ಭಾರತದ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
File renamed. (GlobalReplace v0.6.5)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೦೩ ನೇ ಸಾಲು:
ಅದು ಕೇಂದ್ರದಲ್ಲಿ ಜನತಾದಳದ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಅಲ್ಪಮತದ ಸರ್ಕಾರವಿದ್ದ ಕಾಲಾವಧಿ. ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ದಲಿತ ಸಮುದಾಯದ ಕೆ.ಆರ್. ನಾರಾಯಣ್​ರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಇವರಿಗೆ ಎದುರಾಗಿ ಸೆಡ್ಡು ಹೊಡೆದವರು ಟಿ.ಎನ್. ಶೇಷನ್; ದೇಶದ ಚುನಾವಣಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಚೊಕ್ಕಗೊಳಿಸಲು ಮಾಡಿದ ದೃಢಯತ್ನಗಳಿಂದಾಗಿ ಜನಮೆಚ್ಚುಗೆ ಗಳಿಸಿ, ನಿವೃತ್ತರೂ ಆಗಿದ್ದ ಶೇಷನ್ ಅಖಾಡಕ್ಕಿಳಿದಾಗ ಸಹಜವಾಗಿಯೇ ಹಲವರ ಹುಬ್ಬೇರಿದವು. ಶೇಷನ್​ಗೆ ಒತ್ತಾಸೆಯಾಗಿದ್ದ ಶಿವಸೇನಾ ಪಕ್ಷದ ಬೆಂಬಲ ಮತ್ತು ಮುಖ್ಯ ಚುನಾವಣಾಧಿಕಾರಿಯಾಗಿ ಅವರಿಗೆ ಅಷ್ಟು ಹೊತ್ತಿಗಾಗಲೇ ದಕ್ಕಿದ್ದ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗುವುದೇ ಎಂಬ ಕುತೂಹಲ ಹರಳುಗಟ್ಟಿತ್ತು. ಆದರೆ 9.56 ಲಕ್ಷ ಮತಗಳನ್ನು ಗಳಿಸುವ ಮೂಲಕ ನಾರಾಯಣನ್ ಗೆಲುವಿನ ನಗೆ ಬೀರಿದರು. ಮಣಿದ ಶೇಷನ್​ಗೆ ದಕ್ಕಿದ್ದು 50,631 ಮತಗಳು ಮಾತ್ರ.
 
;ಪ್ರತಿಭಾ ಪಾಟೀಲ್ (2007-2012):
 
ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಸುವ ಇರಾದೆ ಬಿಜೆಪಿಯದಾಗಿತ್ತು; ಆದರೆ ಇತರ ಪಕ್ಷಗಳಿಂದ ಯಾವುದೇ ಬೆಂಬಲ ದಕ್ಕುವ ಸಾಧ್ಯತೆ ಕಂಡುಬರಲಿಲ್ಲ. ಹೀಗಾಗಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್​ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು. ಕಾಂಗ್ರೆಸ್, ಮೈತ್ರಿಸರ್ಕಾರದ ಸಹಭಾಗಿಗಳು ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿದ ಪ್ರತಿಭಾ 6.38 ಲಕ್ಷ ಮತಗಳನ್ನು ಗಳಿಸಿ ಚುನಾಯಿತರಾಗಿ, ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. ಕೊಲೆ ಪ್ರಕರಣವೊಂದರಲ್ಲಿ ತಮ್ಮ ಸೋದರನನ್ನು ರಕ್ಷಿಸಲು ಪ್ರತಿಭಾ ಯತ್ನಿಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳು ಈ ಚುನಾವಣಾ ಸಂದರ್ಭದಲ್ಲಿ ಕೇಳಿ ಬಂದರೂ 3ನೇ ಎರಡರಷ್ಟು ಮತ ದಕ್ಕಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಶೇಖಾವತ್​ರಿಗೆ ದಕ್ಕಿದ್ದು 3.31 ಲಕ್ಷ ಮತಗಳು ಮಾತ್ರ.
 
;ಡಾ. ಎಪಿಜೆ ಅಬ್ದುಲ್ ಕಲಾಂ(2002-2007):
 
ಅದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಒಕ್ಕೂಟವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಲಾವಧಿ. ಹಲವು ಪಕ್ಷಗಳ ಮೈತ್ರಿ ನೆಚ್ಚಿದ್ದ ‘ಖಿಚಡಿ ಸರ್ಕಾರ’ ಅವರದಾಗಿತ್ತು. 2ನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಯುವ ಕನಸು ಕಾಣುತ್ತಿದ್ದರು ಕೆ.ಆರ್. ನಾರಾಯಣನ್. ಕಾಂಗ್ರೆಸ್, ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲ ಅವರಿಗಿದ್ದುದೇ ಇದಕ್ಕೆ ಕಾರಣ. ಆದರೆ ವಾಜಪೇಯಿ ಇದಕ್ಕೊಪ್ಪಲಿಲ್ಲ. ಆಗ, ಉಪರಾಷ್ಟ್ರಪತಿ ಕೃಷ್ಣಕಾಂತ ಹೆಸರು ಚಲಾವಣೆಗೆ ಬಂದಿತಾದರೂ, ಶಿವಸೇನೆ ಮತ್ತು ಕೆಲ ಬಿಜೆಪಿ ನಾಯಕರು ಪ್ರಸ್ತಾಪಿಸಿದ್ದು ಮಾಜಿ ರಾಜ್ಯಪಾಲ ಪಿ.ಸಿ. ಅಲೆಕ್ಸಾಂಡರ್ ಹೆಸರನ್ನು. ಆದರೆ ವಿಪಕ್ಷಗಳು ಇದನ್ನು ತಿರಸ್ಕರಿಸಿದವು. ಆಗ ವಾಜಪೇಯಿ ‘ಕ್ಷಿಪಣಿ ವಿಜ್ಞಾನಿ’ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೆಸರನ್ನು ಸೂಚಿಸಿದರು. ಈ ಪ್ರಸ್ತಾವಕ್ಕೆ ಸಮಾಜವಾದಿ ಪಕ್ಷ, ತೆಲುಗು ದೇಶಂ, ಎಐಎಡಿಎಂಕೆ ಮತ್ತು ಬಿಎಸ್​ಪಿ ಹಸಿರು ನಿಶಾನೆ ತೋರಿದವು. ತರುವಾಯದಲ್ಲಿ ಕಾಂಗ್ರೆಸ್ ಕೂಡ ಸಮ್ಮತಿಸಿತು. ಎಡಪಕ್ಷಗಳು ಲಕ್ಷ್ಮಿ ಸೆಹಗಲ್​ರನ್ನು ಕಣಕ್ಕಿಳಿಸಿದರೂ, ಅವರಿಗೆ ದಕ್ಕಿದ್ದು 1.07 ಲಕ್ಷ ಮತಗಳು. 9.23 ಲಕ್ಷ ಮತಗಳನ್ನು ದಕ್ಕಿಸಿಕೊಂಡ ಕಲಾಂ ವಿಜಯದ ನಗೆ ಬೀರಿದರು.
 
 
;ಪ್ರತಿಭಾ ಪಾಟೀಲ್ (2007-2012):
 
ಅಬ್ದುಲ್ ಕಲಾಂರನ್ನು ಎರಡನೇ ಅವಧಿಗೂ ರಾಷ್ಟ್ರಪತಿಯಾಗಿ ಮುಂದುವರಿಸುವ ಇರಾದೆ ಬಿಜೆಪಿಯದಾಗಿತ್ತು; ಆದರೆ ಇತರ ಪಕ್ಷಗಳಿಂದ ಯಾವುದೇ ಬೆಂಬಲ ದಕ್ಕುವ ಸಾಧ್ಯತೆ ಕಂಡುಬರಲಿಲ್ಲ. ಹೀಗಾಗಿ ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್​ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು. ಕಾಂಗ್ರೆಸ್, ಮೈತ್ರಿಸರ್ಕಾರದ ಸಹಭಾಗಿಗಳು ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಕಣಕ್ಕಿಳಿದ ಪ್ರತಿಭಾ 6.38 ಲಕ್ಷ ಮತಗಳನ್ನು ಗಳಿಸಿ ಚುನಾಯಿತರಾಗಿ, ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡರು. ಕೊಲೆ ಪ್ರಕರಣವೊಂದರಲ್ಲಿ ತಮ್ಮ ಸೋದರನನ್ನು ರಕ್ಷಿಸಲು ಪ್ರತಿಭಾ ಯತ್ನಿಸಿದ್ದಾರೆ ಎಂಬುದೂ ಸೇರಿದಂತೆ ಹಲವು ಆರೋಪಗಳು ಈ ಚುನಾವಣಾ ಸಂದರ್ಭದಲ್ಲಿ ಕೇಳಿ ಬಂದರೂ 3ನೇ ಎರಡರಷ್ಟು ಮತ ದಕ್ಕಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಶೇಖಾವತ್​ರಿಗೆ ದಕ್ಕಿದ್ದು 3.31 ಲಕ್ಷ ಮತಗಳು ಮಾತ್ರ.
 
 
;ಪ್ರಣಬ್ ಮುಖರ್ಜಿ (2012-2017):
"https://kn.wikipedia.org/wiki/ಭಾರತದ_ರಾಷ್ಟ್ರಪತಿ" ಇಂದ ಪಡೆಯಲ್ಪಟ್ಟಿದೆ