[ಬೆಳಗಾವಿ] ಜಿಲ್ಲೆಯ ಬೈಲಹೊಂಗಲತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ರಾಯಣ್ಣನ ತಾಯಿ ಕೆಂಚವ್ವನ ತವರು
[ಬೆಳಗಾವಿ] ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ರಾಯಣ್ಣನ ತಾಯಿ ಕೆಂಚವ್ವನ ತವರು ಮನೆಯಾಗಿದ್ದರೂ ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ಥಾನದಲ್ಲಿ ತಳವಾರರಾಗಿದ್ದು (ವಾಲಿಕರ್) ವೃತ್ತಿ ಮಾಡುವವರಾಗಿದ್ದು ಕುರುಬ (ಹಾಲುಮತ) ಎಂಬುದು ಸಂದೇಹಾತ್ಮಕವಾಗಿದ್ದು ತಳ ವಾರ, ವಾಲೀಕಾರ ವೃತ್ತಿಯು ವಾಲ್ಮೀಕಿ ನಾಯಕ ಜನಾಂಗದ ಕುಲ ಕಸುಬಾದ್ದರಿಂದ ಮನೆತನದವನಾಗಿದ್ದರಿಂದ ರಾಯ ನಾಯಕ, ರಾಯಣ್ಣ, ರಾಯಪ್ಪ ಎಂದು ಕೂಡಾ ಕರೆಯುತ್ತಿದರು. ಅಷ್ಟೆ ಅಲ್ಲದೆ ಸ್ವತಂತ್ರ್ಯದ ರೂವಾರಿಯಾಗಿದ್ದನು. [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರ]] ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಚನ್ನಮ್ಮನನ್ನು [[ಬೈಲಹೊಂಗಲ|ಬೈಲಹೊಂಗಲದಲ್ಲಿ]] ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೇರಿಸಿದರು. [[ಜನವರಿ ೨೬]] ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ [[ಆಗಸ್ಟ್ ೧೫]] ೧೭೯೮ , [[ಭಾರತ|ಭಾರತಕ್ಕೆ]] ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ [[ಜನವರಿ ೨೬]], ಭಾರತವು [[ಗಣರಾಜ್ಯೋತ್ಸವ|ಗಣರಾಜ್ಯವೆಂದು]] ಘೋಷಿಸಿದ ದಿನಾಂಕ ರಾಯಣ್ಣನ ಉಕ್ತಿ, "ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರೆಸುವದಾಗಿದೆ ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ" ಎಂದು ಹೇಳಿದ್ದಾನೆ'