ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೬ ನೇ ಸಾಲು:
* [[ಬಾದಾಮಿ]]
* [[ಹುನಗುಂದ]]
 
==ಸಾಹಿತ್ಯ==
 
ಸಂಶೋಧನೆ ಎಂಬುದು ಅನ್ವೇಷಣಾ ರೂಪದ ಬೌದ್ಧಿಕ ಕ್ರಿಯೆ. ಇದೊಂದು ಪರಿಶ್ರಮದ ಕ್ಷೇತ್ರ. ನಮ್ಮ ಜೀವನ ವಿಧಾನ, ಆಲೋಚನಾ ಪದ್ದತಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಸಂಭವಿಸಲು ನಮ್ಮ ಸಾಂಸ್ಕøತಿಕ ಇತಿಹಾಸದಲ್ಲಿ ಆರ್ಯರ ಆಗಮನ, ಆಂಗ್ಲರ ಪ್ರವೇಶಗಳು ಚರಿತ್ರಾರ್ಹ ಘಟನೆಗಳಾಗಿವೆ. ಕೃಷಿ ಸಂಸ್ಕøತಿಯ ಆರ್ಯರು, ಯಂತ್ರ ಸಂಸ್ಕøತಿಯ ಆಂಗ್ಲರು ನಮ್ಮ ಭೌತಿಕ ಮತ್ತು ಬೌದ್ಧಿಕ ಬದುಕಿನಲ್ಲಿ ಹೊಸ ಹೊಸ ಬದಲಾವಣೆಗಳನ್ನು ರೂಢಿಸಿದರು. ನಮ್ಮ ಹಳೆಯ ಜ್ಞಾನ ಶಾಖೆಗಳು ಹೊಸ ರೂಪ ಪಡೆದವು, ಪಶ್ಚಿಮದ ಹೊಸ ಜ್ಞಾನಶಾಖೆಯಾಗಿ ‘ಸಂಶೋಧನೆ’ ನಮ್ಮಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು. ಬಾಗಲಕೋಟ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕøತಿಗೆ ಸಂಬಂಧಿಸಿದಂತೆ ಸಂಶೋಧನಾ ಕೆಲಸವು ಕಳೆದ ಶತಮಾನದ ಮಧ್ಯಭಾಗದಲ್ಲಿ ಆರಂಭವಾದವು. ಜಿಲ್ಲೆಯ ಸಂಶೋಧನಾ ಕ್ಷೇತ್ರ ವೈವಿದ್ಯಮಯವಾಗಿದೆ. ಜಾನಪದ, ಶಾಸನ, ವಚನ, ಹರಿದಾಸ ಸಾಹಿತ್ಯ, ಹಸ್ತಪ್ರತಿ ಶಾಸ್ತ್ರ, ವ್ಯಾಕರಣ, ಛಂದಸ್ಸು, ಸೃಜನ, ಸೃಜನೇತರ ಸಾಹಿತ್ಯ, ಜೀವನ ಚರಿತ್ರೆ, ರಂಗಭೂಮಿ, ಚಿತ್ರಕಲೆ, ಗ್ರಾಮನಾಮ ವಿಜ್ಞಾನ ಮೊದಲಾದ ಪ್ರಕಾರಗಳಲ್ಲಿ ಸಂಶೋಧನಾ ಕಾರ್ಯ ಜರುಗಿವೆ. ಬಾಗಲಕೋಟ ಜಿಲ್ಲೆಯು ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ತುಂಬಾ ಎತ್ತರದ ಸ್ಥಾನದಲ್ಲಿದೆ. ಈ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ನಡೆದ ಕೆಲಸ ತುಂಬಾ ಗಮನಾರ್ಹವಾದುದು. ಜನಪದ ಮತ್ತು ಶಾಸನ ಸಾಹಿತ್ಯದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದವರೆಗೆ ಸಂಶೋಧನೆಯಲ್ಲಿ ಈ ಜಿಲ್ಲೆಯ ನಡೆ ದಾಖಲಾರ್ಹವಾದುದು. ಬಾಗಲಕೋಟ ಜಿಲ್ಲೆಯು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಹರಿದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೇಲೆ ಮೊದಲ ಪಿ.ಎಚ್.ಡಿ. ಪ್ರಬಂಧಗಳು ಈ ಜಿಲ್ಲೆಯಿಂದ ಹೊರಬಂದಿರುವುದು ಒಂದು ದಾಖಲೆಯೇ ಸರಿ. ಬಹುಮುಖಿಯಾಗಿ ವಿದ್ವತ್ ವಲಯವನ್ನು ಕಟ್ಟಿದ ನಮ್ಮ ಸಂಶೋಧಕರ ಶ್ರಮ ಮತ್ತು ಕಾಯಕ ಶ್ರದ್ಧೆಯನ್ನು ಈ ಪ್ರಬಂಧದಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಡಾ. ಅನಂತರಾಯ ಟಿ. ಪಾಟೀಲ ಅವರು ಬಾಗಲಕೋಟ ಜಿಲ್ಲೆಯಲ್ಲಿ ಪಿಎಚ್.ಡಿ. ಪದವಿ ಪಡೆದ ಮೊಟ್ಟ ಮೊದಲ ಸಂಶೋಧನ ಪ್ರಬಂಧಕಾರರು. ಡಾ. ಎ. ಟಿ. ಪಾಟೀಲ ಅವರು ‘ಶ್ರೀ ಪ್ರಸನ್ನವೆಂಕಟದಾಸರು ಮತ್ತು ಅವರ ಕೃತಿಗಳು’ ಕುರಿತು ಸಂಶೋಧನೆ ಕೈಕೊಂಡರು. ಮುಂಬಯಿ ವಿಶ್ವ ವಿದ್ಯಾಲಯದಿಂದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಆರ್. ಎಸ್. ಪಂಚಮುಖಿ ಅವರ ಮಾರ್ಗದರ್ಶನದಲ್ಲಿ 11-03-1947 ರಲ್ಲಿ ಸಂಶೋಧನಾ ಕಾರ್ಯ ಆರಂಭಿಸಿದರು. ಕನ್ನಡ ಹರಿದಾಸ ಸಾಹಿತ್ಯದಲ್ಲಿ ಇದು ಮೊದಲ ಪಿಎಚ್.ಡಿ. ಪ್ರಬಂಧವಾಗಿ 1956 ರಲ್ಲಿ ಮಿಂಚಿನಬಳ್ಳಿ ಪ್ರಕಾಶನದಿಂದ ಪ್ರಕಟವಾಯಿತು. ಪ್ರಸ್ತುತ ಪ್ರಬಂಧದಲ್ಲಿ ವೈಷ್ಣವ ಭಕ್ತಿಯ ಬೆಳವಣಿಗೆ, ಉತ್ತರ ಭಾರತದಲ್ಲಿ ಭಕ್ತಿ ಪಂಥ, ಬಂಗಾಲ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಕ್ತಿ ಪಂಥದ ಜೊತೆಗೆ ಪ್ರಸನ್ನ ವೆಂಕಟದಾಸರ ಕಾಲ ನಿರ್ಣಯ, ಜೀವನ ಚರಿತ್ರೆ, ಕೃತಿ ವಿಮರ್ಶೆ, ಆ ಕಾಲದ ರಾಜಕಿಯ, ಸಾಮಾಜಿಕ ಜೀವನದೊಂದಿಗೆ ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಭಾವನಾ ಪ್ರಧಾನವಾದ ಅಥವಾ ಪೂರ್ವಗ್ರಹ ಪ್ರತಿಕ್ಷಿಪ್ತವಾದ ಗ್ರಂಥಗಳು ಬರುವ ಹೊತ್ತಿನಲ್ಲಿ ಆ ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಇತಿಹಾಸವನ್ನು ಕಟ್ಟಿಕೊಟ್ಟ ಈ ಪ್ರಬಂಧವು ತುಂಬಾ ಖ್ಯಾತಿಯನ್ನು ತಂದುಕೊಟ್ಟಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ 1955 ರಲ್ಲಿ ಪಿಎಚ್.ಡಿ. ಪದವಿಗಾಗಿ ಮಾನ್ಯ ಮಾಡಿದ [[ಗದ್ದಗಿಮಠ, ಬಿ.ಎಸ್|ಡಾ. ಬಿ.ಎಸ್.ಗದ್ದಗಿಮಠ]] ಅವರ ಕನ್ನಡ ಜನಪದ ಗೀತೆಗಳು ಪ್ರಬಂಧವು ಕನ್ನಡ ಜಾನಪದ ಲೋಕದ ಮೊಟ್ಟ ಮೊದಲ ಸಂಶೋಧನಾ ಪ್ರಬಂಧವಾಗಿದೆ. ಉತ್ತರ ಕರ್ನಾಟಕದ ಬಹುಭಾಗವನ್ನೆಲ್ಲ ಸುತ್ತಿ, ಜನಸಾಮಾನ್ಯರ ಸಂಪ್ರದಾಯ, ಸಂಸ್ಕøತಿಗಳಲ್ಲಿ ಒಂದಾಗಿ, ಹಳ್ಳಿ ಹಳ್ಳಿಗಳಲ್ಲಿ ಹೇಳ ಹೆಸರಿಲ್ಲದೆ ಅಡಗಿ ಹೋಗುತ್ತಿದ್ದ ಜಾನಪದ ಗೀತ ರತ್ನಗಳನ್ನು ಸ್ವತಃ ಸಂಗ್ರಹಿಸಿ, ಸಂಪಾದಿಸಿ, ಸಂಶೋಧನೆ ಕೈಕೊಂಡ ಡಾ. ಬಿ. ಎಸ್. ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದ ಈ ಜಿಲ್ಲೆಯ ಮೇರು ನಿಧಿ. ಜನಪದ ಗೀತ ಸಾಹಿತ್ಯದ ಪ್ರಕಾರಗಳಾದ ಸ್ತುತಿ ಪದಗಳು, ಸುಗ್ಗಿ ಹಾಡುಗಳು, ಹಂತಿ ಹಾಡುಗಳು, ಮಕ್ಕಳ ಹಾಡುಗಳ ವಿಶ್ಲೇಷಣೆಯೊಂದಿಗೆ ಹಳ್ಳಿಗರ ಹಬ್ಬಗಳ ಸಾಂಸ್ಕøತಿಕ, ಧಾರ್ಮಿಕ ಆಚರಣೆಗಳ ಒಟ್ಟು ನೋಟವನ್ನು ಹಳ್ಳಿಗರ ಹಾಡಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅನುಬಂಧದಲ್ಲಿ ಡಾ. ಗದ್ದಗಿಮಠರು ಸಂಗ್ರಹಿಸಿದ ಹಂತಿಯ ಹಾಡುಗಳಲ್ಲಿ ಹನ್ನೇರಡು ಶರಣರ ಜೀವನ ಚಿತ್ರಣವಿದೆ. ಕರ್ನಾಟಕ ವಿಶ್ವ ವಿದ್ಯಾಲಯ 1963 ರಲ್ಲಿ ಈ ಪ್ರಬಂಧವನ್ನು ಪ್ರಕಟಿಸಿದೆ. ಮೇಲೆ ದಾಖಲಿಸಿದ ಈ ಎರಡೂ ಪ್ರಬಂಧಗಳು ಕನ್ನಡ ದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೊದಲ ಸಂಶೋಧನಾ ಪ್ರಬಂಧಗಳಾಗಿವೆ. ಬಾಗಲಕೋಟ ಜಿಲ್ಲೆಯ ಸಂಶೋಧನಾ ಕ್ಷೇತ್ರ ತುಂಬಾ ವೈವಿದ್ಯತೆಯಿಂದ ಕೂಡಿದೆ. ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ಹಲವು ನೆಲೆಗಳ ಅಧ್ಯಯನ ಇಲ್ಲಿ ನಡೆದಿದೆ. ಪ್ರಾಚೀನ ಕವಿ ಕೃತಿಗಳ ಕುರಿತು, ವಚನಕಾರರು ಕುರಿತು, ಶಾಸನ, ಜಾನಪದ, ರಂಗಭೂಮಿ, ವ್ಯಾಕರಣ, ಛಂದಸ್ಸು, ಆಧುನಿಕ ಸಾಹಿತ್ಯ ಕುರಿತು ಹಲವು ನೆಲೆಗಳಲ್ಲಿ ಈ ಜಿಲ್ಲೆಯ ಸಂಶೋಧನೆಗಳು ನಡೆದಿವೆ. ವಿದ್ವಾಂಸರಾದ ಡಾ. ಎಸ್. ಎಸ್. ಕೋತಿನ ಅವರ ಆಂಡಯ್ಯ ಕವಿ ಮತ್ತು ಕೃತಿಗಳ ಅಧ್ಯಯನ, ಡಾ. ಅನ್ನಪೂರ್ಣ ಎಂ. ಜಾಲವಾದಿ ಅವರ ‘ಶಂಕರ ದಾಸಿಮಯ್ಯ ಪುರಾಣ ಒಂದು ಅಧ್ಯಯನ’, ಡಾ. ಶಶಿಕಲಾ ಮರಿಬಾಶೆಟ್ಟಿ ಅವರ ‘ದ್ಯಾಂಪುರ ಚೆನ್ನಕವಿಗಳು’, ಡಾ. ಎಸ್. ಎಸ್. ಬಸುಪಟ್ಟದ ಅವರ ‘ನಿಜಗುಣ ಶಿವಯೋಗಿ ಹಾಗೂ ಅವರ ಕೃತಿಗಳು’, ಡಾ. ಕೆ.ಎಸ್.ಮಠ ಅವರ ‘ಚನ್ನ ಬಸವಣ್ಣನವರ ವಚನಗಳು ಒಂದು ಅಧ್ಯಯನ’ ಡಾ. ಪಿ.ಎಂ. ಹುಗ್ಗಿ ಅವರ ‘ಷಡಕ್ಷರ ದೇವ ಒಂದು ಅಧ್ಯಯನ’ ಕೃತಿಗಳು ಕನ್ನಡದ ಪ್ರಾಚೀನ ಕವಿ ಕೃತಿಗಳ ಕುರಿತು ಕೈಕೊಂಡ ಸಂಶೋಧನಾ ಪ್ರಬಂಧನಗಳಾಗಿವೆ. ಡಾ. ಶ್ರೀರಾಮ ಇಟ್ಟಣ್ಣವರ ಅವರ ‘ಶ್ರೀಕೃಷ್ಣ ಪಾರಿಜಾತ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧದಲ್ಲಿ ಪಾರಿಜಾತದ ಪರಂಪರೆ ಇತಿಹಾಸ ಮತ್ತು ಕಲಾತಂಡಗಳ ಒಟ್ಟು ಚರಿತ್ರೆಯನ್ನು ತುಂಬಾ ಅಧ್ಯಯನಪೂರ್ಣವಾಗಿ ರೂಪಿಸಲಾಗಿದೆ. ಡಾ. ವಿರೇಶ ಬಡಿಗೇರ ಅವರ ‘ಉತ್ತರ ಕರ್ನಾಟಕದ ಐದು ಗೀತಮೇಳಗಳು ಒಂದು ಅಧ್ಯಯನ’ವು ಪ್ರದರ್ಶನ ಸಿದ್ದಾಂತದ ಹಿನ್ನೆಲೆಯಲ್ಲಿ ಕೈಕೊಂಡ ಆಳವಾದ ಅಖಂಡ ಅಧ್ಯಯನವಾಗಿದೆ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಮಗ್ಗಲುಗಳಲ್ಲಿ ಈ ಜಿಲ್ಲೆಯಿಂದ ಸಂಶೋಧನೆ ಜರುಗಿದೆ. ಡಾ. ಮಹಾದೇವ ಕಣವಿ ಅವರ ‘ಕನ್ನಡದ ಪ್ರಾತಿನಿಧಿಕ ಪ್ರಾದೇಶಿಕ ಕಾದಂಬರಿಗಳು’ ಡಾ. ರೇಖಾ ಜೋಗುಳ ಅವರ ‘ಡಾ. ಯು.ಆರ್. ಅನಂತಮೂರ್ತಿಯವರ ಕಾದಂಬರಿಗಳು ಒಂದು ಅಧ್ಯಯನ’ ಡಾ. ಗಣೇಶ ಅಮೀನಗಡದ ‘ಕನ್ನಡ ದಲಿತ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿದಾನ’ ಡಾ. ಜೆ.ಪಿ.ದೊಡಮನಿ ಅವರ ‘ಶರಣರ ಕುರಿತ ಕನ್ನಡ ಕಾದಂಬರಿಗಳು’ ಡಾ. ಮೃತ್ಯುಂಜಯ ಹೊರಕೇರಿ ಅವರ ‘ಶ್ರೀ ನಲವಡಿ ಶ್ರೀಕಂಠಶಾಸ್ತ್ರಿಗಳ ಬದುಕು ಬರಹ’, ಡಾ. ವಿಜಯಾ ದಡೇದ ಅವರ ‘ಕನ್ನಡ ಕಾವ್ಯ ಪರಂಪರೆಯಲ್ಲಿ ಮಹಿಳಾ ಸಾಹಿತ್ಯ’, ಡಾ. ಸುಭಾಸ ಪೋರೆ ಅವರ ‘ಡಾ. ಜಿ.ಎಸ್. ಶಿವರುದ್ರಪ್ಪ ಕಾವ್ಯ ಒಂದು ಅಧ್ಯಯನ’ ಡಾ. ಎಂಜಿ.ವಾರಿ ಅವರ ‘ಸೋದೆ ಅರಸು ಮನೆತನ ಒಂದು ಅಧ್ಯಯನ’ ಸಂಶೋಧನ ಪ್ರಬಂಧಗಳು ಗಮನಾರ್ಹವಾಗಿವೆ.
 
ದಶಕದ ಸಂಶೋಧನೆ (2001-2010) 2001 ರಲ್ಲಿ ಪ್ರಕಟವಾದ ಡಾ. ಅಶೋಕ ನರೋಡೆ ಅವರ ‘ಏಕಲವ್ಯನ ಪಾತ್ರ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧದಲ್ಲಿ ಏಕಲವ್ಯನ ಕಥಾ ಪರಂಪರೆಯನ್ನು ಸಂಸ್ಕøತ, ಹಳಗನ್ನಡ, ಜೈನ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳಲ್ಲಿಯ ವಿವರಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ್ದಾರೆ. ಗುಳೇದಗುಡ್ಡದ ಡಾ. ಆರ್. ಎಸ್. ಅಕ್ಕಮಹಾದೇವಿ ಅವರು 2001 ರಲ್ಲಿ ಡಾ. ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ‘ಅಲಕ್ಷಿತ ವಚನಕಾರ್ತಿಯರ ವಚನಗಳ ಆಶಯ’ ಕುರಿತು ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ ಪ್ರಬಂಧ ಪ್ರಕಟವಾಗಿದೆ.ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರುವ ಡಾ. ಬಿ.ಎಂ.ಪಾಟೀಲ ಅವರ ‘ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಬದುಕು ಮತ್ತು ಸಾಹಿತ್ಯ ಮಹಾಪ್ರಬಂಧವು ‘ವಚನ ಗುಮ್ಮಟ’ ಹೆಸರಿನಲ್ಲಿ ಪ್ರಕಟವಾಗಿದೆ. ಡಾ. ಹಳಕಟ್ಟಿಯವರ ಕಾರ್ಯಸಾಧನೆಯನ್ನು ದಾಖಲಿಡುವ ಅಪರೂಪದ ಮಹಾಪ್ರಬಂಧ ಇದಾಗಿದೆ.
 
ಕನ್ನಡ ನವೋದಯ ಕಾವ್ಯಕ್ಕೆ ಜಾನಪದವೇ ಮೂಲ ಪ್ರೇರಣೆ ಪ್ರಭಾವ ಎಂಬುದನ್ನು ಸಾಧಿಸಿವುದರೊಂದಿಗೆ ನವೋದಯ ಕಾವ್ಯದ ನಾಲ್ಕನೆಯ ಕೇಂದ್ರವಾಗಿ ಹಲಸಂಗಿಯನ್ನು ಗುರುತಿಸಿ ವಿಸ್ತøತವಾಗಿ ಅಧ್ಯಯನಕ್ಕೆ ಒಳಪಡಿಸಿದ ಡಾ. ಪ್ರಕಾಶ ಗ. ಖಾಡೆಯವರ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ’ ಸಂಶೋಧನ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ 2005 ರಲ್ಲಿ ಪಿಎಚ್.ಡಿ. ಪದವಿ ದೊರೆತಿದೆ. 2007 ರಲ್ಲಿ ಮಹಾ ಪ್ರಬಂಧ ಪ್ರಕಟವಾಗಿ 2010 ರಲ್ಲಿ ಪುನಃ ಮುದ್ರಣ ಕಂಡಿದೆ. ಜಾನಪದ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಡಾ. ಬಿ.ಎಂ.ಹೊಸಮನಿ ಅವರ ‘ವೇಷಗಾರರು ಒಂದು ಅಧ್ಯಯನ’, ಹುನಗುಂದ ಕಾಲೇಜಿನ ಡಾ. ತಿಪ್ಪೇಸ್ವಾಮಿ ಅವರ ‘ಬಳ್ಳಾರಿ ಜಿಲ್ಲೆಯ ಜನಪದ ಗೀತ ಸಂಪ್ರದಾಯಗಳು’, ಡಾ. ಶಂಕರ ಮಾದರ ಅವರ ‘ವಸತಿ ಜಾನಪದ’, ಜಮಖಂಡಿ ಕಾಲೇಜಿನ ಡಾ. ಸದಾಶಿವ ಸಜ್ಜನ ಅವರ ‘ಕ್ರಿಯಾತ್ಮಕ ಜಾನಪದ’, ಮುಧೋಳ ಕಾಲೇಜಿನ ಲಲಿತಾ ಎಂ. ಕಲ್ಯಾಣಶೆಟ್ಟಿ ಅವರ ‘ಜಿ. ಬಿ. ಖಾಡೆ ಸಂಕಲಿತ ಜನಪದ ಸಾಹಿತ್ಯ’ ಸಂಶೋಧನಾ ಪ್ರಬಂಧಗಳು ಗಮನಾರ್ಹವಾಗಿವೆ.
 
ಜಮಖಂಡಿ ಓಲೆಮಠದ ಡಾ. ಚನ್ನಬಸವ ಮಹಾಸ್ವಾಮಿಗಳ ‘ಮೊಗ್ಗೆಯ ಮಾಯಿದೇವ ಒಂದು ಅಧ್ಯಯನ’, ಗುಳೇದಗುಡ್ಡದ ಡಾ. ರಾಜಶೇಖರ ಬಸುಪಟ್ಟದ ಅವರ ‘ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಒಂದು ಅಧ್ಯಯನ’, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರ ‘ಬಸವೋತ್ತರ ಯುಗದ ವಚನ ಸಾಹಿತ್ಯ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧವು ವಚನಕಾರರ ಅಭಿವ್ಯಕ್ತಿ ವಿಧಾನವನ್ನು ಸಂಪ್ರದಾಯ ಮತ್ತು ಅನ್ವಯಿಕ ಹಿನ್ನೆಲೆಯಲ್ಲಿ ವಿಸ್ತøತವಾಗಿ ರೂಪಿಸಲಾಗಿದೆ.ಡಾ. ಬಸವರಾಜ ಹದ್ಲಿ ಅವರ ‘ಬಾಲಲೀಲಾ ಮಹಾಂತ ಶಿವಯೋಗಿಗಳು ಒಂದು ಅಧ್ಯಯನ’, ಡಾ. ಡಿ.ಎಸ್. ಬಾಗಲಕೋಟ ಅವರ ‘ಪ್ರಭುಲಿಂಗ ಲೀಲೆ ಒಂದು ಯೋಗಿಕ ಅಧ್ಯಯನ’, ಡಾ. ಬಿ.ಎಸ್. ಬಿರಾದಾರ ಅವರ ‘ವಚನ ಸಾಹಿತ್ಯ ಪ್ರಕಟಣೆ ಮತ್ತು ಅಧ್ಯಯನ ಪರಂಪರೆ’, ಡಾ. ಜಿ.ಆಯ್. ನಂದಿಕೋಲಮಠ ಅವರ ‘ಕರಸ್ಥಲ ಪರಂಪರೆ ಒಂದು ಅಧ್ಯಯನ ಹಾಗೂ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಬಾದಾಮಿ ತಾಲ್ಲೂಕು ನೀರಬೂದಿಹಾಳ ಗ್ರಾಮದವರಾಗಿರುವ ಡಾ. ಯ.ಮಾ.ಯಕೊಳ್ಳಿ ಹಾಗೂ ಅವರ ಪತ್ನಿ ಡಾ. ಪ್ರೇಮಾ ಯಾಕೊಳ್ಳಿ ಜಿಲ್ಲೆಯ ಅಪರೂಪದ ಡಾಕ್ಟರೇಟ ಪಡೆದ ದಂಪತಿಗಳಾಗಿದ್ದಾರೆ. ಡಾ. ಯ.ಮಾ.ಯಾಕೊಳ್ಳಿ ‘ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು’ ಕುರಿತು ಡಾ. ಪ್ರೇಮಾ ಯಾಕೊಳ್ಳಿ ‘ಕನ್ನಡದಲ್ಲಿ ಯುದ್ದೋತ್ತರ ಭಾರತ ಕಥೆ’ ಕುರಿತು ಜಿಲ್ಲೆಯ ಹಿರಿಯ ಸಂಶೋಧಕರಾದ ಡಾ. ಬಿ.ಆರ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಕೊಂಡು ಪದವಿ ಪಡೆದಿದ್ದಾರೆ. ಡಾ. ಸತ್ಯಾನಂದ ಪಾತ್ರೋಟ ಅವರ ‘ಬರಗೂರು ರಾಮಚಂದ್ರ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂದರ್ಭ’ ಕುರಿತ ಸಂಶೋಧನಾ ಪ್ರಬಂಧವು ‘ಭೂಮಿತತ್ವದ ಸೂತ್ರ’ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಡಾ. ಶಂಭು ಬಳಿಗಾರ ಅವರ ‘ಜೋಳದ ರಾಶಿ ದೊಡ್ಡನಗೌಡರು ಒಂದು ಅಧ್ಯಯನ’, ಡಾ. ಮೈನುದ್ದೀನ ರೇವಡಿಗಾರ ಅವರ ‘ಎನ್ಕೆ ಬದುಕು ಮತ್ತು ಸಾಹಿತ್ಯ ಒಂದು ಅಧ್ಯಯನ, ಡಾ|| ಸದಾನಂದ ಬಿಳ್ಳೂರ ಅವರ ‘ಕೆ.ಜಿ.ಕುಂದಣಗಾರ ಒಂದು ಅಧ್ಯಯನ’, ಡಾ. ಸಂಗಮೇಶ ಮಾಟೋಳ್ಳಿ ಅವರ ‘ದು.ನಿಂ.ಬೆಳಗಲಿ ಅವರ ಬದುಕು ಬರಹ ಒಂದು ಅಧ್ಯಯನ’, ಡಾ. ಮಹಾಂತೇಶ ಹೂಗಾರ ಅವರ ‘ಶಿವಕವಿ ಸಂಗಮೇಶ ಹೊಸಮನಿ ಒಂದು ಅಧ್ಯಯನ’, ಡಾ. ಎಸ್.ಜಿ.ಸಜ್ಜಲಗುಡ್ಡ ಅವರ ‘ಮುದೇನೂರ ಸಂಗಣ್ಣವರ ಬದುಕು ಬರಹ’ ಡಾ. ಸಣ್ಣ ಸಕ್ಕರಗೌಡರ ಅವರ ‘ಡಾ. ಬಿ.ವಿ.ಶಿರೂರ ಅವರ ಬದುಕು-ಬರಹ’ ಡಾ. ಮನೋಹರ ಪೂಜಾರ ಅವರ ‘ಈಶ್ವರ ಸಣಕಲ್ಲರ ಬದುಕು ಬರಹ’, ಡಾ. ಜಿ.ಕೆ. ಹಿರೇಮಠರ ‘ಮಹಾಜಂಗಮ’, ಸಂಶೋಧನಾ ಪ್ರಬಂಧಗಳು ನಾಡಿನ ಸಾಧಕರ ಬದುಕಿನ ವಿಸ್ತøತ ಅನಾವರಣ ಮಾಡಿವೆ. ಜಿಲ್ಲೆಯ ಹಿರಿಯ ಸಂಶೋಧಕರಲ್ಲಿ ಡಾ. ಸಂಗಮೇಶ ಬಿರಾದಾರ ಮುಖ್ಯರು. ‘ವೈಯಾಕರಣ ಎರಡನೆಯ ನಾಗವರ್ಮ’ ಇವರ ಸಂಶೋಧನಾ ಮಹಾಪ್ರಬಂಧ. ಕನ್ನಡ ವ್ಯಾಕರಣ ಮತ್ತು ಛಂದಸ್ಸು ಪ್ರಕಾರದಲ್ಲಿ ಈ ಪ್ರಬಂಧಕ್ಕೆ ಬಹುದೊಡ್ಡದಾದ ಸ್ಥಾನವಿದೆ. ಡಾ. ಬಿ.ಆರ್. ಹಿರೇಮಠ ಡಾ. ಎಂ.ಎಸ್.ಸುಂಕಾಪುರ, ಡಾ. ರಾ.ಯ. ಧಾರವಾಡಕರ, ಡಾ. ಸ.ಸ.ಮಾಳವಾಡ ಈ ಜಿಲ್ಲೆಯಿಂದ ಉದಯಿಸಿದ ಕನ್ನಡದ ಬಹುದೊಡ್ಡ ಸಂಶೋಧಕರು. ಡಾ. ಬಿ.ಕೆ. ಹಿರೇಮಠ ಅವರ ಹಸ್ತಪ್ರತಿಗಳಲ್ಲಿ ಚಿತ್ರಕಲೆ, ಡಾ. ಯಾದಪ್ಪ ಪರದೇಶಿ ಅವರ ಉತ್ತರ ಕರ್ನಾಟಕದಲ್ಲಿ ಭಿತ್ತಿ ಚಿತ್ರಕಲೆ ಡಾ. ಎಸ್.ಸಿ.ಪಾಟೀಲ ಅವರ ‘ಕರ್ನಾಟಕ ಜನಪದ ಚಿತ್ರಕಲೆ’, ಡಾ. ಶೀಲಾಕಾಂತ ಪತ್ತಾರ ಅವರ ‘ಬಾದಾಮಿ ಸಾಂಸ್ಕøತಿಕ ಪರಂಪರೆ’, ಡಾ. ಸಂಗಮೇಶ ಕಲ್ಯಾಣಿ ಅವರ ‘ಬಾಗಲಕೋಟ ಜಿಲ್ಲೆಯ ದೇಶಗತಿ ಮನೆತನಗಳು, ಡಾ. ಶಶಿಕಲಾ ಮೊರಬದ ಅವರ ‘ಜನಪ್ರಿಯ ಮಹಿಳಾ ಕಾದಂಬರಿಗಳು’, ಡಾ. ಸರೋಜಿನಿ ಪಾವಟೆ ಅವರ ‘ಬಾಗಲಕೋಟ ತಾಲೂಕು ಸಾಹಿತ್ಯ, ಸಾಂಸ್ಕøತಿಕ ಅಧ್ಯಯನ, ಡಾ. ಡಿ.ಎಸ್. ದೊಡಮನಿ ಅವರ ‘ಬಾಗಲಕೋಟ ಜಿಲ್ಲಾ ಸಾಹಿತ್ಯ ದರ್ಶನ’ ಡಾ. ಭೀಮನಗೌಡ ಪಾಟೀಲ ಅವರ ‘ಬಾಗಲಕೋಟ ಜಿಲ್ಲೆಯ ರಂಗಭೂಮಿ’ ಡಾ. ಆನಂದ ಪೂಜಾರ ಅವರ ‘ಕರಾವಳಿ ಕರ್ನಾಟಕದ ಕಾವಿ ಚಿತ್ರಕಲೆ, ಡಾ. ಸುರೇಶ ಇಂಗಳಗಿ ಅವರ ಪತ್ರಿಕೋದ್ಯಮಿಯಾಗಿ ಡಾ. ಫ.ಗು. ಹಳಿಕಟ್ಟಿ, ಡಾ. ನಂಜುಂಡಸ್ವಾಮಿ ಅವರ ‘ಮೈಸೂರು ಒಡೆಯರು ಒಂದು ಅಧ್ಯಯನ, ಡಾ. ಡಿ.ಜಿ.ಹಾಜವಗೋಳ ಹಾಗೂ ಡಾ. ಪಿ.ಕೆ. ಖಂಡೋಬಾ ಅವರ ಜನಾಂಗೀಯ ಅಧ್ಯಯನಗಳು, ಡಾ. ಆಶಾರಾಣಿ ಚಿನಗುಂಡಿ ಅವರ ‘ಪಾರಿಜಾತದ ಕೌಜಲಗಿ ನಿಂಗಮ್ಮ’ ಒಂದು ಅಧ್ಯಯನ, ಈ ಮೊದಲಾದವು ಜಿಲ್ಲೆಯ ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಡಾ. ಎಚ್.ಎಂ.ಕೈಲಾಸಲಿಂಗಂ, ಡಾ. ಜಿ. ವೀರಭದ್ರಗೌಡ, ಡಾ. ಸಂತೋಷಕುಮಾರಿ ಅಮೀನಗಡ, ಡಾ. ಪಿ.ಎಸ್.ಕಂದಗಲ್ಲ, ಡಾ. ಅನಸೂಯಾ ಕಾಂಬಳೆ, ಡಾ. ಅನಿತಾ ಗುಡಿ, ಡಾ. ಬಿ.ಬಿ.ಕಡ್ಲಿ, ಡಾ. ಎಂ.ಬಿ.ಒಂಟಿ, ಡಾ. ನಿಂಗಯ್ಯಾ ಒಡೆಯರ, ಡಾ. ಸವಿತಾ ಒಡೆಯರ ಈ ಮೊದಲಾದವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಜಿಲ್ಲೆಯ ಸಂಶೋಧನಾ ಕ್ಷೇತ್ರದ ಅಧ್ಯಯನ ಪ್ರಗತಿಯಲ್ಲಿದೆ, ಸಾಹಿತ್ಯ, ಸಾಂಸ್ಕøತಿಕ ಲೋಕದ ತಿಳುವಳಿಕೆಯನ್ನು ತಮ್ಮ ಅಪಾರ ಪರಿಶ್ರಮ, ಶ್ರದ್ಧೆ, ತಪಸ್ಸು ಹಾಗೂ ಶ್ರಮ ಸಂಸ್ಕøತಿಯಿಂದ ಕಟ್ಟಿಕೊಟ್ಟ ವಿದ್ವತ್ ವಲಯವನ್ನು ಈ ಮೂಲಕ ಅಭಿನಂದಿಸುತ್ತೇನೆ.-ಡಾ.ಪ್ರಕಾಶ ಗ.ಖಾಡೆ
 
<nowiki>*</nowiki>ಬಾಗಲಕೋಟ ಜಿಲ್ಲೆ ಎರಡು ದಶಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ನೋಟ(1997-2017).
 
(ಇದೇ ಅಗಸ್ಟ್ 15,2017 .
 
ಬಾಗಲಕೋಟ ಜಿಲ್ಲೆ ರಚನೆಯಾಗಿ 20 ವರ್ಷಗಳು ತುಂಬುತ್ತಿವೆ.)
 
ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಈ ಬೀಡು ,ರನ್ನ,ಬಸವಣ್ಣವರು ಓಡಾಡಿಕೊಂಡಿದ್ದ ಈ ನೆಲ ಹೊಸ ಜಿಲ್ಲೆಯಾದರೂ ಸಾಂಸ್ಕೃತಿಕ ಅಸಾರತೆಯಿಂದ ಬಳಲುವಂತಾಯಿತು. ಇಲ್ಲಿ ನಿಯಮಿತವಾಗಿ ಚಾಲುಕ್ಯ ಉತ್ಸವ,ಸಾಹಿತ್ಯ ಸಮ್ಮೇಳನಗಳು ಜರುಗದೇ ಹೋಗಿದ್ದು ಈ ಜಿಲ್ಲೆಯ ಪ್ರಜ್ಞಾವಂತ ಸಾಹಿತಿ,ಕಲಾವಿದರು ಪರಿತಪಿಸುವಂತಾಗಿದೆ.ಅರ್ಹತೆ ಇದ್ದಾಗಲೂ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಬೇಕಿದ್ದ ರಾವಬಹದ್ದೂರ,ಸತ್ಯಕಾಮ,ಪಿ.ವಿ.ವಜ್ರಮಟ್ಟಿ,ದು,ನಿಂ,ಬೆಳಗಲಿ,ಬ.ಗಿ.ಯಲ್ಲಟ್ಟಿ,ಜೀವಣ್ಣ ಮಸಳಿ,ಎಸ್.ಎಸ್.ಬಸುಪಟ್ಟದ ಅಂಥ ಹಿರಿಯ ಸಾಹಿತಿಗಳು ಕೊನೆಗೆ ಜಿಲ್ಲಾ ಸಾಹಿತ್ಯ ಸಮ್ಮೆಳನಗಳ ಅಧ್ಯಕ್ಷರಾಗುವುದು ಸಾಧ್ಯವಾಗಲಿಲ್ಲ.ಇದಕ್ಕೆ ಪ್ರಧಾನ ಕಾರಣ ಇಲ್ಲಿ ನಿಯಮಿತವಾಗಿ ಸಾಹಿತ್ಯ ಸಮ್ಮೇಳನಗಳು ನಡೆಯದೇ ಇರುವುದು.ಈಗಲೂ ನಮ್ಮ ನಡುವೆ ಇರುವ ಡಾ.ಶ್ರೀರಾಮ ಇಟ್ಟಣ್ಣವರ,ಬಿ.ಆರ್.ಪೊಲೀಸಪಾಟೀಲ, ಡಾ.ಶಿಲಾಕಾಂತ ಪತ್ತಾರ,ರೇಖಾ ಕಾಖಂಡಕಿ,ಜಯವಂತ ಕಾಡದೇವರ,ಜಿ,ಬಿ,ಖಾಡೆ,ಜಿ.ಎಸ್.ವಡಗಾವಿ,ಮಲ್ಲಿಕಾರ್ಜುನ ಹುಲಗಬಾಳಿ,ಅರ್ಜುನ ಕೊರಟಕರ,ಅಣ್ಣಾಜಿ ಪಡತಾರೆ,ಡಾ.ಬಿ.ಕೆ.ಹಿರೇಮಠ,ಅಬ್ಬಾಸ ಮೇಲಿನಮನಿ ಅವರಂಥ ಹಿರಿಯ ಸಾಹಿತಿಗಳನ್ನು ಒಂದೆಡೆ ಕೂಡಿಸಿ ಅವರಿಂದ ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶನವಾಗುವ,ಅವರ ಸಾಹಿತ್ಯವನ್ನು ಅವಲೋಕಿಸುವ,ರಾಜ್ಯ ಮಟ್ಟದಲ್ಲಿ ಅವರಿಗೆ ಅವಕಾಶಗಳನ್ನು ಕೊಡುವ ಯಾವ ಕೆಲಸಗಳೂ ಜಿಲ್ಲೆಯಲ್ಲಿ ನಡೆಯುತ್ತಿಲ್ಲ.ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಜೀವನದಿ ಕೃಷ್ಣೆ,ಉಪನದಿಗಳಾದ ಘಟಪ್ರಭೆ,ಮಲಪ್ರಭೆಗಳಲ್ಲಿ ನೀರು ಹರಿದು,ನಿಂತು,ತುಂಬಿ,ಖಾಲಿಯಾಗಿ ಹೋಗಿದೆ.ಹಾಗೆಯೇ ಈ ಜಿಲ್ಲೆಯ ಸಾಹಿತ್ಯದ ಒಡಲು ಖಾಲಿಯಾಗುತ್ತಾ ನಡೆದಿದೆ.
 
ಜಿಲ್ಲೆ ರಚನೆಯಾದ ಹೊಸದರಲ್ಲಿ 2000 ದಲ್ಲಿ ಬಾಗಲಕೋಟೆಯಲ್ಲಿ 68 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವ ಮೂಲಕ ಮುಳುಗಡೆ ಜಿಲ್ಲೆಯಲ್ಲಿ ಹೊಸದೊಂದು ಸಾಹಿತ್ಯ ವಾತಾವರಣಕ್ಕೆ ನಾಂದಿ ಹಾಡಲಾಯಿತು.ಆದರೆ ಮುಂದೆ ನಡೆದ ಬೆಳವಣಿಗೆಗಳೇ ಬೇರೆ.ಭೌತಿಕವಾಗಿ ರಾಜ್ಯದಲ್ಲಿಯೇ ಗುರುತಿಸುವಂತೆ ನವನಗರದಲ್ಲಿ ನಿರ್ಮಾಣವಾದ ಕಲಾಭವನ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನಗಳು ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೇ,ಸಾಹಿತ್ಯಾಸಕ್ತರ ಶಕ್ತಿ ಕೇಂದ್ರಗಳಾಗದೇ ಧೂಳು ತಿನ್ನಲು ಬಿಟ್ಟಿರುವುದು ಒಂದು ಪ್ರದೇಶÀದ ಸಾಂಸ್ಕøತಿಕ ಬರಗಾಲವನ್ನು ಸಾರುತ್ತದೆ.
 
ಇಂಥ ಕೊರತೆಗಳ ನಡುವೆಯೂ ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಂತೆ ಅಲ್ಲಲ್ಲಿ ಖಾಸಗಿ ಸಂಘ ಸಂಸ್ಥೆಗಳವರು ಸಾಹಿತ್ಯ ,ರಂಗಭೂಮಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಜಿಲ್ಲಾ ರಚನೆಯ ಆರಂಭದಲ್ಲಿ ನಮ್ಮನ್ನಗಲಿದ ಗೌರಿ ಕ್ರಿಯೇಶನ್ ಸಂಸ್ಥೆ ಮೂಲಕ ಪ್ರಕಾಶ ಕುಲಕುರ್ಣಿ,ದೃವರಂಗ ಸಂಸ್ಥೆ ಮೂಲಕ ಧೃವರಾಜ ದೇಶಪಾಂಡೆ,ನಟೇಶ್ವರ ಕಲಾ ಬಳಗದ ಮೂಲಕ ಬಸವರಾಜ ಹೊಸಮನಿ,ಗ್ರಾಮೀಣ ರಂಗತರಂಗ ಮೂಲಕ ಹೊಳಿಬಸು ಯೆಂಡಿಗೇರಿ ಜಿಲ್ಲೆ ಸಾಂಸ್ಕøತಿಕ ಲೋಕವನ್ನು ಜೀವಂತವಾಗಿಟ್ಟಿದ್ದರು.ಇಂದೂ ಇಳಕಲ್ಲದ ಸ್ನೇಹ ರಂಗ,ಹುನಗುಂದದ ದೃವ ರಂಗ,ಬಾದಾಮಿಯ ವಿಶ್ವಚೇತನ,ಮುಧೋಳದ ಮಧುರ ಮುಧೋಳ,ಬನಹಟ್ಟಿಯ ಮಕ್ಕಳ ಸಂಗಮ,ಜಮಖಂಡಿಯ ಕನ್ನಡ ಸಂಘ,ಬಾಗಲಕೋಟೆಯ ಜಲಜಮಿತ್ರ ರಂಗ ವೇದಿಕೆ,ರಂಗಕೋಟೆ ಬಾಗಿಲುಕೋಟೆ,ಸಹೃದಯ ಸಾಹಿತ್ಯ ವೇದಿಕೆÉ,ಮಕ್ಕಳ ಸಾಹಿತ್ಯ ಸಮಾಗಮ,ಶಿರೂರಿನ ಗ್ರಾಮೀಣ ಸಾಹಿತ್ಯ ವೇದಿಕೆ,ಇಳಕಲ್ಲದ ವಿಜಯ ಚಿತ್ರಕಲಾ ವಿದ್ಯಾಲಯ,ಮಹಾಲಿಂಗಪುರದ ರನ್ನ ವೇದಿಕೆ,ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು,ಗುಳೇದಗುಡ್ಡದ ರಂಗ ಚಿಂತನ ವೇದಿಕೆ,ಲೋಕಾಪುರದ ನಟರಾಜ ಹವ್ಯಾಸಿ ಕಲಾ ತಂಡ ಮೊದಲಾದವು ಸಂಘಟನೆಗಳ ಮೂಲಕ ಇಷ್ಟಲಿಂಗ ಸಿರ್ಸಿ,ಮಹಾಂತೇಶ ಗಜೇಂದ್ರಗಡ.ಡಾ.ಬಸವರಾಜ ಗವಿಮಠ,ಎಸ್ಕೆ ಕೊನೆಸಾಗರ,ಸಂಗಮೇಶ ಕೋಟಿ,ಮಹಾಂತೇಶ ಆವಾರಿ, ಜಲಜಮಿತ್ರ ಬಸವರಾಜ ಮಠ,ಡಾ.ಪ್ರಕಾಶ ಖಾಡೆ,ಉಮೇಶ ತಿಮ್ಮಾಪುರ,ಜಯವಂತ ಕಾಡದೇವರ,ಎಸ್.ಎಸ್.ಹಳ್ಳೂರ,ಮ.ಕೃ.ಮೇಗಾಡಿ,ಶಿವಾನಂದ ಶೆಲ್ಲಿಕೇರಿ,ಡಾ.ನಾಗರಾಜ ನಾಡಗೌಡ,ಚಂದ್ರಕಾಂತ ರಂಗಣ್ಣವರ,ಶಂಕರ ಹೂಗಾರ,ನಾಡೋಜ ಯಲ್ಲವ್ವ ರೊಡ್ಡಪ್ಪನವರ,ಶಾಂತಮ್ಮಾ ಪತ್ತಾರ,ಪ್ರೇಮಾ ಬಾದಾಮಿ,ಉಮಾರಾಣಿ ಬಾರಿಗಿಡದ,ಪ್ರೇಮಾ ಗುಳೇದಗುಡ್ಡ,ಭೀಮನಗೌಡ ಪಾಟೀಲ ಮೊದಲಾದವರು ಜಿಲ್ಲೆಯಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ಜಿಲ್ಲೆಯನ್ನು ನಾಡಿನಲ್ಲಿಯೇ ಗುರುತಿಸುವಂತೆ ಮಾಡಿದ್ದಾರೆ. ರಾಜ್ಯ ಸರಕಾರ ಜಿಲ್ಲೆಯ ಇಬ್ಬರು ಧೀಮಂತ ಸಾಹಿತಿಗಳ ಹೆಸರಿನಲ್ಲಿ ರನ್ನ ಪ್ರತಿಷ್ಠಾನ ಮತ್ತು ಪಿ.ಬಿ.ದುತ್ತರಗಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ ಧಾರಾಳವಾಗಿ ಹಣಕಾಸಿನ ನೆರವು ನೀಡಿದೆ.ರನ್ನ ಪ್ರತಿಷ್ಠಾನದಿಂದ ರನ್ನನ ಸಮಗ್ರ ಕೃತಿ ಹಾಗೂ ವಿಚಾರ ಸಂಕಿರಣ ಕೃತಿಗಳು ಪ್ರಕಟವಾಗಿವೆ,ದುತ್ತರಗಿ ಪ್ರತಿಷ್ಠಾನದ ಕೆಲಸ ಮಂದಗತಿಯಿಂದ ನಡೆದಿದ್ದು ಖ್ಯಾತ ನಾಟಕಕಾರ ದುತ್ತರಗಿ ಅವರ ಸಮಗ್ರ ನಾಟಕಗಳ ಮುದ್ರಣ ಕಾರ್ಯ ಆರಂಭವಾಗಬೇಕಿದೆ.
 
ಜಿಲ್ಲಾ ಸಾಹಿತ್ಯ ಪರಿಷತ್ತು ಹೊಸ ಮತ್ತು ಹಳೆ ತಲೆಮಾರಿನ ಸಾಹಿತಿಗಳಿಗೆ ತವರು ಮನೆ ಇದ್ದಂತೆ.ನಾಡಿನಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಡೆದಷ್ಟು ಜಿಲ್ಲೆಯಲ್ಲಿ ನಡೆಯುತ್ತಿಲ್ಲ.ಜಿಲ್ಲೆ ರಚನೆಯಾದ ಆರಂಭದಲ್ಲಿ ಬಿ.ಆರ್.ಪೊಲೀಸಪಾಟೀಲರು ಅಧ್ಯಕ್ಷರಾಗಿದ್ದರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜರುಗಿಸುವ ಮೂಲಕ ಒಂದು ಸಾರ್ಥಕ ಕಾರ್ಯ ಮಾಡಿದರು.ನಂತರ ಬಂದ ಅನ್ನದಾನಿ ಹಿರೇಮಠರು ಜಿಲ್ಲಾ ಕ.ಸಾ.ಪ.ಭವನಕ್ಕೆ ಅಡಿಪಾಯ ಹಾಕಿದರು.ಸದಸ್ಯರ ಸಂಖ್ಯೆ,ದತ್ತಿದಾನಿಗಳ ಸಂಖ್ಯೆ ಹೆಚ್ಚಿಸಿದರು.ಡಾ.ವಿಶ್ವನಾಥ ವಂಶಕೃತಮಠರು ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಜರುಗಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದರು.ಎಸ್.ಜಿ.ಕೋಟಿ ಅವರ ಕಾಲಕ್ಕೆ ನಿಂತೇ ಹೋಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಚಾಲನೆ ನೀಡಿದರು.ಲೋಕಾಪುರ,ಬಾದಾಮಿಗಳÀಲ್ಲಿ ಜಿಲ್ಲಾ ಸಮ್ಮೇಳನಗಳು,ಬೀಳಗಿ,ಶಿರೂರ,ನಿಂಗಾಪುರ,ಸಾವಳಗಿ ಗ್ರಾಮಗಳಲ್ಲಿ ತಾಲೂಕು ಸಮ್ಮೇಳನಗಳನ್ನು ಜರುಗಿಸಿ ಪರಿಷತ್ತನ್ನು ಜನಮುಖಿಗೊಳಿಸಿದರು.ಆ ಹೊತ್ತಿಗೆ ಆಕರ ಕೃತಿಗಳಲ್ಲದೇ ಸ್ಮರಣ ಸಂಚಿಕೆಗಳು ಸೇರಿ ಮೂರು ವರ್ಷದ ಅವಧಿಯಲ್ಲಿ ಹದಿನಾಲ್ಕು ಕೃತಿಗಳನ್ನು ಕಸಾಪದಿಂದ ಪ್ರಕಟಿಸಿದರು.ಸಾಹಿತ್ಯ ಮತ್ತು ವಿದ್ವತ್ ಪರಂಪರೆ,ಗ್ರಾಮಸಿರಿ,ಹಳಗನ್ನಡ ಸಾಹಿತ್ಯದ ಓದು,ಸಂಶೋಧನಾ ಕಮ್ಮಟ,ನಿಯಮಿತವಾಗಿ ಜಿಲ್ಲೆಯಾದ್ಯಂತ ದತ್ತಿ ಕಾರ್ಯಕ್ರಮಗಳನ್ನು ಜರುಗಿಸಿದ ಕೋಟಿ ಅವರ ಅಧ್ಯಕ್ಷತೆಯ ಕಸಾಪದ ಕಲಾವಧಿ ಒಂದು ಸುವರ್ಣ ಯುಗವಾಗಿತ್ತು.ಮುಂದೆ ಬಂದ ಡಾ.ವಿಜಯಕುಮಾರ ಕಟಗಿಹಳ್ಳಿಮಠರು ಈ ನಪರಂಪರೆ ಮುಂದುವರೆಸಿದರು.ಡಾ.ಕಟಗಿಹಳ್ಳಿಮಠರು ಸಾಹಿತ್ಯ ಪರಿಷತ್ತು ಮತ್ತು ಚಾಲುಕ್ಯ ಉತ್ಸವಗಳ ಸಂದರ್ಭಗಳಲ್ಲಿ ಹೊರತಂದ ಆಕರ ಕೃತಿಗಳು ಅಧ್ಯಯನಪೂರ್ಣವಾಗಿವೆ.ಅವರ ಕಾಲಾವಧಿಯೂ ಒಂದು ಸಾರ್ಥಕ ಸಂದರ್ಭ
 
ಹೊಸ ಜಿಲ್ಲೆ ರಚನೆಯಾಗಿ ಎರಡು ದಶಕಗಳು ಸಂದರೂ ಇಲ್ಲಿ ಸಾಹಿತ್ಯಿಕವಾಗಿ ಇನ್ನೂ ನಡೆಯಬೇಕಾದ ಕೆಲಸಗಳು ಸಾಕಷ್ಟಿವೆ.ಜಿಲ್ಲೆಯಲ್ಲಿ ಹುಟ್ಟಿ ನಾಡಿನಲ್ಲಿಯೇ ಹೆಸರಾಗಿದ್ದ ರಾ.ಯ.ಧಾರವಾಡಕರ,ಕೃಷ್ಣಮೂರ್ತಿ ಪುರಾಣಿಕ,ಡಾ.ಬಿ.ಎಸ್.ಗದ್ದಗಿಮಠ,ಬಿಂದು ಮಾಧವ ಕುಲಕರ್ಣಿ,ಶ್ಯಾಮ ಹುದ್ದಾರ,ಶಂಕರ ಕಟಗಿ ಅವರಂಥ ಗಣ್ಯ ಸಾಹಿತಿಗಳನ್ನು ಸ್ಮರಿಸುವ ಕೆಲಸಗಳಾಗಬೇಕು, ಹನಮಂತ ಹಾಲಿಗೇರಿ,ತಿರುಪತಿ ಭಂಗಿ,ಲಕ್ಷ್ಮಣ ಬದಾಮಿ,ಉಮೇಶ ತಿಮ್ಮಾಪುರ,ಕಲ್ಲೇಶ ಕುಂಬಾರ,ಸುರೇಖಾ ಕುಲಕರ್ಣಿ ಅವರಂಥ ಪ್ರಖರ ಯುವ ಕಥೆಗಾರರ ಕಥೆಗಳನ್ನು ಚಿತ್ರ,ಕಿರುಚಿತ್ರವಾಗಿ ರೂಪಿಸಬೇಕಾಗಿದೆ.ಜಿಲ್ಲೆಯ ಬೆಳಕಿಗೆ ಬಾರದ ತಳಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡಬೇಕಾಗಿದೆ,ಅಂತರ್ಜಾಲ ಮಾಧ್ಯಮದ ಮೂಲಕ ಜಿಲ್ಲೆಯ ಹಿರಿಯ ಮತ್ತು ಯುವ ಲೇಖಕರ ಸಾಹಿತ್ಯವನ್ನು ದಾಖಲಿಸಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿದೆ.ಈ ಕೆಲಸಗಳೂ ನಡೆದಷ್ಟೂ ಜಿಲ್ಲೆ ನಾಡಿನಲ್ಲಿಯೇ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ.
 
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ. 9845500890
 
<nowiki>*</nowiki> ವಿನೋದ ಸಾಹಿತ್ಯ
 
ಬಾಗಲಕೋಟ ಜಿಲ್ಲೆಯ ಕೊಡುಗೆ ಅಪಾರ ರಾವ್ ಬಹಾದ್ದೂರ ಅವರ ಹಾಸ್ಯ ಲೇಖನಗಳು ಇಂದೂ ಕೂಡ ಓದುಗರನ್ನು ಸೆಳೆಯುತ್ತವೆ. ಹಿರಿಯ ಸಾಹಿತಿ ಕತೆಗಾರ ದು.ನಿಂ.ಬೆಳಗಲಿ ಕೂಡ ಹಾಸ್ಯ ಸಾಹಿತ್ಯ ರಚಿಸಿದ್ದಾರೆ. ರಾಮಪುರದ ಜಿ.ಎಸ್.ವಡಗಾಂವಿ ಹಾಸ್ಯದ ಹರಿಗೋಲು ಎಂಬ ಹಾಸ್ಯ ಸಂಕಲನ ಹೊರ ತಂದಿದ್ದಾರೆ. ಬನಹಟ್ಟಿಯ ಮಲ್ಲಿಕಾರ್ಜುನ ಹುಲಗಬಾಳಿ "ಟೊಂಯ್ ಟೊಂಯ್ ಮಾತುಗಳು" ಚಸ್ಮಾ ಚರಿಸ್ಮಾ, ಮುಂತಾದ ಹಾಸ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ನಿವ್ರತ್ತರಾಗಿದ್ದಾರೆ. ಹಾಸ್ಯ ಸಾಹಿತ್ಯಕ್ಕೆ ಹೆಸರಾದವರೆಂದರೆ ರಬಕವಿಯ ಯಶವಂತ ವಾಜಂತ್ರಿ, ಇವರ ಮೊದಲ ಕಥಾ ಸಂಕಲನ 'ಯಾವ ಜನ್ಮದ ಮೈತ್ರಿ' 1990 ರಲ್ಲಿ ಮುದ್ರಣವಾಯಿತು. 1993 ರಲ್ಲಿ" ಮದುವೆಯಾಗಿದೆ ಎಚ್ಚರಿಕೆ" 1995 ರಲ್ಲಿ ಬೋಳು ಸಲಹೆಗಳು, 2003 ರಲ್ಲಿ ಕೂದಲು ಮತ್ತು ಮರ್ಯಾದೆ, 2010ರಲ್ಲಿ "ಕನ್ಯಾನ್ವೇಷಣೆ" ಪ್ರಕಟವಾದ ಪುಸ್ತಕಗಳಾಗಿವೆ. ಧಾರವಾಡ ಆಕಾಶವಾಣಿ ಕೇಂದ್ರದಿಂದ 30 ಕ್ಕೂ ಹೆಚ್ಚು ಹಾಸ್ಯ(ಲಘು)ಭಾಷಣಗಳನ್ನು ಮಾಡಿದ್ದಾರೆ. ಬೆಂಗಳೂರು ದೂರ ದರ್ಶನ ಕೆಂದ್ರದಿಂದ ಇವರು ಬರೆದ ಕಥೆ "ಕೂದಲು ಮತ್ತು ಮರ್ಯಾದೆ" ಟೇಲಿ ಫಿಲ್ಮ ಆಗಿ ಟೇಲಿಕಾಸ್ಟ ಆಗಿದೆ.ಬೆಳಗು ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಉತ್ತಮ ಹಾಸ್ಯ ಭಾಷಣಕಾರರೂ ಆಗಿರುವ ಇವರು ಪತ್ರಕರ್ತರಾಗಿ, ಶಿಕ್ಷಕರಾಗಿ, ಜಮಖಂಡಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಜಾಗ್ರತಿ ಸಮೀತಿಯ ಸದಸ್ಯರಾಗಿ,ಬಾಗಲಕೋಟ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ
 
==ಇದನ್ನೂ ನೋಡಿ==
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ