ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
→Newbie Biting: MY response ಟ್ಯಾಗ್: 2017 source edit |
|||
೫೮೪ ನೇ ಸಾಲು:
ಕಾಮನ್ಸ್ನಲ್ಲಿ ಭರತೇಶರ ವಿರುದ್ಧ ಲೋಕೇಶರ ನಡವಳಿಕೆಯೂ ಈ ನಿರ್ಧಾರಕ್ಕೆ ಕಾರಣವೇ? --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೬:೩೯, ೨೩ ಅಕ್ಟೋಬರ್ ೨೦೧೯ (UTC)
: [[ಸದಸ್ಯ:Gopala Krishna A|ಗೋಪಾಲಕಷ್ಣ]] ನಿಮ್ಮ ಮಾತಿನಲ್ಲಿ ತುಂಬ ವ್ಯಂಗ್ಯಗಳಿವೆ. ಬಹಳ ಹಿಂದೆ ವಿಕಿಪೀಡಿಯದ ಒಳ ಜಗಳದ ಬಗ್ಗೆ ಕ್ರೈಸ್ಟ್ನಲ್ಲಿ ಸಭೆ ನಡೆಸಿ ಸರಿಪಡಿಸಲು ಪ್ರಯತ್ನಿಸಿದ್ದೀರಿ. ಅದು ಯಾರ ಪರವಾದ ಪ್ರಯತ್ನವೆಂದು ಈಗ ಸ್ಪಷ್ಟವಾಗುತ್ತಿದೆ. ಲೇಖನ ಮಾಡುವಾಗ ಬಂದು ಟೆಂಪ್ಲೆಟ್ ಹಾಕುವವರಿಗೆ ಅದೇ ಲೇಖನವನ್ನು ಇನ್ನಷ್ಟು ಉನ್ನತೀಕರಿಸಲು ಪ್ರಯತ್ನಿಸಬಹುದಲ್ವಾ? ಯಾವಾಗ ಲೇಖನವನ್ನು ಮುಗಿಸಿದ್ದಾರೆ ಎಂಬುದೂ ತಿಳಿಯದಷ್ಟು ಜವಾಬ್ದಾರಿಯನ್ನೂ ತಿಳಿಯದ ಸಂಪಾದಕರಿಗೆ ಏನನ್ನಬೇಕು. ಬರೇ ಟೆಂಪ್ಲೆಟ್, ಅಲಿಸುವುದು, ಟೀಕೆ ಇಷ್ಟಕ್ಕೇ ಒಬ್ಬರು ಇದ್ದರೆ ಸಾಕೇ? ವಿಕಿಪೀಡಿಯದ ನಿರೀಕ್ಷೆ ಒಂದು ಲೇಖನವನ್ನು ಹಲವರು ಸೇರಿ ತಯಾರಿಸುವುದು. ಒಬ್ಬರು ಬರೆದದ್ದು ಸರಿಯಿಲ್ಲವೆಂದು ಇನ್ನೊಬ್ಬರು ದೂರುವುದು. ಹೀಗೇ ಆದರೆ ವಿಕಿಪೀಡಿಯದಲ್ಲಿ ಯಾಕೆ ಬರೆಯಬೇಕು? ಅಡ್ಮಿನ್ ಬೈಸಿಕೊಂಡು ವಿಕಿಪೀಡಿಯ ಕೆಲಸ ಮಾಡಬೇಕಾ? ಕಾಮನ್ಸ್ನಲ್ಲಿ ಹಾಕಿರುವ ಚಿತ್ರಗಳಿಗೆ ಗುಣಮಟ್ಟ ಸರಿ ಇಲ್ಲವೆಂದು ತೀರ್ಮಾನಿಸುವ ಏಕಾಏಕಿ ನಿರ್ಧಾರವೂ ಸರಿಯೇ? ದ್ವೇಷ ಮಾಡುವಿರಾದರೆ ವಿಕಿಪೀಡಿಯ ಲೇಖನವನ್ನು ಬರೆಯುವವರು ಯಾರು? ಬಹಳ ಹಿಂದೆ ಅಲೋಶಿಯಸ್ ಕಾಲೇಜಿನಲ್ಲಿ ಗುಣಮಟ್ಟದ ಲೇಖನಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿದ್ದೆವು. ಅದರಲ್ಲಿ ನೀವೂ ಒಬ್ಬರಿದ್ರಿ. ಅಂತಹ ಯಾವುದೇ ಕೆಲಸಗಳ ನೆನಪು ಈಗ ಇಲ್ಲವೇ? ನನಗನಿಸುತ್ತದೆ ಕೆಲಸಕ್ಕಿಂತ ಪಿತೂರಿಯೇ ಹೆಚ್ಚಾಯಿತು ಅಂತ. --[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೩:೪೩, ೨೪ ಅಕ್ಟೋಬರ್ ೨೦೧೯ (UTC)
::ವಿಕಿಪೀಡಿಯಾ ಸಂಪಾದನೋತ್ಸವ ಇತ್ಯಾದಿಗಳಲ್ಲಿ ತರಬೇತಿಕೊಡುತ್ತಿರುವ ನೀವುಗಳೆಲ್ಲಾ ಈ ರೀತಿಯ ವಾಗ್ಯುದ್ಧಕ್ಕೆ ಇಳಿದಿರುವುದು ಬೇಸರದ ವಿಷಯ. ಟೆಂಪ್ಲೇಟ್ ಹಾಕುವುದು ಕೂಡ ಒಂದು ಸಂಪಾದನೆಯೇ, ಅದನ್ನು ತಿಳಿಸಿ ಹೇಳುವುದೂ ಒಂದು ಕೆಲಸವೇ. ಒಬ್ಬರ ಕೆಲಸ ಮಾತ್ರ ದೊಡ್ಡದು, ಒಬ್ಬರದು ಚಿಕ್ಕದು ಎಂದು ತೋರಿಸುವ ಕಾರ್ಯ ಸಮುದಾಯಕ್ಕೆ ಒಳ್ಳೆಯದಲ್ಲ. ಆ ಟೆಂಪ್ಲೇಟು ಸೃಷ್ಟಿಸಿದವರಲ್ಲಿ ಒಬ್ಬನಾದ ನಾನು ಅದರ ಹಿಂದೆಯ ಚರ್ಚೆಯಲ್ಲಿ ಇಲ್ಲಿರುವ ಅನೇಕರು ಭಾಗಿಯಾಗಿದ್ದರೆಂದು ಮಾತ್ರ ಹೇಳಲು ಇಷ್ಟಪಡುತ್ತೇನೆ. ಇಲ್ಲಿನ ಸಂದೇಶಗಳನ್ನು ನೋಡಿದಾಗ ಅರಳೀಕಟ್ಟೆಯ ಹೊರಗೆ ಕನ್ನಡ ವಿಕಿ ಸಮುದಾಯ ಮತ್ತು ಅದರ ನಡವಳಿಕೆ ಹಾಗೂ ಅಲ್ಲಿಯ ಮಾತುಕತೆಗಳು ಇಲ್ಲಿನ ಸಂವಹನದ ಆರೋಗ್ಯದ ಬಗ್ಗೆ ಒಂದು ಕಿರುನೋಟವನ್ನೇ ನೀಡುತ್ತವೆ. ಯಾವುದೇ ವ್ಯಕ್ತಿ/ನಿರ್ವಾಹಕ ಮೊದಲಿಗೆ ತಮ್ಮ ಕೆಲಸ/ಜವಾಬ್ದಾರಿಯ ಬಗ್ಗೆ ಅನುಮಾನಗಳಿದ್ದಲ್ಲಿ ಮೊದಲು ಅದನ್ನು ಸಮುದಾಯದ ಮುಂದಿಡಬೇಕು. ಇತರರು ಅದನ್ನು ಪ್ರಶ್ನಿಸುವುದಕ್ಕೂ ಇಲ್ಲಿ ಅವಕಾಶವಿದೆ. ಮಹಿಳೆಯರ ಮೇಲೆ ದೌರ್ಜನ್ಯ/Harassment - 'ಜೊತೆಗೆ ಹೊರಗೆ ಆಡಿದ ಮಾತುಗಳು' ಹೀಗೆ ನಾನು ಇಲ್ಲಿ ಓದಿದ ಮಾತುಗಳು ಯಾರ ಬಗ್ಗೆಯೂ ಗೌರವದ ಭಾವನೆ ಬೆಳೆಸುವುದಿಲ್ಲ. ಈ ಮಾತುಗಳನ್ನು ಓದುವವರಿಗೆ ನೀವು ಹೇಳಬೇಕೆಂದಿರುವ ಮಾತು ತಲುಪದೇ ಬೇರೆಯದೇ ಅರ್ಥ ಕೊಡುತ್ತವೆ. ಇವುಗಳನ್ನು ಪುನರ್ವಿಮರ್ಶಿಸಿಕೊಂಡು ಸಂಪಾದನೆಯಲ್ಲಿ ಮತ್ತೆ ತೊಡಗುತ್ತೀರಿ ಎಂದು ಭಾವಿಸುತ್ತೇನೆ. ಲೋಕೇಶ್ ಅವರನ್ನು ಬ್ಲಾಕ್ ಮಾಡುವ ಮೊದಲು ಅದನ್ನು ಬ್ಲಾಕ್ ಮಾಡುತ್ತಿರುವ ಬಗ್ಗೆ ಅರಳಿಕಟ್ಟೆಯಲ್ಲಿ ಬರೆದಂತಿಲ್ಲ. ಅವರಿಗೂ ಅಲ್ಲಿ ಉತ್ತರಿಸಲಿಕ್ಕೆ ಒಂದು ಅವಕಾಶ ಕೊಡಬೇಕಿತ್ತು. ಇದನ್ನು ಸರಿಪಡಿಸಿ. ಧನ್ಯವಾದಗಳು ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೦೫:೩೮, ೩೦ ಅಕ್ಟೋಬರ್ ೨೦೧೯ (UTC)
== Feedback wanted on Desktop Improvements project ==
|