ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಅಳಿಸಲುಹಾಕಿದ್ದು
೧ ನೇ ಸಾಲು:
{{ಅಳಿಸುವಿಕೆ|ಪ್ರಬಂಧ ಮಾದರಿ ಲೇಖನ, ವಿಕಿಗೆ ತಕ್ಕುದಲ್ಲ}}
 
ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ; ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ [[ಹೋರಾಶಾಸ್ತ್ರ]] ಬಂದಿತು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ [[ ಗ್ರಹ]] [[ನಕ್ಷತ್ರ]]ಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ [[ಹೋರಾಶಾಸ್ತ್ರ]]. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ [[ಜ್ಯೋತಿಷ]] ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ. ಇದು ಖಗೋಲ ಗಣಿತಜ್ಞರಾದ [[ಭಾಸ್ಕರಾಚಾರ್ಯ]] ಮತ್ತು [[ವರಾಹ ಮಿಹಿರ]] ಮೊದಲಾದವರ ಕಾಲದಿಂದಲೂ ರೂಢಿಗೆ ಬಂದಿದೆ . ಆದರೆ ಈಗ ಹೋರಾಶಾಸ್ತ್ರವನ್ನೇ ಅಥವಾ ಫಲಜ್ಯೋತಿಷ ಶಾಸ್ತ್ರವನ್ನೇ ಜ್ಯೋತಿಷ ಶಾಸ್ತ್ರವೆಂದು ಕರೆಯುವ ರೂಢಿ ಬಂದಿದೆ. ಆಕಾಶ ಕಾಯಗಳ ಚಲನ ಇತ್ಯಾದಿ ವಿವರವನ್ನು ತಿಳಿಸುವ ಶಾಸ್ತ್ರವನ್ನು [[ಖಗೋಲ ಶಾಸ್ತ್ರ]]ವೆಂದು ಕರೆಯಲಾಗಿದೆ.