ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ಕರ್ನಾಟಕ]]ದ, [[ಬಂಟ್ವಾಳ]]ತಾಲೂಕಿನ [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿರುವ ಊರು [[ವಿಟ್ಲ]].
ಇಲ್ಲಿರುವ '''ಶ್ರೀ ಪಂಚಲಿಂಗೇಶ್ವರ ದೇವಸ್ಥಾನ'''ವು [[ವಿಟ್ಲ]] ಸೀಮೆಯ [[ದೇವಸ್ಥಾನ]]ಗಳಲ್ಲೆಲ್ಲ ಪ್ರಮುಖವಾದುದು ಮಾತ್ರವಲ್ಲದೇ ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ [[ದೇವಾಲಯ]]ಗಳು ಸುತ್ತುಮುತ್ತಲಿನಲ್ಲಿಲ್ಲ. ಶ್ರೀ ಪಂಚಲಿಂಗೇಶ್ವರ [[ದೇವಸ್ಥಾನ]]ವು [[ವಿಟ್ಲ]] ಸೀಮಾ [[ಅರಸು]] ಮನೆತನದ ಆಡಳಿತಕ್ಕೊಳಪಟ್ಟಿದೆ.ಸೀಮೆಯ ಮುಖ್ಯಸ್ಥರು [[ವಿಟ್ಲ]]ದ [[ಅರಸ]]ರು.ಹಲವು ಶತಮಾನಗಳ ಇತಿಹಾಸವುಳ್ಳ '''ಡೊಂಬಹೆಗಡೆ''' [[ಅರಸು]] ಮನೆತನದವರು [[ವಿಟ್ಲ]]ದ [[ಅರಸ]]ರು.( '''ಡೊಂಬಹೆಗಡೆ''' ಎಂಬುದು [[ವಿಟ್ಲ]]ದ [[ಅರಸ]]ರು ಪಡೆಯುತ್ತಿದ್ದ ಬಿರುದು.ಈ [[ಅರಸು]] ವರ್ಗದವರಿಗೆ ಬಲ್ಲಾಳ ಎಂಬುದು ಉಪನಾಮ.) ಸೀಮೆಯ [[ಅರಸ]]ರಿಗೆ ಪಂಚಲಿಂಗೇಶ್ವರ ಆರಾಧ್ಯದೇವರು.[[ವಿಟ್ಲ]]ದ [[ಜಾತ್ರೆ]] ಮುಖ್ಯ [[ಉತ್ಸವ]].[https://vijaykarnataka.indiatimes.com/district/dakshinakannada/vittla-ratha/articleshow/56717319.cms]
==ಸ್ಥಳೈತಿಹ್ಯ==
ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿ ಮಲೆ ಕಾಡಿನಲ್ಲಿಯೇ [[ಬಕಾಸುರ]]ನ ಗುಹೆಯಿತ್ತು.[[ಭೀಮ]] ಅವನನ್ನು ಕೊಂದುದು ಅಲ್ಲಿಯೇ.ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ನೆತ್ತರುಕೆರೆ ಉಂಟಾಯಿತು.(ಕಳಂಜಿಮಲೆ ಹಾಗೂ ನೆತ್ತರುಕೆರೆ [[ವಿಟ್ಲ]]ದ ಆಸುಪಾಸಿನ ಸ್ಥಳಗಳು.)
[[ದೇವಸ್ಥಾನ]]ಕ್ಕೆ ಸಂಬಂಧಿಸಿದ ಸ್ಥಳ ಪುರಾಣದ ಪ್ರಕಾರ [[ಪಾಂಡವ]]ರು ತಮ್ಮ ಸುತ್ತಾಟಕಾಲದಲ್ಲಿ ಈ ಪ್ರದೇಶದಲ್ಲಿ ವಾಸಮಾಡಿದ್ದರಂತೆ.ತಮ್ಮ ನೆನಪಿಗಾಗಿ [[ಶಿವ]]ನನ್ನು ಸ್ಥಾಪಿಸಲು ಇಚ್ಛಿಸಿ,[[ಕಾಶಿ]]ಯಿಂದ [[ಲಿಂಗ]]ಗಳನ್ನು ತರಲು,ವಾಯುವೇಗದಲ್ಲಿ ಗಮಿಸಬಲ್ಲ [[ಭೀಮ]]ನನ್ನು ಕಳುಹಿಸಿದರು.[[ಭೀಮ]]ನು [[ಲಿಂಗ]]ಗಳೊಂದಿಗೆ ಬರುವಾಗ ತಡವಾದ್ದರಿಂದ ನಿಶ್ಚಿತ ಲಗ್ನದಲ್ಲಿ [[ಲಿಂಗ]]ವೊಂದನ್ನು ಪ್ರತಿಷ್ಟಿಸಿ, [[ಪೂಜೆ]] ಮಾಡಿದರಂತೆ.(ಇನ್ನೊಂದು ಪಾಠಾಂತರದ ಪ್ರಕಾರ [[ಭೀಮ]]ನು [[ಕಾಶಿ]]ಗೆ ಹೋದಾಗ ಅವನ ಹಿಂದೆಯೇ [[ಹನುಮಂತ]]ನೂ ಹೋದನಂತೆ. ವೇಗಶಾಲಿಯಾದ [[ಹನುಮಂತ]]ನು ಮೊದಲಿಗೆ ತಂದ [[ಲಿಂಗ]]ವನ್ನು ನಿಶ್ಚಿತ ಲಗ್ನದಲ್ಲಿ ಪ್ರತಿಷ್ಟಾಪಿಸಿದರಂತೆ.) [[ಭೀಮ]]ನು ತಾನು ತಂದ [[ಲಿಂಗ]]ಗಳು ವ್ಯರ್ಥವಾಗಬಾರದೆಂದು ಅದಾಗಲೇ ಫ್ರತಿಷ್ಠಾಪಿಸಿದ್ದ [[ಲಿಂಗ]]ವನ್ನು ಕಿತ್ತೆಸೆದು ತಾನು ತಂದ [[ಲಿಂಗ]]ಗಳನ್ನು ಪ್ರತಿಷ್ಠಿಸಿದನಂತೆ.
==ಪಂಚಲಿಂಗೇಶ್ವರ==
ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ [[ಲಿಂಗ]]ಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ [[ದೇವಾಲಯ]]ವೆನಿಸಿದೆ. ( [[ಶಿವ]]ನ ಸ್ವರೂಪಗಳಾದ [[ಸದ್ಯೋಜಾತ]], [[ವಾಮದೇವ]],[[ಅಘೋರ]], [[ತತ್ಪುರುಷ]], [[ಈಶಾನ]])
Line ೧೭ ⟶ ೧೮:
ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಂತಹ [[ದೇವಾಲಯ]]ಗಳು ಜೀರ್ಣಾವಸ್ಥೆಗೆ ಬಂದಂತಹ ಸಂದರ್ಭದಲ್ಲಿ,ಅಷ್ಟಮಂಗಲಪ್ರಶ್ನೆಯನ್ನಿರಿಸಿ,ದೋಷಗಳಿದ್ದರೆ ಪರಿಹರಿಸಿ,ನಂತರ ಜೀರ್ಣೋಧ್ಧರಕ್ಕೆ ಆರಂಭಿಸುವುದು ವಾಡಿಕೆ.ಅಂತೆಯೇ ೨೦೦೧ರಲ್ಲಿ ಅಷ್ಟಮಂಗಲ ಪ್ರಶ್ನೆ ಜರುಗಿತು.ಹೊಸದಾಗಿ ಪುನರಾರಂಭಿಸುವ [[ದೇವಸ್ಥಾನ]]ದ [[ವಾಸ್ತುಶಿಲ್ಪಿ]]ಯನ್ನಾಗಿ ಶ್ರೀ ಮಹೇಶ ಮುನಿಯಂಗಳ ಅವರನ್ನು ಆಯ್ಕೆಮಾಡಲಾಯಿತು. [[ದೇವಸ್ಥಾನ]] ಜೀರ್ಣೋಧ್ಧಾರ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು.ಶ್ರೀ ಎಲ್.ಎನ್.ಕೂಡೂರು ಇವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸಮಿತಿಯಲ್ಲಿ ವಿ.ರಾಮವರ್ಮ-[[ವಿಟ್ಲ]] ಅರಮನೆ, ಎಚ್.ಜಗನ್ನಾಥ ಸಾಲಿಯಾನ್, ಯಶವಂತ-[[ವಿಟ್ಲ]], ಜನಾರ್ದನ ಪೈ, ಬಿ. ಶಾಂತಾರಾಮ ಶೆಟ್ಟಿ, ನಿತ್ಯಾನಂದ ನಾಯಕ್, ಬಾಬು ಕೊಪ್ಪಳ, ದಯಾನಂದ ಆಳ್ವ, ಸೀತಾರಾಮ ಶೆಟ್ಟಿ ಆಯ್ಕೆಯಾದರು. ನಂತರ ೩೦೫ ಜನರ ಜೀರ್ಣೋಧ್ಧಾರ ಸಮಿತಿ ರಚನೆಯಾಯಿತು.
ನಿಧಿ ಸಂಚಯನ,ಗಣ್ಯರ- ಆಸ್ತಿಕರ ಕೊಡುಗೆ, [[ಕರ್ನಾಟಕ]] ಸರಕಾರದ ಮುಜರಾಯಿ ಖಾತೆಯಿಂದ ಒಂದು ಕೋಟಿ ರೂಗಳ ಅನುದಾನ, ಕೃಷಿಉತ್ಪನ್ನ ವಸ್ತುಸಂಗ್ರಹ, ಪಿಗ್ಮಿ ಯೋಜನೆ ಹೀಗೆ ಹಲವು ಮೂಲಗಳಿಂದ ಹಣಾ ಸಂಗ್ರಹಿಸಲಾಯಿತು. ಸುಮಾರು ಎರಡೂಕಾಲು ಕೋಟಿಗಳಷ್ಟು ಹಣ ಸಂಗ್ರಹವಾದ ನಂತರ ಪ್ರಾಚೀನ ಗರ್ಭಗುಡಿ ತೆರವುಗೊಳಿಸಲು ತೀರ್ಮಾನಿಸಿ, ಅಧಿಕೃತ ವೈದಿಕ ಕಾರ್ಯಕ್ರಮ ೨೦೦೭ ರಲ್ಲಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜರುಗಿತು. ಪಂಚ[[ಲಿಂಗ]]ಗಳನ್ನು ಸಂಕೋಚಿಸಿ, ಏಕ[[ಲಿಂಗ]]ವನ್ನು ಹೊಸತಾಗಿ ನಿರ್ಮಿಸಿ
[[ದೇವಸ್ಥಾನ]]ದ ಕಲ್ಲಿನಕೆತ್ತನೆಯನ್ನು [[ಕಾರ್ಕಳ]]ದ ಶಿಲಾ[[ಶಿಲ್ಪಿ]] ವಿಶ್ವನಾಥ ಅವರ ಬಳಗ ಮಾಡಿದೆ. ದಾರು [[ಶಿಲ್ಪ]]ವನ್ನು ತ್ರಿಶೂರ್ ನ ಇ.ಕೆ. ವಾಸು ಆಚಾರ್ಯರವರ ತಂಡ ಮಾಡಿದೆ. ೬೫ ಅಡಿ ಎತ್ತರದ ಇಳಿಜಾರಾದ ಮೂರು ಅಂತಸ್ತಿನ ಮಾಡಿನ ಗರ್ಭಗುಡಿಯಿದೆ.ಮಾಡಿನ ತುತ್ತತುದಿಯ ದಾರು[[
೪೭೫೦ ಚದರ ಅಡಿ ವಿಸ್ತೀರ್ಣದ ಗಜಪೃಷ್ಠಾಕಾರದ ಗರ್ಭಗುಡಿಯನ್ನು ತೆರವುಗೊಳಿಸಿ ಅದೇ ಆಯ ಮತ್ತು ವಾಸ್ತುವಿನಲ್ಲಿ ಪುನಃ ನಿರ್ಮಿಸಲಾಗಿದೆ. ೪೫೦೦ ಕಿಲೋ ತೂಗುವ ಶಿಲಾಪಾಣಿಪೀಠವನ್ನು ಕೆತ್ತನೆಮಾಡಿ ಕ್ರೇನ್ ಮೂಲಕ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ. ಈ ಪಾಣಿಪೀಠವು ೯ ಅಡಿ ಉದ್ದ, ೬ ಅಡಿ ಅಗಲ, ೪ ಅಡಿ ದಪ್ಪವಿದೆ.
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರಮಠ, ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯಮಠ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಶ್ರೀ ರಾಮಚಂದ್ರಾಪುರ ಮಠ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರ ಮಾರ್ಗದರ್ಶನದೊಂದಿಗೆ, ಸಂಘ-ಸಂಸ್ಥೆಗಳ ನೆರವು, ಊರ-ಪರವೂರ ಜನರ ತನು-ಮನ-ಧನದ ಸಹಕಾರ, ಸಾವಿರಾರು ಜನರ ಶ್ರಮದಾನ ನಿಸ್ಪೃಹ ಸೇವಾಮನೋಭಾವದೊಂದಿಗೆ ಹನ್ನೊಂದು ವರುಷಗಳಲ್ಲಿ ಸುಮಾರು ಹತ್ತು ಕೋಟಿ ರೂಗಳ ವೆಚ್ಚದಲ್ಲಿ ಭವ್ಯವಾಗಿ [[ದೇವಸ್ಥಾನ]] ನಿರ್ಮಾಣಗೊಂಡಿದೆ. ಮೂಲರಚನೆ, ಸೌಂದರ್ಯಕ್ಕೆ ಚ್ಯುತಿಬಾರದಂತೆ ಕೆಂಪುಕಲ್ಲು, ತಾಮ್ರ, ಮರಗಳನ್ನು ಬಳಸಿ
೨೦೧೩ರ ಜನವರಿ ೯ರಿಂದ ೨೧ರ ತನಕ ಪುನಃಫ್ರತಿಷ್ಠಾಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಜರುಗಿದವು.[http://www.nammabhoomi.com/shree-panchalingeshwara-temple-vittla/]
==ದೇವಸ್ಥಾನ ಇಂದು==
[[ದೇವಾಲಯ]]ಗಳ ಗಾತ್ರಕ್ಕನುಸಾರವಾಗಿ ಅಲ್ಪಪ್ರಾಸಾದ, ಮಧ್ಯಪ್ರಾಸಾದ, ಮಹಾಪ್ರಾಸಾದ, ಜಾತಿ, ವಿಕಲ್ಪ, ಛಂದ ಎಂಬ ಆರು ಹೆಸರುಗಳಿವೆ. [[ವಿಟ್ಲ]]ದ ಶ್ರೀ ಪಂಚಲಿಂಗೇಶ್ವರ [[ದೇವಸ್ಥಾನ]]ವು ಮಹಾಪ್ರಾಸಾದ (ಅತ್ಯಂತ ದೊಡ್ಡ ಗರ್ಭಗುಡಿ) ನಿಯಮದ [[ದೇವಾಲಯ]]ವಾಗಿದೆ.
ಪಶಿಮಾಭಿಮುಖವಾಗಿದ್ದು, ಗಜಪೃಷ್ಠಾಕೃತಿಯಲ್ಲಿದೆ.
ಹೊರಾಂಗಣದ [[ನೈಋತ್ಯ]] ದಿಕ್ಕಿನಲ್ಲಿ [[ದಕ್ಷಿಣ]]ಕ್ಕೆ ತೆರೆದಂತೆ [[ದೇವಾಲಯ]]ದ ಆವರಣದ ಪ್ರವೇಶದ್ವಾರವಿದೆ [[ನೈಋತ್ಯ]]ದಿಕ್ಕಿನ ಮೂಲೆಯಲ್ಲಿ ಓಕುಳಿಕುಂಡ, ದೀಪಸ್ತಂಭ ಮತ್ತು ಕಟ್ಟೆಯಿದೆ. ( [[ಜಾತ್ರೆ]]ಯ ಸಮಯದಲ್ಲಿ [[ವಿಟ್ಲ]]ದ [[ಅರಸ]]ರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುವ ಪಧ್ಧತಿಯಿದೆ). [[ನಾಗ]], ರಕ್ತೇಶ್ವರಿ, [[ಗುಳಿಗ]], ಬ್ರಹ್ಮರಾಕ್ಷಸ ಕಟ್ಟೆಗಳಿವೆ. ಉತ್ತರಭಾಗದಲ್ಲಿ ವಿಸ್ತಾರವಾದ ಪುಷ್ಕರಣಿಯಿದೆ.
Line ೩೫ ⟶ ೩೬:
ಸೀಮೆಯ ಮುಖ್ಯ ದೈವಸ್ಥಾನ ಕೇಪು ಎಂಬಲ್ಲಿರುವ ’ಉಳ್ಳಾಲ್ತಿ’ಯದು, ಸೀಮೆಯ ಮುಖ್ಯ ಭೂತ ’ಮಲರಾಯ’ ಎಂದು ಹೇಳಲಾಗಿದೆ.
==ಉತ್ಸವಗಳು==
ವರ್ಷಾವಧಿ [[ಉತ್ಸವ]] ವಿಟ್ಲಾಯನವು ಮಕರಸಂಕ್ರಮಣದಂದು ಆರಂಭವಾಗಿ, ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಸುಮಾರು ಹತ್ತು ದಿನಗಳ ಮೊದಲು ಗೊನೆಕಡಿಯುವ ಮುಹೂರ್ತವಿರುತ್ತದೆ. ಮಕರಸಂಕ್ರಮಣದಂದು ಮಧ್ಯಾಹ್ನ
ಮೊದಲನೆಯದಿನ '''ಲಕ್ಷದೀಪೋತ್ಸವ''' [[ದೇವಸ್ಥಾನ]]ದ ಸುತ್ತಲೂ ಹಣತೆದೀಪಗಳನ್ನು ಬೆಳಗಿಸಲಾಗುತ್ತದೆ. ಎರಡು, ಮೂರು, ನಾಲ್ಕನೆಯ ದಿನಗಳಲ್ಲಿ ನಿತ್ಯೋತ್ಸವಗಳು ನಡೆಯುತ್ತವೆ.('''ಚಪ್ಪೆ ಆಯನ''') ಐದನೆಯದಿನ '''ಬಯ್ಯದಬಲಿ'''. ಅಂದು ರಾತ್ರೆ ಕೇಫುವಿನಿಂದ ಮಲರಾಯ, ಪಿಲಿಚಾಮುಂಡಿ ದೈವಗಳ ಭಂಡಾರ ಬರುತ್ತದೆ. ರಾತ್ರೆ [[ಉತ್ಸವ]] ನಡೆಯುತ್ತದೆ. ಆರನೆಯ ದಿನ '''ನಡುದೀಪೋತ್ಸವ''' ಆ ದಿನ ಬೆಳಗ್ಗೆ ದರ್ಶನ ಬಲಿ ನಡೆಯುತ್ತದೆ. ರಾತ್ರೆ ನಡುದೀಪೋತ್ಸವ ನಡೆಯುತ್ತದೆ. ಏಳನೆಯದಿನ '''ಹೂವಿನತೇರು'''. ಆದಿನ ಬೆಳ್ಳಂಬೆಳಗ್ಗೆ ದರ್ಶನಬಲಿ ಹಾಗೂ ರಾತ್ರೆ [[ಉತ್ಸವ]] ನಡೆಯುತ್ತದೆ. [[ದೇವಸ್ಥಾನ]]ದ ಸುತ್ತಲೂ ಹಣತೆಗಳನ್ನು ಬೆಳಗಿಸುವುದು ಈ [[ಉತ್ಸವ]]ದ ವಿಶೇಷತೆ. ರಾತ್ರೆ ಓಕುಳಿಕಟ್ಟೆಪೂಜೆ ನಡೆದಬಳಿಕ ಅಷ್ಟಾವಧಾನ ಕಾರ್ಯಕ್ರಮ ನಡೆಯುತ್ತದೆ. ([[ಋಗ್ವೇದ]], [[ಯಜುರ್ವೇದ]], [[ಸಾಮವೇದ]], [[ಅಥರ್ವವೇದ]], ಶ್ಲೋಕಗಳು, [[ಸಂಗೀತ]], [[ಶಂಖ]]ಧ್ವನಿ, ಚೆಂಡೆ, ವಾದ್ಯಘೋಷಗಳ ಸೇವೆ.) ಎಂಟನೆಯದಿನ '''ಮಹಾರಥೋತ್ಸವ'''. ಆದಿನ ಬೆಳಗ್ಗೆ ದರ್ಶನಬಲಿ ನಡೆದು, ರಾತ್ರೆ ದೇವರಬಲಿ ಹೊರಟು ಸಂಕ್ಷಿಪ್ತ [[ಉತ್ಸವ]] ನಡೆಯುತ್ತದೆ. ರಾಜಾಂಗಣದಲ್ಲಿ ಭಂಡಾರದೊಂದಿಗೆ ಮೆರವಣಿಗೆಯಾಗಿ, [[ದೇವಸ್ಥಾನ]]ದ ಎದುರಿನ ರಥಗದ್ದೆಯಲ್ಲಿ ಶ್ರೀದೇವರ ಮಹಾರಥೋತ್ಸವ ನಡೆಯುತ್ತದೆ. ಸುಡುಮದ್ದುಗಳ ಪ್ರದರ್ಶನ ನಡೆಯುತ್ತದೆ. ನಂತರ ವಿವಿಧ ಕಟ್ಟೆಪೂಜೆಗಳೊಂದಿಗೆ ಶ್ರೀದೇವರ ಬೀದಿಸವಾರಿ ನಡೆದು, [[ದೇವಾಲಯ]]ಕ್ಕೆ ಆಗಮಿಸುವ ವೇಳೆಗೆ ಆನೆಬಾಗಿಲು ಸಮೀಪ [[ಶಿವ]]-[[ಪಾರ್ವತಿ]]ಯರ ಭೇಟಿಯಾಗುತ್ತದೆ. ಆಬಳಿಕ ಪೆರಿಯ ಭೂತಬಲಿ [[ಉತ್ಸವ]] ನಡೆಯುತ್ತದೆ. ಆ ಬಳಿಕ ದೇವರ ಶಯನ. ಶಯನ ಸಂದರ್ಭದಲ್ಲಿ ಎಲ್ಲಾ ಬಲಿಕಲ್ಲುಗಳಿಗೆ ತೈಲವನ್ನು ಲೇಪಿಸಿ, ಯಾವಶಬ್ದವೂ ಕೇಳಿಸದಂತೆ ಗಂಟೆಗಳನ್ನು ಕಟ್ಟಲಾಗುತ್ತದೆ. ಒಂಭತ್ತನೆಯದಿನ '''ಅವಭೃತೋತ್ಸವ'''. ಅಂದು ಮಧ್ಯಾಹ್ನ ಕವಾಟೋದ್ಘಾಟನೆ. [[ನಗಾರಿ]], [[ಚಂಡೆ]], [[ವಾದ್ಯ]]ಘೋಷಗಳೊಂದಿಗೆ ಬಾಗಿಲು ತೆರೆದು ನಿರ್ಮಾಲ್ಯ ವಿಸರ್ಜನೆ, [[ಅಭಿಷೇಕ]], [[ಪೂಜೆ]], [[ನೈವೇದ್ಯ]]ಗಳು ನಡೆಯುತ್ತವೆ. ಮಧ್ಯಾಹ್ನ
ಧನುರ್ಮಾಸದಲ್ಲಿ ಧನುಪೂಜೆಯು ಪ್ರಾತಃಕಾಲದಲ್ಲಿ ಜರುಗುತ್ತದೆ. [[ಗಣಪತಿ]][[ಹಬ್ಬ]], [[ನವರಾತ್ರಿ]], [[ಮಹಾಶಿವರಾತ್ರಿ]] ಮುಂತಾದ [[ಹಬ್ಬ]]
ಶಿವನ ಐದು ಸ್ವರೂಪಗಳ ಪ್ರತ್ಯೇಕ ಪ್ರತ್ಯೇಕವಾದ ಬಹಳ ಪ್ರಸಿಧ್ಧವಾದ [[ದೇವಾಲಯ]]ಗಳು [[ತಮಿಳುನಾಡು]] ಮತ್ತು [[ಆಂಧ್ರಪ್ರದೇಶ]]ಗಳಲ್ಲಿವೆ. ಆದರೆ ಈ ಐದೂಮುಖಗಳು ಒಂದೇ ಪೀಠದಲ್ಲಿ ಪ್ರತಿಷ್ಠೆಯಾಗಿರುವುದನ್ನು [[ವಿಟ್ಲ]]ದ '''ಶ್ರೀ ಪಂಚಲಿಂಗೇಶ್ವರ ದೇವಸ್ಥಾನ'''ದಲ್ಲಿ ನಾವು ಕಾಣಬಹುದು.
==ಉಲ್ಲೇಖಗಳು==
<references />
೧
https://en.wikipedia.org/wiki/Vitla
==ಬಾಹ್ಯಸಂಪರ್ಕಗಳು==
೧
https://vijaykarnataka.indiatimes.com/district/dakshinakannada/vittla-ratha/articleshow/56717319.cms
೨ http://www.nammabhoomi.com/shree-panchalingeshwara-temple-vittla/
೩ http://www.bantwalnews.com/2017/01/10/%E0%B2%AA%E0%B2%82%E0%B2%9A%E0%B2%B2%E0%B2%BF%E0%B2%82%E0%B2%97%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%B8%E0%B2%A8%E0%B3%8D%E0%B2%A8%E0%B2%BF%E0%B2%A7%E0%B2%BF%E0%B2%AF%E0%B2%B2%E0%B3%8D/
|