ವೇಶ್ಯಾವೃತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧೫ ನೇ ಸಾಲು:
ಭಾರತದಲ್ಲಿ ಈ ಪದ್ಧತಿ ಸಾಮಾನ್ಯವಾಗಿತ್ತು. ಸಿಂಧೂ ಬಯಲಿನ ನಾಗರಿಕತೆಯ ಮಾತೃದೇವತಾ ಗುಡಿಯಲ್ಲಿ ಸ್ತ್ರೀ-ಪುರುಷ ಗುಲಾಮರಿದ್ದ ರೆಂದೂ ಇದು ಅಂದಿನ ಸಮಾಜದಲ್ಲಿ ಪ್ರತಿಷ್ಠೆಯ ಮಾತಾಗಿತ್ತೆಂದೂ ತಿಳಿದುಬರುತ್ತದೆ. ಮೊಹೆಂಜೊದಾರೊ ಉತ್ಖನನದಲ್ಲಿ ದೊರೆತ ಸ್ತ್ರೀ ಪ್ರತಿಮೆಯೊಂದರಲ್ಲಿ ನರ್ತಕಿಯ ಲಕ್ಷಣಗಳಿವೆ. ಈ ಪ್ರತಿಮೆ ನಗ್ನವಾಗಿದ್ದು, ಒಂದು ತೋಳಿನ ತುದಿಯವರೆಗೂ ಬಳೆಗಳಿವೆ, ಕುತ್ತಿಗೆಯಲ್ಲಿ ಮಣಿಸರವಿದೆ. ತಲೆಗೂದಲು ಸಡಿಲವಾಗಿ ಇಳಿಬಿದ್ದಿದೆ. ಕಣ್ಣುಮುಚ್ಚಿ ನರ್ತಿಸುತ್ತಿರುವ ಆಕೆಯಲ್ಲಿ ಭಕ್ತಿಭಾವ ಹೊಮ್ಮಿದೆ. ಈಕೆ ದೇವದಾಸಿಯೇ ಇರಬೇಕೆಂಬ ವಾದವಿದೆ.
 
ಭಾರತದಲ್ಲಿ ಕಾಮದಾಸಿದೇವದಾಸಿ ಪದ್ಧತಿಯ ಪ್ರಾಚೀನತೆಯ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಜಾತಕ ಸಾಹಿತ್ಯದಲ್ಲಿ ಈ ಸಂಪ್ರದಾಯದ ಉಲ್ಲೇಖವಿಲ್ಲ. ಗ್ರೀಕ್ ಪ್ರವಾಸಿ ಲೇಖಕರು ಇದನ್ನು ಹೆಸರಿಸಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗಣಿಕೆಯರ ಹೆಸರು ಪ್ರಸ್ತಾಪವಾಗಿದ್ದರೂ ಅಲ್ಲಿ ದೇವದಾಸಿಯರನ್ನು ಹೇಳಿಲ್ಲ. ಈ ಸಂಪ್ರದಾಯ ಪ್ರಾಯಃ 3ನೆಯ ಶತಮಾನದಲ್ಲಿ ಆರಂಭವಾಗಿರಬಹುದು. ಉಜ್ಜಯಿನಿಯ ಮಹಾಕಾಲ ದೇವಾಲಯದಲ್ಲಿ ನರ್ತಕಿಯರಿದ್ದ ಸಂಗತಿಯನ್ನು ಮೇಘದೂತ ಕಾವ್ಯದಲ್ಲಿ ಕಾಳಿದಾಸ ಹೇಳಿದ್ದಾನೆ. ದೇವಪೂಜೆಯ ಸಂದರ್ಭದಲ್ಲಿ ಸಂಗೀತಕ್ಕಾಗಿ ಸ್ತ್ರೀಯರನ್ನು ಸೇವೆಗಾಗಿ ನೇಮಿಸಿಕೊಳ್ಳ ಬೇಕೆಂದು ಹಲವು ಪುರಾಣಗಳು ಹೇಳುತ್ತವೆ. ಈ ಸ್ತ್ರೀಯರು ಸಾಮಾನ್ಯವಾಗಿ ದೇವದಾಸಿಯರು ಅಥವಾ ವೇಶ್ಯೆಯರು. ಸೂರ್ಯಲೋಕ ಪ್ರಾಪ್ತವಾಗಬೇಕಾದರೆ ವೇಶ್ಯೆಯರನ್ನು ಸೂರ್ಯದೇವಾಲಯಕ್ಕೆ ದಾನ ಮಾಡಬೇಕೆಂದು ಭವಿಷ್ಯಪುರಾಣ ಹೇಳುತ್ತದೆ. ಈ ಸಂಪ್ರದಾಯ 6ನೆಯ ಶತಮಾನದಲ್ಲಿ ಹೆಚ್ಚಾಗಿ ಹರಡಿರಬೇಕು. ಯುವಾನ್ ಚಾಂಗ್ (ನೋಡಿ- ಯುವಾನ್-ಚಾಂಗ್) ಮುಲ್ತಾನಿನ ಸೂರ್ಯ ದೇವಾಲಯದಲ್ಲಿ ಗಾಯಕಿಯರನ್ನು ನೋಡಿದ್ದಾಗಿ ಹೇಳುತ್ತಾನೆ. ಕಾಶ್ಮೀರ ದಲ್ಲಿ 7ನೆಯ ಶತಮಾನದಲ್ಲಿ ಈ ಸಂಪ್ರದಾಯ ಪ್ರಚಲಿತವಾಗಿತ್ತೆಂದು ಕಲ್ಹಣನ ರಾಜತರಂಗಿಣಿಯಿಂದ ತಿಳಿದುಬರುತ್ತದೆ. ಗುಜರಾತಿನ ಸೋಮನಾಥ ದೇವಾಲಯದಲ್ಲಿ 500 ನರ್ತಕಿಯರಿದ್ದುದಾಗಿ ತಿಳಿದು ಬರುತ್ತದೆ.
 
ಪ್ರಾಚೀನ ಕೃತಿಗಳಲ್ಲಿ ಈ ಏಳು ಬಗೆಯ ದೇವದಾಸಿಯರ ಉಲ್ಲೇಖ ವಿದೆ: ದತ್ತಾ(ದೇವಾಲಯಕ್ಕೆ ತನ್ನನ್ನು ಅರ್ಪಿಸಿಕೊಳ್ಳುವವಳು), ವಿಕ್ರೀತಾ (ದೇವಾಲಯದ ಸೇವಾ ಕಾರ್ಯಕ್ಕೆ ತನ್ನನ್ನು ಮಾರಿಕೊಂಡವಳು), ಭೃತ್ಯಾ(ತನ್ನ ಕುಟುಂಬದವರ ಪೋಷಣೆಯ ಸಲುವಾಗಿ ದೇವದಾಸಿ ಯಾದವಳು), ಭಕ್ತಾ(ಭಕ್ತಿ ಭಾವಗಳಿಂದ ದೇವದಾಸಿಯಾದವಳು), ಹೃತಾ (ಅಪಹೃತಳಾಗಿ ಬಂದವಳು; ದೇವಾಲಯಕ್ಕೆ ಉಡುಗೊರೆಯಾಗಿ ಬಂದವಳು), ಅಲಂಕಾರಾ(ದೇವಾಲಯದ ಅಲಂಕರಣ ಕಾರ್ಯಕ್ಕೆ ರಾಜ ಅಥವಾ ಮಂತ್ರಿಯಿಂದ ನಿಯೋಜಿತಳಾದವಳು), ರುದ್ರಗಣಿಕಾ ಅಥವಾ ಗೋಪಿಕಾ (ನಿಯಮಿತ ವೃತ್ತಿವೇತನ ಪಡೆದು ನೃತ್ಯ, ಗಾಯನ ಮಾಡುವವಳು).
೨೧ ನೇ ಸಾಲು:
ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗಗ ಳೆಂಬ ಮಾತುಗಳಿವೆ. ವಿಗ್ರಹಕ್ಕೆ ಸಲ್ಲುವ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಮುಂತಾದುವು ಅಂಗಭೋಗಗಳು. ಗರ್ಭಗೃಹದ ಮುಂದಿನ ರಂಗಸ್ಥಳದಲ್ಲಿ ನಡೆಯುತ್ತಿದ್ದ ಗೀತ-ನೃತ್ಯಗಳು ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಅಗತ್ಯಗಳಾಗಿದ್ದರು.
 
ವೇಶ್ಯೆಯರನ್ನು ಕಾಮಿನಿಯರು ದೇವದಾಸಿ, ಸೂಳೆ, ಮಂಗಳಮುಖಿ, ನಿತ್ಯ ಸುಮಂಗಲಿ, ಬಸವಿ, ನಾಯಕಸಾನಿ, ವಾರಾಂಗನೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇಂಗ್ಲಿಷಿನಲ್ಲಿ ಕೋರ್ಟೆಸಾನ್ ಎನ್ನುತ್ತಾರೆ. ಇದು ಫ್ರೆಂಚ್ ಪದ. ತಂಜಾವೂರಿನ ಬೃಹದೀಶ್ವರ ದೇವಸ್ಥಾನದ ಚೋಳರಾಜನ 1004ರ ಶಾಸನವೊಂದರಲ್ಲಿ ದೇವಸ್ಥಾನದ 400 ದೇವದಾಸಿಯರಿಗೆ ದೇವಾಲಯದ ಸುತ್ತ ನಾಲ್ಕು ಬೀದಿಗಳಲ್ಲಿ ಉಚಿತ ವಸತಿ, ತೆರಿಗೆ ವಿನಾಯ್ತಿಯುಳ್ಳ ಜಮೀನನ್ನು ಉಂಬಳಿಯಾಗಿ ನೀಡಿದ ದಾಖಲೆ ಇದೆ. ಇಂದಿಗೂ ದಕ್ಷಿಣ ಆಫ್ರಿಕದ ಕೆಲವು ಬುಡಕಟ್ಟುಗಳಲ್ಲಿ, ದಕ್ಷಿಣ ಭಾರತದ ಹಲವು ಪ್ರಾಂತಗಳಲ್ಲಿ ಈ ಪದ್ಧತಿ ವಿರಳವಾಗಿ ಕಂಡುಬರುತ್ತದೆ. ಒರಿಸ್ಸದ ಪುರಿ ಜಗನ್ನಾಥ ಮಂದಿರದಲ್ಲಿ ಇದು ವಿಶೇಷವಾಗಿದೆ ಎಂದು ಫ್ರೆಂಚ್ ಯಾತ್ರಿಕ ಬರ್ವಿಯರ್ ದಾಖಲಿಸುತ್ತಾನೆ. ಆಂಧ್ರಪ್ರದೇಶದ ತೆಲಂಗಾಣ ಪ್ರದೇಶದಲ್ಲಿ ದೇವದಾಸಿಯಾಗಲಿರುವ ಹುಡುಗಿಯನ್ನು ಬಸವಿ ಎನ್ನುತ್ತಿದ್ದರು. ಕರ್ನಾಟಕದ ಮಲೆಯ ಮಹದೇಶ್ವರ (ನೋಡಿ) ದೇವಸ್ಥಾನದಲ್ಲಿ ಗುಡ್ಡಿ ಹೆಸರಿನ ದೇವದಾಸಿಯರಿದ್ದಾರೆ. ಇವರನ್ನು ದೇವರ ಗುಡ್ಡಿ ಎಂದೂ ಕರೆಯುತ್ತಾರೆ. ತಮಿಳುನಾಡಿನ ರಾಮೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಪೂಜಾರಿಯ ಜೊತೆಗೆ ಒಬ್ಬ ದೇವದಾಸಿ ಬ್ರಾಹ್ಮಣಕನ್ಯೆಯಂತೆ ವೇಷಧರಿಸಿ, ರುದ್ರಾಕ್ಷಿ ಹಾಕಿಕೊಂಡು ಬರುವ ಪದ್ಧತಿ ಇದೆ. ಈಕೆಯನ್ನು ತಮಿಳಿನಲ್ಲಿ ಮುರೈಕಾರೀ ಎನ್ನುತ್ತಾರೆ. ಗೋವದ ಮಂಗೇಶ ದೇವಾಲಯದಲ್ಲಿ ದೇವದಾಸಿಯರಿದ್ದು ಸೋಮವಾ ರದ ಪೂಜೆಯ ಸಂದರ್ಭದಲ್ಲಿ, ಹಬ್ಬಗಳಲ್ಲಿ ಅವರು ಗಾಯನ-ನರ್ತನ ಮಾಡುತ್ತಾರೆ. ಇಲ್ಲಿನ ಮಲ್ಯ ಊರಿನ ವಿಷ್ಣು ದೇವಾಲಯದ ದೇವದಾಸಿಯರನ್ನು ಭಾವಿನ್ ಎನ್ನುತ್ತಾರೆ.
 
*
ಕರ್ನಾಟಕದ ಬೆಳಗಾಂವಿ ಬಳಿಯ ಸವದತ್ತಿ ಎಲ್ಲಮ್ಮ ದೇವಾಲಯಕ್ಕೆ ಕನ್ಯೆಯರನ್ನು ದೇವದಾಸಿಯಾಗಿ ಬಿಡುವ ಪದ್ಧತಿ ರೂಢಿಯಲ್ಲಿದೆ. ಇವರಿಗೆ ಜೋಗತಿಯರೆಂದು ಹೆಸರು. ಇಲ್ಲಿ ನಪುಂಸಕರೂ ದಾಸರಾ ಗುತ್ತಾರೆ. ಇವರಿಗೆ ಗಂಡು ಜೋಗ್ಯಾಗಳೆಂದು ಹೆಸರು. ಕೆಳವರ್ಗದ ಜನ ಜೋಗತಿಯರಾದರೆ ಜೋಗ್ಯಾಗಳು ಯಾರಾದರೂ ಆಗಬಹುದು. ದಾಸರಾಟ ಒಂದು ಜನಪದ ಕಲೆಯಾಗಿದ್ದು ಇಲ್ಲಿ ಕಾಣಿಸಿಕೊಳ್ಳುವ ದಾಸಿ ದೇವದಾಸಿಯಾಗಿರುತ್ತಾಳೆ. ಈಕೆಯ ಮಕ್ಕಳು ದಾಸರಾಟವನ್ನು ಮುಂದುವರಿಸುತ್ತಾರೆ.
*
ಧಾರ್ಮಿಕ ಪರಿವೇಶವುಳ್ಳ ದೇವದಾಸಿ ಪರಿಕಲ್ಪನೆ ಧಾರ್ಮಿಕ ಗುರು ಹಾಗೂ ಧನಿಕರ ಕಾಮಲಾಲಸೆಯ ಪ್ರತೀಕವಾಗಿ ಕಂಡುಬರುತ್ತದೆ. ಭಾರತೀಯ ಸಂಗೀತ-ನೃತ್ಯ ಪರಂಪರೆಯನ್ನು ಉಳಿಸಿ-ಬೆಳೆಸಿದವರು ದೇವದಾಸಿಯರು. ಆದರೆ ಕ್ರಮೇಣ ಈ ಪದ್ಧತಿಯ ನಿಜವಾದ ಉದ್ದೇಶ ನಾಶವಾಗಿ ಹೀನಾರ್ಥ ಪ್ರಾಪ್ತವಾಯಿತು. ವೃತ್ತಿಗೌರವವಿಲ್ಲದ ಈ ಪದ್ಧತಿಯನ್ನು ವೇಶ್ಯಾವಾಟಿಕೆ ಎಂದು ತಿಳಿಯಲಾಗಿದೆ. ಬ್ರಿಟಿಷರ ಅವಧಿಯಲ್ಲಿ ಇದನ್ನು ನಿಷೇಧಿಸುವ ಕಾಯಿದೆಗಳು ಜಾರಿಯಾದುವು. ಮುಂಬಯಿ (1923), ಉತ್ತರ ಪ್ರದೇಶ ಮತ್ತು ಬಂಗಾಲ (1933), ಪಂಜಾಬ್ (1935), ಬಿಹಾರ (1948) ಹಾಗೂ ಮೈಸೂರು ರಾಜ್ಯ (1956) ಗಳಲ್ಲಿ ಇದು ವಿವಿಧ ಹಂತಗಳಲ್ಲಿ ಜಾರಿಗೆ ಬಂದಿತು. ಭಾರತ ಸರ್ಕಾರ ಸ್ತ್ರೀ ಮತ್ತು ಯುವತಿಯರ ಅನೈತಿಕ ವ್ಯವಹಾರ ನಿಷೇಧ ಕಾಯಿದೆಯನ್ನು 1956ರಲ್ಲಿ ದೇಶಾದ್ಯಂತ ಏಕರೂಪವಾಗಿ ಜಾರಿಗೆ ತಂದಿದೆ.
 
"https://kn.wikipedia.org/wiki/ವೇಶ್ಯಾವೃತ್ತಿ" ಇಂದ ಪಡೆಯಲ್ಪಟ್ಟಿದೆ