ಅಷ್ಟಾದಶ ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೧೦೮ ನೇ ಸಾಲು:
*ಪರಂಪರೆಯ ಪ್ರಕಾರ ಶ್ಲೋಕಸಂಖ್ಯೆ 14500 ಎಂದಿದ್ದರೂ ವಾಸ್ತವಿಕವಾಗಿರುವುದು 7,000 ಭವಿಷ್ಯೋತ್ತರ ಪುರಾಣ ಇದರ ಅಂಗವೆಂದು ತಿಳಿದು ಅದರ 7,000 ಶ್ಲೋಕಗಳನ್ನೂ ಸೇರಿಸಿದರೆ ಒಟ್ಟು 14,000 ಶ್ಲೋಕಗಳಾಗುತ್ತವೆ. ಪ್ರಸ್ತುತ ಪುರಾಣ ಸಾಂಬಪುರಾಣದಿಂದ ಕೆಲ ಅಧ್ಯಾಯಗಳನ್ನು ತೆಗೆದುಕೊಂಡಿರುವುದರಿಂದ ಇದರ ಕಾಲ ಪ್ರ.ಶ. 600-950ರ ನಡುವೆ ಎನ್ನಬಹುದು. ಆಪಸ್ತಂಬ ಧರ್ಮಸೂತ್ರ. ಈ ಪುರಾಣವನ್ನು ಹೆಸರಿಸಿರುವುದರಿಂದ ಇದರ ಮೂಲ ರೂಪದ ಕಾಲ ಪ್ರ.ಶ.ಪು. 3ನೆಯ ಶತಮಾನ ಎನ್ನಬಹುದು.
===ಬ್ರಹ್ಮವೈವರ್ತಪುರಾಣ===
*ಇದನ್ನು ಬ್ರಹ್ಮಕೈವರ್ತಪುರಾಣವೆಂದೂ ಹೇಳುತ್ತಾರೆ. ದಕ್ಷಿಣ ಭಾರತದಲ್ಲಿ ಇದರ ಎರಡನೆಯ ಹೆಸರು ಪ್ರಸಿದ್ಧ.
*ಗಣೇಶಖಂಡ ಅತಿ ಪ್ರಾಚೀನ ಕಾಲದಲ್ಲಿ ಅಜ್ಞಾತನಾಗಿದ್ದ ಮತ್ತು ಅರ್ವಾಚೀನಕಾಲದಲ್ಲಿ ಅತಿ ಜನಪ್ರಿಯನಾದ ಗಜಮುಖ ಗಣಪನ ಕಥೆಗಳನ್ನು ಹೇಳಿದೆ. ಒಂದು ವಿಚಿತ್ರರೀತಿಯಿಂದ ಗಣೇಶನನ್ನಿಲ್ಲಿ ಕೃಷ್ಣನ ಒಂದು ಅವತಾರವೆಂದು ಹೇಳಲಾಗಿದೆ. ಕೊನೆಯದಾದ ಕೃಷ್ಣಜನ್ಮಖಂಡ ಕೃಷ್ಣನ ಹುಟ್ಟಿನಿಂದ ಹಿಡಿದು ಅವನ ಇಡೀ ಜೀವನ ವೃತ್ತಾಂತವನ್ನು ತಿಳಿಸುತ್ತದೆ. ಅವನು ಮಾಡಿದ ಯುದ್ಧಗಳ ಹಾಗೂ ಗೋಪಿಯರೊಡನೆ ನಡೆಸಿದ ಪ್ರಣಯ ಪ್ರಕರಣಗಳ ವಿವರಗಳಿಲ್ಲಿವೆ. ಇಡೀ ಪುರಾಣದ ಮುಖ್ಯೋದ್ದೇಶ ಕೃಷ್ಣ ರಾಧೆಯರ ವಿಲಾಸವನ್ನು ಬಣ್ಣಿಸುವುದರಲ್ಲಿ ಮುಗಿಯುತ್ತದೆ.
* ಇಲ್ಲಿ ಇರುವುದು ಹರಿಸರ್ವೋತ್ತಮವಾದವಲ್ಲ, ಕೃಷ್ಣಸರ್ವೋತ್ತಮವಾದ. ಒಟ್ಟಿನಲ್ಲಿ ಅಷ್ಟು ಉತ್ತಮ ಸಾಹಿತ್ಯವೆನ್ನಿಸದ ಈ ಪುರಾಣದಲ್ಲಿ ಅನೇಕ ಮಾಹಾತ್ಮ್ಯಗಳು ತುಂಬಿಕೊಂಡಿವೆ. ಬ್ರಹ್ಮವೈವರ್ತಪುರಾಣವನ್ನು ಸಾವರ್ಣಿ ನಾರದನಿಗೆ ಹೇಳಿದನೆಂದೂ ಶ್ಲೋಕಸಂಖ್ಯೆ 18,000 ಎಂದೂ ಪ್ರಸಿದ್ಧಿ. ಆದರೆ ವಾಸ್ತವಿಕವಾಗಿ ಶ್ಲೋಕಗಳು ಇನ್ನೂ ಹೆಚ್ಚಾಗಿವೆ. ಬ್ರಹ್ಮ, ಗರುಡ ಪುರಾಣಗಳಂತೆಯೇ ಇದೂ ಮೂಲಸ್ವರೂಪವನ್ನು ಕಳೆದುಕೊಂಡು ಅರ್ವಾಚೀನ ಕಾಲದಲ್ಲಿ ಪುನಾರಚಿತವಾದ ಪುರಾಣ.
|