ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಖಂಡಿಸಿದರು- ಖಚಿಸಿದರು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಬರದಟ್ಟು್- ಬರದಷ್ಟು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೦೮ ನೇ ಸಾಲು:
== ಮಾಯಾವಾದ - [[ಅವಿದ್ಯೆ]] ==
ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಪ್ರಮುಖ ಅಂಗ 'ಮಾಯಾವಾದ'.
ಸತ್ ಚಿತ್ ಸ್ವರೂಪಿಯಾದ [[ಆತ್ಮ|ಆತ್ಮನೇ]] ಬ್ರಹ್ಮ. ಆದರೆ ಬ್ರಹ್ಮ ವಸ್ತುವಿನೊಡನೆ ಇರುವ ತಾದಾತ್ಮ್ಯವನ್ನು ಗುರುತಿಸಲು ಸಾಧ್ಯವಾಗದಂತೆ ಜಗತ್ತನ್ನು [[ಮಾಯೆ|ಮಾಯೆಯು]] ಆವರಿಸಿದೆ. ಮಾಯೆಯ ಆವೃತ್ತಿಯು ಎಷ್ಟು ಘನವಾದುದೆಂದರೆ ಅದರ ಅಸ್ತಿತ್ವವೇ ಅನುಭವಕ್ಕೆ ಬರದಟ್ಟುಬರದಷ್ಟು. ಮಾಯೆಯ ಸಂಸರ್ಗದಿಂದಾಗಿ ಲೋಕದಲ್ಲಿ ಭಿನ್ನತೆಗಳೂ, ಭೇದಗಳೂ ಕಾಣಿಸತೊಡಗುತ್ತವೆ. ಮಾಯೆಯು ಲೌಕಿಕ ಜಗತ್ತಿನಲ್ಲಿ ತನ್ನನ್ನು ತಾನೇ ಅನೇಕ ರೂಪಾಂತರಗಳಾಗಿ ಮಾರ್ಪಡಿಸಿಕೊಳ್ಳುತ್ತದೆ. ಜೀವಿಗಳಲ್ಲಿರುವ ಭೇದವೂ, ಹೆಣ್ಣು - ಗಂಡುಗಳೆಂಬ ಭೇದವೂ, ಪ್ರಾಣಿ - ಪಕ್ಷಿಗಳೆಂಬ ಪ್ರಭೇದಗಳೂ, ಗಿಡ - ಮರಗಳೂ, ನಿರ್ಜೀವ ವಸ್ತುಗಳೂ - ಹೀಗೆ ಜಗತ್ತಿನಲ್ಲಿ ಕಾಣ ಸಿಗುವ ಎಲ್ಲ ರೀತಿಯ ಭಿನ್ನತೆಗಳೂ ಮಾಯೆಯಿಂದ ಉಂಟಾದವು. ಈ ಮಾಯೆಯಿಂದಾಗಿ ಸಾಧಾರಣ ಜೀವಿಗೆ ತನ್ನ ಕಣ್ಣು ಮೊದಲಾದ ಇಂದ್ರಿಯಗಳ ಮೂಲಕ ಲೋಕದಲ್ಲಿನ ಈ ಭಿನ್ನತೆಗಳೇ ವಸ್ತುವಿನ ನಿಜ ಸ್ವರೂಪವೆಂದು ಭಾಸವಾಗುತ್ತದೆ. ಆದರೆ ವಸ್ತುತ: ಇವೆಲ್ಲವೂ ಮೂಲ ಬ್ರಹ್ಮದ ಸ್ವರೂಪವೇ ಆಗಿರುವ ವಿಚಾರವನ್ನು ಆತ್ಮದ ಅರಿವಿಗೆ ಬರದಂತೆ ಮಾಯೆಯು ತಡೆಯೊಡ್ಡುತ್ತದೆ. ಯಾವುದು ವಾಸ್ತವದಲ್ಲಿ ಇಲ್ಲವೇ ಇಲ್ಲವೋ ಅದು ಇರುವಂತೆ ಭಾಸವಾಗುವುದು ಮಾಯೆಯ ಪ್ರಭಾವದಿಂದಾಗಿ.
ಸತ್ಯವನ್ನು ಮಾಯೆಯ ಆವರಣವು ಆವರಿಸಿಕೊಂಡಿದೆ. ಮಾಯೆಯ ಘನಸ್ವರೂಪವು ಇಡೀ ಸತ್ಯವನ್ನು ಕಾಣದಂತೆ ತೆರೆ ಹಿಡಿದಿರುತ್ತದೆ. ಪ್ರತಿ ಮಾನವನೂ ತನ್ನ ಸುತ್ತಲಿನ ಜಗತ್ತಿನಲ್ಲಿ ಅನೇಕತೆಯನ್ನು ಕಾಣುವಂತೆ ಮಾಡುತ್ತದೆ ಮಾಯೆ. ಸತ್ಯವನ್ನರಿಯಲಾಗದ ಮಾನವನು ಈ ಜಗತ್ತಿನಲ್ಲಿ ನಾನು, ನನ್ನದು ಎಂದು ಸ್ವಂತಿಕೆಯನ್ನು, ಅಹಂಕಾರವನ್ನೂ ಬೆಳೆಸಿಕೊಳ್ಳುತಾನೆ. ಇದೇ [[ಅವಿದ್ಯೆ]].
'ಅದ್ವೈತ ಅಂದರೆ ಎರಡನೆಯದಿಲ್ಲದ್ದು. ಇದು ಶಂಕರರು ಸ್ಥಾಪಿಸಿದ್ದಲ್ಲ. ಅದ್ವೈತ ಪದವು ಮಾಂಡೂಕ್ಯ ಉಪನಿಷತ್ತಿನ ಮಂತ್ರದಲ್ಲಿ ಹೀಗಿದೆ - ’ನಾಂತಃ ಪ್ರಜ್ಞಮ್ ನ ಬಹಿಷ್ಪ್ರಜ್ಞಮ್ ನೋಭಯತಃ ಪ್ರಜ್ಞಮ್---- ಶಾನ್ತಮ್ ಶಿವಮ್ ಅದ್ವೈತಮ್ ಚತುರ್ಥಮ್ ಮನ್ಯನ್ತೇ ಸ ಆತ್ಮಾ ಸವಿಜ್ಞೇಯಃ ||’ ಎಂದು ತಿಳಿಸುತ್ತಿದೆ. ಶಂಕರರು ಇದನ್ನು ತೋರಿಸಿಕೊಟ್ಟಿದ್ದಾರೆ. ಅವರು ಅದ್ವೈತಮತ ಸ್ಥಾಪನಾಚಾರ್ಯರಲ್ಲ. ಮತ ಎಂದರೆ ಒಬ್ಬರ ಅಭಿಪ್ರಾಯ. ಶಂಕರರು ತೋರಿಸಿರುವ ತತ್ತ್ವ ಸಾರ್ವತ್ರಿಕ ಪರಿಪೂರ್ಣಾನುಭವದಮೆಲೆ ನಿಂತಿದೆ. ಭಗವಾನ್ ಶಂಕರರ ಜೀವನ ಚರಿತ್ರೆ ಭಾರತದಲ್ಲಿ ೧೯ ಬೇರೆ ಬೇರೆ ಶಂಕರ ವಿಜಯಗಳಲ್ಲಿ ಪ್ರಸ್ಥಾಪಿತವಾಗಿರುವುದು ಸರಿಯಷ್ಟೆ. ನಮಗೆ ಮಹಾತ್ಮರ ಜೀವನ ಚರಿತ್ರೆಗಿಂತ ಅವರು ಏನು ಹೇಳಿದ್ದಾರೆ, ಅವರ ಕಾರ್ಯಗಳೇನು, ಅದು ನಮಗೆಷ್ಟು ಉಪಯೋಗವಾಗಿದೆ, ಇಂದಿಗೂ ಲಭ್ಯವೆ ? ಎನ್ನುವುದು ಮುಖ್ಯ. ಮುಖ್ಯವಾಗಿ ಶಂಕರರು ಪ್ರಸ್ಥಾನತ್ರಯಗಳಿಗೆ ( ಬಾದರಾಯಣಾಚಾರ್ಯರ ಬ್ರಹ್ಮ ಸೂತ್ರಗಳು, ಶ್ರೀಮದ್ಭಗವದ್ಗೀತೆ, ದಶ ಉಪನಿಷತ್ತುಗಳು) ಪದ( ವ್ಯಾಕರಣ ) ವಾಕ್ಯ( ಮೀಮಾಂಸಾ) ಪ್ರಮಾಣ ( ನ್ಯಾಯ ದರ್ಶನ ) ಗಳಿಂದ ಭಾಷ್ಯವನ್ನು ಮೂಲ ಸಂಸ್ಕೃತದಲ್ಲಿ ಬರೆದಿದ್ದು, ಕರ್ಣಾಟಕ ಶಂಕರರೆಂದು ಪ್ರಸಿದ್ಧವಾಗಿರುವ ಹೊಳೆನರಸಿಪುರದ ಪರಮಪುಜ್ಯ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ೧೨೦೦ ವರ್ಷಗಳ ನಂತರ ಮೊಟ್ಟ ಮೊದಲು ಯಥಾವತ್ ಅಚುಕಟ್ಟಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.'''
ಭಗವಾನ್ ಶಂಕರರಂತೆ ನಮ್ಮೆಲ್ಲರ ದುಃಖಗಳಿಗೂ ಅಜ್ಞಾನವೇ( ಜ್ಞಾನಾಭಾವ, ಸಂಶಯ ಜ್ಞಾನ, ವಿಪರೀತ ಜ್ಞಾನ) ಕಾರಣ. ಇದು ಪ್ರತ್ಯಯರೂಪ ( ಮಾನಸಿಕ). ಅದ್ವೈತತತ್ತ್ವವನ್ನು ಸಕಲ ಮಾನವರೂ ಅರ್ಥಮಾಡಿಕೊಳ್ಳಬಹುದು, ಇದಕ್ಕೆ ಜಾತಿ, ಮತ, ಲಿಂಗ, ದೇಶ ಇವುಗಳ ಪರಿಮಿತಿ ಇಲ್ಲ. ಬ್ರಹ್ಮ ಸತ್ಯಮ್ ಜಗನ್ಮಿಥ್ಯಾ -ಎಂಬುದು ವೇದದ ವಾಕ್ಯವಲ್ಲ ಹಾಗೂ ಶಂಕರರು ಹೇಳಿಲ್ಲ. ಇದು ವೇದಾನ್ತ ಡಿಂಡಿಮ ಎಂಬ ಶ್ಲೋಕದ ವಾಕ್ಯ. ಜಗನ್ಮಿಥ್ಯಾ ಎಂದರೆ ’ಜಗತ್ತು ತೋರುವ ರೂಪದಿಂದಿಲ್ಲ ’ ಉದಾ- ಹೆಸರು ಮೇಜು, ಕುರ್ಚಿ, ಬಾಗಿಲು.. ಇರುವುದು ಮರವೇ. ಇತ್ಯಾದಿ. ಅದೇರೀತಿ ಇರುವುದು ಮನುಷ್ಯರು,ಪ್ರಾಣಿಗಳು..ಇರುವುದು ಚರ್ಮ, ಮಾಂಸ, ಮೂಳೆ,ರಕ್ತ..ಇತ್ಯಾದಿ. ಹೆಸರುಗಳು ಅನೇಕ ತತ್ತ್ವ ಒಂದೇ.
ಆತ್ಮನು ಸತ್ತಮೇಲೆ ಬ್ರಹ್ಮ ಆಗುವುದಿಲ್ಲ ತಿಳಿದಿರಲಿ ತಿಳಿಯದಿರಲಿ ಇರುವುದೇ ಬ್ರಹ್ಮ ಸ್ವರೂಪ.
"https://kn.wikipedia.org/wiki/ಅದ್ವೈತ" ಇಂದ ಪಡೆಯಲ್ಪಟ್ಟಿದೆ