ಲಕ್ಷ್ಮೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
→‎ಇತಿಹಾಸ: ತಪ್ಪು ಮಾಹಿತಿ ಅಳಿಸಲಾಗಿದೆ, ಹೆಚ್ಚಿನ ಮಾಹಿತಿ ಸೇರಿಸಲಾಗಿದೆ.
೮ ನೇ ಸಾಲು:
==ಇತಿಹಾಸ==
*ಪ್ರಾಚೀನ ಕಾಲದಲ್ಲಿ ಲಕ್ಷ್ಮೇಶ್ವರ ಪಟ್ಟಣಕ್ಕೆ [[ಬಾದಾಮಿ]] [[ಚಾಲುಕ್ಯ]] ವಿಕ್ರಮಾದಿತ್ಯನ (ಕ್ರಿ. ಶ ೬೮೬ ರ) ಶಾಸನದಲ್ಲಿ ಈ ಊರನ್ನು ರಾಜಧಾನಿ ಪಟ್ಟಣ ೧೨೦ ಮಹಾಜನರಿಂದ ಕೂಡಿದ ಬ್ರಹ್ಮೇಶ್ವರಗಿರಿ ಘಟಕಸ್ಥಾನ ಎಂದು ವರ್ಣಿಸಲಾಗಿದೆ. ಹಾಗೂ ಇದೊಂದು ಪ್ರಾಚೀನ ಜೈನ ಕೇಂದ್ರವಾಗಿದ್ದು, ಆದಿ ಕವಿ ಪಂಪನಿಂದ ಮೊದಲುಗೊಂಡು ಹಲವಾರು ಕನ್ನಡದ ಕವಿಗಳು ಕನ್ನಡ ನಾಡಿನಲ್ಲೇ ಅತ್ಯಂತ ಪರಿಪಕ್ವವಾದ ಶುದ್ಧ ಕನ್ನಡ (ತಿರುಳ್ಗನ್ನಡ) ಭಾಷೆಯನ್ನು ಮಾತನಾಡುತ್ತಿದ್ದ ಸ್ಥಳವೆಂದು ಇದನ್ನು ವರ್ಣಿಸಿರುವರು.
*ಇದನ್ನು ಪುಲಿಗೇರಿ, ಹುಲಿಗೇರಿ, ಪುರಿಗೇರಿ ಹಾಗೂ ಪುಲಿಕರ ಎಂದೂ ಕರೆಯುತ್ತಾರೆ. ಇಲ್ಲಿನ ದೇವಸ್ಥಾನಗಳಲ್ಲಿ “ಶ್ರೀ. ಸೋಮೇಶ್ವರ ದೇವಸ್ಥಾನ” ಪ್ರಮುಖವಾಗಿದ್ದು, ಈ ದೇವಾಲಯವನ್ನು ‘ಅಮರಶಿಲ್ಪಿ ಜಕಣಾಚಾರಿ’ ಕಟ್ಟಿಸಿದ್ದು ಎಂಬ ಇತಿಹಾಸವಿದೆ. ಲಕ್ಷಣ ಅಥವಾ ಲಕ್ಮರಸನೆಂಬವನು ತನ್ನ ಹೆಸರಿನಲ್ಲಿ ಲಕ್ಷ್ಮೇಣೇಶ್ವರ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಈ ರೀತಿ ನಾಮಕರಣ ಮಾಡಿದ ಕಾರಣ ಕಾಲಾನುಕಾಲಕ್ಕೆ ಲಕ್ಷ್ಮೇಶ್ವರ ಎಂಬ ಹೆಸರು ಬಂದಿರುವುದು ವ್ಯಕ್ತವಾಗುತ್ತದೆ.
*ಬಾದಾಮಿ ಚಾಳುಕ್ಯರ ೨ನೇ ಪುಲಕೇಶಿ ಕಾಲದಲ್ಲಿ ಇಲ್ಲಿ ಮೊಟ್ಟಮೊದಲ ಬಾರಿಗೆ ಜೈನರ ಶಂಖ ಬಸದಿ ಕಟ್ಟಲಾಯ್ತು. ತಿರುಳ್ಗನ್ನಡ ನಾಡಿನ ಗರ್ಭ ಪ್ರದೇಶವಿದಾಗಿದ್ದು ಹಿಂದಿನ ಪುಲಿಗೆರೆ-೩೦೦ ಪ್ರಾಂತದ ರಾಜಧಾನಿಯಾಗಿತ್ತು. ಕ್ರಿ ಶ ೬೮೬ರ ಶಾಸನದಂತೆ ಬಾದಾಮಿ ಚಾಳುಕ್ಯರ ವಿನಯಾದಿತ್ಯನ ಕಾಲದಲ್ಲಿ ಇದು ಈ ಪ್ರಾಂತದ ರಾಜಧಾನಿಯಾಗಿತ್ತು. ನೃಪತುಂಗನ ಕಾಲಕ್ಕೂ ಹಿಂದಿನಿಂದ ಅಚ್ಚಗನ್ನಡದ ಶ್ರೇಷ್ಠ ಸಂಸ್ಕೃತಿಯ ನಾಡು ಇದು. ಈ ಊರು ತಿರುಳ್ ಗನ್ನಡ ನಾಡಿನ ಹೃದಯಭಾಗವೆಂದು ಪಂಪ ಉದ್ಗರಿಸಿದ್ದಾನೆ. ಪೂರ್ವದಲ್ಲಿ ಇದು ಜೈನರ ಮುಖ್ಯ ಕೇಂದ್ರವಾಗಿತ್ತು. ಅವರೆಲ್ಲ ವಣಿಕ ವೃತ್ತಿಯವರಾಗಿದ್ದರು.
*೧೧-೧೨ನೇ ಶತಮಾನದಲ್ಲಿ ಶೈವ ಪಂಥ ಪ್ರವರ್ಧಮಾನಕ್ಕೆ ಬಂತು, ಆಗಲೇ ಅನೇಕ ಶೈವ ದೇವಾಲಯಗಳನ್ನು ಕಟ್ಟಲಾಯ್ತು. ಅಂತಹುದರಲ್ಲಿ ಈಗಿರುವ ಸೋಮೇಶ್ವರ ದೇವಸ್ಥಾನ ಅತ್ಯಂತ ಪ್ರಶಿದ್ಧವಾದ್ದು. ಇಲ್ಲಿರುವ ಸೋಮನಾಥ ಮೂರ್ತಿಯನ್ನು ಶಿವಶರಣ ಆದಯ್ಯ ಸೌರಾಷ್ಟ್ರದಿಂದದು ತಂದು ಸ್ಥಾಪಿಸಿದ ಎಂದು ಹೇಳಲಾಗುತ್ತಿದೆಯಾದರೂ ಇದೊಂದು ಸ್ವಯಂಭೂ ಮೂರ್ತಿ ಎಂಬುದು ಜನರ ನಂಬಿಕೆಯಾಗಿದೆ. ಇಲ್ಲಿರುವ ಸೋಮನಾಥನ(ಈಶ್ವರ) ಮೂರ್ತಿ ಬೇರೆಲ್ಲಿಯಂತೆ ಲಿಂಗಸ್ವರೂಪದಲ್ಲಿರದೇ ನಂದಿಯ ಮೇಲೆ ಪಾರ್ವತಿ ಸಹಿತನಾಗಿ ಹೊರಟಿರುವಂತಿರುವುದು ಇಲ್ಲಿನ ವಿಶೇಷ. ಕಲ್ಯಾಣ ಚಾಳುಕ್ಯರ ೬ನೇ ವಿಕ್ರಮಾದಿತ್ಯನ ಮಹಾಮಂಡಲೇಶ್ವರನಾಗಿದ್ದ ಲಕ್ಷ್ಮರಸ ಎಂಬುವನಿಂದ ಆಳಲ್ಪಟ್ಟಿದ್ದರಿಂದಲೋ ಏನೋ ಈ ಊರಿಗೆ ಲಕ್ಷ್ಮೇಶ್ವರ ಎಂದು ಹೆಸರು ಸ್ಥಾಯಿಯಾಗುಳಿಯಿತು.
*ಬಾದಾಮಿ ಚಾಳುಕ್ಯರ ಹೆಜ್ಜೆಗುರುತಿನಿಂದ ಹಿಡಿದು ರಾಷ್ಟ್ರಕೂಟರು,ಕಲ್ಯಾಣ ಚಾಳುಕ್ಯರು, ಕಳಚೂರಿಗಳು,ಸೇವುಣರು, ಹೊಯ್ಸಳರು ಕಡೆಯದಾಗಿ ವಿಜಯನಗರದರಸರವರೆಗೆ ಎಲ್ಲ ಪ್ರಮುಖ ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿವೆ. ಕಳಚೂರಿಯ ೨ನೇ ಬಿಜ್ಜಳನ ಕಾಲದಲ್ಲಿ ಇಲ್ಲಿ ಬ್ರಹ್ಮಪುರಿಯನ್ನು ಸ್ಥಾಪಿಸಲಾಯಿತು. ವಿಜಯನಗರದರಸರ ಕಾಲದಲ್ಲಿ ಇಲ್ಲಿನ ಜೈನ-ಹಿಂದುಗಳ ನಡುವಿನ ದೇವಾಲಯದ ಜಗಳವನ್ನು ಪರಿಹರಿಸಲಾಯ್ತು. ನಂತರದ ಮುಸ್ಲಿಮ್ ಆಳ್ವಿಕೆಯಲ್ಲೂ ಅನೇಕ ವಾಸ್ತು ನಿರ್ಮಾಣಗಳಾಗಿವೆ. ಬಿಜಾಪುರದ ಆದಿಲ್ ಶಾಹಿ ಕಾಲದಲ್ಲಿ ಕಟ್ಟಿಸಿದ ಜುಮ್ಮಾಮಸೀದಿ ಇದಕ್ಕೊಂದು ಸಾಕ್ಷಿ. ಇಲ್ಲಿನ ಒಂದೇಕಲ್ಲಿನಲ್ಲಿ ಮಾಡಿದ ಸರಪಣಿ ಕುತೂಹಲಕರ.
*ಅರಿಕೇಸರಿ ಆಸ್ಥಾನ ಕವಿಯಾಗಿದ್ದ ಪಂಪ ಇಲ್ಲಿಗೆ ಹತ್ತಿರವಿರುವ ಅಣ್ಣಿಗೇರಿಯಲ್ಲಿ ಹುಟ್ಟಿದ್ದಾನೆ. ಅರಿಕೇಸರಿಯನ್ನು ನಾಯಕನನ್ನಾಗಿ ಇಟ್ಟುಕೊಂಡು ರಚಿಸಿರುವ ವಿಕ್ರಮಾರ್ಜುನ ವಿಜಯ ಹಾಗು ಆದಿಪುರಾಣ ಗ್ರಂಥಗಳು ಈ ನೆಲದಲ್ಲಿ ಹುಟ್ಟಿದ್ದು.
 
==ಸಾರಿಗೆ==
"https://kn.wikipedia.org/wiki/ಲಕ್ಷ್ಮೇಶ್ವರ" ಇಂದ ಪಡೆಯಲ್ಪಟ್ಟಿದೆ