ಕನ್ನಡದಲ್ಲಿ ಹಾಸ್ಯ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Orphan page, add template |
|||
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
ಹಳಗನ್ನಡ ಸಾಹಿತ್ಯದಲ್ಲಿ ಹಾಸ್ಯವನ್ನೇ ಪ್ರಧಾನವಾಗಿ ವಸ್ತುವಾಗುಳ್ಳ ಕೃತಿರಚನೆಯ ಪ್ರಯತ್ನ ನಡೆದಿಲ್ಲವಾದರೂ ಹಾಸ್ಯದ ಸನ್ನಿವೇಶಗಳು ಕೃತಿಯ ಒಡಲಲ್ಲಿ ಬಂದಾಗ ಕವಿಗಳು ತಮ್ಮ ಹಾಸ್ಯ ಪ್ರೌಢಿಮೆಯನ್ನು ಮೆರೆದಿದ್ದಾರೆ. ಕಾವ್ಯದ ಪ್ರಸ್ತಾವನಾ ಭಾಗದಲ್ಲಿ ಬರುವ ಕುಕವಿನಿಂದೆಯಂಥ ಸಿದ್ಧ ಬರೆಹರೂಪಗಳಲ್ಲಿ, ಶೃಂಗಾರ ಸನ್ನಿವೇಶಗಳಲ್ಲಿ, ರಾಜರ ಸುಖಸಂಕಥಾವಿನೋದಗಳಲ್ಲಿ, ಸಾಮಯಿಕ ಚತುರೋಕ್ತಿಗಳಲ್ಲಿ, ಯುದ್ಧಪ್ರಸಂಗಗಳಲ್ಲಿ, ವೀರರ ಮೂದಲಿಕೆಯ ಮಾತುಗಳಲ್ಲಿ, ವಾಗ್ವಾದದ ಸಂದರ್ಭಗಳಲ್ಲಿ ಇಂಥ ಹತ್ತಾರು ಕಡೆ ಹಾಸ್ಯ ರಚನೆಗೆ ಅವರು ಅವಕಾಶ ಮಾಡಿಕೊಂಡಿದ್ದಾರೆ. ಕನ್ನಡದ ಅಸಂಖ್ಯಾತ ಶಾಸನಗಳಲ್ಲಿ ಹಾಸ್ಯ ಪ್ರಸಂಗಗಳು ಅಲ್ಲಲ್ಲಿ ಮಿಂಚುವುದನ್ನು ಕಾಣಬಹುದು. ಅಂಥ ಒಂದು ಶಾಸನದ ನಾಯಕ ವಿಕ್ರಮಸಾಂತ. ರಣರಂಗದಲ್ಲಿ ಇವನ ಪ್ರತಾಪ ಅಷ್ಟಿಷ್ಟಲ್ಲ. ಈತ ಕೊಂದ ಶತ್ರುಗಳ ಹೆಣಗಳನ್ನುಂಡ ಮರುಳುಗಳಿಗೆ ಹಬ್ಬ, ಅಜೀರ್ಣ. ಅವು ವೈದ್ಯ ಮರುಳಿನ ಬಳಿಗೆ ಹೋದಾಗ ಆ ವೈದ್ಯ ಸೂಚಿಸಿದ ಔಷಧವಾದರೂ ಮರುಳುಗಳಿಗೆ ಮಾತ್ರವೇ ಉಚಿತ. ಅಜೀರ್ಣವಾದಾಗ ಆನೆ ನುಂಗುವುದೇ ಮದ್ದು. ಮರುಳುಗಳು ಹಾಗೆಯೇ ಮಾಡಿದುವು. ರೋಗ ವಾಸಿಯಾಯ್ತು. ವಿಸಂಗತ ವಿಚಾರದಿಂದ ಮಿನುಗುವ ಹಾಸ್ಯಕ್ಕೆ ಇದೊಂದು ಉತ್ತಮ ದೃಷ್ಟಾಂತ.
==ಕನ್ನಡದ ಪ್ರಥಮ ಗ್ರಂಥ==
|