ಜಯಚಾಮರಾಜ ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಬದುಕು |
|||
೫೮ ನೇ ಸಾಲು:
=== ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್ ===
ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್ ಎಂಬುದು ಈ ದಿಶೆಯಲ್ಲಿ ಮತ್ತೊಂದು ಅವಲೋಕನೀಯ ಗ್ರಂಥ. ಇದು ಧರ್ಮ ಮತ್ತು ಗೀತೆ ಹಾಗೂ ಭಗವದ್ಗೀತೆಯಲ್ಲಿನ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎಂಬ ಕಲ್ಪನೆಗಳ ಸ್ವರೂಪ ಎಂಬ ಎರಡು ಪ್ರಬಂಧಗಳ ಸಂಕಲನ.
▲ ಒಡೆಯರ ಅಭಿಪ್ರಾಯದಂತೆ ಇಂದಿನ ಜಗತ್ತು ಐಹಿಕಕ್ಕೆ ಹೆಚ್ಚು ಬೆಲೆ ಕೊಡುತ್ತದೆ. ಇದರಿಂದ ಶಾಂತಿ ಸಮಾಧಾನಗಳು ಮರೆಯಾಗಿವೆ. ಗೊಂದಲ, ಅಶಾಂತಿ ತಾಂಡವವಾಡುತ್ತಿವೆ. ಇಂಥ ಸ್ಥಿತಿಯಲ್ಲಿ ಜಗತ್ತಿಗೆ ಶಾಂತಿಯ ಬೆಳಕನ್ನು ನೀಡಬಲ್ಲುದು ಭಾರತೀಯ ಸಂಸ್ಕೃತಿ ಮಾತ್ರ. ಎಲ್ಲ ಪ್ರಾಪಂಚಿಕ ಘಟನೆಗಳ ಹಿಂದೆ ಭಗವಂತನ ಅಭಯಹಸ್ತವೊಂದಿದೆ. ಅದು ನಿರ್ದೇಶನ ಮತ್ತು ಸಮಾಧಾನ ರೂಪದ್ದು. ಜಗತ್ತಿಗೆ ನಂಬಿಕೆ ನೀಡಿ ಧ್ಯಾನ ಮತ್ತು ಧರ್ಮದ ಅಖಂಡ ನಂಬಿಕೆಯ ತತ್ತ್ವಗಳ ಮಹತ್ವಪೂರ್ಣ ವಿಚಾರಧಾರೆಯನ್ನು ಹರಿಸಿದ್ದು ಭಾರತ. ಜಗತ್ತನ್ನು ವಿಜ್ಞಾನ ವಿಂಗಡಿಸಿ, ವಿಶ್ಲೇಷಿಸಿ, ಅಣು-ಪರಮಾಣು ಎಂದು ವಿಭಾಗಿಸಿ ನೋಡುತ್ತದೆ ; ಮಾನವನನ್ನು ಬೃಹತ್ ವಿಶ್ವದ ಹೊರಗೆ ನಿಲ್ಲಿಸಿ ನೋಡಲು ಯತ್ನಿಸುತ್ತದೆ; ಮಾನವನನ್ನು ಬೃಹತ್ ವಿಶ್ವದ ಹೊರಗೆ ನಿಲ್ಲಿಸಿ ನೋಡಲು ಯತ್ನಿಸುತ್ತದೆ. ಆದರೆ ಭಾರತ, ಇಡಿಯ ಸೃಷ್ಟಿಯನ್ನು ಪೂರ್ಣವೊಂದರ ಘಟಕವಾಗಿ ಕಂಡಿದೆ. ಅದೇ ಉಪನಿಷತ್ತಿನ ಪೂರ್ಣಮುದ: ಪೂರ್ಣಮಿದಂ ಎಂಬುದು. ವಿಶ್ವದ ಒಂದೊಂದು ಅಣುವೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪವೆಂದು ತಿಳಿದರೆ ಮಾನವರಲ್ಲಿ ಪರಸ್ಪರ ಘರ್ಷಣೆಗೆ ಅವಕಾಶವಿರದು.
▲ ರಾಜಕೀಯ ಆರ್ಥಿಕ, ವೈಜ್ಞಾನಿಕ ಹಾಗೂ ತಾತ್ತ್ವಿಕ ಸಮಸ್ಯೆಗಳಿಂದ ಪರಸ್ಪರ ಸೌಹಾರ್ದ ಕಳಚುತ್ತಿರುವ ಈ ಸಮಯದಲ್ಲಿ ಭಾರತೀಯ ವಿಚಾರಧಾರೆ ಎಷ್ಟು ಅಗತ್ಯ ಎಂದು ತೋರಿಸುವುದೇ ಈ ಸಂಕಲನದ ಮುಖ್ಯ ಉದ್ದೇಶ.
▲ == ಸಂಗೀತಾಸಕ್ತಿ ==
▲ ಒಡೆಯವರಿಗೆ ಸಂಗೀತವೆಂದರೆ ಪಂಚಪ್ರಾಣ. ಪ್ರತಿನಿತ್ಯ ಅವರು ಶಿವಪೂಜೆಗೆ ಕುಳಿತಾಗ ಸುಮಾರು 4-5 ಗಂಟೆಗಳ ವರೆಗೆ ಅರಮನೆಯ ಸಂಗೀತ ವಿದ್ವಾಂಸರು ಸರದಿಯ ಮೇಲೆ ಹಾಡುತ್ತಿದ್ದರು. ಈ ಕಾರ್ಯಕ್ರಮ ಒಂದೊಂದು ದಿನ ಬೆಳಗಿನ ಜಾವ 3-4 ಗಂಟೆಯಿಂದಲೇ ಪ್ರಾರಂಭವಾಗುತ್ತಿದ್ದುದು ಅಪರೂಪವಲ್ಲ. ಅನೇಕ ವಿದ್ವಾಂಸರನ್ನಿವರು ಆಸ್ಥಾನ ವಿದ್ವಾಂಸರನ್ನಾಗಿ ಮಾಡಿ ಗೌರವಿಸಿದುದೂ ಉಂಟು. ಸಂಸ್ಕೃತದಲ್ಲಿ ಇವರು ರಚಿಸಿರುವ ಸಂಗೀತ ಕೃತಿಗಳು ಸುಮಾರು 94 ಎನ್ನಲಾಗಿದೆ. ಇವುಗಳಲ್ಲಿ ಅನೇಕವು ಇನ್ನೂ ಅಚ್ಚಾಗಿಲ್ಲ. ಆದರೆ ಅನೇಕವನ್ನು ವಿದ್ವಾಂಸರು ಬಳಸಿಕೊಂಡು ಹಾಡುತ್ತಿದ್ದಾರೆ. ಪ್ರಾಯಃ ದೀಕ್ಷಿತ ಸಂಪ್ರದಾಯದವೆಂದು ಹೇಳಲಾಗಿರುವ ಇವರ ಕೀರ್ತನೆಗಳಲ್ಲಿ ಅಕ್ಷರಕ್ಕೆ ಹೆಚ್ಚು ಪ್ರಾಧಾನ್ಯ. ವಿದ್ಯಾರಾಜಯೋಗೀಂದ್ರ ಮುಂತಾದ ಸಂಕೇತಗಳು ಇವರ ಕೀರ್ತನೆಗಳ ಅಂಕಿತಗಳು. ಅವುಗಳಲ್ಲಿ ಕೆಲವು ಹೀಗಿವೆ :
▲# ಶ್ರೀಮಹಾಗಣಪತಿಂ ಭಜೇ ಹಂ(ಅಠಾಣ, ಆದಿತಾಳ)
▲# ಲಂಬೋದರ ಪಾಹಿ ಮಾಂ (ನಾರಾಯಣ ಗೌಳ, ಮಿಶ್ರಜಾತಿ, ತ್ರಿಪುಟ ತಾಳ)
▲# ಚಿಂತಯಾಮಿ ಜಗದಂಬಾ (ಹಿಂದೋಳ, ಮಿಶ್ರಜಾತಿ, ಝಂಪೆತಾಳ)
▲# ಸರಸ್ವತೀಂ ಭಗವತೀಂ ಸಮಾಮ್ಯಹಂ (ಹಂಸವಿನೋದಿನಿ, ಮಿಶ್ರ ಜಾತಿ ಝಂಪೆತಾಳ)
#
▲# ಬ್ರಹ್ಮಾಂಡವಲಯೇ, ಮಾಯೇ (ಮಾಂಡ್, ಆದಿತಾಳ)
:ಇವರ ಕೃತಿಗಳು ನಾದಮಾಧುರ್ಯಕ್ಕೆ, ಅರ್ಥಾಭಿವ್ಯಕ್ತಿಗೆ ಹೆಸರಾಗಿವೆ.<ref> [https://kn.wikisource.org/s/4rh ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಚಾಮರಾಜ ಒಡೆಯರು]</ref><ref>[https://www.prajavani.net/artculture/article-features/jayachamaraja-wadiyar-650864.html ವಿಶಾಲ ಕರ್ನಾಟಕದ ಕನಸುಗಾರ;ವಿದ್ವಾನ್ ಎಂ.ಶಿವಕುಮಾರಸ್ವಾಮಿ;d: 14 ಜುಲೈ 2019]</ref>
▲# ಪನ್ನಗಶಯನ ಪರಿಪಾಹಿ ಮಾಂ (ಬ್ರಹಸ್ಪತಿ ಪ್ರಿಯ)
==ಹೆಚ್ಚಿನ ಓದಿಗೆ==
▲# ಶಿವಶಿವಶಿವ ಭೋ
*<ref>[https://www.prajavani.net/artculture/article-features/jayachamaraja-wadiyar-650864.html ವಿಶಾಲ ಕರ್ನಾಟಕದ ಕನಸುಗಾರ;]</ref>
▲# ಈಗ ಬಳಕೆಯಲ್ಲಿರುವ ರಾಗಗಳಲ್ಲದೆ ಬೃಹಸ್ಪತಿಪ್ರಿಯ ಮುಂತಾದ ಕೆಲವು ನೂತನ ರಾಗಗಳನ್ನೂ ಇವರು ಸೂಜಿಸಿದ್ದಾರೆ ಎನ್ನಲಾಗಿದೆ.
==ಉಲ್ಲೇಖ==
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]][[ವರ್ಗ:ಸಾಹಿತಿಗಳು]][[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]][[ವರ್ಗ:ಶಾಸ್ತ್ರೀಯ ಸಂಗೀತಗಾರರು]]
[[ವರ್ಗ:ಕರ್ನಾಟಕ ಸಂಗೀತ]][[ವರ್ಗ:ಭಾರತದ ಗಣ್ಯರು]][[ವರ್ಗ:ವಾಗ್ಗೇಯಕಾರರು]]
==ಉಲ್ಲೇಖಗಳು==
|