ಹೊಯ್ಸಳ ವಾಸ್ತುಶಿಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಹಿಮ್ಮುಖ ಸಂಪಾದನೆ - ಮೂಲ ಲೇಖನ ಉಳಿಸಿದೆ-
೧೪ ನೇ ಸಾಲು:
===ಗೋಡೆಗಳ ರಚನೆ/ವಿಗ್ರಹಗಳು===
 
[[File:ಪಟ್ಟಿಕೆ.JPG|thumb|ಪಟ್ಟಿಕೆಗಳ ರಚನೆ]]
 
 
[[File:ಭಾಗವತ.JPG|thumb|ಪಟ್ಟಿಕೆಗಳಲ್ಲಿ ಪುರಾಣ ಕತೆಗಳು(ಭಾಗವತ_ಪೂತನೀ ಸಂಹಾರ)]]
ಹೊಯ್ಸಳರ ದೇವಾಲಯದ ಗೋಡೆಗಳ ರಚನೆಯು ಜಗತಿಯ ಒಟ್ಟು ಎತ್ತರದ ಎರಡಷ್ಟಿರುತ್ತದೆ. ಗೋಡೆಗಳ ಮೇಲಿನ ಅಲಂಕಾರವು ತಲಭಾಗದಿಂದ ಆರಂಭವಾಗಿ ಶಿಖರದಲ್ಲಿ ಕೊನೆಗೊಳ್ಳುತ್ತದೆ. ಮೊದಲಿಗೆ ದೇವಾಲಯಗಳ ಸುತ್ತಲೂ ಬಳಸಿ ಬರುವ ಅಲಂಕಾರ ಪಟ್ಟಿಕೆಗಳು ಈ ಗೋಡೆಗಳ ವಿಶಿಷ್ಟತೆ. ಜಗತಿಯ ಬುಡದಿಂದ ಸುಮಾರು ಐದು ಅಡಿಗಳಷ್ಟು ಎತ್ತರದವರೆಗೆ ಒಂದರ ಮೇಲೊಂದರಂತೆ ಪಟ್ಟಿಕೆಗಳು ಕಂಡುಬರುತ್ತದೆ. ಬುಡದಿಂದ ಮೊದಲನೆಯ ಪಟ್ಟಿಯಲ್ಲಿ ಆನೆಗಳ ಸಾಲು ಮತ್ತು ಎರಡನೆಯ ಪಟ್ಟಿಯಲ್ಲಿ ಕುದುರೆಗಳ ಮೇಲೆ ಏರಿ ಹೊರಟಿರುವ ರಾವುತರನ್ನು ನೋಡಬಹುದು. ದೇವಾಲಯದ ಸುತ್ತ ಮೆರವಣಿಗೆ ಹೊರಟಿರುವಂತೆ ಈ ಸಾಲುಗಳು ಕಂಡುಬರುತ್ತವೆ. ಮುಂದಿನ ಪಟ್ಟಿಯಲ್ಲಿ [[ಶಾರ್ದೂಲ]]ಗಳು, ಹಂಸಗಳು ಮತ್ತು ಬಳ್ಳಿಯ ರಚನೆಯು ಕಾಣಸಿಗುತ್ತದೆ. ಈ ಪಟ್ಟಿಗಳು ದೇವಾಲಯದ ಅಂದವನ್ನು ಹೆಚ್ಚಿಸುವಂತಿರುತ್ತದೆ. ಅಗಲದಲ್ಲಿ ಒಂದು ಅಡಿಗಿಂತಲೂ ಕಿರಿದಾಗಿರುವ ಈ ಪಟ್ಟಿಕೆಗಳಲ್ಲಿ ರಾಮಾಯಣ-ಮಹಾಭಾರತದ ಕತೆಗಳೂ ಸಹ ಕೆತ್ತಲ್ಪಟ್ಟಿವೆ. ನಮ್ಮ ಕಣ್ಣಿನ ಮಟ್ಟಕ್ಕೆ ಇವು ಬರುವುದರಿಂದ ಚಿಕ್ಕದಾಗಿದ್ದರೂ ಸ್ಪಷ್ಟವಾಗಿ ನೋಡಿದ ತಕ್ಷಣ ಶಿಲ್ಪಗಳ ಹಿಂದಿನ ಕತೆಯನ್ನು ಅರಿತುಕೊಳ್ಳಬಹುದು. ನಮ್ಮ ತಲೆಯ ಮೇಲಿನ ಅಥವಾ ನಮಗಿಂತಲೂ ಎತ್ತರದಲ್ಲಿರುವ ಗೋಡೆಯ ಸಾಲನ್ನು ದೊಡ್ಡ ವಿಗ್ರಹಗಳಿಂದ ಅಲಂಕಾರಿಸಲಾಗಿದೆ. ನೋಡುಗನ ಒಳತೋಟಿಯನ್ನು ಶಿಲ್ಪಿಗಳು ಅದೆಷ್ಟು ಚೆನ್ನಾಗಿ ಬಲ್ಲವರಾಗಿದ್ದರು ಎಂದು ಇಲ್ಲಿ ತಿಳಿಯಬಹುದು. ಪೂರ್ವ ಭಾಗದಲ್ಲಿ ಪಟ್ಟಿಕೆಗಳನ್ನು ಬಿಟ್ಟರೆ ದೊಡ್ಡ ವಿಗ್ರಹಗಳು ಕಂಡುಬರುವುದಿಲ್ಲ. ಗೋಡೆಗಳನ್ನು ರಚಿಸುವುದರ ಬದಲು ಆ ಸ್ಥಳದಲ್ಲಿ ದೊಡ್ದ ಕಿಟಕಿಗಳನ್ನು (ಜಾಲಂಧ್ರ) ನಿರ್ಮಿಸಲಾಗಿರುತ್ತದೆ. ಗಾಳಿ ಮತ್ತು ಬೆಳಕಿನ ವೈಜ್ಞಾನಿಕ ವ್ಯವಸ್ಥೆಗೆ ಇದೊಂದು ನಿದರ್ಶನ. ದೇವಾಲಯಗಳ ಪಶ್ಚಿಮದ ಭಾಗವು ವಿಗ್ರಹಗಳಿಂದ ಅಲಂಕೃತವಾಗಿ ಪೂರ್ಣ ಮುಚ್ಚಲ್ಪಟ್ಟಿರುತ್ತದೆ. ದೇವಾಲಯದ ನಕ್ಷತ್ರಾಕಾರದ ರಚನೆ ಮತ್ತು ಗೋಡೆಯ ಮೇಲಿನ ಅಲಂಕಾರವು ದೇವಾಲಯದ ಒಟ್ಟಂದವನ್ನು ಹೆಚ್ಚಿಸಿ ಶಿಲ್ಪ ಸೌಂದರ್ಯವನ್ನು ಎತ್ತಿ ತೋರಿಸಲು ಸಹಾಯಕವಾಗುತ್ತದೆ.
 
ಹೊಯ್ಸಳರ ದೇವಾಲಯದ ಗೋಡೆಗಳ ರಚನೆಯು ಜಗತಿಯ ಒಟ್ಟು ಎತ್ತರದ ಎರಡಷ್ಟಿರುತ್ತದೆ. ಗೋಡೆಗಳ ಮೇಲಿನ ಅಲಂಕಾರವು ತಲಭಾಗದಿಂದ ಆರಂಭವಾಗಿ ಶಿಖರದಲ್ಲಿ ಕೊನೆಗೊಳ್ಳುತ್ತದೆ. ಮೊದಲಿಗೆ ದೇವಾಲಯಗಳ ಸುತ್ತಲೂ ಬಳಸಿ ಬರುವ ಅಲಂಕಾರ ಪಟ್ಟಿಕೆಗಳು ಈ ಗೋಡೆಗಳ ವಿಶಿಷ್ಟತೆ. ಜಗತಿಯ ಬುಡದಿಂದ ಸುಮಾರು ಐದು ಅಡಿಗಳಷ್ಟು ಎತ್ತರದವರೆಗೆ ಒಂದರ ಮೇಲೊಂದರಂತೆ ಪಟ್ಟಿಕೆಗಳು ಕಂಡುಬರುತ್ತದೆ. ಬುಡದಿಂದ ಮೊದಲನೆಯ ಪಟ್ಟಿಯಲ್ಲಿ ಆನೆಗಳ ಸಾಲು ಮತ್ತು ಎರಡನೆಯ ಪಟ್ಟಿಯಲ್ಲಿ ಕುದುರೆಗಳ ಮೇಲೆ ಏರಿ ಹೊರಟಿರುವ ರಾವುತರನ್ನು ನೋಡಬಹುದು. ದೇವಾಲಯದ ಸುತ್ತ ಮೆರವಣಿಗೆ ಹೊರಟಿರುವಂತೆ ಈ ಸಾಲುಗಳು ಕಂಡುಬರುತ್ತವೆ. ಮುಂದಿನ ಪಟ್ಟಿಯಲ್ಲಿ [[ಶಾರ್ದೂಲ]]ಗಳು, ಹಂಸಗಳು ಮತ್ತು ಬಳ್ಳಿಯ ರಚನೆಯು ಕಾಣಸಿಗುತ್ತದೆ. ಈ ಪಟ್ಟಿಗಳು ದೇವಾಲಯದ ಅಂದವನ್ನು ಹೆಚ್ಚಿಸುವಂತಿರುತ್ತದೆ. ಅಗಲದಲ್ಲಿ ಒಂದು ಅಡಿಗಿಂತಲೂ ಕಿರಿದಾಗಿರುವ ಈ ಪಟ್ಟಿಕೆಗಳಲ್ಲಿ ರಾಮಾಯಣ-ಮಹಾಭಾರತದ ಕತೆಗಳೂ ಸಹ ಕೆತ್ತಲ್ಪಟ್ಟಿವೆ. ನಮ್ಮ ಕಣ್ಣಿನ ಮಟ್ಟಕ್ಕೆ ಇವು ಬರುವುದರಿಂದ ಚಿಕ್ಕದಾಗಿದ್ದರೂ ಸ್ಪಷ್ಟವಾಗಿ ನೋಡಿದ ತಕ್ಷಣ ಶಿಲ್ಪಗಳ ಹಿಂದಿನ ಕತೆಯನ್ನು ಅರಿತುಕೊಳ್ಳಬಹುದು. ನಮ್ಮ ತಲೆಯ ಮೇಲಿನ ಅಥವಾ ನಮಗಿಂತಲೂ ಎತ್ತರದಲ್ಲಿರುವ ಗೋಡೆಯ ಸಾಲನ್ನು ದೊಡ್ಡ ವಿಗ್ರಹಗಳಿಂದ ಅಲಂಕಾರಿಸಲಾಗಿದೆ. ಪಟ್ಟಿಕೆಯ ಕೊಲೆಯ ಸಾಲಿನಲ್ಲಿ [[ಕಾಮಸೂತ್ರ]]ದ ವಿವಿಧ ಚಿತ್ರಗಳನ್ನು ತೊರಿಸಲಾಗಿದೆ ನೋಡುಗನ ಒಳತೋಟಿಯನ್ನು ಶಿಲ್ಪಿಗಳು ಅದೆಷ್ಟು ಚೆನ್ನಾಗಿ ಬಲ್ಲವರಾಗಿದ್ದರು ಎಂದು ಇಲ್ಲಿ ತಿಳಿಯಬಹುದು. ಪೂರ್ವ ಭಾಗದಲ್ಲಿ ಪಟ್ಟಿಕೆಗಳನ್ನು ಬಿಟ್ಟರೆ ದೊಡ್ಡ ವಿಗ್ರಹಗಳು ಕಂಡುಬರುವುದಿಲ್ಲ. ಗೋಡೆಗಳನ್ನು ರಚಿಸುವುದರ ಬದಲು ಆ ಸ್ಥಳದಲ್ಲಿ ದೊಡ್ದ ಕಿಟಕಿಗಳನ್ನು (ಜಾಲಂಧ್ರ) ನಿರ್ಮಿಸಲಾಗಿರುತ್ತದೆ. ಗಾಳಿ ಮತ್ತು ಬೆಳಕಿನ ವೈಜ್ಞಾನಿಕ ವ್ಯವಸ್ಥೆಗೆ ಇದೊಂದು ನಿದರ್ಶನ. ದೇವಾಲಯಗಳ ಪಶ್ಚಿಮದ ಭಾಗವು ವಿಗ್ರಹಗಳಿಂದ ಅಲಂಕೃತವಾಗಿ ಪೂರ್ಣ ಮುಚ್ಚಲ್ಪಟ್ಟಿರುತ್ತದೆ. ದೇವಾಲಯದ ನಕ್ಷತ್ರಾಕಾರದ ರಚನೆ ಮತ್ತು ಗೋಡೆಯ ಮೇಲಿನ ಅಲಂಕಾರವು ದೇವಾಲಯದ ಒಟ್ಟಂದವನ್ನು ಹೆಚ್ಚಿಸಿ ಶಿಲ್ಪ ಸೌಂದರ್ಯವನ್ನು ಎತ್ತಿ ತೋರಿಸಲು ಸಹಾಯಕವಾಗುತ್ತದೆ.
 
=== ಶಿಖರಗಳ ರಚನೆ===
Line ೩೦ ⟶ ೩೩:
===ಕಂಬಗಳು===
 
ದೇವಾಲಯದ ಆಧಾರವೇ ಕಂಬಗಳು. ಹೊಯ್ಸಳರು ಕಂಬಗಳನ್ನು ಕೇವಲ ಆಧಾರಕ್ಕಾಗಿ ಮಾತ್ರ ಬಳಸದೆ, ಅವುಗಳಲ್ಲೂ ಸುಂದರ ಕೆತ್ತನೆಯನ್ನು ತೋರಿಸಿದ್ದಾರೆ. ಕೆಲವು ಕಂಬಗಳು ಕನ್ನಡಿಯಷ್ಟು ಹೊಳಪಿನಿಂದ ಕೂಡಿದ್ದರೆ ಇನ್ನೂ ಕೆಲವು ಕುಸುರಿ ಕೆತ್ತನೆಯಿಂದ ಮನಸುರೆಗೊಳ್ಳುತ್ತದೆ. ಕಂಬಗಳನ್ನು ಇಂಟರ್ ಲಾಕ್ ಮಾದರಿಯಲ್ಲಿ ಜೋಡಿಸಲಾಗಿದ್ದು ಕುಸಿದು ಬೀಳುವ ಪ್ರಮೇಯವೇ ಒದಗಿಬರುವುದಿಲ್ಲ. ಹಾಗೊಮ್ಮೆ ಕುಸಿದರೂ ಮತ್ತೆ ಸುಲಭವಾಗಿ ಜೋಡಿಸುವಂತೆ ಕಂಬಗಳನ್ನು ನಿರ್ಮಿಸಲಾಗಿದೆ. ಕಂಬಗಳು ಸಾಮಾನ್ಯವಾಗಿ ಐದು ಕಲ್ಲಿನಿಂದ ಮಾಡಲ್ಪಟ್ಟಿದ್ದು , ತಳಭಾಗದಿಂದ ಕ್ರಮವಾಗಿ ಪೀಠ, ಕಂಬ, ಕುಂಭ, ಕಟಿ ಮತ್ತು ಭಾರವಾಹಕ ಎಂದು ವಿಂಗಡಿಸಲಾಗಿದೆ. ಕಂಬಗಳ ದುಂಡನೆಯ ಆಕಾರವನ್ನು ಹೊಂದಿದ್ದು ಮಧ್ಯಭಾಗದಲ್ಲಿ ಚೂಪಾಗಿರುವಂತಹ ಚಕ್ರದ ಆಕೃತಿಯನ್ನು ಹೊಂದಿರುತ್ತದೆ. ಯಾವ ಯಂತ್ರದ ಸಹಾಯವೂ ಇಲ್ಲದಿದ್ದಇಲ್ಲಲಿದ್ದ ಕಾಲದಲ್ಲಿ ಇವುಗಳು ನಿರ್ಮಾಣವಾಗಿರುವುದನ್ನು ಕಂಡಾಗ ವಿಸ್ಮಯವಾಗುತ್ತದೆ. ದೇವಾಲಯದ ವಿಸ್ತೀರ್ಣಕ್ಕನುಸಾರವಾಗಿ ಕಂಬಗಳ ಸಂಖ್ಯೆಯು ನಿಗದಿಯಾಗಿರುತ್ತದೆ. ಕಂಬಗಳ ಪಟ್ಟಿಗಳೂ ಸಹ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿರುತ್ತದೆ.
 
==ವಿಭಾಗಗಳು==
 
ಸಾಮಾನ್ಯವಾಗಿ ಹೊಯ್ಸಳರ ದೇವಾಲಯಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ.
*'''ಗರ್ಭಗೃಹ ಅಥವಾ ಗರ್ಭಗುಡಿ'''
*'''ಶುಕನಾಸಿ ಅಥವಾ ಅಂತರಾಳ'''
*'''ನವರಂಗ ಅಥವಾ ಸಭಾಮಂಟಪ'''
*'''ವಾಹನ ಮಂಟಪ'''
 
'''ಗರ್ಭಗೃಹ ಅಥವಾ ಗರ್ಭಗುಡಿ''' ಯಲ್ಲಿ ಆಯಾ ದೇವಾಲಯಕ್ಕೆ ಸಂಬಂಧಿಸಿದ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಇಲ್ಲಿ ಯಾವುದೇ ಕಿಟಕಿ ಅಥವಾ ವಾತಾಯನ ವ್ಯವಸ್ಥೆಯು ಇರುವುದಿಲ್ಲ. ಗರ್ಭಗೃಹದಲ್ಲಿ ಘಂಟಾನದವನ್ನು ಮಾಡಿದರೆ ಅದು ಪ್ರತಿಧ್ವನಿತವಾಗುವಂತೆ ಕೋಣೆಯ ರಚನೆಯಿರುತ್ತದೆ. ಈ ಕೋಣೆಯಲ್ಲಿ ಯಾವುದೇ ರೀತಿಯ ಕೆತ್ತನೆಗಳಾಗಲೀ ಇತರ ವಿಗ್ರಹಗಳಾಗಲೀ ಇರುವುದಿಲ್ಲ. ಹೊಯ್ಸಳರ ಕೆಲವು ದೇವಾಲಯಗಳ ಗರ್ಭಗುಡಿಯಲ್ಲಿ ಮೂಲ ವಿಗ್ರಹದ ಹಿಂಭಾಗ ಮತ್ತು ಅಕ್ಕ-ಪಕ್ಕದಲ್ಲಿ ಸಣ್ಣ ಕೋಣೆಗಳ ರಚನೆಯು ಕಂಡುಬರುತ್ತದೆ. ಈ ಕೋಣೆಗಳನ್ನು ದೇವರ ಆಭರಣಗಳು ಮತ್ತು ನಗ-ನಾಣ್ಯಗಳನ್ನು ಇರಿಸಲು ಬಳಸುತ್ತಿದ್ದಿರಬಹುದೆಂದು ಸಂಶೋಧಕರು ಹೇಳುತ್ತಾರೆ.
 
'''ಶುಕನಾಸಿ ಅಥವಾ ಅಂತರಾಳ''' ವು ಗರ್ಭಗೃಹದ ಮುಂದಿನ ಭಾಗವಾಗಿದ್ದು ಇದನ್ನು ವಿಶೇಷ ಪ್ರಾರ್ಥನೆ ಸಲ್ಲಿಸಲು ಪೂಜಾ ಪರಿಕರಗಳನ್ನಿರಿಸಿಕೊಳ್ಳಲು ಬಳಸಲಾಗುತ್ತಿತ್ತೆಂದು ಹೇಳಲಾಗಿದೆ. ಇದೇ ಜಾಗದಲ್ಲಿ ಉತ್ಸವ ಮೂರ್ತಿಗಳನ್ನೂ ಇರಿಸಲಾಗುತ್ತದೆ. ಶುಕನಾಸಿಯ ಗೋಡೆಗಳಲ್ಲಿ ತುಂಬ ನಾಜೂಕಿನ ಕುಸುರಿ ಕೆಲಸವು ಕಂಡುಬರುತ್ತದೆ. ದ್ವಾರದ ಮೇಲೆ ಗಜಲಕ್ಷ್ಮಿಯ ವಿಗ್ರಹವಿದ್ದು ಅಕ್ಕ-ಪಕ್ಕದಲ್ಲಿ ನೆಲದವರೆವಿಗೂ ಏಳು ಪಟ್ಟಿಕೆಗಳನ್ನು ಉದ್ದವಾಗಿ ನಿರ್ಮಿಸಲಾಗಿರುತ್ತದೆ. ಇವುಗಳನ್ನು '''ಸಪ್ತಶಾಖೆ'''ಗಳೆಂದು ಕರೆಯುತ್ತಾರೆ. ವಜ್ರ, ಪ್ರಾಣಿ, ಅಗ್ನಿ, ಕುಂಭ, ಪಕ್ಷಿ, ನರ ಶಾಕೆಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿನ ಕುಸುರಿ ಕೆಲಸವು ಮೈ ನವಿರೇಳಿಸುತ್ತದೆ.
 
'''ನವರಂಗ ಅಥವಾ ಸಭಾಮಂಟಪ''' ವು ವೃತ್ತಾಕಾರವಾಗಿರುತ್ತದೆ. ಇದು ಶುಕನಾಸಿಯ ನಂತರದ ಭಾಗ. (ಹೊಯ್ಸಳರ ದೇವಾಲಯಗಳಲ್ಲಿ ಶುಕನಾಸಿ ಮತ್ತು ಅಂತರಾಳದ ನಡುವೆ ದರ್ಶನ ಮಂಟಪ ಎಂಬ ಸ್ಥಳವೂ ಕಂಡು ಬರುತ್ತದೆ. ಇಲ್ಲಿಂದ ದೇವರ ದರ್ಶನ ಪಡೆಯುವ ಪಧ್ಧತಿಯಿದೆ). ನವರಂಗ ಮಂಟಪವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ಎಲ್ಲ ಬಗೆಯ (ಅಥವಾ ಒಂಬತ್ತು ಬಗೆಯ) ರಂಗ ಪ್ರಕಾರಗಳಿಗೂ ನವರಂಗವು ವೇದಿಕೆಯಾಗಿರುತ್ತಿತ್ತು. ಭಾರತೀಯ ನೃತ್ಯ ಪ್ರಕಾರವು ಹೆಚ್ಚಾಗಿ ವೃತ್ತಾಕಾರವಾಗಿಯೇ ಆರಂಭವಾಗುವುದರಿಂದ ನವರಂಗವನ್ನೂ ಅದೇ ಮಾದರಿಯಲ್ಲಿ ಇರಿಸಿದ್ದಾರೆ ಎನ್ನಬಹುದು. ಮುಂಭಾಗಿಲಿಂದ ಬರುವ ಸೂರ್ಯನ ಕಿರಣವನ್ನು ಪ್ರತಿಫಲಿಸಲು ವೃತ್ತಾಕಾರದ ರಚನೆಯು ಹೆಚ್ಚು ಪ್ರಶಸ್ತ ವೆನ್ನುವುದು ಅವರಿಗೆ ತಿಳಿದಿತ್ತು ಎಂದು ನಿಸ್ಸಂದೇಹವಾಗಿ ಹೇಳಬಹುದು. ಚೌಕಾಕಾರದ ರಚನೆಯಲ್ಲಿ ಬೆಳಕು ಕೋನಗಳಲ್ಲಿ ಕೇಂದ್ರೀಕೃತವಾಗುವುದರಿಂದ ಹೆಚ್ಚು ಪ್ರತಿಫಲನಕ್ಕೆ ಅವಕಾಶವಾಗುವುದಿಲ್ಲ. ಈ ಮಂಟಪವನ್ನು ತುರ್ತು ಸಭೆಗಳನ್ನು ನೆಡೆಸಲೂ ಸಹ ಬಳಸುತ್ತಿದ್ದರೆಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ದೇವಾಲಯಗಳಲ್ಲಿ ನೃತ್ಯಸೇವೆಯ ಸಂಪ್ರದಾಯವು ಇದ್ದಿದ್ದರಿಂದ ನೃತ್ಯ ಮಾಡುವುದಕ್ಕೇ ಇರುತ್ತಿದ್ದ ದೇವದಾಸಿಯರು ನವರಂಗದಲ್ಲಿ ನೃತ್ಯಸೇವೆಯನ್ನು ದೇವರಿಗೆ ಸಲ್ಲಿಸುತ್ತಿದ್ದರೆಂದು ಶಾಸನಗಳು ಹೇಳುತ್ತವೆ.
 
'''ವಾಹನ ಮಂಟಪ''' ವು ಪ್ರತಿಷ್ಠಾಪಿತವಾಗಿರುವ ದೇವರ ವಾಹನವನ್ನಿರಿಸಲು ಮಾಡಿರುವ ಸ್ಥಳ. ಆಯಾ ದೇವರಿಗೆ ಸಂಬಂಧಿಸಿದ ವಾಹನದ ಮೂರ್ತಿಗಳನ್ನು ಕಡೆದು ಕೂರಿಸಲಾಗಿರುತ್ತದೆ. ಶಿವನ ದೇವಾಲಯದಲ್ಲಿ ನಂದಿಯು, ವಿಷ್ಣುವಿಗೆ ಗರುಡನೂ, ದುರ್ಗಿಗೆ ಸಿಂಹವೂ ಈ ಮಂಟಪಗಳಲ್ಲಿ ಕಂಡು ಬರುತ್ತದೆ. ಸೀ ಮಂಟಪವು ದೇವಾಲಯದ ಜಗತಿಯ ಮೇಲಿದ್ದರೂ ಮೂಲ ದೇವಾಲಯದಿಂದ ಪ್ರತ್ಯೇಕವಾಗಿರುತ್ತದೆ. ಕೆಲವು ಗುಡಿಗಳಲ್ಲಿ ಮಂಟಪವು ಇಲ್ಲದೆ ಕೇವಲ ವಾಹನಗಳನ್ನು (ನಂದಿ, ಗರುಡ ಇತ್ಯಾದಿ) ಇರಿಸಿರುವುದೂ ಉಂಟು.
ಗರ್ಭಗುಡಿ
 
==ಕೂಟಗಳು==