ಕೋಡಿಹಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: '''ಕೋಡಿಹಳ್ಳಿ''' : ಕರ್ನಾಟಕದ ಹೊಸಜಿಲ್ಲೆ ರಾಮನಗರಕ್ಕೆ ಸೇರಿದ ಒಂದು ಪಟ್ಟಣ. ಇದ... ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೧ ನೇ ಸಾಲು:
'''ಕೋಡಿಹಳ್ಳಿ''' : ಕರ್ನಾಟಕದ
23.08.07ರಿಂದ ರಾಮನಗರ ಜಿಲ್ಲೆಗೆ ಸೇರಿತು. ಉ.ಅ. 12ಂ 33' ಮತ್ತು ಪು.ರೇ. 77ಂ 29' ನಲ್ಲಿ ಅರ್ಕಾವತಿ ನದಿಯ ಬಲದಂಡೆಯ ಮೇಲೆ, ಉತ್ತರ ದಕ್ಷಿಣವಾಗಿ ಹಬ್ಬಿದೆ. ಬೆಂಗಳೂರು-ಮಳವಳ್ಳಿ ರಸ್ತೆಯಲ್ಲಿರುವ ಈ ಪಟ್ಟಣ ಬೆಂಗಳೂರಿನ ದಕ್ಷಿಣಕ್ಕೆ 1974ರ ವರೆಗೂ ಇದಕ್ಕೆ ಕಾನಕಾನಹಳ್ಳಿ ಎಂಬ ಹೆಸರಿತ್ತು. ಕಾನಕಾನನೆಂಬವ ಇಲ್ಲಿ ಒಂದು ಸಣ್ಣ ಕೋಟೆ ಕಟ್ಟಿಕೊಂಡಿದ್ದರಿಂದ ಇದಕ್ಕೆ ಈ ಹೆಸರು ಬಂತೆಂದು ಹೇಳಲಾಗಿದೆ. ಕಾನಿಕಾರ್ನ ಹಳ್ಳಿ ಎಂಬುದು ಮೂಲನಾಮವೆಂದೂ ಕಾಣಿಕಾರ್ (ನೆಲದೊಡೆಯ) ಎಂಬುದರಿಂದ ಈ ಹೆಸರು ಬಂತೆಂದೂ ಇಲ್ಲಿಯ ಜನ ತಿಳಿದು ಕೊಂಡಿದ್ದಾರೆಂದೂ ಆದರೆ ವಾಸ್ತವವಾಗಿ ಇದು ಕನ್ಯಾ-ಕರ್ಣ (ಭವಾನಿಯ ಕಿವಿ) ಎಂದಿರಬೇಕೆಂದೂ ಬುಕಾನನ್ ಅಭಿಪ್ರಾಯಪಟ್ಟಿದ್ದಾನೆ. 13ನೆಯ ಶತಮಾನದ ಶಾಸನವೊಂದರಲ್ಲಿ ಇದರ ಹೆಸರು ಕಾಣಿಕಾರಹಳ್ಳಿ. ಈಗ ಇದರ ಹೆಸರು ಕನಕಪುರ ಎಂದಿರುವುದರಿಂದ ಹಳೆಯ ಹೆಸರನ್ನು ಕುರಿತ ವಾದ ಅಷ್ಟಾಗಿ ಮುಖ್ಯವಲ್ಲ. ಕನಕಪುರದಲ್ಲಿರುವ ಕೋಟೆಯನ್ನು ಕಟ್ಟಿಸಿದಾತ ಚನ್ನಪಟ್ಟಣದ ಪಾಳೆಗಾರನಾಗಿದ್ದ ಜಗದೇವರಾಯ ಎಂದು ಹೇಳಲಾಗಿದೆ. ಆತ ಇಲ್ಲಿದ್ದ ಸಣ್ಣ ಕೋಟೆಯ ಸ್ಥಳದಲ್ಲಿ ಇದನ್ನು ಕಟ್ಟಿಸಿದ. 1630ರಲ್ಲಿ ಇದನ್ನು ಮೈಸೂರಿನ ಚಾಮರಾಜ ಗೆದ್ದುಕೊಂಡ. ಇಲ್ಲಿ ಜೀರ್ಣವಾದ ರಂಗನಾಥ ದೇವಾಲಯವಿದೆ. ಶ್ರೀರಂಗಪಟ್ಟಣದ ಕಡೆಗೆ ನುಗ್ಗಿಬರುತ್ತಿದ್ದ ಬ್ರಿಟಿಷ್ ಸೇನೆಗೆ ಠಾವು ದೊರೆಯದಿರಲೆಂಬ ಉದ್ದೇಶದಿಂದ ಟಿಪ್ಪುಸುಲ್ತಾನ ಎರಡು ಸಾರಿ ಈ ಪಟ್ಟಣವನ್ನು ಹಾಳುಗೆಡವಿದ. ಅನಂತರ ಬಹುಕಾಲ ಕೋಟೆಯೊಳಗಡೆಯಲ್ಲಿ ಹುಲಿಯೇ ಮುಂತಾದ ದುಷ್ಟಮೃಗಗಳು ಸೇರಿಕೊಂಡು ಮನುಷ್ಯರನ್ನೂ ದನಕರುಗಳನ್ನೂ ಎತ್ತಿಕೊಂಡು ಹೋಗುತ್ತಿದ್ದುವು.
|