ಗಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೫ ನೇ ಸಾಲು:
==ಮುಚ್ಚುಗಾಯಗಳು==
ಮುಚ್ಚುಗಾಯಗಳು [[ಚರ್ಮ]]ದ ಪುರ್ಣ ಪದರವನ್ನು ಭೇದಿಸಿರುವುದಿಲ್ಲ. ಒರಟಾದ ಆಯುಧದಿಂದ ಬಲವಾಗಿ ಹೊಡೆದಾಗ ಜಜ್ಜು ಗಾಯ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಒಡೆದು ಹೋಗುವುದಲ್ಲದೆ ಚರ್ಮದ ಕೆಳಭಾಗದಲ್ಲಿರುವ ಮೃದುವಾದ ಅಂಗಾಂಶಗಳಿಗೆ ಅನೇಕ ಬಗೆಯ ಹಾನಿ ಉಂಟಾಗುತ್ತದೆ. ರಕ್ತನಾಳಗಳಿಂದ ಹೊರಹರಿದ ರಕ್ತ ಚರ್ಮದೊಳಗೆ ಪ್ರವೇಶಿಸಿದಾಗ ಚರ್ಮ ವಿವರ್ಣವಾಗುತ್ತದೆ. ನೋವು, ಊತ, ವಿವರ್ಣತೆಗಳು ಜಜ್ಜುಗಾಯದ ಚಿಹ್ನೆಗಳು. ಹಾನಿಗೆ ಒಳಗಾದ ಅಂಗಾಂಶಕ್ಕೆ ಅನುಗುಣವಾಗಿ ನೋವು ಮತ್ತು ಊತಗಳು ವಿಪರ್ಯಯವಾಗುತ್ತವೆ. ಕಣ್ಣುರೆಪ್ಪೆ ಮತ್ತು ವೃಷಣಕೋಶಗಳಂತಹ ಸಡಿಲಚರ್ಮವುಳ್ಳ ಭಾಗಗಳಿಗೆ ಜಜ್ಜುಗಾಯ ಉಂಟಾದಾಗ ಊತ ಜಾಸ್ತಿಯಾಗಿದ್ದರೂ ನೋವು ಕಡಿಮೆ ಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಬೆರಳುಗಳಿಗೆ
ಹೆಚ್ಚು ರಕ್ತಸ್ರಾವವಾಗಿ ಅದು ತಂತುರೂಪದ ಅಂಗಾಂಶ ಕೋಶದ ಪದರಗಳ ಮತ್ತು ಮಾಂಸಖಂಡಗಳ ನಡುವೆ ಹೆಪ್ಪುಗಟ್ಟುತ್ತದೆ. ಮೊದಮೊದಲು ಇದು ಗುಂಡಾಗಿ, ಹುಣ್ಣಿನಂತೆ ಮೆತ್ತಗಿದ್ದು ಅನಂತರ ಗಟ್ಟಿಯಾಗುತ್ತದೆ. ಕ್ರಮೇಣ ಗಾಯ ವ್ಯವಸ್ಥಿತವಾಗಿ ಕರಗಿಹೋಗುತ್ತದೆ. ಆದರೆ ಎಲ್ಲ ಹೆಪ್ಪುಗಟ್ಟುಗಳೂ ಇಷ್ಟು ಸರಳವಾಗಿ ಮುಕ್ತಾಯವಾಗುವುದಿಲ್ಲ. ಕೆಲವು ಗಂಟುಗಳಾಗಿ ಮತ್ತೆ ಕೆಲವು ರಸಿಕೆಯ ಕೋಶಗಳಾಗಿ ಉಳಿಯಬಹುದು. ಸಾಮಾನ್ಯವಾಗಿ ಮಿದುಳಿನ ಮೇಲ್ಮೈಯಲ್ಲಿ, ನಡುವಿನ ಭಾಗದಲ್ಲಿ, ತೊಡೆಯ ಪಕ್ಕಗಳಲ್ಲಿ ರಸಿಕೆಯ ಕೋಶಗಳು ಉಂಟಾಗುತ್ತವೆ. ಇವುಗಳ ಸುತ್ತಲೂ ತಂತುದ್ರವ್ಯ (ಫೈಬ್ರಿನ್) ಶೇಖರಗೊಂಡು, ಹೀಮೋಗ್ಲಾಬಿನ್ ಕರಗಿಹೋಗಿ ಮೇಲೆ ನಸುಹಳದಿಬಣ್ಣದ ದ್ರವ ಉಳಿಯುತ್ತದೆ. ಸರಿಯಾದ ಚಿಕಿತ್ಸೆ ನಡೆಸದಿದ್ದಲ್ಲಿ ಈ ಕೋಶದಲ್ಲಿ ಒಳಪೊರೆಯೊಂದು ಬೆಳೆದು ಅನಂತರ ಅದನ್ನು ತೆಗೆಯುವುದು ಕಷ್ಟವಾಗುತ್ತದೆ. ಕ್ರಿಮಿಗಳ ಬೆಳೆವಣಿಗೆಗೆ ರಕ್ತ ಒಳ್ಳೆಯ ಮಾಧ್ಯಮ. ಆದ್ದರಿಂದ ದುರ್ಬಲಶರೀರಿಗಳಲ್ಲಿ ಕೆಲವು ಸಲ ಈ ಹೆಪ್ಪುಗಟ್ಟಿಗೆ ಸೋಂಕು ತಗಲಬಹುದು. ಮಾಂಸಖಂಡ ಮತ್ತು ಇತರ ಮೇಲ್ಮೈಯ ಅಂಗಾಂಶಗಳಂತೆಯೇ ಒಳಾಂಗಗಳಾದ ಮಿದುಳು, ಪಿತ್ತಕೋಶ, ಗುಲ್ಮ, ಮೂತ್ರಜನಕಾಂಗ, ಪುಪ್ಪುಸ ಮತ್ತು ಅನ್ನನಾಳ ಮುಂತಾದವುಗಳಿಗೂ ಜಜ್ಜು ಗಾಯವುಂಟಾಗಿ ರಕ್ತ ಹೆಪ್ಪುಗಟ್ಟಬಹುದು. ಇವುಗಳ ಚಿಕಿತ್ಸೆಗೆ ವಿಶ್ರಾಂತಿ ಆವಶ್ಯಕ. ಆವಿಯಾಗುವ ದ್ರವಗಳ ಲೇಪನ, ಶಾಖ ಕೊಡುವಿಕೆ ಮತ್ತು ಬಿಸಿನೀರಿನ ಸ್ನಾನ ನೋವನ್ನು ಕುಗ್ಗಿಸುತ್ತದೆ. ಬಿಗಿಯಾಗಿ ಒತ್ತುವುದರಿಂದ ರಕ್ತಹೊರಸೋರುವುದು ಕಡಿಮೆಯಾಗುತ್ತದೆ. ಉಜ್ಜುವಿಕೆಯಿಂದ ಹೊರ ಬಂದ ರಕ್ತ ಬೇಗನೆ ಕರಗಿಹೋಗುತ್ತದೆ. ರಕ್ತದ ಹೀರುವಿಕೆ ತಡವಾದಲ್ಲಿ ಅದನ್ನು ಹೊರತೆಗೆದು ಬಿಗಿಯಾದ ಕಟ್ಟುಪಟ್ಟಿಯನ್ನು ಕಟ್ಟುವುದರಿಂದ ರಸಿಕೆಯ ಕೋಶ ಉಂಟಾಗುವುದನ್ನು ತಡೆಯಬಹುದು.
೧೧ ನೇ ಸಾಲು:
ಯಾವುದಾದರೂ ದೇಹದ ಭಾಗ ಒರಟು ಮೇಲ್ಮೈಗೆ ಉಜ್ಜಿದಾಗ ಉಜ್ಜು ಗಾಯ ಉಂಟಾಗುತ್ತದೆ. ಇದರಿಂದ ಚರ್ಮದ ಮೇಲ್ಪದರಗಳು ಕಿತ್ತುಹೋಗಿ, ನರಗಳ ತುದಿಗಳು ಹೊರಕಾಣಿಸಿಕೊಂಡು ತುಂಬ ನೋವುಂಟಾಗುತ್ತದೆ. ಗಾಯದ ಮೂಲಕ ದೂಳು ಪ್ರವೇಶಿಸಿ ಸೋಂಕು ಉಂಟಾಗುತ್ತದೆ. ಗಾಯವನ್ನು ತೊಳೆದು ಮುಲಾಮನ್ನು ಹಚ್ಚುವುದರಿಂದ ಇದನ್ನು ಗುಣಪಡಿಸಬಹುದು.
ಮರದ ತುಂಡು
==2 ಬಿಚ್ಚು ಅಥವಾ ತೆರೆಗಾಯಗಳು==
ಬಿಚ್ಚು ಅಥವಾಾ ತೆರೆಗಾಯಗಳಲ್ಲಿ ಚರ್ಮದ ಅಥವಾಾ ಲೋಳೆಪೊರೆಯ ಅವಿಚ್ಛಿನ್ನತೆಗೆ ತಡೆಯುಂಟಾಗಿ ಒಳಭಾಗದ ಮೃದು ಅಂಗಾಂಶಗಳಿಗೆ ಹಾನಿ ತಗಲುತ್ತದೆ. ಇದರ ತೀವ್ರತೆ ಪೀಡಕವಸ್ತುವಿನ ಗುಣ ಮತ್ತು ಬಲವನ್ನು ಅವಲಂಬಿಸಿರುತ್ತದೆ. ಹಾನಿಗೆ ಒಳಗಾದ ಮಾಂಸಖಂಡದ ತಂತುಗಳ ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಅವು ತಮ್ಮ ಸಂಕುಚನ ಸಾಮರ್ಥ್ಯ ಮತ್ತು ಸೋಂಕು ನಿರೋಧಕ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತವೆ. ಅಲ್ಲದೆ ಅವಾಯುಶ್ವಸನ ಜೀವಿಗಳ ಬೆಳೆವಣಿಗೆಗೆ ಇವು ಉತ್ತೇಜನಕಾರಿಯಾಗಿರುತ್ತವೆ. ತತ್ಕ್ಷಣವೇ ಉರಿತದ ಕ್ರಿಯೆ ಪ್ರಾರಂಭ ವಾಗಿ ಶರೀರ ತನ್ನ ರಕ್ಷಣೆಗೆ ತೊಡಗುತ್ತದೆ. ಸ್ರಾವದಿಂದಾಗಿ ಊತ ಕಾಣಿಸಿಕೊಳ್ಳುತ್ತದೆ. ಊತ ಕೆಲವು ಸಲ ವಿಪರೀತವಾಗಿ ಆ ಅಂಗದ ರಕ್ತ ಚಲನೆಗೆ ತಡೆಯುಂಟಾಗಬಹುದು. ಚರ್ಮ ಅಶುದ್ಧವಾಗಿದ್ದು ದೂಳಿನ ಕಣಗಳು ಗಾಯದೊಳಕ್ಕೆ ಪ್ರವೇಶಿಸುತ್ತವೆ. ಗಾಯ ಉಂಟಾದ ಮೇಲೆ ಆರರಿಂದ ಹನ್ನೆರಡು ಗಂಟೆಯವರೆಗೆ ಈ ಕ್ರಿಮಿಗಳು ಹಾನಿಗೆ ಒಳಗಾದ ಅಂಗಾಂಶದ ಮೇಲೆಯೇ ಇದ್ದು ಇನ್ನೂ ನಂಜನ್ನು ಉತ್ಪತ್ತಿ ಮಾಡಿರುವುದಿಲ್ಲ. ಈ ಅವಧಿ ಕಳೆದ ಬಳಿಕ ಗಾಯ ಸೋಂಕಿಗೊಳಗಾಗಿದೆ ಎಂದರ್ಥ.
|