ಮಹಿಷಾಸುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 103.253.169.99 (ಚರ್ಚೆ) ರ 871827 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
ಚು Reverted edits by Lokesha kunchadka (talk) to last revision by Pavanaja
೧ ನೇ ಸಾಲು:
ವಿದ್ಯುನ್ಮಾಲಿ ಮತ್ತು ಮಾಲಿನಿ ರಾಕ್ಷಸ ದಂಪತಿಗೆ ಬಹುಕಾಲ ಮಕ್ಕಳಿರಲಿಲ್ಲ. ಹೇಗಾದರೂ ಪುತ್ರಪ್ರಾಪ್ತಿಯಾಗಲೇಬೇಕೆಂದು ನಿರ್ಧರಿಸಿದ ಮಾಲಿನಿ ತಪಸ್ಸನ್ನಾಚರಿಸಲು ನಿರ್ಧರಿಸುತ್ತಾಳೆ. ಕಾಡಿಗೆ ತೆರಳಿ ಮಹಿಷಿ ಅಂದರೆ ಎಮ್ಮೆಯ ರೂಪದಲ್ಲಿ ತಪಸ್ಸಿಗೆ ತೊಡಗುತ್ತಾಳೆ.
[[File:MASURA.JPG|thumb|200px|ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ]]
[[File:Brooklyn Museum - Mahasura Attacks the Devi Folio from a Dispersed Devi Mahatmya Series.jpg|thumb|350px|This painting shows a pivotal battle between Durga and a powerful demon named Mahasura. The demon, with an animal head and purple skin, appears three times, attacking the goddess with bow and arrow, sword and shield, and trident (this weapon is shown snapped in two, a sign that he will eventually lose).]]
'''ಮಹಿಷಾಸುರ'''<ref>http://www.mysoredasara.gov.in/ಪ್ರವಾಸೋದ್ಯಮ/ಮೈಸೂರಿನ-ಪ್ರವಾಸಿ-ತಾಣಗಳು/ಚಾಮುಂಡಿ-ಬೆಟ್ಟ/</ref><ref>http://m.varthabharati.in/article/2017_09_17/94499</ref> [[ಹಿಂದೂ]] [[ಪುರಾಣ]]ಗಳನ್ವಯ ಒಬ್ಬ ಅಸುರ. ಮೈಸೂರು ಸಂಸ್ಥಾನದ ಹಿಂದಿನ ಅಧಿಪತಿ.
==ಇತಿಹಾಸ==
* ಮೈಸೂರು ಎಂಬ ಹೆಸರು ಬಂದಿರುವುದೇ ಮಹಿಷಾ ಮಂಡಲದ ಹಿನ್ನೆಲೆಯಲ್ಲಿ. ಈ ಪ್ರಾಂತ್ಯವನ್ನು ಹಿಂದೆ ಎರಮೈನಾಡು ಎಂದು ಕರೆಯಲಾಗುತ್ತಿತ್ತು. ಎರಮೈನಾಡು ಎಂದರೆ ಎಮ್ಮೆಗಳ ನಾಡು ಎಂದರ್ಥ. * ಈ ಭಾಗದಲ್ಲಿ ಇಲ್ಲಿನ ಮೂಲ ನಿವಾಸಿಗಳು ಎಮ್ಮೆ ಮತ್ತು ಹಸು ಸಾಕಾಣಿಕೆಯಲ್ಲಿ ಮುಂದಿದ್ದರೂ ಸಹಿತ ಎಮ್ಮೆಯನ್ನೆ ತಮ್ಮ ಕುಲಚಿನ್ಹೆಯನ್ನಾಗಿ ಬಳಸುತ್ತಿದ್ದರು. ಇಂದಿಗೂ ಹಳೆ ಮೈಸೂರು ಪ್ರಾಂತ್ಯದಲ್ಲಿ ಜನಸಮೂಹವು ಎಮ್ಮೆಯ ತಲೆಯ ಆಕಾರದ ಚಿತ್ರವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಂಡಿರುತ್ತಾರೆ.
* ಆ ಮೂಲಕ ತಮ್ಮ ಮೂಲ ಪರಂಪರೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಎರಮೈನಾಡು ನಂತರ ಈ ಭೂ ಪ್ರದೇಶ ಮಹಿಷಾ ಮಂಡಲ ವಾಗಿದೆ. ಬಹುಶಃ ಮಹಿಷಾಸುರನ ಆಳ್ವಿಕೆಯ ಪ್ರಾರಂಭದ ನಡುವೆ ಎರಮೈನಾಡು ಹೋಗಿ ಮಹಿಷಾ ಮಂಡಲ ಎಂದು ಮರು ನಾಮಂಕಿತವಾಗಿರಬೇಕು.
* ಆ ನಂತರ ಮಹಿಷಾ ಮಂಡಲ ಹೆಸರು ಜಾರಿಗೆ ಬಂದಿರಬೇಕು. ಉತ್ತರದಲ್ಲಿ ಕುರು, ಪಾಂಚಾಲ, ಮಗಧ, ಕೋಸಲ, ನಾಗ ಎಂಬ ಜನಪದ ಆಳ್ವಿಕೆಯ ಕುಲಗಳಿದ್ದಂತೆ, ದಕ್ಷಿಣದಲ್ಲಿಯೂ ನಾಗ, ಚೇರ, ವೆಂಗಿ, ಮಹಿಷಾ ಮಂಡಲ ಆಳ್ವಿಕೆಯ ಕುಲಗಳಾಗಿದ್ದವು. ಮಹಿಷಾ ಮಂಡಲವು ನಾಗ ಜನರಿಂದಲೇ ಅನಂತರ ಕರೆಯಲ್ಪಟ್ಟದ್ದು.
* ಮಹಿಷಾ ಮಂಡಲದಲ್ಲಿ ಮಹಿಷಾಸುರ ಎಮ್ಮೆಯ ತಲೆಯ ಚಿನ್ಹೆಯನ್ನಿಟ್ಟುಕೊಂಡು ಆಳ್ವಿಕೆ ಮಾಡುತ್ತಿದ್ದ ರಾಜ. ಆತನ ಆಳ್ವಿಕೆಯಲ್ಲಿ ಎಲ್ಲರನ್ನೂ ಕಾಯ್ದುಕೊಳ್ಳುತ್ತಿದ್ದ. ಜನರನ್ನು ರಕ್ಷಿಸುವುದರ ಜೊತೆಗೆ ಮೂಲ ಸಂಸ್ಕೃತಿಯ ರಕ್ಷಕನೂ ಕೂಡ ಆಗಿದ್ದ.
* ಮಹಿಷಾ ಮಂಡಲವು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಪ್ರದೇಶ. ಕೆಲವರು ಮಹಿಷನನ್ನು ಬುದ್ಧಪೂರ್ವ ಎಂದು ಹೇಳುತ್ತಾರೆ. ಹಲವರು ಅಶೋಕನ ನಂತರ ಎಂದು ಕರೆಯುತ್ತಾರೆ.
* ಮಹಿಷಾಸುರನ ಆಳ್ವಿಕೆಯಲ್ಲಿ ಆರ್ಯರು ಆಗಮಿಸಿದ ನಂತರ ನಿಧಾನಗತಿಯಲ್ಲಿಯೇ ಚಲಿಸ ತೊಡಗಿದರು. ಮಹಿಷಾ ಮಂಡಲದಲ್ಲಿ ಯಾವುದೇ ವೈದಿಕ ಆಚರಣೆಗೆ ಅವಕಾಶವಿರಲಿಲ್ಲ.
* ಮಹಿಷಾ ಮಂಡಲದಲ್ಲಿ ಐದು ರೀತಿಯ ಅಮ್ಮಂದಿರು ಬರುತ್ತಾರೆ. ಶತ್ರು ಪಡೆಯ ವಿರುದ್ಧ ದಂಡೆತ್ತಿ ಹೋದವಳನ್ನು "ದಂಡಿನ ಮಾರಿ", ಕೋಟೆ ಕಾಯುತ್ತಿದ್ದವಳನ್ನು "ಕೋಟೆ ಮಾರಮ್ಮ", ಸಿಡುಬು ರೋಗಕ್ಕೆ ಗಿಡಮೂಲಿಕಿ ಔಷಧಿ ಕೊಡುತ್ತಿದ್ದವಳನ್ನು "ಸಿಡುಬು ಮಾರಮ್ಮ", ಬಂಡಿ ಏರಿ ಯುದ್ಧಕ್ಕೆ ಹೋದವಳನ್ನು "ಬಂಡಿಕಾಳಮ್ಮ", ಶತ್ರು ಪಡೆಯಿಂದ ಶೀಲ ರಕ್ಷಿಸಿಕೊಂಡವಳು ಹಾಗೂ ಕೆರೆ ಕಟ್ಟೆ ತುಂಬಿಸಲು ಪ್ರಾಣತ್ಯಾಗ ಮಾಡಿದವಳನ್ನು "ಕಟ್ಟೆ ಮಾರಮ್ಮ" ಈ ಐವರು ಪ್ರಸಿದ್ಧರು.
* ಇವರನ್ನು ನಮ್ಮ ಮೂಲನಿವಾಸಿಗಳು ಇಂದಿಗೂ ಅದರಲ್ಲಿ ಹೆಚ್ಚಾಗಿ ಗ್ರಾಮೀಣ ಜನರು ಚೌಡಮ್ಮಂದಿರು, ಚಾಮುಂಡಂಮ್ಮಂದಿರು ಎಂದು ಕರೆಯುತ್ತಾರೆ. ಆ ಸಂದರ್ಭದ ಕಾಲಘಟ್ಟದಲ್ಲಿ ಅನ್ಯಾಯದ ವಿರುದ್ಧ ಬಂಡಾಯವೇಳುವ ಹೆಣ್ಣು ಮಕ್ಕಳನ್ನು ಚಾಮುಂಡಿ ಎಂದು ಕರೆಯುತ್ತಿದ್ದ ವಾಡಿಕೆಯು ಇದೆ.
 
ಆಕೆಯ ಕಠೋರ ತಪಸ್ಸಿನಿಂದ ಹೊಮ್ಮುವ ಶಾಖ ಋಷಿಯೊಬ್ಬನ ತಪಸ್ಸಿಗೆ ಭಂಗ ತರುತ್ತದೆ. ಇದರಿಂದ ಕೋಪಾವಿಷ್ಠನಾದ ಋಷಿ ಜ್ಞಾನದೃಷ್ಟಿಯಿಂದ ಮಾಲಿನಿ ತಪಸ್ಸನ್ನಾಚರಿಸುವುದನ್ನು ತಿಳಿದುಕೊಳ್ಳುತ್ತಾನೆ. "ಮಹಿಷಿಯ ರೂಪದಲ್ಲಿ ತಪಸ್ಸಾನಚರಿಸುತ್ತಿರುವುದರಿಂದ ನಿನ್ನ ಹೊಟ್ಟೆಯಲ್ಲಿ ಮಹಿಷ ಅಂದರೆ ಕೋಣವೇ ಜನ್ಮತಾಳಲಿ" ಎಂದು ಶಪಿಸುತ್ತಾನೆ.
==ಇತಿವೃತ್ತ==
* ಮೈಸೂರು ಹಿಂದೆ 'ಮಹಿಷ ಮಂಡಲ'ವಾಗಿತ್ತು. ಮಹಿಷಾಸುರ ಇಡೀ ಮಹಿಷ ಮಂಡಲದ ಒಡೆಯನಾಗಿದ್ದ. ಅಪಾರ ಸಂಖ್ಯೆಯಲ್ಲಿ ಎಮ್ಮೆ-ಕೋಣಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡಿಕೊಂಡಿದ್ದನು.
* ಈತನ ತಂಗಿ ಮಹಿಷಿ. ಮಹಿಷ ಆಗಾಗ್ಗೆ ದೇವಲೋಕಕ್ಕೆ ಹೋಗಿ ದೇವೆಂದ್ರನಿಗೆ ಕಾಟ ಕೊಟ್ಟು ಅವನ ಸಿಂಹಾಸನಕ್ಕೆ ಕಣ್ಣು ಹಾಕಿದ್ದರಿಂದ ಕೋಪಗೊಂಡ ದೇವತೆಗಳು ಕುತಂತ್ರದಿಂದ ಚಾಮುಂಡೇಶ್ವರಿಯನ್ನು ಸೃಷ್ಟಿ ಮಾಡಿ, ಮಹಿಷನ ಸಂಹಾರಕ್ಕೆ ಕಳುಹಿಸಿ,ಅವನನ್ನು ಸಂಪೂರ್ಣ ನಾಶಗೊಳಿಸಿ ಇಡೀ ಮೈಸೂರನ್ನು ವಶಪಡಿಸಿಕೊಳ್ಳುತ್ತಾರೆ.
 
ಇದರ ಫಲವೇ ಮಹಿಷಾಸುರನ ಜನನ. ಮಹಿಷಾಸುರ ಬೆಳಯುತ್ತಿದ್ದ. ಒಮ್ಮೆ ವಿದ್ಯುನ್ಮಾಲಿ ದೇವೇಂದ್ರನ ಮೇಲೆ ಯುದ್ಧ ಸಾರುತ್ತಾನೆ. ಯುದ್ಧದಲ್ಲಿ ವಿದ್ಯುನ್ಮಾಲಿಯ ಸೇನೆ ಸೋತು, ಆತ ಸಾವನ್ನಪ್ಪುತ್ತಾನೆ. ಇದರ ಸೇಡು ತೀರಿಸಿಕೊಳ್ಳಲು ಬಾಲಕ ಮಹಿಷ ಹೊರಟಾಗ ಮಾಲಿನಿ ತಡೆದು, ತಪಸ್ಸನ್ನಾಚರಿಸಿ ಶಕ್ತಿ ಸಂಪಾದಿಸಿಕೊಳ್ಳುವಂತೆ ಮಹಿಷನಿಗೆ ಸೂಚಿಸುತ್ತಾಳೆ.
==ಪುರಾಣ ಮಾಹಿತಿ==
* ಮಹಿಷಾಸುರನ ತಂದೆ ರಂಭಾ ಅಸುರರ ರಾಜನಾಗಿದ್ದನು. ಇವನು ಎಮ್ಮೆ (ಮಹಿಷಿ)ಯ ರೂಪದಲ್ಲಿ ಶಾಪಗ್ರಸ್ಥಳಾಗಿದ್ದ ರಾಣಿಯನ್ನು ಮೋಹಿಸಿ ಅದರಿಂದ ಮಹಿಷಾಸುರನ ಜನ್ಮವಾದುದರಿಂದ ಮಹಿಷಾಸುರನಿಗೆ ತನ್ನ ಇಚ್ಛೆಯಂತೆ ಮಾನವ ಅಥವಾ ಮಹಿಷ(ಕೋಣ)ನ ರೂಪ ತಾಳಲು ಸಾದ್ಯವಾಯಿತು.
* ರಂಭ ಎಂಬ ರಾಕ್ಷಸ ಪುತ್ರಾರ್ಥಿಯಾಗಿ ಅಗ್ನಿಯನ್ನು ಕುರಿತು ತಪಸ್ಸುಮಾಡಿದ. ಆಗ ಅಗ್ನಿ ಪ್ರತ್ಯಕ್ಷನಾಗಿ ನಿನಗೆ ದೇವತೆಗಳನ್ನು ಸದೆಬಡಿಯುವ ಮಗ ಹುಟ್ಟುವ ಆದರೆ ನೀನು ಮೊದಲು ಯಾವ ಪ್ರಾಣಿಯೊಂದಿಗೆ ಕ್ರೀಡಿಸುವೆಯೋ ಅಂಥ ಮಗ ಹುಟ್ಟುವ ಎಂದ. ರಂಭ ಒಂದು ಮಹಿಷಿಯನ್ನು ಕ್ರೀಡಿಸಲಾಗಿ ಮಹಿಷಾಕೃತಿಯ ರಾಕ್ಷಸ ಹುಟ್ಟಿದ. ಈ ವೃತ್ತಾಂತವೂ ದೇವೀಭಾಗವತದಲ್ಲಿದೆ.
* ದಿತಿಯ ಮಕ್ಕಳನ್ನೆಲ್ಲ ಇಂದ್ರ ಕೊಂದಾಗ ಆಕೆ ಸುಪಾಶ್ರ್ವ ಎಂಬ ಮುನಿಯ ಆಶ್ರಮದ ಸಮೀಪದಲ್ಲಿ ಎಮ್ಮೆಯಂತೆ ನಿಂತು ಪುತ್ರಕಾಮಿಯಾಗಿ ತಪಸ್ಸು ಮಾಡಿದಳು. ಇದರಿಂದ ಸುಪ್ರೀತನಾದ ಬ್ರಹ್ಮಪ್ರತ್ಯಕ್ಷನಾಗಿ ಆಕೆಯಲ್ಲಿ ಬಲಿಷ್ಠನಾದ ಪುತ್ರ ಹುಟ್ಟುವನೆಂದು ಹೇಳಿ ಹೋದ.
* ಸಮೀಪದ ಆಶ್ರಮದಲ್ಲಿದ್ದ ಸುಪಾಶ್ರ್ವಮುನಿಗೆ ತಿಳಿಸಿದಾಗ ಎಮ್ಮೆಯಂತೆ ನಿಂತು ತಪಸ್ಸು ಮಾಡಿದ್ದರಿಂದ ಕೋಣದಂತಿರುವ (ಮಹಿಷದಂತೆ) ಮಗ ಹುಟ್ಟುತ್ತಾನೆಂದು ವಿವರಣೆ ಕೊಟ್ಟ. ಗಾಬರಿಗೊಂಡ ದಿತಿ ಮರಳಿ ಬ್ರಹ್ಮನನ್ನು ಪ್ರಾರ್ಥಿಸಿದಾಗ ಮುಖಮಾತ್ರ ಕೋಣದಂತಿರುವುದು. ಉಳಿದ ಆಕಾರವೆಲ್ಲ ಮನುಷ್ಯನಂತಿರುವುದು ಅನುಗ್ರಹಿಸಿದ. * ಹೀಗೆ ದಿತಿಯ ಗರ್ಭದಲ್ಲಿ ಮಹಿಷ ಹುಟ್ಟಿದ. ಮಹಿಷಾಸುರ ತನಗೆ ಮರಣವೇ ಬಾರದಂತೆ ಶಿವವನ್ನು ಕುರಿತು ತಪಸ್ಸು ಮಾಡಿದ. ಶಿವ ಪ್ರತ್ಯಕ್ಷವಾಗಿ ಮರಣವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯ ವಾದದ್ದೆಂದು ಹೇಳಿದಾಗ ಮಹಿಷ ತನಗೆ ಹೆಂಗಸಿನಿಂದ ಮಾತ್ರ ಮರಣವಾಗಲೆಂದು ಬೇಡಿ ಶಿವನಿಂದ ತಥಾಸ್ತು ಎನಿಸಿಕೊಂಡ.
* ಮೈಸೂರು ಎಂಬುದು “ಮಹಿಷಾಸುರ” ಎಂಬ ಅಸುರನ ಹೆಸರಿನಿಂದ ಬಂದಿದೆ. ಇದನ್ನು ಹಿಂದೆ “ಮಹಿಷಾಸುರನ ಊರು” ಎಂದೂ ಕರೆಯಲಾಗುತ್ತಿತ್ತು. ದೇವೀ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರು ಸಂಬಂಧ ಹೊಂದಿದೆ.
* ದೇವಿ ಪುರಾಣದಲ್ಲಿ ಇರುವ ಕಥೆಯ ಪ್ರಕಾರ, ರಾಕ್ಷಸ ದೊರೆ, ಕೋಣನ ತಲೆಯುಳ್ಳ ಮಹಿಷಾಸುರ ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು.
* ಇವನು ಬ್ರಹ್ಮನಿಂದ ಮನುಷ್ಯರಿಂದ ಜನಿಸದ ಹೆಣ್ಣಿನಿಂದ ಸಾಯುವಂತಹ ವರವನ್ನು ಪಡೆದಿದ್ದನು. ಈತ ತನ್ನ ಈ ಸಾಮರ್ಥ್ಯದಿಂದ ದೇವತೆಗಳನ್ನು ಆಗಾಗ ಸ್ವರ್ಗದಿಂದ ಓಡಿಸುತ್ತಿದ್ದನು.
* ಅದರಿಂದಾಗಿ ದೇವತೆಗಳು ಉದ್ಭವಮೂರ್ತಿಯಾಗಿ ಚಾಮುಂಡಿಯನ್ನು ಸೃಷ್ಟಿಸುತ್ತಾರೆ. ದೇವಿಯು ದುರ್ಗೆಯ ರೂಪ ತಾಳಿ ಮಹಿಷಾಸುರನನ್ನು ವಧಿಸಿದಳು.
 
ಅದರಂತೆ ತಪಸ್ಸನ್ನಾಚರಿಸಿ ಸಿಂಹವನ್ನು ಪಳಗಿಸಬಲ್ಲ ಹೆಣ್ಣಿನ ಹೊರತಾಗಿ ಬೇರಾರಿಂದಲೂ ಸಾವು ಬಾರದಂತಹ ವರ ಪಡೆಯುತ್ತಾನೆ. ವರಬಲದಿಂದ ಕೊಬ್ಬಿದ ಮಹಿಷ ದೇವಾದಿ ದೇವತೆಗಳನ್ನು ಸೋಲಿಸುತ್ತಾರೆ. ದೇವತೆಗಳು ಯಥಾಪ್ರಕಾರ ತ್ರಿಮೂರ್ತಿಗಳ ಮೊರೆ ಹೋಗುತ್ತಾರೆ. ತ್ರಿಮೂರ್ತಿಗಳು ಆದಿಮಾಯೆಯನ್ನು ಸ್ತುತಿಸಲು ಸೂಚಿಸುತ್ತಾರೆ.
==ಚರ್ಚೆಗಳು==
* ಮೈಸೂರು ಎಂಬ ಹೆಸರಿನ ಉಗಮದ ಬಗ್ಗೆ ಹಲವಾರು ಚರ್ಚೆಗಳಿವೆ. ತಾರ್ಕಿಕವಾಗಿ ಹೆಚ್ಚು ಜನ ಒಪ್ಪಿರುವ ವಿಚಾರವೆಂದರೆ ಇಲ್ಲಿ ಎಮ್ಮೆಗಳನ್ನು ಹೆಚ್ಚಾಗಿ ಸಾಕಲಾಗುತ್ತಿತ್ತು. ಗರಿಕೆಮಾಳ, ಎಮ್ಮೆಮಾಳ ಎಂದು ದೊಡ್ಡಕೆರೆ ಮೈದಾನವನ್ನು ಈಗಲೂ ಕರೆಯುವವರು ಇದ್ದಾರೆ.
* ಈ ಎಮ್ಮೆಗಳ ಕಾರಣದಿಂದಾಗಿ ಈ ಹೆಸರು ಬಂದಿದೆ ಎಂಬ ವಾದ ತರ್ಕಕ್ಕೆ ಹತ್ತಿರದಲ್ಲಿದೆ. ಎಮ್ಮೆಯನ್ನು ಸಂಸ್ಕೃತದಲ್ಲಿ ಮಹಿಷಿ, ಮಹಿಷ ಎಂದು ಕರೆಯಲಾಗುತ್ತದೆ. ಹಾಗಾಗಿ ಎಮ್ಮೆಗಳ ಊರು ಮಹಿಷೂರು, ಮೈಸೂರಾಯಿತು.
* ಮಹಿಷಾಸುರ ಎಂಬ ವ್ಯಕ್ತಿಗೂ, ಈ ಹೆಸರಿಗೂ ಐತಿಹಾಸಿಕ ದಾಖಲೆಗಳು ಇಲ್ಲ. ಚಾಮುಂಡೇಶ್ವರಿ ಹಾಗೂ ಮಹಿಷಾಸುರ ಎಂಬ ಹೆಸರುಗಳು ಈ ಊರಿನಷ್ಟು ಪ್ರಾಚೀನತೆಯನ್ನು ಪಡೆದಿಲ್ಲ (ಓದಿ: ಮೈಸೂರು ಇತಿಹಾಸ) * ಹೆಸರಿನ ಬಗ್ಗೆ ಇರುವ ಇತರ ಚರ್ಚೆಗಳೆಂದರೆ… ಮಹಿಷ ಎಂಬ ಅಸುರ ಇಲ್ಲಿ ವಾಸವಾಗಿದ್ದ. ಚಾಮುಂಡೇಶ್ವರಿ ಅವತಾರವೆತ್ತಿ ಆತನನ್ನು ಕೊಂದಳು. ಮಹಿಷನ ಊರು ಎಂಬ ಕಾರಣಕ್ಕಾಗಿ ಈ ಊರಿಗೆ ಮೈಸೂರು ಎಂಬ ಹೆಸರು ಬಂದಿದೆ ಎಂಬ ವಾದವಿದೆ.
* ಹಿಂಸಾ ಪೀಡಕ ಎನ್ನಲಾದ ಅಸುರನ ಹೆಸರನ್ನು ಊರಿಗೆ ಇಡಲು ಸಾಧ್ಯವೆ? ಹಾಗಿದ್ದರೆ ಚಾಮುಂಡಿಯ ಹೆಸರನ್ನೇ ಇಡಬಹುದಿತ್ತಲ್ಲವೆ.? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇನ್ನು ಸಿಕ್ಕಿಲ್ಲ.
 
ಸಿಂಹವಾಹಿನಿಯಾಗಿ ಪ್ರಕಟಗೊಳ್ಳುವ ಆದಿಮಾಯೆ ಮಹಿಷಾಸುರನನ್ನು ಕೊನೆಗಾಣಿಸುತ್ತಾಳೆ. ಅಲ್ಲಿಂದ ತರುವಾಯ ಆಕೆ, ಮಹಿಷಾಸುರಮರ್ದಿನಿಯಾಗಿ ಭಕ್ತರ ಹೃದಯಮಂದಿರದಲ್ಲಿ ನೆಲೆಸುತ್ತಾಳೆ.[[File:MASURA.JPG|thumb|200px|ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ]]
==ಮಹಿಷ ಹಬ್ಬದ ಆಚರಣೆ==
[[File:Brooklyn Museum - Mahasura Attacks the Devi Folio from a Dispersed Devi Mahatmya Series.jpg|thumb|350px|This painting shows a pivotal battle between Durga and a powerful demon named Mahasura. The demon, with an animal head and purple skin, appears three times, attacking the goddess with bow and arrow, sword and shield, and trident (this weapon is shown snapped in two, a sign that he will eventually lose).]]
* ಕಳೆದ ಐದು ವರ್ಷಗಳಿಂದ ಮಹಿಷ ಹಬ್ಬದ<ref>https://www.udayavani.com/kannada/news/ಮೈಸೂರು/238442/ಪ್ರಗತಿಪರರಿಂದ-ಮೈಸೂರಲ್ಲಿ-ಮಹಿಷ-ದಸರಾ</ref><ref>http://archive.suvarnanews.tv/news/Karnataka/new-controversy-in-mysore-15015</ref> ಆಚರಣೆ ಆರಂಭವಾಗಿದ್ದು, ಮಹಿಷಾಸುರ ರಾಕ್ಷಸನಲ್ಲ, ಮೈಸೂರಿನ ಮೂಲ ಅರಸ. ಚಾಮುಂಡೇಶ್ವರಿಯ ಮಹಿಷ ಮರ್ದಿನಿ ಕಟ್ಟುಕಥೆ ಎಂಬ ಉದ್ದೇಶದಿಂದ ಮಹಿಷ ಹಬ್ಬವನ್ನು ಆಚರಿಸಲಾಗುತ್ತಿದೆ.
* ಮೈಸೂರು ಎಂಬ ಹೆಸರು ಬಂದಿರುವುದೇ ಇದು ಮಹಿಷಾ ಮಂಡಲವಾಗಿತ್ತು ಎಂಬ ಕಾರಣಕ್ಕೆ. ಇಲ್ಲೊಬ್ಬ ಆದಿದೊರೆ ಮಹಿಷಾಸುರ ಮಹಿಷಾ ಮಂಡಲವನ್ನು ಆಳ್ವಿಕೆ ಮಾಡಿದ ಪರಂಪರೆಯಿಂದಲೇ ಮೈಸೂರು ಖ್ಯಾತಿಗೊಳಗಾಗಿದೆ.
* ಆದರೆ ಇದೇ ಮಹಿಷಾಸುರನನ್ನು ಅವನೊಬ್ಬ ದುಷ್ಟ, ಕಾಮಾಂಧ, ಜನವಿರೋಧಿ ಈತನ ಸಂಹಾರಕ್ಕಾಗಿಯೇ ಪಾರ್ವತಿಯು ಚಾಮುಂಡೇಶ್ವರಿಯ ಅವತಾರವೆತ್ತಿ ಬಂದಳು. ಆಕೆ ಕೊಂದದ್ದು ಜನರಿಗಾಗಿ, ಜನಧರ್ಮಕ್ಕಾಗಿ ಎಂಬಂತೆ ಹೇಳಲಾಗಿದೆ. ಇದರಲ್ಲಿ ಯಾವುದು ಸುಳ್ಳು? ಯಾವುದು ಕಪೋಕಲ್ಪಿತವಾಗಿದೆ? ಎಂಬುದನ್ನು ಅರಿತು ನಿಜವಾದ ಮಹಿಷಾನನ್ನು ಜನರ ಬಳಿ ಕರೆದೊಯ್ಯಬೇಕಿದೆ.
* ಮಹಿಷಾಸುರ ಕೂಡ ಒಳ್ಳೆಯ ರಾಕ್ಷಸ ಅಂತ ಕೆಲವು ಇತಿಹಾಸಕಾರರು ಹೇಳುತ್ತಿದ್ದಾರೆ. ಮಹಿಷಾಸುರನನ್ನು ಕೆಲವು ರಾಜ್ಯಗಳಲ್ಲಿ ಇಂದಿಗೂ ಪೂಜಿಸುತ್ತಿದ್ದಾರೆ .
ಮಹಿಷಾಸುರನೂ ಒಳ್ಳೆಯವನಂತೆ, ಕೆಲವೆಡೆ ಮಹಿಷಾಸುರನಿಗೂ ಪೂಜೆ.
ಜಾರ್ಖಂಡ್, ಬಿಹಾರದ ಆದಿವಾಸಿಗಳಿಂದ ಮಹಿಷಾಸುರನ ಆರಾಧನೆ.
* ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯದ ಕೆಲವು ಆದಿವಾಸಿ ಸಮುದಾಯಗಳು ಇಂದಿಗೂ ಮಹಿಷಾಸುರನನ್ನು ಆರಾಧಿಸುತ್ತಾರೆ, ಮಹಿಷಾಸುರನ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ . ಆದಿವಾಸಿಗಳಿಗೆ ಮಹಿಷಾಸುರನೇ ದೇವರು . ಜಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿ ಮಹಿಷಾಸುರನನ್ನು ಇಂದಿಗೂ ಅಸುರ ಮತ್ತು ಸಂತಾಲ ಆದಿವಾಸಿಗಳು ಪೂಜಿಸುತ್ತಿದ್ದಾರೆ .
* ಆದಿವಾಸಿಗಳಿಗೆ ಮಹಿಷಾಸುರನೇ ದೇವರು . ಆತನನ್ನೇ ಇಂದಿಗೂ ಪೂಜಿಸುತ್ತಾರೆ . ಸಂತಾಲ ಮತ್ತು ಅಸುರ ಆದಿವಾಸಿಗಳು ದುರ್ಗಾ ಪೂಜೆ ಮಾಡಲ್ಲ . ಆದಿವಾಸಿಗಳ ಪಾಲಿಗೆ ಮಹಿಷಾಸುರ ಒಳ್ಳೆಯ ರಾಕ್ಷಸ. ಆತನೇ ರಕ್ಷಕ . ಆತನನ್ನು ದೇವತೆಗಳೆಲ್ಲಾ ಸೇರಿ ದುರ್ಗೆಯಿಂದ ಕತ್ತಲ ಸಮಯದಲ್ಲಿ ಅಪ್ರಾಮಾಣಿಕವಾಗಿ ಕೊಲ್ಲಿಸಿದ್ದರು ಎಂದು ಸಂತಾಲ ಆದಿವಾಸಿಗಳು ಹೇಳುತ್ತಾರೆ . ಸಂತಾಲ ಮತ್ತು ಅಸುರ ಆದಿವಾಸಿಗಳು ತಾವು ಮಹಿಷಾಸುರನ ವಂಶಸ್ಥರು ಎಂದು ನಂಬಿದ್ದಾರೆ .
 
 
"https://kn.wikipedia.org/wiki/ಮಹಿಷಾಸುರ" ಇಂದ ಪಡೆಯಲ್ಪಟ್ಟಿದೆ