದ ಗುಡ್ಡೆಗಳಲ್ಲಿ ದೊರೆಯುವಒಂದು ವಿಶಿಷ್ಠ ರೀತಿಯ ಕಪ್ಪುಶಿಲೆ ಇದು ನೆಲ್ಲಿಕಾರು ಶಿಲೆಯೆಂದೆ ಪ್ರಸಿದ್ಧಿ. ಮಲೆನಾಡ ಸೆರಗಲ್ಲಿದ್ದುಯಾವಗೌಜು ಗದ್ದಲಗಳಿಗೆ ಹೋಗದೆ ಪ್ರಶಾಂತವಾಗಿರುವಊರು, ಆದ್ದರಿಂದಲೇಇದು ಮುನಿಗಳಿಗೆ ವಾಸಸ್ಥಾನವಾಗಿತ್ತು. ಕಲ್ಯಾಣಕೀರ್ತಿ ಎಂಬ ಯತಿವರ್ಯರುಇಲ್ಲಿಕೈಂಕರ್ಯ ನಡೆಸಿದ್ದರು.ಎಲೆಮರೆಯ ಕಾಯಿಯಂತೆಇದ್ದುಕಾವ್ಯಗAಗೆಯನ್ನು ಹರಿಸಿದ ಕವಿ ಕಲ್ಯಾಣಕೀರ್ತಿ ನೆಲ್ಲಿಕಾರಿನವರು. ನೆಲ್ಲಿಕಾರಿನ ಬಸದಿ ಇವರಕೊಡುಗೆ. ಕಲ್ಪನಾ ಲೋಕದ ವಿಶೇಷವೆಂದು ಭಾಸವಾಗುವ ಈ ಸಂಗತಿ ಐತಿಹಾಸಿಕ ಸತ್ಯ.ಇದಕ್ಕೆ ಶಾಸನಾಧಾರಗಳು ಇವೆ. ತಾಲೂಕಿಗೆ ಮಾತ್ರಅಲ್ಲಜಿಲ್ಲೆಗೆ ಪ್ರಪ್ರಥಮಕನ್ನಡ ಕವಿ ಕಲ್ಯಾಣಕೀರ್ತಿ.ಈತನ ಮೊದಲ ಕಾವ್ಯಜಿನಯಜ್ಞಫಲೋದಯ.ಈಕಾವ್ಯಕ್ರಿ.ಶ ೧೪೨೮ರಲ್ಲಿ ಪೂರ್ಣವಾಗಿತ್ತು ಹಾಗೆಂದುಕವಿಯೇತನ್ನಕಾವ್ಯದಕೊನೆಯಲ್ಲಿ ತಿಳಿಸಿದ್ದಾರೆ. ನೆಲ್ಲಿಕಾರಿನ ಹಿಂದಿನ ಹೆಸರುಅಮಲಕಪುರಊರ ಮಧ್ಯ ವಿಶಾಲ ಪ್ರಾಂಗಣದಲ್ಲಿ ಭ.ಅನಂತನಾಥ ಸ್ವಾಮಿಯ ದಿವ್ಯ ಬಸದಿಯಿದೆ.ಇದುಕ್ರಿ.ಶ ೧೪೨೫ರ ವೇಳೆಗೆ ಸ್ಥಾಪಿತವಾದ ಬಸದಿಯೆಂದುಇತಿಹಾಸಕಾರರು ಹೇಳುತ್ತಾರೆ.ಮುಖ್ಯವಾಗಿ ವಿಜಯನಗರ ವಾಸ್ತು ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ.ಈ ಶಿಲಾ ಬಸದಿಯುಎರಡು ಅಂತಸ್ತಿನ ಸುಂದರವಾದಕಟ್ಟಡ . ಗರ್ಭಗೃಹದಲ್ಲಿ ವಿರಾಜಮಾನರಾದ ಭ.ಅನಂತನಾಥ ಸ್ವಾಮಿಯ ಮೂಲವಿಗ್ರಹವು ಹೊಯ್ಸಳ ಶೈಲಿಯಗಂಭೀರರಚನೆ .ಮೇಗಿನ ನೆಲೆಯಲ್ಲಿಅತಿಸುಂದರ ಭ.ಚಂದ್ರನಾಥರ ವಿಗ್ರಹವೂಇದೆ.

ನೆಲ್ಲಿಕಾರುರಥೋತ್ಸವವುತನ್ನದೇಆದ ವೈಶಿಷ್ಟ್ಯತೆಯಿಂದ ಕೂಡಿದೆ .ಹಾಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.ನಾಡಿನಜೈನಜೈನೇತರರೂಇದರಲ್ಲಿ ಸಂಭ್ರಮದಿAದ ಪಾಲ್ಗೊಳ್ಳುತ್ತಾರೆ .ಪ್ರತೀ ಸಂವತ್ಸರದಆದಿಯ ಪಾಡ್ಯದ ದಿನ ಧ್ವಜಾರೋಹಣವಾಗಿ ಷಷ್ಠಿಯತನಕ ವಿದ್ಯುಕ್ತವಾಗಿಧಾರ್ಮಿಕ ಕಾರ್ಯಕ್ರಮಗಳು ಜರಗುತ್ತವೆರಥೋತ್ಸವದ ಮೊದಲ ದಿನ ಅಂದರೆ ಪಂಚಮಿಯAದು ಭ. ಚಂದ್ರಪ್ರಭ ಸ್ವಾಮಿಗೆ ಅಟ್ಟಳಿಗೆಯ ಮೇಲೆ ಅಭಿಷೇಕ ಹಾಗೂ ನಿರ್ದಿಷ್ಟವಾದಕೆಲವು ಕಟ್ಟೆಗಳಲ್ಲಿಕಟ್ಟೆಪೂಜೆ ಉತ್ಸವವು ನಡೆಯುತ್ತದೆ.

ಬಸದಿಯ ಒಳಾಂಗಣದಲ್ಲಿ ಕ್ಷೇತ್ರಪಾಲರ ಸ್ಥಂಭವಿದೆ .ಹೊರಗಿನ ವಿಶಾಲ ಪ್ರಾಂಗಣದ ನಾಲ್ಕೂ ಕಡೆಯೂ ಬಸದಿಗೆ ರಕ್ಷಣೆಯಕೋಟೆಯಂತೆ ಶ್ರಾವಕರ ಮನೆಗಳಿವೆ. ಶಾಸ್ತ್ರಸಾರ ಸಮುಚ್ಚಯಕನ್ನಡಟೀಕು ಬರೆದ ಮುನಿ ಮಾಘನಂದ್ಯಾಚಾರ್ಯರುಇಲ್ಲಿಯ ಚೈತ್ಯವಾಸಿಗಳು.ಈ ಗ್ರಂಥದಲ್ಲಿತಮ್ಮ ಪೂರ್ವವಿಚಾರವನ್ನು ತಿಳಿಸಿರುವುದಿಲ್ಲ ಆದರೆಗ್ರಂಥವನ್ನು ನೆಲ್ಲಿಕಾರಿನ ಬಸದಿಯಲ್ಲಿ ಬರೆದದ್ದಾಗಿ ತಿಳಿಸುತ್ತಾರೆ.ಹೊಂಬುಜ ಕ್ಷೇತ್ರದ ಹಿಂದಿನ ಗುರುಗಳಾದ ದೇವೇಂದ್ರಕೀರ್ತಿ ಸ್ವಾಮಿಗಳು, ಶ್ರೀ ಕ್ಷೇತ್ರ ಶ್ರವಣಬೆಳ್ಗೊಳದ ಗುರು ಶ್ರೀ ಚಾರುಕೀರ್ತಿ ಸ್ವಾಮಿಗಳವರು ನೆಲ್ಲಿಕಾರಿನವರು. ನೆಲ್ಲಿಕಾರಿನಗಣ್ಯರಲ್ಲಿ ದಿವಂಗತಎನ್. ಎಸ್‌ಜೈನಿ ಒಬ್ಬರು ಶಾಲೆಯ ಶಿಕ್ಷಕ ವೃತ್ತಿಯನ್ನು ನಡೆಸುತ್ತಿದ್ದಇವರು ಹಿಂದಿ ಮರಾಠಿ ಸಂಸ್ಕೃತಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದವರು,ದಿ.ರಾಧಮ್ಮನವರು ದಿ. ಎನ್‌ಎಸ್‌ಜೈನಿಯವರಧರ್ಮಪತ್ನಿ .ಜೈನಮಹಿಳೆ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ರಾಧಮ್ಮನವರು ಹಲವಾರು ಭಜನೆ ಕೀರ್ತನೆಗಳನ್ನು ಬರೆದವರು, ವರ್ಧಮಾನಚರಿತ್ರೆಯನ್ನು ಸಾಂಗತ್ಯದಲ್ಲಿ ಬರೆದಿದ್ದಾರೆ. ಚಂದಯ್ಯ ಶಾಸ್ತ್ರಿಯವರು ನೆಲ್ಲಿಕಾರಿನ ಬಸ್ತಿಯಲ್ಲಿ ಪ್ರತಿನಿತ್ಯ ಶಾಸ್ತ್ರ ಪಠಣವನ್ನುಮಾಡಿಜನರಲ್ಲಿಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿದವರು ಭಜನೆಕೀರ್ತನೆ ಗಳನ್ನು ರಚಿಸಿದವರು.ಇನ್ನು ಯಾದವರು ಪ್ರಖಾಂಡ ಪಂಡಿತರಾಗಿದ್ದು ಧವಳ ಗ್ರಂಥದಅನುವಾದಕಾರ್ಯದಲ್ಲಿ ತೊಡಗಿಸಿಕೊಂಡವರು,ಹಲವಾರು ಭಕ್ತಿಗೀತೆಗಳನ್ನು ರಚಿಸಿ ಹಾಡುವುದು ಮಾತ್ರವಲ್ಲ ಮಕ್ಕಳಿಗೆ ಸಂಗೀತ ಪಾಠವನ್ನುಕೂಡ ಹೇಳಿಕೊಟ್ಟು ಮಕ್ಕಳಲ್ಲಿ ಜಿನಭಕ್ತಿಉಂಟು ಮಾಡಿದವರು. ಹೀಗೆ ಒಟ್ಟಿನಲ್ಲಿ ನೆಲ್ಲಿಕಾರುಒಂದು ಸುಸಂಸ್ಕ್ರತ ಸ್ಥಳವಾಗಿದ್ದು ಧರ್ಮ ಮತ್ತುಜ್ಞಾನ ಪ್ರಸಾರಕಾರ್ಯಇಲ್ಲಿಅವಿಚ್ಛಿನ್ನವಾಗಿ ನಡೆದಿತ್ತು.ಈಗಲು ನಡೆಯುತ್ತಾಇದೆ.ನೆಲ್ಲಿಕಾರು ಶಿಲೆಗಷ್ಟೆ ಅಲ್ಲದೆಜೈನ ಸಂಸ್ಕೃತಿ ಹಾಗೂ ಸಾಹಿತ್ಯ ಬೆಳವಣಿಗೆಗೂ ಸುಂದರ ಪ್ರಶಾಂತತಾಣವಾಗಿ ಬೆಳೆದು ನಿಂತಿದೆ.

(ಎಸ್.ಡಿ ಶೆಟ್ಟಿ ಮತ್ತುಡಾ|ಪಿ.ಎನ್ ನರಸಿಂಹಮೂರ್ತಿ ಇವರು ಬರೆದ ಲೇಖನಗಳಿಂದ ಸಂಗ್ರಹಿಸಿ ಬರೆಯಲಾಗಿದೆ) ಕ್ರಪೆ :-ಅಜಿತ್‌ಜೈನ್ ನಾರಾವಿ