ವಿ.ಹರಿಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Karnataka": unwanted links. (TW)
No edit summary
೧೯ ನೇ ಸಾಲು:
}}
 
ವಿ ಹರಿಕೃಷ್ಣ ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ. ಅವರು ಮುಖ್ಯವಾಗಿ ಕನ್ನಡ ಚಲನಚಿತ್ರಗಳಿಗಾಗಿ ಸಂಗೀತವನ್ನು ಸಂಯೋಜಿಸಿದ್ದಾರೆ. ೨೦೦೬ ರಲ್ಲಿ ನಟ ದರ್ಶನ್ ಅವರ ಮೊದಲ ನಿರ್ಮಾಣವಾದ ಜೊತೆ ಜೊತೆಯಲಿ ಎಂಬ ಚಿತ್ರಕ್ಕೆ ಸ್ವತಂತ್ರ ಸಂಯೋಜಕರಾಗಿ ಹರಿಕೃಷ್ಣ ಅವರು ಚೊಚ್ಚಲ ಪ್ರವೇಶ ಮಾಡಿದರು. ತದನಂತರ ಅವರು ದರ್ಶನ ಅವರ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ನೀಡುವ ಮೂಲಕ, ಕನ್ನಡ ಚಲನಚಿತ್ರಕ್ಕೆ ಇವರ ಜೋಡಿ ಹಿಟ್ ಸಾಂಗ್‌ಗಳನ್ನು ನೀಡುತ್ತಾ ಬಂದಿತು. ಅಂದಿನ ಹಂಸಲೇಖ ಮತ್ತು ರವಿಚಂದ್ರನ್, ಇಂದಿನ ದರ್ಶನ್ ಮತ್ತು ಹರಿಕೃಷ್ಣ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಅವರು "ಡಿ-ಬೀಟ್ಸ್" ಎಂಬ ಆಡಿಯೊ ಕಂಪನಿಯನ್ನು ಹೊಂದಿದ್ದು, ಬುಲ್‌ಬುಲ್ (೨೦೧೩) ಚಿತ್ರದಿಂದ ಸಂಗೀತವನ್ನು ತನ್ನ ಸ್ವಂತ ಕಂಪನಿಯಲ್ಲಿ ಸಂಯೋಜಿಸಿ ಜನರ ಮೆಚ್ಚುಗೆ ಪಡೆದರು.. ಹರಿಕೃಷ್ಣ ೨೦೦೮ ರಲ್ಲಿ ಗಾಲಿಪmಕ್ಕಾಗಿ ಮೂರು ಅನುಕ್ರಮ ಫಿಲ್ಮ್ಪೇರ್ ಪ್ರಶಸ್ತಿ, ೨೦೦೯ ರಲ್ಲಿ ರಾಜ್ ದಿ ಶೋಮ್ಯಾನ್ ಮತ್ತು ೨೦೧೦ ರಲ್ಲಿ ಜಾಕಿ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಪ್ರಶಸ್ತಿ ಗಳಿಸಿದ್ದಾರೆ.
'''ಹರಿಕೃಷ್ಣ''' ಕನ್ನಡ ಚಿತ್ರರಂಗದ ಒಬ್ಬ ಸಂಗೀತ ನಿರ್ದೇಶಕ ಮತ್ತು ಗೀತಸಾಹಿತಿ.
 
==ವಯಕ್ತಿಕ ವಿವರ==
ಹರಿಕೃಷ್ಣ ಅವರು ೧೯೭೪ ಬೆಂಗಳೂರಿನಲ್ಲಿ ಜನಿಸಿದರು. ಎಂಟು ವರ್ಷ ವಯಸ್ಸಿನಲ್ಲೇ, ಅವರು ೧೯೩೩ರಲ್ಲಿ ತನ್ನ ತಂದೆಯ ಹೆಸರನ್ನಿಟ್ಟುಕೊಂಡು ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ನುಡಿಸಲು ಆರಂಭಿಸಿದರು. ೧೯೮೭ ರಲ್ಲಿ ವೃತ್ತಿಪರವಾಗಿ ಕೀಬೋರ್ಡ್ ನುಡಿಸಲು ಪ್ರಾರಂಭಿಸಿ ಅವರ ಅಧ್ಯಯನವನ್ನು ನಿಲ್ಲಿಸಿದರು. ಅವರ ಮೊದಲ ವೃತ್ತಿಪರ ನಿಯೋಜನೆಯಲ್ಲಿ ಅವರು ಮನೋರಂಜನ್ ಪ್ರಭಾಕರ್ ಅವರೊಂದಿಗೆ ಕೆಲಸ ಮಾಡಿದರು. ೧೯೯೦ ರಲ್ಲಿ ಅವರ ತಂದೆಯನ್ನು ಕಳೆದುಕೊಂಡ ನಂತರ, ಹರಿಕೃಷ್ಣ ಅವರು ಮೆಕ್ಯಾನಿಕ್ ಅಂಗಡಿಯನ್ನು ವಹಿಸಿಕೊಂಡರು, ಅಲ್ಲಿ ಅವರು ಮೆಕ್ಯಾನಿಕ್ ಆಗಿ ಕೆಲಸ ಮಾಡಿದರು. ೧೯೯೪ ರಲ್ಲಿ, ಸಾಧು ಕೋಕಿಲಾ ಅವರ ಒತ್ತಾಯದ ನಂತರ, ಹರಿಕೃಷ್ಣ ಮತ್ತೆ ಸಂಗೀತವನ್ನು ಪ್ರಾರಂಬಿಸಿದರು. ನಂತರ ಹರಿಕೃಷ್ಣ ಗಾಯಕಿ ವಾಣಿಯನ್ನು ಮದುವೆಯಾಗುವುದರ ಮೂಲಕ ವಿವಾಹ ಜೀವನಕ್ಕೆ
 
==ವೃತ್ತಿಜೀವನ==
೧೯೯೦ ರ ದಶಕದಲ್ಲಿ ಹಂಸಲೇಖಾ, ವಿ. ರವಿಚಂದ್ರನ್, ಸಾಧು ಕೋಕಿಲಾ, ಗುರುಕಿರಣನ್ ಮೊದಲಾದ ಹಲವಾರು ಪ್ರಮುಖ ಸಂಗೀತ ನಿರ್ದೇಶಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಹರಿಕೃಷ್ಣ ಅವರು ಅನೇಕ ಸಂಗೀತ ನಿರ್ದೇಶಕರ ಕೀಬೋರ್ಡ್ರ್ ಆಗಿ ಕೆಲಸ ಮಾಡಿದ್ದಾರೆ. ಅವರು ಚಲನಚಿತ್ರಗಳು, ಕಿರುಚಿತ್ರಗಳು, ಜಾಹೀರಾತು ಮತ್ತು ಖಾಸಗಿ ಸಂಗೀತದ ಅಲ್ಬಮ್‌ಗಳಿಗಾಗಿ ಸಂಗೀತ ಕೆಲಸ ಮಾಡುತ್ತಾ ಬಂದರು.
 
'''ಸಂಗೀತ ನಿರ್ದೇಶನ'''
ಅವರು ೧೫ಕ್ಕಿಂತ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಕೆಲವು ಹಾಡುಗಳನ್ನೂ ಹಾಡಿದ್ದಾರೆ. ಅವರು ಕನ್ನಡ ಸಂಗೀತೋದ್ಯಮಕ್ಕೆ ನೆನಪಿನಲ್ಲಿ ಉಳಿಯುವ ಹಾಡುಗಳುಳ್ಳ ''ಜೊತೆ ಜೊತೆಯಲಿ'' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.<ref>http://www.whereincity.com/news/6/11951</ref> ಇವರು ಸಂಗೀತ ನಿರ್ದೇಶಕ [[ಜಿ.ಕೆ.ವೆಂಕಟೇಶ್|ಜಿ.ಕೆ. ವೆಂಕಟೇಶ್]]ಅವರ ಅಳಿಯ.
೨೦೦೬ ರಲ್ಲಿ, ದಿನಕರ್ ತೂಗುದೀಪ್ ಮತ್ತು ನಟ ದರ್ಶನ್ ಮೊದಲ ನಿರ್ಮಾಣವಾದ ಬಂದ ಜೊತೆ ಜೊತೆಯಲಿ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಹರಿಕೃಷ್ಣ ಮೊದಲು ಸಹಿ ಹಾಕಿದರು. ಈ ಸಮಯದವರೆಗೂ, ನಟ- ನಿರ್ದೇಶಕ ವಿ. ರವಿಚಂದ್ರನ್ ಅವರ ಆಶ್ರಯದಲ್ಲಿ ಹರಿಕೃಷ್ಣ ಅವರು ಸಂಗೀತಗಾರರಾಗಿದ್ದರು. ಜೊತೆ ಜೊತೆಯಲಿ ಚಿತ್ರದಲ್ಲಿ ಪ್ರೇಮ್ ಮತ್ತು ರಮ್ಯಾ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು ಮತ್ತು ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದರು. ದಿನಕರ ತೂಗುದೀಪ ಅವರು ನಿರ್ದೇಶಿಸಿದರು. ಈ ಚಿತ್ರ ಸುಮಾರು ೨೫ ವಾರಗಳವರೆಗೆ ಯಶಸ್ವಿಯಾಗಿ ಪ್ರದರ್ಶನಕಂಡಿತು. ಹಾಗೆಯೆ ಈ ಚಿತ್ರದ ಹಾಡುಗಳು ಜನರ ಮನಸನ್ನು ಗೆದ್ದಿತು. ಇದರ ನಂತರ ದರ್ಶನ್ ಅವರ ನವಗ್ರಹ ಹಾಗೆಯೆ ಭೂಪತಿ (೨೦೦೭), ಗಜ (೨೦೦೮), ಪೊರ್ಕಿ (೨೦೧೦), ಪ್ರಿನ್ಸ್ (೨೦೧೧), ಸಾರಥಿ (೨೦೧೧) ಮತ್ತು ಚಿಂಗಾರಿ (೨೦೧೨) ಹೀಗೆ ಸಾಲು ಸಾಲಾಗಿ ಇವರಿಬ್ಬರ ಕಾಂಬಿನೇಷನ್‌ನ ಸಂಗೀತವು ಜನರ ಮನಸನ್ನು ಸೆಳೆಯಲು ಪ್ರಾರಂಬಿಸಿತು.. ಮತ್ತು ಉತ್ತಮ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಹರಿಕೃಷ್ಣ ಪಾತ್ರರಾದರು.
 
ಯೋಗರಾಜ್ ಭಟ್ಟ ಅವರ ಗಾಳಿಪಟ ಚಿತ್ರದ ಮೂಲಕ ಇವರಿಬ್ಬರ ಸ್ನೆÃಹ ಬೆಳೆಯಿತು. ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಹರಿಕೃಷ್ಣ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತು. ಅಂಬಾರಿ, ರಾಮ್, ಮಳೆಯಲಿ ಜೊತೆಯಲಿ ಮತ್ತು ರಾಜ್, ದಿ ಶೋಮ್ಯಾನ್ ಮೊದಲಾದ ಚಲನಚಿತ್ರಗಳಿಗೆ ಯಶಸ್ವಿ ಧ್ವನಿಮುದ್ರಿಕೆಗಳನ್ನು ಹಿಂದಿರುಗಿಸುವ ಮೂಲಕ ೨೦೦೯ರ ವರ್ಷದಲ್ಲಿ ಅವರು ಯಶಸ್ವಿ ಸಂಗೀತ ನಿರ್ದೇಶಕ ಎಂಬ ಮಾತಿಗೆ ಭಾಜನರಾದರು.
೨೦೧೦ ರಲ್ಲಿ, ೮ ಚಿತ್ರಗಳಿಗೆ ಹರಿಕೃಷ್ಣ ಸಂಯೋಜನೆ ಮಾಡಿದರು ಮತ್ತು ಅವುಗಳಲ್ಲಿ ಹೆಚ್ಚಿನವುಗಳು ಬಿಡುಗಡೆಯಾದ ನಂತರ ಉತ್ತಮ ಪ್ರತಿಕ್ರಿಯೆ ದೊರೆಯಿತು. ೨೦೧೧ ರ ವರ್ಷದಲ್ಲಿ ಅವರು ೧೪ ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿದರು. ರಾಜಕುಮಾರ, ಹುದುಗುರು, ವಿಷ್ಣುವರ್ಧನ, ಸಾರಥಿ, ಪರಮಾತ್ಮ ಮತ್ತು ಜೋಗಯ್ಯ ಈ ಚಿತ್ರಗಳು ಹರಿಕೃಷ್ಣ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
 
 
 
"https://kn.wikipedia.org/wiki/ವಿ.ಹರಿಕೃಷ್ಣ" ಇಂದ ಪಡೆಯಲ್ಪಟ್ಟಿದೆ