*‘ನಮಗೆ ದಸರಾ ದೊಡ್ಡ ಹಬ್ಬ. ಮನೆ ತುಂಬ ನೆಂಟರು ಇರುತ್ತಾರೆ. ಜಂಬೂ ಸವಾರಿ, ಹೊಸ ಬಟ್ಟೆ ತೆಗೆದುಕೊಳ್ಳುವುದು, ವಾರಪೂರ್ತಿ ಬಗೆಬಗೆ ಊಟ, ತಿಂಡಿ ಮಾಡುವುದು ಸಂತೋಷ ನೀಡುತ್ತದೆ. ಈಗ ಸಾಧಾರಣವಾಗಿದೆ. ಮಹಾರಾಜರ ಕಾಲದ ದಸರಾ ಚೆನ್ನಾಗಿತ್ತು. ಜಂಬೂ ಸವಾರಿಗೆ ಎಂಟು ದಿನದ ಮೊದಲೇ ಬೇರೆ ಬೇರೆ ಕಡೆಯಿಂದ ಜನ ಎತ್ತಿನ ಗಾಡಿ ಕಟ್ಟಿಕೊಂಡು ಬರುತ್ತಿದ್ದರು. ಈಗಿನ ಬೋಟಿ ಬಜಾರ್ ಬಳಿ ಗಾಡಿ ಚೌಕ ಇತ್ತು, ಅಲ್ಲಿ ಗಾಡಿಗಳನ್ನು ನಿಲ್ಲಿಸಿ ತಂಗುತ್ತಿದ್ದರು.
*ನಮ್ಮ ಹಳ್ಳಿ ಜನ ದಸರಾಕ್ಕೆ ಪೋಜು ಅನ್ನೋರು. ತೊಣಚಿಕೊಪ್ಪಲು ಮಾರುಕಟ್ಟೆಯಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿರುವ ಕುಮಾರ್ ದೃಷ್ಟಿಯಲ್ಲಿ ‘ಅಂದಿನ ದಸರಾ ಎಂದರೆ ಅಂಬಾರಿ, ಮೆರವಣಿಗೆಯಲ್ಲಿ ಬರುವ ಜನಪದ ಕಲಾ ತಂಡಗಳ ಪ್ರದರ್ಶನ, ಆನೆಗಳು ನೆನಪಾಗುತ್ತವೆ. ಆದರೆ, ಈಗಿನ ದಸರಾ ಸರ್ಕಾರವನ್ನು ಅವಲಂಬಿಸಿದೆ. ದಸರಾದಲ್ಲಿ ಏನು ಇರಬೇಕು, ಇರಬಾರದು ಅನ್ನುವುದನ್ನು ಅಧಿಕಾರದಲ್ಲಿ ಇರುವವರು ನಿರ್ಧರಿಸುತ್ತಾರೆ. ಆ ಕಾಲಕ್ಕೆ ಅದೇ ಚೆಂದ, ಈ ಕಾಲಕ್ಕೆ ಇದೇ ಚೆಂದ ಅನಿಸುತ್ತದೆ.’