ರಸಾನುಭವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
# ಕಾವ್ಯಲಕ್ಷಣಗಳನ್ನು ಮಾತ್ರ ಬರೆಯಹೊರಟ ದಂಡಿಭಾಮಹಾದಿಗಳು ವ್ಯಾಪಕಾರ್ಥದ ರಸದ ಅಗತ್ಯ ಕಾವ್ಯದಲ್ಲಿಯೂ ನಾಟಕದಷ್ಟೇ ಮಟ್ಟಿಗೆ ಇರುವುದನ್ನು ಮನಗಂಡುದರಿಂದಲೇ ಅದನ್ನು ಕಾವ್ಯಗುಣವೆಂದು ವಿವರಿಸಿದರು; ಅದರ ನಿಷ್ಪತ್ತಿಗಾಗಿ ಪಂಚ ಸಂಧಿಗಳು (ವಸ್ತು ಸಂವಿಧಾನದ ಘಟಕಗಳು) ಮಹಾಕಾವ್ಯದಲ್ಲೂ ಇರಬೇಕೆಂದರು; ಉದಾತ್ತ ನಾಯಕರೇ ಇಲ್ಲಿಯೂ ಬೇಕೆಂದರು. ಆದರೆ ವರ್ಣನಾಪ್ರಧಾನದ ಕಾವ್ಯಪ್ರಕಾರಗಳಲ್ಲಿ ನಾಟಕದಂತೆ ಚಿತ್ತವೃತ್ತಿಯ ಅಭಿವ್ಯಕ್ತಿಯೇ ಮುಖ್ಯವಾಗಲಾರದೆಂಬ ಭಾವನೆಯಿಂದ ಅವರು ವಿಭಾವಾದಿಗಳ ನಿರೂಪಣೆಗೆ ಕೈಹಾಕಲಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ, ಪ್ರಸಂಗವಶದಿಂದ ವಿಶಿಷ್ಟ ಭಾವಗಳು ಸ್ಥಾಯಿ ಅಥವಾ ಸಂಚಾರಿ ಪರಿಪುಷ್ಟಿಗೊಂಡು ಪರಾಕಾಷ್ಠೆಯನ್ನೈದಿದರೆ, ಅವಕ್ಕೆ ವಿಶಾಲಾರ್ಥದಲ್ಲಿ ರಸವತ್, ಪ್ರೇಯೆಸ್ ಮುಂತಾದ ಅಲಂಕಾರಗಳೆಂದು ಸ್ಥಾನವಿತ್ತರು. ವಾಮನನಂತೂ ಕಾವ್ಯಗಳಲ್ಲೆಲ್ಲ ದಶರೂಪಕವೇ ಸರ್ವಶ್ರೇಷ್ಠವೆಂದು ಮುಕ್ತಕಂಠದಿಂದ ಹೇಳಿದ್ದಾನೆ. ಹಾಗೆ ಹೇಳುವಾಗ ನಾಟಕದಲ್ಲಿರುವ ದೃಶ್ಯಾಂತ ಕಾವ್ಯದಲ್ಲಿಲ್ಲವೆಂಬ ಅರಿವೂ ಅವನಿಗಿದೆ. ಪಾತ್ರಗಳ ಸ್ಥಾಯಿಭಾವಗಳ ಪರಿಪುಷ್ಟಿಯೇ ರಸವೆಂಬ ಈ ಅಭಿಪ್ರಾಯ ಕಾಳಿದಾಸ, ಮಾಘ, ಬಾಣ, ಭವಭೂತಿಗಳಿಗೂ ಸಮ್ಮತವಾಗಿದ್ದಂತೆ ತೋರುತ್ತದೆ. ಈ ಅಭಿಪ್ರಾಯದಂತೆ ಕರುಣರಸವಿರುವುದೂ ರಾಮನಲ್ಲಿ (ರಾಮಸ್ಯ ಕರುಣೋರಸಃ) ಎಂಬ ಮಾತು ತಪ್ಪಲ್ಲ; ಅದು ಕೇವಲ ಆನಂದಮಯವಲ್ಲ, ಶೋಕಸಾಂದ್ರವಾಗಿಯೂ ಇರಬಹುದು. ಶೃಂಗಾರಾದಿ ರಸಗಳು ಸುಖಾತ್ಮಕ ; ಕರುಣಾದಿಗಳು ದುಃಖಾತ್ಮಕ (ಈ ಮಾತನ್ನು ವಾಮನನೂ ಸ್ಪಷ್ಟವಾಗಿ ಹೇಳಿದ್ದಾನೆ). ಆದರೂ ರಸ ಲೌಕಿಕವಲ್ಲ; ಕಾವ್ಯ ಮಾತ್ರ ನಿಷ್ಠವಾದುದರಿಂದ ಪ್ರೇಕ್ಷಣಕಾಲದಲ್ಲಿ ಪಾತ್ರಗತವಾದ ರಸವೇ ನಟನಲ್ಲಿ ಆರೋಪಿತವಾಗುತ್ತದೆ. ಈ ಪರಂಪರಾಗತ ರಸತತ್ತ್ವದ ವಿವರಣೆ ಸ್ಪಷ್ಟವಾಗಿ ಮೊದಲು ಬರುವುದು ಲೊಲ್ಲಟನ ಬರೆಹದಲ್ಲಿ.
# ಇದಕ್ಕಿಂತ ಮುಂದಿನ ಹೆಜ್ಜೆ ಕಾಣುವುದು ಉದ್ಭಟನ ಕಾವ್ಯಾಲಂಕಾರ ಸಂಗ್ರಹದಲ್ಲಿ. ಇವನು ನಾಟ್ಯಶಾಸ್ತ್ರವನ್ನು ಚೆನ್ನಾಗಿ ತಿಳಿದಿದ್ದವನು. ನಾಟಕದಲ್ಲಿ ಸ್ಥಾಯಿಭಾವಗಳು ವಿಭಾವಾದಿಗಳ ಅಭಿನಯದಿಂದ ಸೂಚಿಸಲ್ಪಡುವುದು ಮಾತ್ರ ಸಾಧ್ಯ. ಆದರೆ ಕಾವ್ಯದಲ್ಲಿ ಸ್ವಶಬ್ದಗಳ ವರ್ಣನಾಬಲದಿಂದಲೂ ಅದು ಸಾಧ್ಯವೆಂದು ಈತ ತಿಳಿದಿದ್ದ. ನಾಟಕದಲ್ಲಿ ವಿಭಾವಾದಿಗಳೆಲ್ಲವೂ ಕೂಡಿದ ಮೇಲೆಯೇ ರಸದ ನಿಷ್ಪತ್ತಿ; ಕಾವ್ಯದಲ್ಲಿ ಬರಿಯ ವಿಭಾವ, ಬರಿಯ ಅನುಭಾವಗಳಿಂದಲೂ ರಸಾದಿಗಳ ನಿಷ್ಪನ್ನವಾಗಬಹುದೆಂದು ಈತನ ಸಿದ್ಧಾಂತ. ಆದ್ದರಿಂದ ಈತ ಕಾವ್ಯದಲ್ಲಿ `ಪಂಚರೂಪಾ ರಸಾಃ (ಸ್ವಶಬ್ದ, ಸ್ಥಾಯಿ, ವಿಭಾವ, ಅನುಭಾವ, ಸಂಚಾರಭಾವಗಳಲ್ಲಿ ಯಾವುದೊಂದರ ಮೂಲಕ ಪ್ರತೀತವಾಗತಕ್ಕದು) ಎಂಬ ಹೊಸ ನಿರ್ಣಯವನ್ನು ಸಾರಿದ. ರುದ್ರಟನಂತೂ ಸ್ಪಷ್ಟವಾಗಿ `ವಿರಸ ವನ್ನು ಕಾವ್ಯದೋಷವೆಂದನಲ್ಲದೆ ಮಹಾಕಾವ್ಯಾದಿಗಳಲ್ಲಿ ಹೇಗೆ ರಸಯೋಜನೆಯಾಗಬೇಕೆಂದು ವಿವರಗಳನ್ನೂ ಕೊಟ್ಟ.
=== ನವೀನ ರಸ ಪ್ರತಿಪಾದಕರು ===
# ಆದರೆ ನವೀನ ಸರಣಿಗೆ ಪ್ರತಿಷ್ಠಾಪಕನಾದ ಆನಂದವರ್ಧನನಿಗೆ ಪ್ರಾಚೀನರ ಅಭಿಪ್ರಾಯ ಸರಿಗಾಣಲಿಲ್ಲ. ಒಂದು ಕಡೆ ಉಪಮಾದಿಗಳನ್ನೂ ಇನ್ನೊಂದು ಕಡೆ ರಸಾದಿಗಳನ್ನೂ ಅಲಂಕಾರ ಎಂಬ ಒಂದೇ ಮಾತಿನಿಂದ ವ್ಯವಹರಿಸುವುದನ್ನು ಈತ ಆಕ್ಷೇಪಿಸಿದ. ರಸವು ಆಲಂಕಾರ್ಯ ಅಲಂಕಾರವಲ್ಲ ; ಅದು ವ್ಯಂಗ್ಯ - ವಾಚ್ಯವಲ್ಲ; ಅದು ಪ್ರಧಾನ ಗೌಣವಲ್ಲ ಎಂದು ನಿರ್ಧರಿಸಿದ. ಒಂದು ವೇಳೆ ಗೌಣವಾಗಿ ಬಂದರೆ ಆಗ ಮಾತ್ರ ಅಲಂಕಾರವಾಗಬಹುದು, ಅಷ್ಟೆ. ಈ ನೂತನ ವಿಚಾರಧಾರೆಯಲ್ಲಿ ರಸಾದಿಧ್ವನಿಗೆ ಕಾವ್ಯದ ಆತ್ಮತ್ವ ಸುಸ್ಥಿರವಾಯಿತು. ಇದರ ಗ್ರಹಣ ಸಾಮಥ್ರ್ಯವೇ ಸಹೃದಯತ್ವವೆಂಬುದೂ ಸಿದ್ಧವಾಯಿತು. ಉದ್ಭಟನ ಸ್ವಶಬ್ದ ವಾಚ್ಯತ್ವವಾದವನ್ನು ಆನಂದವರ್ಧನ ಖಂಡಿಸಿದ. ಪ್ರಬಂಧರಸಗಳ ವಿಮರ್ಶೆಯನ್ನು ಸೂಕ್ಷ್ಮವಾಗಿ ಮಾಡಿತೋರಿಸಿದ.
# ನಾಟ್ಯಶಾಸ್ತ್ರಕ್ಕೆ ವ್ಯಾಖ್ಯಾನ ಮಾಡಹೊರಟ ದಾರ್ಶನಿಕರಲ್ಲಿ ಶಂಕುಕನು ಲೊಲ್ಲಟನ ವಾದಕ್ಕೆ ಆಕ್ಷೇಪಣೆಗಳನ್ನೆತ್ತಿದ. ಚಿತ್ರದ ಕುದುರೆಯ ಅನುಭವ ಎಲ್ಲರಿಗೂ ಉಂಟು. ಆದರೆ ಅದು ಸತ್ಯ, ಮಿಥ್ಯೆ, ಸಂಶಯ, ಭ್ರಾಂತಿ ಯಾವುದೆನ್ನಲೂ ಕಷ್ಟ. ಹಾಗೆಯೇ ನಾಟಕ ನಟರ ಅನುಕರಣ, ಆ ಅನುಭವವೂ ವಿಶಿಷ್ಟವೇ. ಪಾತ್ರಗತವಾದ ಸ್ಥಾಯಿಭಾವದ ಅನುಭವ ನಮಗೆ ನೇರವಾಗಿ ಬರುವುದು ಅಶಕ್ಯ. ನಮ್ಮಿಂದ ಅದು ಕೇವಲ ಅನುಮಿತವಾಗಬಹುದು. ಆದುದರಿಂದ ರಸನಿಷ್ಪತ್ತಿಯೆಂದರೆ ಸಾಮಾಜಿಕರು ಮಾಡುವ ರಸದ ಅನುಮಿತಿಯೆಂದು ತಾರ್ಕಿಕ ಯುಕ್ತಿಗಳನ್ನು ಮುಂದೆ ಮಾಡಿದ.
"https://kn.wikipedia.org/wiki/ರಸಾನುಭವ" ಇಂದ ಪಡೆಯಲ್ಪಟ್ಟಿದೆ