ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೮೨ ನೇ ಸಾಲು:
ವಜ್ರವು ನದಿಗಳು ಹೊಡೆದುಕೊಂಡುಬಂದ, ಗ್ರಾವೆಲ್, ಮರಳು, ಅಥವಾ ಜೇಡಿಮಣ್ಣಿನಲ್ಲಿ ಬೆಣಚುಕಲ್ಲು, ಕುರಂಗದಕಲ್ಲು ಮೊದಲಾದ ಕಲ್ಲುಗಳೊಡನೆಯೂ, ಚಿನ್ನ, ಪ್ಲಾಟಿನಮ್ ಲೋಹಗಳೊಡನೆಯೂ, ಬೇರೆ ಬೇರೆ ಹಳಕುಗಳಾಗಿ ಸೇರಿಯೂ, ಕಂಗ್ಲಾಮರೇಟ್ ಎಂಬ ಶಿಲಾ ವಿಶೇಷದಲ್ಲಿಯೂ, ದಕ್ಷಿಣ ಆಫ್ರಿಕದ ,ಕಿಂಬರ್ಲಿ’ ಪ್ರಾಂತದಲ್ಲಿ ಸಿಕ್ಕುವ “ಕಿಂಬರ್ಲೈಟ್’’ ಎಂಬ ಹಸಿರು ಮತ್ತು ನೀಲಿ ಮಿಶ್ರವಾದ ಖನಿಜ ವಿಶೇಷದಲ್ಲಿಯೂ ದೊರೆಯುವುದು. ಪ್ರಪಂಚದಲ್ಲಿ ವಜ್ರಗಳು ಸಿಕ್ಕುವ ಮುಖ್ಯವಾದ ಪ್ರದೇಶಗಳು ಮೂರು.
# ದಕ್ಷಿಣ ಆಫ್ರಿಕ – ಇಲ್ಲಿ 1870 ನೆ ಇಸವಿಯಿಂಯುವ ವಜ್ರ ತೆಗೆಯುವ ಕೆಲಸವು ದಿನೇ ದಿನೇ ಅಭಿವೃದಿ ಹೊಂದಿ, ಈಗ ಪ್ರಪಂಚದ ಇತರ ದೇಶಗಳಲ್ಲಿ ಆ ಕೆಲಸವು ನಿಂತುಹೋಗುವಂತೆ ಆಗಿರುತ್ತದೆ. ಇಲ್ಲಿನ ಗಣಿಗಳಿಂದ ತೆಗೆದ ವಜ್ರಗಳೇ ಪ್ರಪಂಚಕ್ಕೆಲ್ಲಾ ಈಗ ಸರಬರಾಜು ಆಗುತ್ತಿರುವುದು. ಸಾಧಾರಣವಾಗಿ ಪೂರ್ವಕಾಲದಲ್ಲಿ ಮಾನನಿಯವಾದವುಗಳಿಗೆಲ್ಲಾ ಇಂಡಿಯಾ ದೇಶವೇ ತೌರುಮನೆಯಾಗಿದ್ದಂತೆ ವಜ್ರಕ್ಕೂ ಇದೇ ತೌರುಮನೆಯಾಗಿತ್ತು. 18ನೆಯ ಶತಮಾನದ ಆರಂಭದವರೆಗೂ ಪ್ರಪಂಚದ ಎಲ್ಲಾ ಪ್ರಾಂತ್ಯಗಳಿಗೂ ಇಂಡಿಯಾ ದೇಶದಿಂದಲೇ ವಜ್ರಗಳು ಹೋಗಬೇಕಾಗಿತ್ತು. ಪ್ರಸಿದ್ಧಿ ಹೊಂದಿದ ಗೋಲುಕೊಂಡೆಯ ವಜ್ರದ ಗಣಿಗಳಿಂದಲೇ ‘ಕೋಹಿನೂರ್’ ಮೊದಲಾದ ಸುಪ್ರಸಿದ್ಧಗಳಾದ ರತ್ನಗಳು ಬಂದದ್ದು. 1665 ನೆ ಇಸವಿಯಲ್ಲಿ ಗೋಲ್ಕೊಂಡೆಗೆ ವಜ್ರವ್ಯಾಪಾರಕ್ಕಾಗಿ ಬಂದಿದ್ದ ಫ್ರೆಂಚ್ ದೇಶಸ್ಥನಾದ ,ಟ್ಯಾನರ್ನಿಯರ್’ ಎಂಬ ದೇಶ ಸಂಚಾರಿಯು ಆ ಪ್ರಾಂತ್ಯದಲ್ಲಿ ಆಗ ಅರವತ್ತು ಸಾವಿರ ಜನರು ವಜ್ರವನ್ನು ತೆಗೆಯುವ ಕೆಲಸದಲ್ಲಿ ನಿಯತರಾಗಿದ್ದರೆಂದು ಬರೆದಿರುತ್ತಾನೆ. ಈ ಗಣಿಗಳು ಈಗ ಬಿದ್ದಿವೆ. ಪ್ರಕೃತದಲ್ಲಿ ಇಂಡಿಯಾ ದೇಶದ ವಜ್ರದ ಗಣಿಗಳು ಮುಂದೆ ಹೇಳುವ ಪ್ರಾಂತಗಳಲ್ಲಿರುವವು.▼
▲(2) ದಕ್ಷಿಣ ಅಮೇರಿಕ – ಇಲ್ಲಿ 18ನೆಯ ಶತಮಾನದ ಮಧ್ಯದಿಂದ ವಜ್ರಗಳನ್ನು ತೆಗೆಯುತ್ತಿದ್ದಾರೆ.
▲ಸಾಧಾರಣವಾಗಿ ಪೂರ್ವಕಾಲದಲ್ಲಿ ಮಾನನಿಯವಾದವುಗಳಿಗೆಲ್ಲಾ ಇಂಡಿಯಾ ದೇಶವೇ ತೌರುಮನೆಯಾಗಿದ್ದಂತೆ ವಜ್ರಕ್ಕೂ ಇದೇ ತೌರುಮನೆಯಾಗಿತ್ತು. 18ನೆಯ ಶತಮಾನದ ಆರಂಭದವರೆಗೂ ಪ್ರಪಂಚದ ಎಲ್ಲಾ ಪ್ರಾಂತ್ಯಗಳಿಗೂ ಇಂಡಿಯಾ ದೇಶದಿಂದಲೇ ವಜ್ರಗಳು ಹೋಗಬೇಕಾಗಿತ್ತು. ಪ್ರಸಿದ್ಧಿ ಹೊಂದಿದ ಗೋಲುಕೊಂಡೆಯ ವಜ್ರದ ಗಣಿಗಳಿಂದಲೇ ‘ಕೋಹಿನೂರ್’ ಮೊದಲಾದ ಸುಪ್ರಸಿದ್ಧಗಳಾದ ರತ್ನಗಳು ಬಂದದ್ದು. 1665 ನೆ ಇಸವಿಯಲ್ಲಿ ಗೋಲ್ಕೊಂಡೆಗೆ ವಜ್ರವ್ಯಾಪಾರಕ್ಕಾಗಿ ಬಂದಿದ್ದ ಫ್ರೆಂಚ್ ದೇಶಸ್ಥನಾದ ,ಟ್ಯಾನರ್ನಿಯರ್’ ಎಂಬ ದೇಶ ಸಂಚಾರಿಯು ಆ ಪ್ರಾಂತ್ಯದಲ್ಲಿ ಆಗ ಅರವತ್ತು ಸಾವಿರ ಜನರು ವಜ್ರವನ್ನು ತೆಗೆಯುವ ಕೆಲಸದಲ್ಲಿ ನಿಯತರಾಗಿದ್ದರೆಂದು ಬರೆದಿರುತ್ತಾನೆ. ಈ ಗಣಿಗಳು ಈಗ ಬಿದ್ದಿವೆ. ಪ್ರಕೃತದಲ್ಲಿ ಇಂಡಿಯಾ ದೇಶದ ವಜ್ರದ ಗಣಿಗಳು ಮುಂದೆ ಹೇಳುವ ಪ್ರಾಂತಗಳಲ್ಲಿರುವವು.
▲(1)ಪೆನ್ನಾರು ನದಿ ತೀರದಲ್ಲಿ ಕಡಪಾಬಳಿ ಚೆನ್ನೂರು ಪ್ರಾಂತ,
▲(2) ಪೆನ್ನಾರು ಕೃಷ್ಣಾನದಿಗಳಿಗೆ ಮಧ್ಯೆ ಇರುವ ಕರ್ನೂಲು ಪ್ರಾಂತ,
▲(3) ಕೃಷ್ಣಾ ತೀರದಲ್ಲಿ ಬೆಜವಾಡದ ಬಳಿ ಕೊಲ್ಲೇರ್ (ಕೊಲ್ಲೂರು?) ಪ್ರಾಂತ,
▲(4) ಮಹಾನದಿ ತೀರದಲ್ಲಿ ಸಾಂಬಲಪುರದ ಪ್ರಾಂತ,
▲(5) ಬಂದಲಖಂಡಿನಲ್ಲಿ ಪನ್ನಾಪ್ರಾಂತ.
ದಕ್ಷಿಣ ಆಫ್ರಿಕಾ ದೇಶದಲ್ಲಿ ವಜ್ರಗಳು ವಿಶೇಷವಾಗಿ ತೆಗೆಯುವುದು ಪ್ರಾರಂಭವಾದಾಗಿನಿಂದ ಇಂಡಿಯಾ ದೇಶದಲ್ಲಿನ ವಜ್ರಗಳ ಸಂಗ್ರಹವು ಮೂಲೆಗೆ ಬಿತ್ತೆಂದೇ ಹೇಳಬೇಕು. ಚರಿತ್ರೆಯಲ್ಲಿ ಸುಪ್ರಸಿದ್ಧಗಳಾದ ದೊಡ್ಡ ವಜ್ರಗಳೆಲ್ಲವೂ ಇಂಡಿಯಾ ದೇಶದಲ್ಲಿ ಸಿಕ್ಕಿದವುಗಳೇ. ಸಾಮಾನ್ಯವಾಗಿ ಗೋಲ್ಕೊಂಡದ ಗಣಿಗಳೆಂದು ಹೆಸರನ್ನು ಪಡೆದ ಕೊಲ್ಲೇರು ಪ್ರಾಂತ್ಯದ ಗಣಿಗಳಲ್ಲಿಯೇ ಈ ದೊಡ್ಡ ವಜ್ರಗಳನೇಕವು ಸಿಕ್ಕಿರುವುವು. 1881ನೆ ಇಸವಿಯಲ್ಲಿ ಚೆನ್ನೂರು ಪ್ರಾಂತದ ವಜ್ರ ಕರೂರಿನಲ್ಲಿ 67/0 ಕ್ಯಾರಟ್ ತೂಕದ ಒಂದು ವಜ್ರವು ದೊರೆಯಿತು.
|