ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಬರದಟ್ಟು್- ಬರದಷ್ಟು ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
ಅಚ್ಚು ಕಟ್ಟಾಗಿ ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
||
೨೧೦ ನೇ ಸಾಲು:
ಸತ್ ಚಿತ್ ಸ್ವರೂಪಿಯಾದ [[ಆತ್ಮ|ಆತ್ಮನೇ]] ಬ್ರಹ್ಮ. ಆದರೆ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯವನ್ನು ಗುರುತಿಸಲು ಸಾಧ್ಯವಾಗದಂತೆ ಜಗತ್ತನ್ನು [[ಮಾಯೆ|ಮಾಯೆಯು]] ಆವರಿಸಿದೆ. ಮಾಯೆಯ ಆವೃತ್ತಿಯು ಎಷ್ಟು ಘನವಾದುದೆಂದರೆ ಅದರ ಅಸ್ತಿತ್ವವೇ ಅನುಭವಕ್ಕೆ ಬರದಷ್ಟು. ಮಾಯೆಯ ಸಂಸರ್ಗದಿಂದಾಗಿ ಲೋಕದಲ್ಲಿ ಭಿನ್ನತೆಗಳೂ, ಭೇದಗಳೂ ಕಾಣಿಸತೊಡಗುತ್ತವೆ. ಮಾಯೆಯು ಲೌಕಿಕ ಜಗತ್ತಿನಲ್ಲಿ ತನ್ನನ್ನು ತಾನೇ ಅನೇಕ ರೂಪಾಂತರಗಳಾಗಿ ಮಾರ್ಪಡಿಸಿಕೊಳ್ಳುತ್ತದೆ. ಜೀವಿಗಳಲ್ಲಿರುವ ಭೇದವೂ, ಹೆಣ್ಣು - ಗಂಡುಗಳೆಂಬ ಭೇದವೂ, ಪ್ರಾಣಿ - ಪಕ್ಷಿಗಳೆಂಬ ಪ್ರಭೇದಗಳೂ, ಗಿಡ - ಮರಗಳೂ, ನಿರ್ಜೀವ ವಸ್ತುಗಳೂ - ಹೀಗೆ ಜಗತ್ತಿನಲ್ಲಿ ಕಾಣ ಸಿಗುವ ಎಲ್ಲ ರೀತಿಯ ಭಿನ್ನತೆಗಳೂ ಮಾಯೆಯಿಂದ ಉಂಟಾದವು. ಈ ಮಾಯೆಯಿಂದಾಗಿ ಸಾಧಾರಣ ಜೀವಿಗೆ ತನ್ನ ಕಣ್ಣು ಮೊದಲಾದ ಇಂದ್ರಿಯಗಳ ಮೂಲಕ ಲೋಕದಲ್ಲಿನ ಈ ಭಿನ್ನತೆಗಳೇ ವಸ್ತುವಿನ ನಿಜ ಸ್ವರೂಪವೆಂದು ಭಾಸವಾಗುತ್ತದೆ. ಆದರೆ ವಸ್ತುತ: ಇವೆಲ್ಲವೂ ಮೂಲ ಬ್ರಹ್ಮದ ಸ್ವರೂಪವೇ ಆಗಿರುವ ವಿಚಾರವನ್ನು ಆತ್ಮದ ಅರಿವಿಗೆ ಬರದಂತೆ ಮಾಯೆಯು ತಡೆಯೊಡ್ಡುತ್ತದೆ. ಯಾವುದು ವಾಸ್ತವದಲ್ಲಿ ಇಲ್ಲವೇ ಇಲ್ಲವೋ ಅದು ಇರುವಂತೆ ಭಾಸವಾಗುವುದು ಮಾಯೆಯ ಪ್ರಭಾವದಿಂದಾಗಿ.
ಸತ್ಯವನ್ನು ಮಾಯೆಯ ಆವರಣವು ಆವರಿಸಿಕೊಂಡಿದೆ. ಮಾಯೆಯ ಘನಸ್ವರೂಪವು ಇಡೀ ಸತ್ಯವನ್ನು ಕಾಣದಂತೆ ತೆರೆ ಹಿಡಿದಿರುತ್ತದೆ. ಪ್ರತಿ ಮಾನವನೂ ತನ್ನ ಸುತ್ತಲಿನ ಜಗತ್ತಿನಲ್ಲಿ ಅನೇಕತೆಯನ್ನು ಕಾಣುವಂತೆ ಮಾಡುತ್ತದೆ ಮಾಯೆ. ಸತ್ಯವನ್ನರಿಯಲಾಗದ ಮಾನವನು ಈ ಜಗತ್ತಿನಲ್ಲಿ ನಾನು, ನನ್ನದು ಎಂದು ಸ್ವಂತಿಕೆಯನ್ನು, ಅಹಂಕಾರವನ್ನೂ ಬೆಳೆಸಿಕೊಳ್ಳುತಾನೆ. ಇದೇ [[ಅವಿದ್ಯೆ]].
'ಅದ್ವೈತ ಅಂದರೆ ಎರಡನೆಯದಿಲ್ಲದ್ದು. ಇದು ಶಂಕರರು ಸ್ಥಾಪಿಸಿದ್ದಲ್ಲ. ಅದ್ವೈತ ಪದವು ಮಾಂಡೂಕ್ಯ ಉಪನಿಷತ್ತಿನ ಮಂತ್ರದಲ್ಲಿ ಹೀಗಿದೆ - ’ನಾಂತಃ ಪ್ರಜ್ಞಮ್ ನ ಬಹಿಷ್ಪ್ರಜ್ಞಮ್ ನೋಭಯತಃ ಪ್ರಜ್ಞಮ್---- ಶಾನ್ತಮ್ ಶಿವಮ್ ಅದ್ವೈತಮ್ ಚತುರ್ಥಮ್ ಮನ್ಯನ್ತೇ ಸ ಆತ್ಮಾ ಸವಿಜ್ಞೇಯಃ ||’ ಎಂದು ತಿಳಿಸುತ್ತಿದೆ. ಶಂಕರರು ಇದನ್ನು ತೋರಿಸಿಕೊಟ್ಟಿದ್ದಾರೆ. ಅವರು ಅದ್ವೈತಮತ ಸ್ಥಾಪನಾಚಾರ್ಯರಲ್ಲ. ಮತ ಎಂದರೆ ಒಬ್ಬರ ಅಭಿಪ್ರಾಯ. ಶಂಕರರು ತೋರಿಸಿರುವ ತತ್ತ್ವ ಸಾರ್ವತ್ರಿಕ
ಅಚ್ಚು ಕಟ್ಟಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಭಗವಾನ್ ಶಂಕರರಂತೆ ನಮ್ಮೆಲ್ಲರ ದುಃಖಗಳಿಗೂ ಅಜ್ಞಾನವೇ( ಜ್ಞಾನಾಭಾವ, ಸಂಶಯ ಜ್ಞಾನ, ವಿಪರೀತ ಜ್ಞಾನ) ಕಾರಣ. ಇದು ಪ್ರತ್ಯಯರೂಪ ( ಮಾನಸಿಕ). ಅದ್ವೈತತತ್ತ್ವವನ್ನು ಸಕಲ ಮಾನವರೂ ಅರ್ಥಮಾಡಿಕೊಳ್ಳಬಹುದು, ಇದಕ್ಕೆ ಜಾತಿ, ಮತ, ಲಿಂಗ, ದೇಶ ಇವುಗಳ ಪರಿಮಿತಿ ಇಲ್ಲ. ಬ್ರಹ್ಮ ಸತ್ಯಮ್ ಜಗನ್ಮಿಥ್ಯಾ -ಎಂಬುದು ವೇದದ ವಾಕ್ಯವಲ್ಲ ಹಾಗೂ ಶಂಕರರು ಹೇಳಿಲ್ಲ. ಇದು
ಆತ್ಮನು ಸತ್ತಮೇಲೆ ಬ್ರಹ್ಮ ಆಗುವುದಿಲ್ಲ ತಿಳಿದಿರಲಿ ತಿಳಿಯದಿರಲಿ ಇರುವುದೇ ಬ್ರಹ್ಮ ಸ್ವರೂಪ.
ವೇದಾಂತದ ಸಂದೇಶಗಳು ಅರ್ಥವಾಗಲು , ಅನುಭವಕ್ಕೆ ಬರಲು ೪ ಯೋಗ್ಯತೆಗಳು ಬೇಕೇ ಬೇಕು- ೧. ನಿತ್ಯಾನಿತ್ಯ ವಸ್ತುವಿವೇಕ, ೨. ಇಲ್ಲಿನ ಮತ್ತು ಪರಲೋಕದ ಫಲ, ಭೋಗಗಳಲ್ಲಿ ವಿರಾಗ, ೩. ಶಮಾದಿ ಸಾಧನ ಸಂಪತ್ತು, ಮತ್ತು ೪. ಮುಮುಕ್ಷುತ್ವ( ನನ್ನ ನಿಜ ಸ್ವರೂಪವನ್ನು ಹೇಗಾದರೂ ತಿಳಿಯಲೇಬೇಕು ಎಂಬ ತವಕ).
|